ETV Bharat / briefs

ಅಭಿವೃದ್ದಿ ಮಾಡುವಲ್ಲಿ ಜೆಡಿಎಸ್​ ವಿಫಲ: ದೇವರಾಜೇಗೌಡ ಆರೋಪ - ಹಾಸನದಲ್ಲಿ ಕಾಂಗ್ರೆಸ್ ಮುಂಖಡ ದೇವರಾಜೇಗೌಡ ಸುದ್ದಿಗೋಷ್ಟಿ

ಹಿಂದಿನ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ನಾಯಕರು ನಗರದ ಅಭಿವೃದ್ಧಿ ವಿಚಾರದಲ್ಲಿ ಎಡವಿದ್ದಾರೆ ಸಾವಿರಾರು ಕೋಟಿ ಹಣ ತಂದರೂ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಂಖಡ ದೇವರಾಜೇಗೌಡ ದೂರಿದರು.

ದೇವರಾಜೇಗೌಡ ಪತ್ರಿಕಾಗೋಷ್ಟಿ
author img

By

Published : Nov 13, 2019, 7:30 PM IST

Updated : Nov 13, 2019, 9:23 PM IST

ಹಾಸನ : ಹಿಂದಿನ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ನಾಯಕರು ನಗರದ ಅಭಿವೃದ್ಧಿ ವಿಚಾರದಲ್ಲಿ ಎಡವಿದ್ದಾರೆ. ಸಾವಿರಾರು ಕೋಟಿ ಹಣ ತಂದರೂ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಂಖಡ ದೇವರಾಜೇಗೌಡ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಕಾಬಿಟ್ಟಿ ಕಾಮಗಾರಿ‌ ಮಾಡುವ ನೆಪದಲ್ಲಿ ನಗರವನ್ನು ಕಿಷ್ಕಿಂದೆ ಮಾಡಿದ್ದಾರೆ. ಸುಸಜ್ಜಿತವಾದ ಹಳೇ ಕಟ್ಟಡ ಕೆಡವಿ ನೂತನ ಕಟ್ಟಡ ಮಾಡೋದು ಯಾವ ರೀತಿ ಅಭಿವೃದ್ಧಿ? ಹಲವು ದಶಕದ ಇತಿಹಾಸ ಹೊಂದಿರುವ‌‌ ನಗರದ ಬೃಹತ್ ಗಂಧದ ಕೋಟಿ‌ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡಲು ನೂರಾರು ಮರಗಳ‌ ಮಾರಣ ಹೋಮ ಮಾಡಿದ್ದಾರೆ ಎಂದು ದೂರಿದರು.

ದೇವರಾಜೇಗೌಡ ಪತ್ರಿಕಾಗೋಷ್ಠಿ

ಹಿಂದೆ ಉಸ್ತುವಾರಿ ಸಚಿವರಾಗಿದ್ದ ಜೆಡಿಎಸ್​ನವರು ತಮ್ಮ ಸ್ವಾರ್ಥಕ್ಕೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಿದ್ದಾರೆ. ಇದು ಇಲ್ಲಿನ ಜನರಿಗೆ‌ ಮಾಡಿದ ಅನ್ಯಾಯ ಅನುದಾನ ತಂದರೂ ಸರಿಯಾದ ಉಪಯೋಗವಾಗಿಲ್ಲ, ಸಾವಿರಾರು ಕೋಟಿ ಹಣ ಸುರಿದರು ನಗರದ ಬಹುತೇಕ ರಸ್ತೆ ಹದಗೆಟ್ಟಿದೆ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ದೂರಿದರು.

