ETV Bharat / briefs

ನೀವ್‌ ನನಗೆ ವೋಟ್‌ ಹಾಕಿಲ್ಲ, ನಾನ್ಯಾಕೆ ಕುಡಿಯೋ ನೀರಿನ ಸಮಸ್ಯೆ ನಿವಾರಿಸಬೇಕು ಅಂತಾರಂತೆ ಶಾಸಕರು.. - undefined

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಓಬಣ್ಣನ ಹಳ್ಳಿಯ ನೀರಿನ ಸಮಸ್ಯೆ ಬಗ್ಗೆ ಶಾಸಕ ತಿಪ್ಪಾರೆಡ್ಡಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಶಾಸಕರ ಬಳಿ ನೀರು ಕೇಳಲು ಹೋದರೆ ನೀವು ನನಗೆ ವೋಟ್ ಹಾಕಿಲ್ಲ ಎಂದು ಗದರಿ ಜನರನ್ನ ಕಳುಹಿಸುತ್ತಾರಂತೆ.

ಓಬಣ್ಣನ ಹಳ್ಳಿ
author img

By

Published : Jun 21, 2019, 8:39 AM IST

ಚಿತ್ರದುರ್ಗ : ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರವಿರುವ ಒಂದು ಪುಟ್ಟ ಗ್ರಾಮ. ಅಲ್ಲಿ ಗ್ರಾಮ ಪಂಚಾಯತ್ ಇದ್ದರೂ ಇಲ್ಲದಂತಾಗಿದೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಓಬಣ್ಣನ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ವರ್ಷಗಳಿಂದ ತಲೆದೋರಿದೆ. ಹನಿ ನೀರಿಗಾಗಿ ಈ ಗ್ರಾಮದ ಜನರು ಒಂದೆರೆಡು ಕಿಲೋಮೀಟರ್ ದೂರ ಸಂಚರಿಸಿ ನೀರನ್ನು ಸೇದುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಗ್ರಾಮಸ್ಥರು ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ್ದರು. ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಬೇಕೆಂದು ಅಧಿಕಾರಿಗಳ ಮುಂದೆ ಬೇಡಿಕೆಯಿಟ್ಟ ಬೆನ್ನಲ್ಲೇ ಅಧಿಕಾರಿಗಳು ಖಾಸಗಿ ಬೋರ್​ವೆಲ್​ನ ಬಾಡಿಗೆಗೆ ಪಡೆದು ಕುಡಿಯುವ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿದ್ದಾರೆ.

ನಮ್ ಕಷ್ಟ ಯಾರಿಗೆ ಹೇಳೋದ್ರೀ.. ಜನಪ್ರತಿನಿಧಿಗಳಿದ್ರೂ ವೇಸ್ಟ್‌

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಓಬಣ್ಣನ ಹಳ್ಳಿಯ ನೀರಿನ ಸಮಸ್ಯೆ ಬಗ್ಗೆ ಶಾಸಕ ತಿಪ್ಪಾರೆಡ್ಡಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಶಾಸಕರ ಬಳಿ ನೀರು ಕೇಳಲು ಹೋದರೆ ನೀವು ನನಗೆ ವೋಟ್ ಹಾಕಿಲ್ಲ ಎಂದು ಗದರಿ ಜನರನ್ನ ಕಳುಹಿಸುತ್ತಾರಂತೆ.

