ETV Bharat / briefs

ಗಣಿನಾಡಲ್ಲಿ ಯಾರಿಗೆ ಗೆಲುವಿನ ತುರಾಯಿ..? ಉಗ್ರಪ್ಪ-ದೇವೇಂದ್ರಪ್ಪರ ನಡುವೆ ಬಿಗ್​ಫೈಟ್​..!

author img

By

Published : May 21, 2019, 4:39 PM IST

ಗಣಿ ನಗರಿ, ಬಿಸಿಲ ನಗರಿ, ಉಕ್ಕಿನ ನಗರಿ ಎಂದೇ ಅನೇಕ ವೈಶಿಷ್ಠ್ಯತೆಗೆ ಹೆಸರುವಾಸಿಯಾಗಿರುವ ಬಳ್ಳಾರಿಯಲ್ಲಿ ಎಲೆಕ್ಷನ್​ ಕಾವು ಜೋರಾಗಿಯೇ ಇತ್ತು.. ಎಲೆಕ್ಷನ್​ ಮುಗಿದ ಬಳಿಕ ತುಸು ಕಮ್ಮಿಯಾಗಿದ್ದು, ಫಲಿತಾಂಶಕ್ಕಾಗಿ ಗಣಿ ನಾಡ ಜನ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಅವರ ಕಾಯುವಿಕೆ ಕೊನೆಗೊಳ್ಳುತ್ತ ಬಂದಿದ್ದು, ಕೆಲವೇ ಹೊತ್ತಲ್ಲಿ ಅವರ ಕುತೂಹಲಕ್ಕೂ ತೆರೆ ಬೀಳಲಿದೆ.

ಗಣಿನಾಡು

ಬಳ್ಳಾರಿ: ರಾಜ್ಯದ ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಗಣಿನಾಡು ಬಳ್ಳಾರಿ ಜಿಲ್ಲೆ ಆಂಧ್ರದ ರಾಯಲಸೀಮಾ ಎಂದೇ ಹೆಸರು ಪಡೆದಿತ್ತು. ಸಂಪದ್ಬರಿತ ನಾಡಲ್ಲಿ ಈಗ ಎಲೆಕ್ಷನ್​ ಕಾವು. ಯುದ್ಧ ಮುಗಿದ ಪರಿಸ್ಥಿತಿಯಿದ್ದರೂ ಗಣಿ ನಾಡ ಜನ ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

17. 51ಲಕ್ಷ ಮತದಾರರಿಂದ ನಿರ್ಧಾರವಾಗಿದೆ ಹಣೆಬರಹ:

ಸಾಮಾನ್ಯ ಕ್ಷೇತ್ರದಿಂದ ಮೀಸಲು ಕ್ಷೇತ್ರಕ್ಕೆ ಮಾರ್ಪಾಡು ಆದ ಬಳಿಕ ಗಣಿ ಜಿಲ್ಲೆ ಬಳ್ಳಾರಿ ಲೋಕಸಭಾ ಕ್ಷೇತ್ರವು ಎರಡು ಉಪ ಚುನಾವಣೆ ಸೇರಿದಂತೆ ಈವರೆಗೂ ಹದಿನೆಂಟು ಚುನಾವಣೆಗಳನ್ನ ಎದುರಿಸಿದೆ. ಆ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಹೆಚ್ಚಾಗಿ ಜಯಭೇರಿ ಬಾರಿಸಿದ್ದಾರೆ. ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಹಾಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ಪರ್ಧೆಯಿಂದಾಗಿ 1999ರಲ್ಲಿ ದೇಶ ಹಾಗೂ ವಿಶ್ವಾದ್ಯಂತ ಸದ್ದು ಮಾಡಿತ್ತು ಗಡಿನಾಡು. ಇನ್ನು ಕ್ಷೇತ್ರದಲ್ಲಿ 17,51,297 ಮತದಾರರು ಮಾತ್ರ ಇದ್ದಾರೆ. ಆ ಪೈಕಿ 8,70,900 ಪುರುಷರು, 8,80,165 ಮಹಿಳೆಯರು ಹಾಗೂ 232 ಇತರರು ಇದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಶೇ 69.5 ರಷ್ಟು ಮತದಾನ..!