ಸ್ಥಳೀಯ ಶಾಸಕರಾದ ಪ್ರೀತಂಗೌಡ ಅವರು ಔಟರ್ ರಿಂಗ್ ರೋಡ್ ಅಭಿವೃದ್ಧಿ ಮಾಡುವ ಮಾತನಾಡಿದ್ದಾರೆ. ಆದರೆ, ಈಗಿರುವ ರಿಂಗ್ ರಸ್ತೆಯೇ ಅಭಿವೃದ್ಧಿಯಾಗಿಲ್ಲ ನಗರದ ಹಲವು ರಸ್ತೆಗಳು ಹದಗೆಟ್ಟಿದೆ. ಅದನ್ನೇ ಅಭಿವೃದ್ಧಿ ಮಾಡಿದರೆ ಒಳಿತು. ಇನ್ನೊಂದು ರಿಂಗ್ ರಸ್ತೆಯಿಂದ ಯಾರಿಗೂ ಅನುಕೂಲವಾಗದು ಸಾರ್ವಜನಿಕ ಉಪಯೋಗ ಕಮ್ಮಿ, ಇದರಿಂದ ಜೆಡಿಎಸ್ ನಾಯಕರಿಗೆ ಹೆಚ್ಚು ಅನುಕೂಲ ಅಷ್ಟೆ. ಇಂತಹ ಯೋಜನೆ ಕೈಬಿಟ್ಟು ಬೇರೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್, ಮಹೇಂದ್ರ, ರಿಜ್ವಾನ್, ಕೀರ್ತಿಕುಮಾರ್, ದೇವಪ್ಪ ಮಲ್ಲಿಗೆವಾಳು ಇದ್ದರು.

ಹಾಸನ : ಹಿಂದಿನ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ನಾಯಕರು ನಗರದ ಅಭಿವೃದ್ಧಿ ವಿಚಾರದಲ್ಲಿ ಎಡವಿದ್ದಾರೆ. ಸಾವಿರಾರು ಕೋಟಿ ಹಣ ತಂದರೂ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಂಖಡ ದೇವರಾಜೇಗೌಡ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಕಾಬಿಟ್ಟಿ ಕಾಮಗಾರಿ‌ ಮಾಡುವ ನೆಪದಲ್ಲಿ ನಗರವನ್ನು ಕಿಷ್ಕಿಂದೆ ಮಾಡಿದ್ದಾರೆ. ಸುಸಜ್ಜಿತವಾದ ಹಳೇ ಕಟ್ಟಡ ಕೆಡವಿ ನೂತನ ಕಟ್ಟಡ ಮಾಡೋದು ಯಾವ ರೀತಿ ಅಭಿವೃದ್ಧಿ? ಹಲವು ದಶಕದ ಇತಿಹಾಸ ಹೊಂದಿರುವ‌‌ ನಗರದ ಬೃಹತ್ ಗಂಧದ ಕೋಟಿ‌ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡಲು ನೂರಾರು ಮರಗಳ‌ ಮಾರಣ ಹೋಮ ಮಾಡಿದ್ದಾರೆ ಎಂದು ದೂರಿದರು.

ದೇವರಾಜೇಗೌಡ ಪತ್ರಿಕಾಗೋಷ್ಠಿ

ಹಿಂದೆ ಉಸ್ತುವಾರಿ ಸಚಿವರಾಗಿದ್ದ ಜೆಡಿಎಸ್​ನವರು ತಮ್ಮ ಸ್ವಾರ್ಥಕ್ಕೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಿದ್ದಾರೆ. ಇದು ಇಲ್ಲಿನ ಜನರಿಗೆ‌ ಮಾಡಿದ ಅನ್ಯಾಯ ಅನುದಾನ ತಂದರೂ ಸರಿಯಾದ ಉಪಯೋಗವಾಗಿಲ್ಲ, ಸಾವಿರಾರು ಕೋಟಿ ಹಣ ಸುರಿದರು ನಗರದ ಬಹುತೇಕ ರಸ್ತೆ ಹದಗೆಟ್ಟಿದೆ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ದೂರಿದರು.