ಇದಕ್ಕೆ ತದ್ವಿರುದ್ಧವಾಗಿ ಚಿತ್ರದುರ್ಗದ ಪರಾಜಿತ ಜೆಡಿಎಸ್ ಅಭ್ಯರ್ಥಿ ವೀರೇಂದ್ರ ಪಪ್ಪಿ ನೀರಿನ ಸಮಸ್ಯೆ ದೂರ ಮಾಡುವ ಸಲುವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್​ವೆಲ್ ಕೊರೆಸಿದ್ದರು. ಆದರೆ, ನೀರು ಮಾತ್ರ ಬೀಳಲೇ ಇಲ್ಲ. ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಸಾಕಷ್ಟು ಹೋರಾಟ ಮಾಡಿದರೂ ಸಿಕ್ಕ ಪ್ರತಿಫಲ ಮಾತ್ರ ಖಾಸಗಿ ಬೋರ್​ವೆಲ್ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಚಿತ್ರದುರ್ಗ : ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರವಿರುವ ಒಂದು ಪುಟ್ಟ ಗ್ರಾಮ. ಅಲ್ಲಿ ಗ್ರಾಮ ಪಂಚಾಯತ್ ಇದ್ದರೂ ಇಲ್ಲದಂತಾಗಿದೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಓಬಣ್ಣನ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ವರ್ಷಗಳಿಂದ ತಲೆದೋರಿದೆ. ಹನಿ ನೀರಿಗಾಗಿ ಈ ಗ್ರಾಮದ ಜನರು ಒಂದೆರೆಡು ಕಿಲೋಮೀಟರ್ ದೂರ ಸಂಚರಿಸಿ ನೀರನ್ನು ಸೇದುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಗ್ರಾಮಸ್ಥರು ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ್ದರು. ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಬೇಕೆಂದು ಅಧಿಕಾರಿಗಳ ಮುಂದೆ ಬೇಡಿಕೆಯಿಟ್ಟ ಬೆನ್ನಲ್ಲೇ ಅಧಿಕಾರಿಗಳು ಖಾಸಗಿ ಬೋರ್​ವೆಲ್​ನ ಬಾಡಿಗೆಗೆ ಪಡೆದು ಕುಡಿಯುವ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿದ್ದಾರೆ.

ನಮ್ ಕಷ್ಟ ಯಾರಿಗೆ ಹೇಳೋದ್ರೀ.. ಜನಪ್ರತಿನಿಧಿಗಳಿದ್ರೂ ವೇಸ್ಟ್‌

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಓಬಣ್ಣನ ಹಳ್ಳಿಯ ನೀರಿನ ಸಮಸ್ಯೆ ಬಗ್ಗೆ ಶಾಸಕ ತಿಪ್ಪಾರೆಡ್ಡಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಶಾಸಕರ ಬಳಿ ನೀರು ಕೇಳಲು ಹೋದರೆ ನೀವು ನನಗೆ ವೋಟ್ ಹಾಕಿಲ್ಲ ಎಂದು ಗದರಿ ಜನರನ್ನ ಕಳುಹಿಸುತ್ತಾರಂತೆ.

ಇದಕ್ಕೆ ತದ್ವಿರುದ್ಧವಾಗಿ ಚಿತ್ರದುರ್ಗದ ಪರಾಜಿತ ಜೆಡಿಎಸ್ ಅಭ್ಯರ್ಥಿ ವೀರೇಂದ್ರ ಪಪ್ಪಿ ನೀರಿನ ಸಮಸ್ಯೆ ದೂರ ಮಾಡುವ ಸಲುವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್​ವೆಲ್ ಕೊರೆಸಿದ್ದರು. ಆದರೆ, ನೀರು ಮಾತ್ರ ಬೀಳಲೇ ಇಲ್ಲ. ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಸಾಕಷ್ಟು ಹೋರಾಟ ಮಾಡಿದರೂ ಸಿಕ್ಕ ಪ್ರತಿಫಲ ಮಾತ್ರ ಖಾಸಗಿ ಬೋರ್​ವೆಲ್ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