ಈ ಬಾರಿ ಜಿಲ್ಲೆಯಲ್ಲಿ ಶೇ. 69.592 ರಷ್ಟು ಮತದಾನ ಆಗಿದೆ. 12,18,767 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಸರಿಸುಮಾರು 5,32,530 ಮಂದಿ ಮತದಾರರು ಮತದಾನ ಪ್ರಕ್ರಿಯೆಯಿಂದ ದೂರುಳಿದಿದ್ದು, ಮಹಿಳೆಯರಿಗಿಂತಲೂ ಪುರುಷರೇ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಭಾಗವಹಿಸಿರೋದೇ ವಿಶೇಷ ಎನಿಸಿದೆ.

ಕುತೂಹಲ ಮೂಡಿಸಿದ ಬಳ್ಳಾರಿ ಕ್ಷೇತ್ರ

ಯಾರೇ ಗೆದ್ದರೂ ಇವರೇ ನಿರ್ಣಾಯಕರು!

ಹಾಲಿ ಸಂಸದರೂ ಆಗಿರುವ ಕಾಂಗ್ರೆಸ್​ನ ವಿ.ಎಸ್. ಉಗ್ರಪ್ಪ ಹಾಗೂ ಕ್ಷೇತ್ರದ ಜನರಿಗೆ ಚಿರಪರಿಚಿತರಾದ್ರೂ ಹೊಸ ಮುಖವಾಗಿರೋ ಬಿಜೆಪಿಯ ವೈ.ದೇವೇಂದ್ರಪ್ಪ ಇಲ್ಲಿ ಪ್ರಮುಖ ಎದುರಾಳಿಗಳು. ಕ್ಷೇತ್ರದಲ್ಲಿ ಲಿಂಗಾಯತರೇ ಅಧಿಕ ಎಂದರೆ 3.10 ಲಕ್ಷ ಮತದಾರರಿದ್ದಾರೆ. ಇನ್ನು ಪರಿಶಿಷ್ಠ ಪಂಗಡದ 2.85 ಲಕ್ಷಕ್ಕೂ ಹೆಚ್ಚು ಮತದಾರರಿದ್ದರೆ, 3 ಲಕ್ಷದಷ್ಟು ಪರಿಶಿಷ್ಟ ಜಾತಿಯ ಮತದಾರರಿದ್ದಾರೆ. 1.75 ಲಕ್ಷಕ್ಕೂ ಹೆಚ್ಚು ಮುಸ್ಲಿಮರಿದ್ದು, ಇದಕ್ಕಿಂತಲೂ ಹೆಚ್ಚ ಅಂದರೆ 1.80 ಲಕ್ಷದಷ್ಟು ಕುರುಬ ಮತದಾರರಿದ್ದಾರೆ. ಹೀಗಾಗಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ. ಇಲ್ಲಿ ಮೋದಿ ಹವಾ ಕೆಲಸ ಮಾಡುತ್ತಾ, ಡಿಕೆಶಿ ತಂತ್ರ ಗೆಲ್ಲುತ್ತಾ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಹನ್ನೊಂದು ತಾಲೂಕುಗಳಿವೆ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರವು ಕೊಪ್ಪಳ ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಒಳ ಪಟ್ಟಿದೆ. ಮೊನ್ನೆತಾನೆ ಈ ಜಿಲ್ಲೆಗೆ ಸೇರ್ಪಡೆಯಾಗಿದ್ದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಒಟ್ಟಿನಲ್ಲಿ ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ - ಬಿಜೆಪಿ ನಡುವೆ ತೀವ್ರ ಪೈಪೋಟಿಯ ಕಣವಾಗಿದೆ.

ಬಳ್ಳಾರಿ: ರಾಜ್ಯದ ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಗಣಿನಾಡು ಬಳ್ಳಾರಿ ಜಿಲ್ಲೆ ಆಂಧ್ರದ ರಾಯಲಸೀಮಾ ಎಂದೇ ಹೆಸರು ಪಡೆದಿತ್ತು. ಸಂಪದ್ಬರಿತ ನಾಡಲ್ಲಿ ಈಗ ಎಲೆಕ್ಷನ್​ ಕಾವು. ಯುದ್ಧ ಮುಗಿದ ಪರಿಸ್ಥಿತಿಯಿದ್ದರೂ ಗಣಿ ನಾಡ ಜನ ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

17. 51ಲಕ್ಷ ಮತದಾರರಿಂದ ನಿರ್ಧಾರವಾಗಿದೆ ಹಣೆಬರಹ:

