ETV Bharat / business

ಕೋವಿಡ್ ಪೀಡಿತ ಕರ್ನಾಟಕದ ಉದ್ಯಮಕ್ಕೆ ತೆರಿಗೆ ಮನ್ನಾ ಮಾಡಿ ಲಸಿಕೆ ನೀಡುವಂತೆ ಮನವಿ - ಕರ್ನಾಟಕ ಉದ್ಯಮ ಮತ್ತು ವ್ಯಾಪಾರ

ಲಾಕ್​ಡೌನ್​ ಮಾಡಿದ ನಂತರ ನಮ್ಮ ಚಟುವಟಿಕೆಗಳನ್ನು ಪುನರಾರಂಭಿಸಲು ತೆರಿಗೆ ಮತ್ತು ಸುಂಕವನ್ನು ಮನ್ನಾ ಮಾಡಬೇಕು. ಏಕೆಂದರೆ ವಿಸ್ತೃತ ಲಾಕ್​ಡೌನ್ ಕಾರಣದಿಂದಾಗಿ ನಾವೆಲ್ಲಾ ದೊಡ್ಡ ನಷ್ಟ ಅನುಭವಿಸಿದ್ದೇವೆ ಎಂದು ಕರ್ನಾಟಕ ಉದ್ಯಮ ಮತ್ತು ವ್ಯಾಪಾರ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

author img

By

Published : Jun 3, 2021, 1:51 PM IST

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಮತ್ತು ಲಾಕ್‌ಡೌನ್ ಪ್ರಭಾವದಿಂದ ತತ್ತರಿಸಿರುವ ಕರ್ನಾಟಕ ಉದ್ಯಮದ ನೌಕರರನ್ನು ಸೋಂಕಿನಿಂದ ರಕ್ಷಿಸಲು ತೆರಿಗೆ ಮತ್ತು ಸುಂಕ ಮನ್ನಾ ಮಾಡಿ ಲಸಿಕೆಗಳನ್ನು ನೀಡುವಂತೆ ಉದ್ಯಮದ ಪ್ರತಿನಿಧಿಗಳು ಕೋರಿದ್ದಾರೆ.

ಲಾಕ್​ಡೌನ್​ ಮಾಡಿದ ನಂತರ ನಮ್ಮ ಚಟುವಟಿಕೆಗಳನ್ನು ಪುನರಾರಂಭಿಸಲು ತೆರಿಗೆ ಮತ್ತು ಸುಂಕವನ್ನು ಮನ್ನಾ ಮಾಡಬೇಕು. ಏಕೆಂದರೆ ವಿಸ್ತೃತ ಲಾಕ್​ಡೌನ್ ಕಾರಣದಿಂದಾಗಿ ನಾವೆಲ್ಲಾ ದೊಡ್ಡ ನಷ್ಟ ಅನುಭವಿಸಿದ್ದೇವೆ ಎಂದು ಕರ್ನಾಟಕ ಉದ್ಯಮ ಮತ್ತು ವ್ಯಾಪಾರ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗವು ರಾಜ್ಯದಾದ್ಯಂತದ ಎರಡನೇ ಅಲೆಯಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿದ್ದಂತೆ, ರಾಜ್ಯ ಸರ್ಕಾರವು ಏಪ್ರಿಲ್ 27ರಂದು ಲಾಕ್‌ಡೌನ್ ವಿಧಿಸಿ ಮೇ 10ರಂದು ಜೂನ್ 7ರವರೆಗೆ ವಿಸ್ತರಿಸಿತು. ಪಾಸಿಟಿವ್​ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಂಡಿತು.

ಕೈಗಾರಿಕೆ ಮತ್ತು ವ್ಯಾಪಾರ ಪ್ರತಿನಿಧಿಗಳು ತಮ್ಮ ಉದ್ಯೋಗಿಗಳಿಗೆ ಮತ್ತು ಕುಟುಂಬಗಳಿಗೆ ಮೂರನೇ ಅಲೆಗೂ ಮುಂಚಿತವಾಗಿ ಚುಚ್ಚುಮದ್ದು ನೀಡಲು ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ಕುಮಾರ್ ಒತ್ತಾಯಿಸಿದ್ದು, ಅವರ ಕಾರ್ಯಾಚರಣೆಗಳಿಗೆ ಇರುವ ಅಡೆತಡೆ ಕಡಿಮೆ ಮಾಡಲು ಕೋರಿದ್ದಾರೆ.