ಸ್ಥಳೀಯ ಶಾಸಕರಾದ ಪ್ರೀತಂಗೌಡ ಅವರು ಔಟರ್ ರಿಂಗ್ ರೋಡ್ ಅಭಿವೃದ್ಧಿ ಮಾಡುವ ಮಾತನಾಡಿದ್ದಾರೆ. ಆದರೆ, ಈಗಿರುವ ರಿಂಗ್ ರಸ್ತೆಯೇ ಅಭಿವೃದ್ಧಿಯಾಗಿಲ್ಲ ನಗರದ ಹಲವು ರಸ್ತೆಗಳು ಹದಗೆಟ್ಟಿದೆ. ಅದನ್ನೇ ಅಭಿವೃದ್ಧಿ ಮಾಡಿದರೆ ಒಳಿತು. ಇನ್ನೊಂದು ರಿಂಗ್ ರಸ್ತೆಯಿಂದ ಯಾರಿಗೂ ಅನುಕೂಲವಾಗದು ಸಾರ್ವಜನಿಕ ಉಪಯೋಗ ಕಮ್ಮಿ, ಇದರಿಂದ ಜೆಡಿಎಸ್ ನಾಯಕರಿಗೆ ಹೆಚ್ಚು ಅನುಕೂಲ ಅಷ್ಟೆ. ಇಂತಹ ಯೋಜನೆ ಕೈಬಿಟ್ಟು ಬೇರೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್, ಮಹೇಂದ್ರ, ರಿಜ್ವಾನ್, ಕೀರ್ತಿಕುಮಾರ್, ದೇವಪ್ಪ ಮಲ್ಲಿಗೆವಾಳು ಇದ್ದರು.

Intro:ಹಾಸನ; ಹಿಂದಿನ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ನಾಯಕರು ನಗರದ ಅಭಿವೃದ್ಧಿ ವಿಚಾರದಲ್ಲಿ ಎಡವಿದ್ದಾರೆ ; ಸಾವಿರಾರು ಕೋಟಿ ಹಣ ತಂದರೂ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲಾ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಂಖಡ ದೇವರಾಜೇಗೌಡ ಆಪಾಧಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೇಕಾಬಿಟ್ಟಿ ಕಾಮಗಾರಿ‌ ಮಾಡುವ ನೆಪದಲ್ಲಿ ನಗರವನ್ನು ಕಿಷ್ಕಿಂದಿ ಮಾಡಿದ್ದಾರೆ. ಸುಸಜ್ಜಿತ ವಾದ ಹಳೆ ಕಟ್ಟಡ ಕೆಡವಿ ನೂತನ ಕಟ್ಟಡ ಮಾಡೋದು ಯಾವ ರೀತಿ ಅಭಿವೃದ್ಧಿ..?
ಹಳೆ ರಸ್ತೆ ತೆಗೆದು ಹೊಸ ರಸ್ತೆ ಮಾಡಿದರು ಇದರಲ್ಲಿ ಸಾವುರಾರು ಕೋಟಿ ಹಣ ಲೂಟಿ ಮಾಡಲಾಗಿದೆ‌ ಇದರಲ್ಲಿ ಅವರ ಸ್ವಾರ್ಥ ವಿದೆ ಎಂದು ಆರೋಪಿಸಿದರು.

ಹಲವು ದಶಕದ ಇತಿಹಾಸ ಹೊಂದಿರುವ‌‌ ನಗರದ ಬೃಹತ್ ಹಸಿರು ಸಿರಿ‌ ಹೊಂದಿದ್ದ ಗಂಧದ ಕೋಟಿ‌ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡಲು ನೂರಾರು ಮರಗಳ‌ ಮಾರಣ ಹೋಮ ಮಾಡಿದ್ದಾರೆ. ಮಹಾರಾಜ‌ ಪಾರ್ಕ ಬಿಟ್ಟಿರೆ ಇಲ್ಲಿಯೇ ಹೆಚ್ಚು‌ ಮರ ಇದ್ದವು ಆದರೆ ನಗರದ ಬಹುತೇಕ ಕಾಮಗಾರಿ ಅಸಮರ್ಪಕ ವಾಗಿ‌ ಇದೆ ಎಂದರು.

ಹಿಂದೆ ಉಸ್ತುವಾರಿ ಸಚುವರಾಗಿದ್ದ ಜೆಡಿಎಸ್ ಮುಖಂಡರು ತಮ್ಮ ಸ್ವಾರ್ಥಕ್ಕೆ ಇಂತಹ ಅಭಿವೃದ್ಧಿ ಕಾಮಗಾರಿಗೆ ಅನುದಾನ ತಂದಿದ್ದಾರೆ. ಇದು ಇಲ್ಲಿನ ಜನರಿಗೆ‌ ಮಾಡಿದ ಅನ್ಯಾಯ ; ಅನುದಾನ ತಂದರೂ ಸರಿಯಾದ ಉಪಯೋಗ ವಾಗಿಲ್ಲಾ ಸಾವಿರಾರು ಕೋಟಿ ಹಣ ಸುರಿದರು ನಗರದ ಬಹುತೇಕ ರಸ್ತೆ ಹದಗೆಟ್ಟಿದೆ ಯಾವುದೇ ಅಭಿವೃದ್ಧಿ ಕಂಡಿಲ್ಲಾ ಎಂದು ದೂರಿದರು.