ಸಾಮಾನ್ಯ ಕ್ಷೇತ್ರದಿಂದ ಮೀಸಲು ಕ್ಷೇತ್ರಕ್ಕೆ ಮಾರ್ಪಾಡು ಆದ ಬಳಿಕ ಗಣಿ ಜಿಲ್ಲೆ ಬಳ್ಳಾರಿ ಲೋಕಸಭಾ ಕ್ಷೇತ್ರವು ಎರಡು ಉಪ ಚುನಾವಣೆ ಸೇರಿದಂತೆ ಈವರೆಗೂ ಹದಿನೆಂಟು ಚುನಾವಣೆಗಳನ್ನ ಎದುರಿಸಿದೆ. ಆ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಹೆಚ್ಚಾಗಿ ಜಯಭೇರಿ ಬಾರಿಸಿದ್ದಾರೆ. ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಹಾಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ಪರ್ಧೆಯಿಂದಾಗಿ 1999ರಲ್ಲಿ ದೇಶ ಹಾಗೂ ವಿಶ್ವಾದ್ಯಂತ ಸದ್ದು ಮಾಡಿತ್ತು ಗಡಿನಾಡು. ಇನ್ನು ಕ್ಷೇತ್ರದಲ್ಲಿ 17,51,297 ಮತದಾರರು ಮಾತ್ರ ಇದ್ದಾರೆ. ಆ ಪೈಕಿ 8,70,900 ಪುರುಷರು, 8,80,165 ಮಹಿಳೆಯರು ಹಾಗೂ 232 ಇತರರು ಇದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಶೇ 69.5 ರಷ್ಟು ಮತದಾನ..!

ಈ ಬಾರಿ ಜಿಲ್ಲೆಯಲ್ಲಿ ಶೇ. 69.592 ರಷ್ಟು ಮತದಾನ ಆಗಿದೆ. 12,18,767 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಸರಿಸುಮಾರು 5,32,530 ಮಂದಿ ಮತದಾರರು ಮತದಾನ ಪ್ರಕ್ರಿಯೆಯಿಂದ ದೂರುಳಿದಿದ್ದು, ಮಹಿಳೆಯರಿಗಿಂತಲೂ ಪುರುಷರೇ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಭಾಗವಹಿಸಿರೋದೇ ವಿಶೇಷ ಎನಿಸಿದೆ.

ಕುತೂಹಲ ಮೂಡಿಸಿದ ಬಳ್ಳಾರಿ ಕ್ಷೇತ್ರ

ಯಾರೇ ಗೆದ್ದರೂ ಇವರೇ ನಿರ್ಣಾಯಕರು!

ಹಾಲಿ ಸಂಸದರೂ ಆಗಿರುವ ಕಾಂಗ್ರೆಸ್​ನ ವಿ.ಎಸ್. ಉಗ್ರಪ್ಪ ಹಾಗೂ ಕ್ಷೇತ್ರದ ಜನರಿಗೆ ಚಿರಪರಿಚಿತರಾದ್ರೂ ಹೊಸ ಮುಖವಾಗಿರೋ ಬಿಜೆಪಿಯ ವೈ.ದೇವೇಂದ್ರಪ್ಪ ಇಲ್ಲಿ ಪ್ರಮುಖ ಎದುರಾಳಿಗಳು. ಕ್ಷೇತ್ರದಲ್ಲಿ ಲಿಂಗಾಯತರೇ ಅಧಿಕ ಎಂದರೆ 3.10 ಲಕ್ಷ ಮತದಾರರಿದ್ದಾರೆ. ಇನ್ನು ಪರಿಶಿಷ್ಠ ಪಂಗಡದ 2.85 ಲಕ್ಷಕ್ಕೂ ಹೆಚ್ಚು ಮತದಾರರಿದ್ದರೆ, 3 ಲಕ್ಷದಷ್ಟು ಪರಿಶಿಷ್ಟ ಜಾತಿಯ ಮತದಾರರಿದ್ದಾರೆ. 1.75 ಲಕ್ಷಕ್ಕೂ ಹೆಚ್ಚು ಮುಸ್ಲಿಮರಿದ್ದು, ಇದಕ್ಕಿಂತಲೂ ಹೆಚ್ಚ ಅಂದರೆ 1.80 ಲಕ್ಷದಷ್ಟು ಕುರುಬ ಮತದಾರರಿದ್ದಾರೆ. ಹೀಗಾಗಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ. ಇಲ್ಲಿ ಮೋದಿ ಹವಾ ಕೆಲಸ ಮಾಡುತ್ತಾ, ಡಿಕೆಶಿ ತಂತ್ರ ಗೆಲ್ಲುತ್ತಾ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಹನ್ನೊಂದು ತಾಲೂಕುಗಳಿವೆ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರವು ಕೊಪ್ಪಳ ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಒಳ ಪಟ್ಟಿದೆ. ಮೊನ್ನೆತಾನೆ ಈ ಜಿಲ್ಲೆಗೆ ಸೇರ್ಪಡೆಯಾಗಿದ್ದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಒಟ್ಟಿನಲ್ಲಿ ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ - ಬಿಜೆಪಿ ನಡುವೆ ತೀವ್ರ ಪೈಪೋಟಿಯ ಕಣವಾಗಿದೆ.