ಪ್ರಕರಣಗಳ ಇಳಿಕೆ ಮತ್ತು ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಉದ್ಯಮ, ವ್ಯಾಪಾರ ಮತ್ತು ವ್ಯವಹಾರ ಪುನರಾರಂಭದ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಅನುಮತಿಸಲು ಸರ್ಕಾರವು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ಮತ್ತೆ ಲಾಕ್​ಡೌನ್​ ಮಾಡಲು ಸಿದ್ಧತೆ ನಡೆಸಿದೆ ಎಂದು ಕೈಗಾರಿಕಾ ಪ್ರತಿನಿಧಿಗಳೊಂದಿಗೆ ವರ್ಚುವಲ್​ ಸಭೆಯಲ್ಲಿ ಆತಂಕ ವ್ಯಪ್ತಕಡಿಸಿದ್ದಾರೆ.

ವಿಸ್ತೃತ ಲಾಕ್‌ಡೌನ್ ಭಾರೀ ಆದಾಯ ನಷ್ಟಕ್ಕೆ ಕಾರಣವಾಗಲಿದೆ. ಉದ್ಯಮದ ಮುಖಂಡರು ಬಂಡವಾಳದ ಹರಿವಿನ ಕೊರತೆಯಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಇದು ಮುಂದಿನ 6-12 ತಿಂಗಳುಗಳಲ್ಲಿ ಅವುಗಳ ಕಾರ್ಯಸಾಧ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಲಾಕ್‌ಡೌನ್ ಸಮಯದಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದರಿಂದ ಅನೇಕ ಕ್ಷೇತ್ರಗಳಿಗೆ, ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ವ್ಯವಹಾರ ನಿರಂತರತೆಗೆ ಬೆದರಿಕೆಯೊಡ್ಡುತ್ತದೆ ಎಂದು ಹೇಳಿದರು.

ಎಂಎಸ್‌ಎಂಇ ಕಾರ್ಯಗಳನ್ನು ಮುಂಚೂಣಿ ಯೋಧರಂತೆ ಪರಿಗಣಿಸಿ ಅವರಿಗೆ ಆದ್ಯತೆ ನೀಡಿ ಲಸಿಕೆ ಹಾಕುವಂತೆ ಉದ್ಯಮದ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮಾಸಿಕ 75,000 ರೂ. ಅಬಕಾರಿ ಪರವಾನಗಿ ಶುಲ್ಕವನ್ನು 6 ತಿಂಗಳವರೆಗೆ ಮನ್ನಾ ಮಾಡಬೇಕು. ಲಾಕ್‌ಡೌನ್ ಅವಧಿಗೆ ವಿದ್ಯುತ್ ಸುಂಕದ ಬಿಲ್‌ಗಳು ಮತ್ತು ಸ್ಥಿರ ವಿದ್ಯುತ್ ಶುಲ್ಕವನ್ನೂ ಮನ್ನಾ ಮಾಡಬೇಕು ಎಂದು ಕುಮಾರ್‌ ಮನವಿ ಮಾಡಿದ್ದಾರೆ.

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಮತ್ತು ಲಾಕ್‌ಡೌನ್ ಪ್ರಭಾವದಿಂದ ತತ್ತರಿಸಿರುವ ಕರ್ನಾಟಕ ಉದ್ಯಮದ ನೌಕರರನ್ನು ಸೋಂಕಿನಿಂದ ರಕ್ಷಿಸಲು ತೆರಿಗೆ ಮತ್ತು ಸುಂಕ ಮನ್ನಾ ಮಾಡಿ ಲಸಿಕೆಗಳನ್ನು ನೀಡುವಂತೆ ಉದ್ಯಮದ ಪ್ರತಿನಿಧಿಗಳು ಕೋರಿದ್ದಾರೆ.

ಲಾಕ್​ಡೌನ್​ ಮಾಡಿದ ನಂತರ ನಮ್ಮ ಚಟುವಟಿಕೆಗಳನ್ನು ಪುನರಾರಂಭಿಸಲು ತೆರಿಗೆ ಮತ್ತು ಸುಂಕವನ್ನು ಮನ್ನಾ ಮಾಡಬೇಕು. ಏಕೆಂದರೆ ವಿಸ್ತೃತ ಲಾಕ್​ಡೌನ್ ಕಾರಣದಿಂದಾಗಿ ನಾವೆಲ್ಲಾ ದೊಡ್ಡ ನಷ್ಟ ಅನುಭವಿಸಿದ್ದೇವೆ ಎಂದು ಕರ್ನಾಟಕ ಉದ್ಯಮ ಮತ್ತು ವ್ಯಾಪಾರ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗವು ರಾಜ್ಯದಾದ್ಯಂತದ ಎರಡನೇ ಅಲೆಯಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿದ್ದಂತೆ, ರಾಜ್ಯ ಸರ್ಕಾರವು ಏಪ್ರಿಲ್ 27ರಂದು ಲಾಕ್‌ಡೌನ್ ವಿಧಿಸಿ ಮೇ 10ರಂದು ಜೂನ್ 7ರವರೆಗೆ ವಿಸ್ತರಿಸಿತು. ಪಾಸಿಟಿವ್​ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಂಡಿತು.