Intro:ಭೀಕರ ಬರಕ್ಕೆ ಬೆಂಢಾದ ಕೋಟೆನಾಡಿ ಜನ : ಕುಡಿಯಲು ಹನಿ ನೀರಿಲ್ಲದೆ ಮತದಾನ ಬಹಿಷ್ಕಾರ ಮಾಡಿದ್ರು ಆಗಲಿಲ್ಲ ಪ್ರಯೋಜನ
ಆ್ಯಂಕರ್:- ಅ ಗ್ರಾಮ ಜಿಲ್ಲಾ ಕೇಂದ್ರದಿಂದ ಕೂಗಳತೆಯಲ್ಲಿರುವ ಒಂದು ಪುಟ್ಟ ಗ್ರಾಮ , ಅ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಇದ್ರೂ ಇಲ್ಲದಂತಾಗಿದ್ದು, ಕುಡಿಯುವ ನೀರಿಗಾಗಿ ಅ ಗ್ರಾಮಸ್ಥರ ಗೋಳು ಕೇಳುವರ್ಯಾರು ಇಲ್ಲ ಎಂಬತಾಗಿದೆ. ಅದ್ರೇ ಅ ಗ್ರಾಮ ಗ್ರಾಮಸ್ಥರು ಮತದಾನ ಬಹಿಷ್ಕಾರಿಸಿದರೆ ಗ್ರಾಮಕ್ಕೆ ನೀರು ಬರುತ್ತೇ ಎಂದುಕೊಂಡು ಮತದಾನ ಬಹಿಷ್ಕಾರಿಸಿದ ಪರಿಣಾಮಗ್ರಾಮ ಪಂಚಾಯಿತಿ ಖಾಸಗಿ ಭೋರ್ ವೆಲ್ ನಿಂದ ನೀರು ಪೂರೈಸಿದರೂ ಕುಡಿಯುವ ನೀರಿನ ಸಮಸ್ಯೆ ಮಾತ್ರ ದೂರವಾಗಿಲ್ಲ. ಇನ್ನೂ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದ ಗ್ರಾಮಸ್ಥರು ಈಗಾಲೂ ಕೂಡು ಬೋರ್ ವೆಲ್ ಕೊರೆಸಿ ಎಂದು ಪಟ್ಟು ಹಿಡಿದಿದ್ದಾರೆ.
ಲುಕ್,,,
ಫ್ಲೋ,,,,
ವಾಯ್ಸ್ 01:- ಚಿತ್ರದುರ್ಗ ಜಿಲ್ಲೆಯ ಕೂಗಳತೆಯಲ್ಲಿರುವ ಒಬಣ್ಣನ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ವರ್ಷಗಳಿಂದ ತಲೆದೋರಿದೆ. ಹನಿ ನೀರಿಗಾಗಿ ಈ ಗ್ರಾಮದ ಜನ್ರು ಒಂದೆರೆಡು ಕಿಲೋ ಮೀಟರ್ ದೂರ ಸಂಚರಿಸಿ ನೀರನ್ನು ಸೇದುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದ್ರೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪಣತೊಟ್ಟ ಗ್ರಾಮಸ್ಥರು ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿ ಅಧಿಕಾರಿಗಳ ಮನವೋಲಿಕೆಗೆ ಒಪ್ಪದೆ ಮತದಾನದಿಂದ ದೂರ ಉಳಿದಿದ್ದರು. ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಬೇಕೆಂದು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಬೇಡಿಕೆಯನ್ನಿಟ್ಟ ಬೆನ್ನಲೇ ಅಧಿಕಾರಿಗಳು ಖಾಸಗಿ ಬೋರ್ ವೆಲ್ ನ್ನು ಬಾಡಿಗೆಗೆ ಪಡೆದು ಕುಡಿಯುವ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿದ್ದಾರೆ. ಅದ್ರೇ ಬಾಡಿಗೆಗೆ ಪಡೆದಿರುವ ಖಾಸಗಿ ಬೋರ್ ವೆಲ್ ನ್ನು ನಂಬದ ಗ್ರಾಮಸ್ಥರು ಪಂಚಾಯಿತಿಯ ಸ್ವಂತ ಬೋರ್ ವೆಲ್ ಇಲ್ಲದೆ ಕಂಗಾಗಲಾಗಿದ್ದಾರೆ. ಈಗಾಗಲೇ ಇಡೀ ಗ್ರಾಮಕ್ಕೆ ನೀರು ಪೂರೈಸುತ್ತಿರುವ ಖಾಸಗಿ ಬೋರ್ ವೆಲ್ ನಲ್ಲೂ ನೀರು ಪಾತಾಳಾ ಕಂಡರೇ ನಮ್ಮ ಪರಿಸ್ಥಿತಿ ಮೊದಲ ರೀತಿಯಲ್ಲಾಗುತ್ತದೆ, ಅದ್ದರಿಂದ ಗ್ರಾಮಕ್ಕೆ ಬೋರ್ ವೆಲ್ ಬೇಕೆ ಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿರುವುದು ಸಾಮಾನ್ಯವಾಗಿದೆ.
ಫ್ಲೋ,,,,
ಬೈಟ್01:- ದುರ್ಗಮ್ಮ, ಸ್ಥಳೀಯ ಮಹಿಳೆ
ವಾಯ್ಸ್ 02:- ಇನ್ನೂ ಚಿತ್ರದುರ್ಗದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಓಬಣ್ಣನ ಹಳ್ಳಿಯ ನೀರಿನ ಸಮಸ್ಯೆ ಬಗ್ಗೆ ಶಾಸಕ ತಿಪ್ಪಾರೆಡ್ಡಿಯ ಗಮನಕ್ಕೂ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಇನ್ನೂ ಶಾಸಕ ತಿಪ್ಪಾರೆಡ್ಡಿ ಬಳಿ ನೀರು ಕೇಳಲು ಹೋದ್ರೇ ನೀವು ನನಗೆ ಓಟ್ ಹಾಕಿಲ್ಲ ಎಂದು ಗದರಿದ ಉದಾಹರಣೆಗಳಿವೆ. ಇದಕ್ಕೆ ತದ್ವಿರುದ್ಧವಾಗಿ ಚಿತ್ರದುರ್ಗ ಪರಜಿತ ಜೆಡಿಎಸ್ ಅಭ್ಯರ್ಥಿ ವೀರೇಂದ್ರ ಪಪ್ಪಿ ನೀರಿನ ಸಮಸ್ಯೆ ದೂರ ಮಾಡುವ ಸಲುವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್ ವೆಲ್ ಕೊರೆಸಿದ್ರೂ ನೀರು ಮಾತ್ರ ಬೀಳಲೇ ಇಲ್ವಾಂತೆ. ಇದರಿಂದ ಚಿಂತೆಗೀಡದ ಗ್ರಾಮಸ್ಥರು ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಸಾಷ್ಟು ಹೋರಾಟ ಮಾಡಿದ್ರೂ ಸಿಕ್ಕ ಪ್ರತಿಫಲ ಮಾತ್ರ ಖಾಸಗಿ ಬೋರ್ ವೆಲ್.
ಫ್ಲೋ,,,
ಬೈಟ್02:- ಚಂದ್ರಪ್ಪ, ಸ್ಥಳೀಯ
ವಾಯ್ಸ್ 03:- ಒಟ್ಟಾರೆ ಕೋಟೆನಾಡು ಚಿತ್ರದುರ್ಗ ಬರದಿಂದ ಬಳಲುತ್ತಿದ್ದು, ಇದರ ಪರಿಣಾಮ ಕುಡಿಯುವ ನೀರಿನ ಮೇಲಾಗುತ್ತಿದೆ. ಅದೇನೆ ಆಗಲಿ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಜನ್ರ ಸಮಸ್ಯೆಗೆ ಅಧಿಕಾರಿಗಳು ಖಾಸಗಿ ಬೋರ್ ವೆಲ್ ಗೆ ಮುಕ್ತಿ ಕಲ್ಪಸಿ ದಾಹ ದಣಿಸಬೇಕಾಗಿದೆ.
ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ

Body:waterConclusion:pkg

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.