Intro:Body:

Bel Election OverAll_Pkg

Web Lead:  ಗಣಿ ನಗರಿ, ಬಿಸಿಲ ನಗರಿ, ಉಕ್ಕಿನ ನಗರಿ ಎಂದೇ ಅನೇಕ ವೈಶಿಷ್ಠ್ಯತೆಗೆ ಹೆಸರುವಾಸಿಯಾಗಿರುವ ಬಳ್ಳಾರಿಯಲ್ಲಿ ಎಲೆಕ್ಷನ್​ ಕಾವು ಜೋರಾಗೇ ಇತ್ತು.. ಎಲೆಕ್ಷನ್​ ಮುಗಿದ ಬಳಿಕ ತುಸು ಕಮ್ಮಿಯಾಗಿದ್ದು, ಫಲಿತಾಂಶಕ್ಕಾಗಿ ಗಣಿ ನಾಡ ಜನ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಅವರ ಕಾಯುವಿಕೆ ಕೊನೆಗೊಳ್ಳುತ್ತ ಬಂದಿದ್ದು, ಕೆಲವೇ ಹೊತ್ತಲ್ಲಿ ಅವರ ಕುತೂಹಲಕ್ಕೂ ತೆರ ಬೀಳಲಿದೆ.

Look..........

Gfx: ಹೈ ವೋಲ್ಟೇಜ್​ ಕ್ಷೇತ್ರದಲ್ಲಿ ಯಾರ ಪಾಲಿಗೆ ಜಯದ ನಗೆ

v/o-1:  ರಾಜ್ಯದ ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಗಣಿನಾಡು ಬಳ್ಳಾರಿ ಜಿಲ್ಲೆ ಆಂಧ್ರದ ರಾಯಲಸೀಮಾ ಎಂದೇ ಹೆಸರು ಪಡೆದಿತ್ತು.  ಆದರೆ, ಈಗ ಆ ಛಾಯ ಮಾಯವಾಗಿದೆ.  ಸಂಪದ್ಬರಿತ ನಾಡಲ್ಲಿ ಈಗ ಎಲೆಕ್ಷನ್​ ಕಾವು. ಯುದ್ಧ ಮುಗಿದ ಪರಿಸ್ಥಿತಿಯಿದ್ದರೂ ಗಣಿ ನಾಡ ಜನ ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.    

Gfx…. 17. 51ಲಕ್ಷ ಮತದಾರರಿಂದ ನಿರ್ಧಾರವಾಗಿದೆ ಹಣೆಬರಹ

v/o-2:   ಸಾಮಾನ್ಯ ಕ್ಷೇತ್ರದಿಂದ ಮೀಸಲು ಕ್ಷೇತ್ರಕ್ಕೆ ಮಾರ್ಪಾಡು ಆದ ಬಳಿಕ ಗಣಿ ಜಿಲ್ಲೆ ಬಳ್ಳಾರಿ ಲೋಕಸಭಾ ಕ್ಷೇತ್ರವು ಎರಡು ಉಪ ಚುನಾವಣೆ ಸೇರಿದಂತೆ ಈವರೆಗೂ ಹದಿನೆಂಟು ಚುನಾವಣೆಗಳನ್ನ ಎದುರಿಸಿದೆ. ಆ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಹೆಚ್ಚಾಗಿ ಜಯಭೇರಿ ಬಾರಿಸಿದ್ದಾರೆ.  ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಹಾಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ಪರ್ಧೆಯಿಂದಾಗಿ 1999ರಲ್ಲಿ ದೇಶ ಹಾಗೂ ವಿಶ್ವಾದ್ಯಂತ ಸದ್ದು ಮಾಡಿತ್ತು ಗಡಿನಾಡು.   ಇನ್ನು ಕ್ಷೇತ್ರದಲ್ಲಿ 17,51,297 ಮತದಾರರು ಮಾತ್ರ ಇದ್ದಾರೆ. ಆ ಪೈಕಿ 8,70,900 ಪುರುಷರು, 8,80,165 ಮಹಿಳೆಯರು ಹಾಗೂ 232 ಇತರರು ಇದ್ದಾರೆ.



