ETV Bharat / briefs

ಕಂಪ್ಲಿ ಶಾಸಕ ಗಣೇಶ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು: ಎಂ.ಬಿ.ಪಾಟೀಲ್​

ಕಂಪ್ಲಿ ಶಾಸಕ ಗಣೇಶ್​ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

author img

By

Published : Feb 21, 2019, 12:19 PM IST

ಎಂ.ಬಿ ಪಾಟೀಲ್​

ಹುಬ್ಬಳ್ಳಿ: ಕಂಪ್ಲಿ ಶಾಸಕ ಗಣೇಶ್​ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಗುಜರಾತ್​ನ ಸೋಮನಾಥದಲ್ಲಿ ಗಣೇಶ್​ ಅವರನ್ನು ಬಂಧಿಸಲಾಗಿದೆ. ಬಿಡದಿ ಠಾಣೆಯ ಪೊಲೀಸರು ವಿಚಾರಣೆ ನಡೆಸಿದ ನಂತರ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗುವುದು ಎಂದರು.

ರಾಷ್ಟ್ರದ್ರೋಹಿ ಹೇಳಿಕೆ, ಸಂದೇಶಗಳನ್ನು ಕಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ‌ ಮೇಲೆ ನಿಗಾ ಇರಿಸಲಾಗುತ್ತಿದೆ. ಈ ಕುರಿತು ಡಿಜಿ-ಐಜಿಗಳಿಗೆ ಕಟ್ಟುನಿಟ್ಟಿನ ಕ್ರಮ‌ ಜರುಗಿಸಲು ಸೂಚನೆ ನೀಡಲಾಗಿದೆ. ಭಾರತ ಸರ್ಕಾರ ಇಂತಹ ಕೃತ್ಯಗಳ ತಡೆ ಕಾಯ್ದೆ ರೂಪಿಸಬೇಕು. ಫೇಸ್​ಬುಕ್, ವಾಟ್ಸಪ್​ನಲ್ಲಿ ಸಂದೇಶ ಹರಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಎಂ.ಬಿ.ಪಾಟೀಲ್​

ಹುಬ್ಬಳ್ಳಿ ಸ್ಫೋಟಿಸುವುದಾಗಿ ಹೇಳಿದ ವಿಡಿಯೋ ವೈರಲ್ ಆಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಪೊಲೀಸರು ಆ ಬಗ್ಗೆ ಕ್ರಮ‌ ಕೈಗೊಳ್ಳುತ್ತಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಪಾಕಿಸ್ತಾನ ಭಯೋತ್ಪಾದನೆ ಬಿತ್ತುವಂತ ರೋಗಗ್ರಸ್ಥ ರಾಷ್ಟ್ರ. ಆ ರಾಷ್ಟ್ರವನ್ನ ವಿಶ್ವ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕು. ಯೋಧರ ಪ್ರಾಣ ತ್ಯಾಗದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು.

ಹುಬ್ಬಳ್ಳಿ: ಕಂಪ್ಲಿ ಶಾಸಕ ಗಣೇಶ್​ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಗುಜರಾತ್​ನ ಸೋಮನಾಥದಲ್ಲಿ ಗಣೇಶ್​ ಅವರನ್ನು ಬಂಧಿಸಲಾಗಿದೆ. ಬಿಡದಿ ಠಾಣೆಯ ಪೊಲೀಸರು ವಿಚಾರಣೆ ನಡೆಸಿದ ನಂತರ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗುವುದು ಎಂದರು.

ರಾಷ್ಟ್ರದ್ರೋಹಿ ಹೇಳಿಕೆ, ಸಂದೇಶಗಳನ್ನು ಕಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ‌ ಮೇಲೆ ನಿಗಾ ಇರಿಸಲಾಗುತ್ತಿದೆ. ಈ ಕುರಿತು ಡಿಜಿ-ಐಜಿಗಳಿಗೆ ಕಟ್ಟುನಿಟ್ಟಿನ ಕ್ರಮ‌ ಜರುಗಿಸಲು ಸೂಚನೆ ನೀಡಲಾಗಿದೆ. ಭಾರತ ಸರ್ಕಾರ ಇಂತಹ ಕೃತ್ಯಗಳ ತಡೆ ಕಾಯ್ದೆ ರೂಪಿಸಬೇಕು. ಫೇಸ್​ಬುಕ್, ವಾಟ್ಸಪ್​ನಲ್ಲಿ ಸಂದೇಶ ಹರಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಎಂ.ಬಿ.ಪಾಟೀಲ್​

ಹುಬ್ಬಳ್ಳಿ ಸ್ಫೋಟಿಸುವುದಾಗಿ ಹೇಳಿದ ವಿಡಿಯೋ ವೈರಲ್ ಆಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಪೊಲೀಸರು ಆ ಬಗ್ಗೆ ಕ್ರಮ‌ ಕೈಗೊಳ್ಳುತ್ತಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಪಾಕಿಸ್ತಾನ ಭಯೋತ್ಪಾದನೆ ಬಿತ್ತುವಂತ ರೋಗಗ್ರಸ್ಥ ರಾಷ್ಟ್ರ. ಆ ರಾಷ್ಟ್ರವನ್ನ ವಿಶ್ವ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕು. ಯೋಧರ ಪ್ರಾಣ ತ್ಯಾಗದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.