ಛಪ್ರಾ (ಸಾರಣ ಜಿಲ್ಲೆ, ಬಿಹಾರ): ಬಿಹಾರದ ಛಪ್ರಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲೊಬ್ಬ ಯುವಕ ತನ್ನ ಹೆಬ್ಬೆರಳು ಕತ್ತರಿಸಿ ಭಗವಾನ್ ಶಿವನ ಮೂರ್ತಿಗೆ ಅರ್ಪಿಸಿದ್ದು, ಈಗ ಚರ್ಚೆಯ ವಿಷಯವಾಗುತ್ತಿದೆ. ಯುವಕ ತನ್ನ ಬೆರಳನ್ನು ಕತ್ತರಿಸುವ ವಿಲಕ್ಷಣ ವರ್ತನೆಯ ವಿಡಿಯೋ ಕ್ಲಿಪ್ಪಿಂಗ್ ಕೂಡ ಮಾಡಿದ್ದಾನೆ. ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ್ರೆ ನೀವೂ ಕೂಡ ಶಾಕ್ ಆಗ್ತೀರಾ.
ಸ್ಥಳೀಯರ ಪ್ರಕಾರ ಯುವಕನ ಹೆಸರು ರಜತ್ ಎನ್ನಲಾಗಿದೆ. ತನ್ನನ್ನು ತಾನು ಶಿವಭಕ್ತನೆಂದು ಹೇಳಿಕೊಳ್ಳುವ ಈತ, ದೇವರನ್ನು ಸಂತುಷ್ಟಪಡಿಸಲು ಬೆರಳು ಕತ್ತರಿಸಿಕೊಂಡಿದ್ದಾನಂತೆ. ನಂಬಿಕೆ ಮತ್ತು ಧಾರ್ಮಿಕ ಉನ್ಮಾದದ ಅಲೆಯಲ್ಲಿ ತಮ್ಮ ಅಂಗಗಳನ್ನು ಕತ್ತರಿಸಿ ದೇವರಿಗೆ ಅರ್ಪಿಸುವವರಿಗೆ ಈಗಲೂ ಕೊರತೆಯಿಲ್ಲ ಎಂಬ ವಿಷಯ ಈ ವಿಡಿಯೋ ನೋಡಿದ ನಂತರ ಅರ್ಥವಾಗುತ್ತದೆ. ಸಾಮಾನ್ಯರ ಭಾಷೆಯಲ್ಲಿ ಇದನ್ನು ಹುಚ್ಚುತನ ಎನ್ನಬಹುದು.
ಇಂಥ ಕೃತ್ಯವೆಸಗಿ ಅದನ್ನು ವಿಡಿಯೋ ಮಾಡಿ ರಾತೋರಾತ್ರಿ ಫೇಮಸ್ ಆಗುವುದಕ್ಕಾಗಿಯೂ ಇದನ್ನು ಮಾಡಿರಬಹುದು. ಹೀಗೆ ಮಾಡಿದ್ದರೆ ಅದು ಎಷ್ಟು ಸರಿ ಅಥವಾ ಎಷ್ಟು ತಪ್ಪು ಎನ್ನುವುದು ಪ್ರಶ್ನಾರ್ಹವಾದರೂ ಸದ್ಯ ವಿಡಿಯೋ ಮಾತ್ರ ಸಖತ್ ವೈರಲ್ ಆಗುತ್ತಿದೆ.
ಸೂಚನೆ: ಈ ಸುದ್ದಿಯಲ್ಲಿ ತೋರಿಸಲಾದ ವಿಡಿಯೋ ಸತ್ಯಾಸತ್ಯತೆಯ ಬಗ್ಗೆ ಈಟಿವಿ ಭಾರತ್ ಪ್ರಮಾಣೀಕರಿಸುವುದಿಲ್ಲ. ಯಾವುದೇ ಮೂಢನಂಬಿಕೆಗಳಿಗೆ ಈಟಿವಿ ಭಾರತ್ ಉತ್ತೇಜನ ನೀಡುವುದಿಲ್ಲ.
ಇದನ್ನೂ ಓದಿ: ಹಳೇ ವೈಷಮ್ಯ: ವ್ಯಕ್ತಿಯ ಕೈ - ಬೆರಳು ಕತ್ತರಿಸಿ ಆ್ಯಸಿಡ್ ಸುರಿದು ವಿಕೃತಿ ಮೆರೆದ ಕಿರಾತಕರು