Gfx:  ಜಿಲ್ಲೆಯಲ್ಲಿ ಈ ಬಾರಿ ಶೇ 69.5 ರಷ್ಟು ಮತದಾನ!

 v/o-3: ಈ ಬಾರಿ ಜಿಲ್ಲೆಯಲ್ಲಿ ಶೇ. 69.592 ರಷ್ಟು ಮತದಾನ ಆಗಿದೆ. 12,18,767 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಸರಿಸುಮಾರು 5,32,530 ಮಂದಿ ಮತದಾರರು ಮತದಾನ ಪ್ರಕ್ರಿಯೆಯಿಂದ ದೂರುಳಿದಿದ್ದು, ಮಹಿಳೆಯರಿಗಿಂತಲೂ ಪುರುಷರೇ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಭಾಗವಹಿಸಿ ರೋದೇ ವಿಶೇಷ ಎನಿಸಿದೆ.

Gfx:  ಯಾರೇ ಗೆದ್ದರೂ ಇವರೇ  ನಿರ್ಣಾಯಕರು!

‌v/o-4: ಹಾಲಿ ಸಂಸದರೂ ಆಗಿರುವ ಕಾಂಗ್ರೆಸ್​ನ ವಿ.ಎಸ್. ಉಗ್ರಪ್ಪ ಹಾಗೂ ಕ್ಷೇತ್ರದ ಜನರಿಗೆ ಚಿರಪರಿಚಿತರಾದ್ರೂ ಹೊಸ ಮುಖವಾಗಿರೋ ಬಿಜೆಪಿಯ ವೈ.ದೇವೇಂದ್ರಪ್ಪ  ಇಲ್ಲಿ ಪ್ರಮುಖ ಎದುರಾಳಿಗಳು.  ಕ್ಷೇತ್ರದಲ್ಲಿ  ಲಿಂಗಾಯತರೇ ಅಧಿಕ ಎಂದರೆ 3.10 ಲಕ್ಷ ಮತದಾರರಿದ್ದಾರೆ.  ಇನ್ನು  ಪರಿಶಿಷ್ಠ ಪಂಗಡದ 2.85 ಲಕ್ಷಕ್ಕೂ ಹೆಚ್ಚು ಮತದಾರರಿದ್ದರೆ,  3 ಲಕ್ಷದಷ್ಟು ಪರಿಶಿಷ್ಟ ಜಾತಿಯ ಮತದಾರರಿದ್ದಾರೆ.   1.75 ಲಕ್ಷಕ್ಕೂ ಹೆಚ್ಚು ಮುಸ್ಲಿಮರಿದ್ದು,  ಇದಕ್ಕಿಂತಲೂ ಹೆಚ್ಚ ಅಂದರೆ 1.80 ಲಕ್ಷದಷ್ಟು ಕುರುಬ ಮತದಾರರಿದ್ದಾರೆ.  ಹೀಗಾಗಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ. ಇಲ್ಲಿ ಮೋದಿ ಹವಾ ಕೆಲಸ ಮಾಡುತ್ತಾ, ಡಿಕೆಶಿ ತಂತ್ರ ಗೆಲ್ಲುತ್ತಾ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

Flow...

v/o-5:  ಜಿಲ್ಲೆಯಲ್ಲಿ  ಹನ್ನೊಂದು ತಾಲೂಕುಗಳಿವೆ.   ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರವು ಕೊಪ್ಪಳ ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಒಳ ಪಟ್ಟಿದೆ. ಮೊನ್ನೆತಾನೆ ಈ ಜಿಲ್ಲೆಗೆ ಸೇರ್ಪಡೆಯಾಗಿದ್ದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ.   ಒಟ್ಟಿನಲ್ಲಿ ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ - ಬಿಜೆಪಿ ನಡುವೆ ತೀವ್ರ ಪೈಪೋಟಿಯ ಕಣವಾಗಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.