ನವದೆಹಲಿ: ಕೊರೊನಾ ವೈರಸ್ ಪ್ರೇರಿತ ಮೂರನೇ ಹಂತದ ಲಾಕ್ಡೌನ್ ತೆರವಿನ ಅಂತ್ಯದಲ್ಲಿ ಮೇ 12ರಿಂದ ಆಯ್ದ ಮಾರ್ಗಗಳಲ್ಲಿ ಪ್ರಯಾಣಿಕ ರೈಲ್ವೆ ಸಂಚಾರ ಪುನರಾರಂಭಿಸುವುದಾಗಿ ಭಾರತೀಯ ರೈಲ್ವೆ ಇಲಾಖೆ ಈಗಾಗಲೇ ಘೋಷಿಸಿದೆ. ಜೊತೆಗೆ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಟಿಕೆಟ್ ಬುಕ್ಕಿಂಗ್ ಸಂಜೆ 4ರಿಂದ ಶುರುವಾಗಿದೆ.
ರೈಲ್ವೆ ಟಿಕೆಟ್ ಶುಲ್ಕದಲ್ಲಿ ಬದಲಾವಣೆ: ಹಿರಿಯ ನಾಗರಿಕರಿಗಿಲ್ಲ ವಿನಾಯತಿ
ಲಾಕ್ಡೌನ್ ವೇಳೆ ಆಯ್ದ ಮಾರ್ಗಗಳಲ್ಲಿ ಸಂಚರಿಸುತ್ತಿರುವ ರೈಲ್ವೆ ಟಿಕೆಟ್ ಶುಲ್ಕ ರಿಯಾಯಿತಿಯನ್ನು ರೋಗಿಗಳು, ವಿದ್ಯಾರ್ಥಿಗಳು ಮತ್ತು ವಿಕಲಚೇತನರು ಮಾತ್ರ ಪಡೆಯಬಹುದು. ಹಿರಿಯ ನಾಗರಿಕರಿಗೆ ಯಾವುದೇ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
![ರೈಲ್ವೆ ಟಿಕೆಟ್ ಶುಲ್ಕದಲ್ಲಿ ಬದಲಾವಣೆ: ಹಿರಿಯ ನಾಗರಿಕರಿಗಿಲ್ಲ ವಿನಾಯತಿ Indian Railway](https://etvbharatimages.akamaized.net/etvbharat/prod-images/768-512-7156649-63-7156649-1589212863167.jpg?imwidth=3840)
ಈ ನಡುವೆ ರೈಲ್ವೆ ಇಲಾಖೆಯು ಮತ್ತೊಂದು ಪ್ರಕಟಣೆ ಹೊರಡಿಸಿದೆ. ರೈಲ್ವೆ ಟಿಕೆಟ್ ಶುಲ್ಕ ರಿಯಾಯಿತಿಯನ್ನು ರೋಗಿಗಳು, ವಿದ್ಯಾರ್ಥಿಗಳು ಮತ್ತು ವಿಕಲಚೇತನರು ಮಾತ್ರ ಪಡೆಯಬಹುದು. ಹಿರಿಯ ನಾಗರಿಕರಿಗೆ ಯಾವುದೇ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಶೇಷ ವಿಭಾಗಗಳಿಗೆ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ (ಪಿಆರ್ಎಲ್) ಕೌಂಟರ್ಗಳನ್ನು ಮೂಲ, ನಿಲುಗಡೆ ಮತ್ತು ಅಂತಿಮ ನಿಲ್ದಾಣಗಳಲ್ಲಿ ತೆರೆಯಲು ರೈಲ್ವೆ ಸಚಿವಾಲಯದ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.
ನವದೆಹಲಿ: ಕೊರೊನಾ ವೈರಸ್ ಪ್ರೇರಿತ ಮೂರನೇ ಹಂತದ ಲಾಕ್ಡೌನ್ ತೆರವಿನ ಅಂತ್ಯದಲ್ಲಿ ಮೇ 12ರಿಂದ ಆಯ್ದ ಮಾರ್ಗಗಳಲ್ಲಿ ಪ್ರಯಾಣಿಕ ರೈಲ್ವೆ ಸಂಚಾರ ಪುನರಾರಂಭಿಸುವುದಾಗಿ ಭಾರತೀಯ ರೈಲ್ವೆ ಇಲಾಖೆ ಈಗಾಗಲೇ ಘೋಷಿಸಿದೆ. ಜೊತೆಗೆ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಟಿಕೆಟ್ ಬುಕ್ಕಿಂಗ್ ಸಂಜೆ 4ರಿಂದ ಶುರುವಾಗಿದೆ.
ಈ ನಡುವೆ ರೈಲ್ವೆ ಇಲಾಖೆಯು ಮತ್ತೊಂದು ಪ್ರಕಟಣೆ ಹೊರಡಿಸಿದೆ. ರೈಲ್ವೆ ಟಿಕೆಟ್ ಶುಲ್ಕ ರಿಯಾಯಿತಿಯನ್ನು ರೋಗಿಗಳು, ವಿದ್ಯಾರ್ಥಿಗಳು ಮತ್ತು ವಿಕಲಚೇತನರು ಮಾತ್ರ ಪಡೆಯಬಹುದು. ಹಿರಿಯ ನಾಗರಿಕರಿಗೆ ಯಾವುದೇ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಶೇಷ ವಿಭಾಗಗಳಿಗೆ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ (ಪಿಆರ್ಎಲ್) ಕೌಂಟರ್ಗಳನ್ನು ಮೂಲ, ನಿಲುಗಡೆ ಮತ್ತು ಅಂತಿಮ ನಿಲ್ದಾಣಗಳಲ್ಲಿ ತೆರೆಯಲು ರೈಲ್ವೆ ಸಚಿವಾಲಯದ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.