ಮುಂಬೈ: ರುಪೇ ಕಾರ್ಡ್ಗಳ ವ್ಯಾಪಕ ಬಳಕೆಯ ಬಗ್ಗೆ ಕೇಂದ್ರ ಸರ್ಕಾಸ ಬ್ಯಾಂಕ್ಗಳಿಗೆ ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯಿಸಿದ ಜಾಗತಿಕ ಪಾವತಿದಾರ ವೀಸಾ, ಎಲ್ಲಾ ರೀತಿಯ ಉದ್ಯಮಿಗಳ ಪಾಲ್ಗೊಳ್ಳುವಿಕೆ ಹೊಸತನ ಉತ್ತೇಜಿಸುತ್ತದೆ. ಗ್ರಾಹಕರಿಗೆ ವಿಶಾಲವಾದ ಆಯ್ಕೆ ನೀಡುತ್ತದೆ ಎಂದು ಹೇಳಿದೆ.
ರುಪೇ ಕಾರ್ಡ್ ಮಾತ್ರ ಉತ್ತೇಜಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್ಗಳಿಗೆ ಸೂಚಿಸಿದ ಒಂದು ದಿನದ ಬಳಿಕ, ಭಾರತ ಮತ್ತು ದಕ್ಷಿಣ ಏಷ್ಯಾದ ವೀಸಾ ವ್ಯವಸ್ಥಾಪಕ ಟಿ ಆರ್ ರಾಮಚಂದ್ರನ್ ಪ್ರತಿಕ್ರಿಯಿಸಿ, ಭಾರತದಲ್ಲಿ ಡಿಜಿಟಲ್ ಪಾವತಿ ಪ್ರವೇಶಿಸುವಿಕೆ ತೀರಾ ಕಡಿಮೆ ಇದೆ. ಒಟ್ಟಾರೆ ವೈಯಕ್ತಿಕ ಬಳಕೆ ವೆಚ್ಚದಲ್ಲಿ ಕೇವಲ 18 ಪ್ರತಿಶತದಷ್ಟಿದೆ ಎಂದರು.
ನಾವೆಲ್ಲರೂ ನಮ್ಮ ಪಾತ್ರಗಳನ್ನು ನಿರ್ವಹಿಸುತ್ತೇವೆ. ಅವರ ಕಂಪನಿಯು ಪೀರ್ ಮಾಸ್ಟರ್ಕಾರ್ಡ್ ಜೊತೆಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ನೀಡುವ ರೂಪೇ ಪರ್ಯಾಯವಾಗಿ ಸ್ಪರ್ಧಿಸುತ್ತದೆ ಎಂದು ಹೇಳಿದರು.
ಭಾರತವು ದೊಡ್ಡ ದೇಶವಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ಭಿನ್ನವಾಗಿದೆ. ಇದೊಂದು ಶೂನ್ಯ ಮೊತ್ತದ ಆಟವಾಗಿದೆ. ಅಲ್ಲಿ ಯಾರೋ ಗೆದ್ದರೂ ಇನ್ಯಾರೋ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಅಂಕಿಅಂಶಗಳನ್ನು ಗಮನಿಸಿದರೆ, ಖಾಸಗಿ ಬಳಕೆಯ ಖರ್ಚಿನ ಶೇ 18ಕ್ಕಿಂತ ಕಡಿಮೆ ಡಿಜಿಟಲೀಕರಣಗೊಂಡಿದೆ. ಇದು ದೇಶೀಯ ಅಂತಾರಾಷ್ಟ್ರೀಯಂತಹ ಎಲ್ಲಾ ರೀತಿಯ ಉದ್ಯಮಿಗಳನ್ನು ಒಳಗೊಂಡಿದೆ ಎಂಬುದು ನನ್ನ ವಾದ. ಏಕೆಂದರೆ ಅದು ಹೊಸತನವನ್ನು ಉತ್ತೇಜಿಸುತ್ತದೆ. ಅದು ಗ್ರಾಹಕರ ಆಯ್ಕೆ ಪರದೆ ವಿಸ್ತರಿಸುತ್ತದೆ ಎಂದು ಹೇಳಿದರು.
ಮಂಗಳವಾರ ನಡೆದ ಭಾರತೀಯ ಬ್ಯಾಂಕ್ಗಳ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬ್ಯಾಂಕ್ಗಳು ತಮ್ಮ ಸಾಲಗಾರರಿಗೆ ರೂಪೇ ಕಾರ್ಡ್ಗಳನ್ನು ಮಾತ್ರವೇ ಉತ್ತೇಜಿಸಬೇಕು. ಯಾರಿಗೆ ಕಾರ್ಡ್ ಬೇಕಾದರೂ ರುಪೇ ಕಾರ್ಡ್ ನೀವು ಪ್ರಚಾರ ಮಾಡುವ ಏಕೈಕ ಕಾರ್ಡ್ ಆಗಿರಬೇಕು ಎಂದು ಮನವಿ ಮಾಡಿದ್ದರು.