ಸ್ಥಳೀಯ ಶಾಸಕರಾದ ಪ್ರೀತಂ ಗೌಡ ಅವರು ಔಟರ್ ರಿಂಗ್ ರೋಡ್ ಅಭಿವೃದ್ಧಿ ಮಾಡುವ ಮಾತನಾಡಿದ್ದಾರೆ ಆದರೆ ಹೀಗಿರುವ ರಿಂಗ್ ರಸ್ತೆಯೇ ಅಭಿವೃದ್ಧಿ ಯಾಗಿಲ್ಲಾ ನಗರದ ಹಲವು ರಸ್ತೆ ಹದಗೆಟ್ಟಿದೆ ಅದನ್ನೆ ಅಭಿವೃದ್ಧಿ ಮಾಡಿದರೆ ಒಳಿತು..; ಇನ್ನೊಂದು ರಿಂಗ್ ರಸ್ತೆ ಯಾರಿಗೂ ಅನುಕೂಲವಾಗದು ಸಾರ್ವಜನಿಕ ಉಪಯೋಗ ಕಮ್ಮಿ; ಇದರಿಂದ ಜೆಡಿಎಸ್ ನಾಯಕರಿಗೆ ಹೆಚ್ಚು ಅನುಕೂಲ ಅಷ್ಟೆ... ಇಂತಹ ಯೋಜನೆ ಕೈಬಿಟ್ಟು ಬೇರೆ ಅಭಿವೃದ್ಧಿ ಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಫ್ಲೈ ಓವರ್ ಕಾಮಗಾರಿ ಮಾಡಿದ್ದರೆ ಹೆಚ್ಚು ಅನುಕೂಲ ವಾಗಲಿದೆ ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ‌ ; ಈ ಕಾಮಗಾರಿಗೆ ರಸ್ತೆ ವಿಸ್ತೀರ್ಣ ಮಾಡುವ ಕೆಲಸ ಸಮರ್ಪಕವಾಗಿ ನಡೆದಿಲ್ಲಾ..ಒಂದೇ ಮಾರ್ಗದಲ್ಲಿ ವಿಸ್ತರಣೆ ಮಾಡಲಾಗಿದೆ .
ಎರಡು ಬದಿ‌ ರಸ್ತೆ ವಿಸ್ತರಣೆ ಮಾಡಬೇಕು ಕೆಲ ಜೆಡಿಎಸ್ ನಾಯಕರ ಹಿತಾಸಕ್ತಿ ಗೆ ಇದನ್ನು‌ ಕೈಬಿಡಲಾಗಿದೆ.‌ಜೆಡಿಎಸ್ ನವರು ನಗರದ ಅಭಿವೃದ್ದಿಗೆ ಹತ್ತಾರು ಯೋಜನೆ ತಂದಿದ್ದೇವೆ ಎಂದು‌‌ ಹೇಳುತ್ತಾರೆ ಆದರೆ ಇದರಲ್ಲಿ ಅವರ ಸ್ವಾರ್ಥ ವೇ ಹೆಚ್ಚಿದೆ.

ಮುಂದಿನ ದಿನಗಳಲ್ಲಿ ಅನಗತ್ಯ ಇಂತಹ ಕಾಮಗಾರಿ‌ ನಡೆದರೆ‌ ಕಾಂಗ್ರೆಸ್ ಪಕ್ಷದಿಂದ ಖಂಡಿಸುತ್ತೇವೆ ಎಂದರು‌.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್, ಮಹೇಂದ್ರ,ರಿಜ್ವಾನ್, ಕೀರ್ತಿಕುಮಾರ್, ದೇವಪ್ಪ ಮಲ್ಲಿಗೆವಾಳು ಇದ್ದರು.Body:ಬೈಟ್ : ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಂಖಡ ದೇವರಾಜೇಗೌಡ.Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Last Updated : Nov 13, 2019, 9:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.