ಕೈಗಾರಿಕೆ ಮತ್ತು ವ್ಯಾಪಾರ ಪ್ರತಿನಿಧಿಗಳು ತಮ್ಮ ಉದ್ಯೋಗಿಗಳಿಗೆ ಮತ್ತು ಕುಟುಂಬಗಳಿಗೆ ಮೂರನೇ ಅಲೆಗೂ ಮುಂಚಿತವಾಗಿ ಚುಚ್ಚುಮದ್ದು ನೀಡಲು ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ಕುಮಾರ್ ಒತ್ತಾಯಿಸಿದ್ದು, ಅವರ ಕಾರ್ಯಾಚರಣೆಗಳಿಗೆ ಇರುವ ಅಡೆತಡೆ ಕಡಿಮೆ ಮಾಡಲು ಕೋರಿದ್ದಾರೆ.

ಪ್ರಕರಣಗಳ ಇಳಿಕೆ ಮತ್ತು ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಉದ್ಯಮ, ವ್ಯಾಪಾರ ಮತ್ತು ವ್ಯವಹಾರ ಪುನರಾರಂಭದ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಅನುಮತಿಸಲು ಸರ್ಕಾರವು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ಮತ್ತೆ ಲಾಕ್​ಡೌನ್​ ಮಾಡಲು ಸಿದ್ಧತೆ ನಡೆಸಿದೆ ಎಂದು ಕೈಗಾರಿಕಾ ಪ್ರತಿನಿಧಿಗಳೊಂದಿಗೆ ವರ್ಚುವಲ್​ ಸಭೆಯಲ್ಲಿ ಆತಂಕ ವ್ಯಪ್ತಕಡಿಸಿದ್ದಾರೆ.

ವಿಸ್ತೃತ ಲಾಕ್‌ಡೌನ್ ಭಾರೀ ಆದಾಯ ನಷ್ಟಕ್ಕೆ ಕಾರಣವಾಗಲಿದೆ. ಉದ್ಯಮದ ಮುಖಂಡರು ಬಂಡವಾಳದ ಹರಿವಿನ ಕೊರತೆಯಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಇದು ಮುಂದಿನ 6-12 ತಿಂಗಳುಗಳಲ್ಲಿ ಅವುಗಳ ಕಾರ್ಯಸಾಧ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಲಾಕ್‌ಡೌನ್ ಸಮಯದಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದರಿಂದ ಅನೇಕ ಕ್ಷೇತ್ರಗಳಿಗೆ, ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ವ್ಯವಹಾರ ನಿರಂತರತೆಗೆ ಬೆದರಿಕೆಯೊಡ್ಡುತ್ತದೆ ಎಂದು ಹೇಳಿದರು.

ಎಂಎಸ್‌ಎಂಇ ಕಾರ್ಯಗಳನ್ನು ಮುಂಚೂಣಿ ಯೋಧರಂತೆ ಪರಿಗಣಿಸಿ ಅವರಿಗೆ ಆದ್ಯತೆ ನೀಡಿ ಲಸಿಕೆ ಹಾಕುವಂತೆ ಉದ್ಯಮದ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮಾಸಿಕ 75,000 ರೂ. ಅಬಕಾರಿ ಪರವಾನಗಿ ಶುಲ್ಕವನ್ನು 6 ತಿಂಗಳವರೆಗೆ ಮನ್ನಾ ಮಾಡಬೇಕು. ಲಾಕ್‌ಡೌನ್ ಅವಧಿಗೆ ವಿದ್ಯುತ್ ಸುಂಕದ ಬಿಲ್‌ಗಳು ಮತ್ತು ಸ್ಥಿರ ವಿದ್ಯುತ್ ಶುಲ್ಕವನ್ನೂ ಮನ್ನಾ ಮಾಡಬೇಕು ಎಂದು ಕುಮಾರ್‌ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.