ETV Bharat / bharat

ಬೆನ್ನುಮೂಳೆ ರೋಗ.. ಮಗುವಿನ ಚಿಕಿತ್ಸೆಗೆ ಬೇಕಿದೆ 16 ಕೋಟಿ ರೂ..

author img

By

Published : May 29, 2021, 6:47 PM IST

ಇದೊಂದು ಅಪರೂಪದ ಕಾಯಿಲೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದಿದ್ದರೆ, ಮಕ್ಕಳ ಪ್ರಾಣ ಹೋಗಬಹುದು. ಈ ರೋಗದಿಂದ ಮಕ್ಕಳು ಮೇಲೇಳಲು, ಕುಳಿತುಕೊಳ್ಳಲು, ನಡೆಯಲು, ಉಸಿರಾಡಲು ಸಾಧ್ಯವಾಗುವುದಿಲ್ಲ..

spinal muscular atrophy
spinal muscular atrophy

ಮುಂಬೈ : 19 ತಿಂಗಳ ಮಗುವಿಗೆ ಬೆನ್ನುಮೂಳೆ ಸ್ನಾಯು ಕ್ಷೀಣತೆ (spinal muscular atrophy ) ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ 16 ಕೋಟಿ ರೂ.ಅವಶ್ಯಕತೆಯಿದೆ.

ಮಗುವಿನ ಚಿಕಿತ್ಸೆಗೆ ಬೇಕಿದೆ 16 ಕೋಟಿ ರೂ..

ನಗರದ ಅಶ್ಫಾಕ್​ ಚೌಧರಿ, ಅಮ್ರಿನ್ ಚೌಧರಿ ಎಂಬುವರ ಪುತ್ರಿ ಜೈನಾಬ್​. ಈ ಮಗುವಿಗೆ 19 ತಿಂಗಳಾದರೂ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.

ತಪಾಸಣೆಗೆಂದು ಆಸ್ಪತ್ರೆಗೆ ಹೋದ ಬಳಿಕ ಮಗುವಿಗೆ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆಯಿದ್ದು, ಚಿಕಿತ್ಸೆಗೆ 16 ಕೋಟಿ ರೂ.ಅವಶ್ಯಕತೆಯಿದೆ ಎಂದು ವೈದ್ಯರು ಹೇಳಿದ್ದಾರೆ.

ಸ್ವಿಸ್​ ಫಾರ್ಮಾ ಕಂಪನಿಯಲ್ಲಿ ಲಭ್ಯವಿರುವ ಈ ಇಂಜೆಕ್ಷನ್​ ಖರೀದಿಸಲು ಕ್ರೌಡ್‌ ಫಂಡಿಂಗ್ ನೆರವಿನೊಂದಿಗೆ ಸಾರ್ವಜನಿಕರಿಂದ ಪೋಷಕರು ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ.

ನನ್ನ ಮಗಳ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ. ದಯವಿಟ್ಟು ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕಾಯಿಲೆಯಿಂದ ಬಳಲುತ್ತಿರುವ ಮಗುವಿಗಾಗಿ ಮಿಡಿದ ಶಿಲ್ಪಾ ಶೆಟ್ಟಿ: ಔಷಧಿಗೆ ಧನ ಸಹಾಯ ಮಾಡುವಂತೆ ಕೈಮುಗಿದು ಮನವಿ

ಇದೊಂದು ಅಪರೂಪದ ಕಾಯಿಲೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದಿದ್ದರೆ, ಮಕ್ಕಳ ಪ್ರಾಣ ಹೋಗಬಹುದು. ಈ ರೋಗದಿಂದ ಮಕ್ಕಳು ಮೇಲೇಳಲು, ಕುಳಿತುಕೊಳ್ಳಲು, ನಡೆಯಲು, ಉಸಿರಾಡಲು ಸಾಧ್ಯವಾಗುವುದಿಲ್ಲ ಎಂದು ವೈದ್ಯೆ ನೆಲು ದೇಸಾಯಿ ಹೇಳಿದ್ದಾರೆ.

ಮುಂಬೈ : 19 ತಿಂಗಳ ಮಗುವಿಗೆ ಬೆನ್ನುಮೂಳೆ ಸ್ನಾಯು ಕ್ಷೀಣತೆ (spinal muscular atrophy ) ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ 16 ಕೋಟಿ ರೂ.ಅವಶ್ಯಕತೆಯಿದೆ.

ಮಗುವಿನ ಚಿಕಿತ್ಸೆಗೆ ಬೇಕಿದೆ 16 ಕೋಟಿ ರೂ..

ನಗರದ ಅಶ್ಫಾಕ್​ ಚೌಧರಿ, ಅಮ್ರಿನ್ ಚೌಧರಿ ಎಂಬುವರ ಪುತ್ರಿ ಜೈನಾಬ್​. ಈ ಮಗುವಿಗೆ 19 ತಿಂಗಳಾದರೂ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.

ತಪಾಸಣೆಗೆಂದು ಆಸ್ಪತ್ರೆಗೆ ಹೋದ ಬಳಿಕ ಮಗುವಿಗೆ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆಯಿದ್ದು, ಚಿಕಿತ್ಸೆಗೆ 16 ಕೋಟಿ ರೂ.ಅವಶ್ಯಕತೆಯಿದೆ ಎಂದು ವೈದ್ಯರು ಹೇಳಿದ್ದಾರೆ.

ಸ್ವಿಸ್​ ಫಾರ್ಮಾ ಕಂಪನಿಯಲ್ಲಿ ಲಭ್ಯವಿರುವ ಈ ಇಂಜೆಕ್ಷನ್​ ಖರೀದಿಸಲು ಕ್ರೌಡ್‌ ಫಂಡಿಂಗ್ ನೆರವಿನೊಂದಿಗೆ ಸಾರ್ವಜನಿಕರಿಂದ ಪೋಷಕರು ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ.

ನನ್ನ ಮಗಳ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ. ದಯವಿಟ್ಟು ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕಾಯಿಲೆಯಿಂದ ಬಳಲುತ್ತಿರುವ ಮಗುವಿಗಾಗಿ ಮಿಡಿದ ಶಿಲ್ಪಾ ಶೆಟ್ಟಿ: ಔಷಧಿಗೆ ಧನ ಸಹಾಯ ಮಾಡುವಂತೆ ಕೈಮುಗಿದು ಮನವಿ

ಇದೊಂದು ಅಪರೂಪದ ಕಾಯಿಲೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದಿದ್ದರೆ, ಮಕ್ಕಳ ಪ್ರಾಣ ಹೋಗಬಹುದು. ಈ ರೋಗದಿಂದ ಮಕ್ಕಳು ಮೇಲೇಳಲು, ಕುಳಿತುಕೊಳ್ಳಲು, ನಡೆಯಲು, ಉಸಿರಾಡಲು ಸಾಧ್ಯವಾಗುವುದಿಲ್ಲ ಎಂದು ವೈದ್ಯೆ ನೆಲು ದೇಸಾಯಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.