ETV Bharat / bharat

ದೇಶದ ಅತಿ ಕಿರಿಯ ಅಂಗಾಂಗ ದಾನಿ ಈಕೆ; ತಂದೆ ಪ್ರಾಣ ಉಳಿಸಲು ಕಾನೂನು ಸಮರದಲ್ಲಿ ಗೆದ್ದ ಬಾಲಕಿ

author img

By

Published : Feb 20, 2023, 11:46 AM IST

ಅಪ್ಪನ ಜೀವ ಉಳಿಸಲು ಅಂಗಾಂಗ ದಾನ- ತೊಡಕಾಗಿದ್ದ ಕಾನೂನು - ಹೋರಾಟದಲ್ಲಿ ಗೆದ್ದೆ ಕೇರಳದ ಬಾಲಕಿ

youngest organ donor in the country
ತಂದೆ ಪ್ರಾಣ ಉಳಿಸಲು ಕಾನೂನು ಸಮರದಲ್ಲಿ ಗೆದ್ದ ಬಾಲಕಿ

ಎರ್ನಾಕುಲಂ(ಕೇರಳ): ತಂದೆಯ ಜೀವ ಉಳಿಸುವ ಸಲುವಾಗಿ ಕಾನೂನು ಹೋರಾಟ ಮಾಡಿ ವಿಜಯ ಸಾಧಿಸಿದ ಅಪ್ರಾಪ್ತ ವಯಸ್ಸಿನ ಮಗಳು ತನ್ನ ಯಕೃತ್​ನ ಭಾಗವನ್ನು ದಾನವಾಗಿ ನೀಡಿ ಮಾದರಿಯಾಗಿರುವ ಘಟನೆ ನೆರೆಯ ಕೇರಳದಲ್ಲಿ ನಡೆದಿದೆ. ತ್ರಿಶೂರ್​ನ 17 ವರ್ಷದ ಬಾಲಕಿ ದೇವಾನಂದ ಇದೀಗ ಅನೇಕರಿಗೆ ಮಾದರಿ ಮತ್ತು ಸ್ಫೂರ್ತಿಯಾಗಿದ್ದಾಳೆ.

ಹೌದು, ದೇವಾನಂದಾ ತಂದೆ ಪಿಜಿ ಪ್ರತೀಶ್​​ ಯಕೃತ್​ ಸಮಸ್ಯೆಯಿಂದ ಬಳಲುತ್ತಿದ್ದರು. ತಂದೆಯ ಯಕೃತ್​ ಹಾನಿಯಾದ ಹಿನ್ನೆಲೆ ಅವರಿಗೆ ತನ್ನ ಯಕೃತ್​ನ ಒಂದು ಭಾಗ ನೀಡಲು ದೇವಾನಂದ ಮುಂದಾಗಿದ್ದಾಳೆ. ಆಕೆಯ ವೈದ್ಯಕೀಯ ವರದಿಗಳು ತಂದೆಯ ಈ ಯಕೃತ್​ ಚಿಕಿತ್ಸೆಗೆ ಹೊಂದಿಕೆ ಆಗಿತ್ತು. ಆದರೆ, ಆಕೆ ಅಪ್ರಾಪ್ತ ವಯಸ್ಕಳು ಎಂಬ ಕಾರಣಕ್ಕೆ ಕಾನೂನು ತೊಡಕು ಉಂಟಾಗಿತ್ತು. ಅಪ್ರಾಪ್ತರು ಅಂಗಾಂಗ ದಾನಕ್ಕೆ ಕಾನೂನು ಸಮ್ಮತಿ ನೀಡದ ಕಾರಣ ಈ ಸಂಬಂಧ ದೀರ್ಘ ಕಾನೂನು ಹೋರಾಟ ನಡೆಸಿದ್ದಳು. ಈಕೆಯ ಮನವಿ ಆಲಿಸಿದ ನ್ಯಾಯಾಲಯ ಕೂಡ ಒಪ್ಪಿಗೆ ಸೂಚಿಸಿದ್ದು, ಇದೀಗ ಇಲ್ಲಿನ ಅಲುವ ರಾಜಗಿರಿ ಆಸ್ಪತ್ರೆಯಲ್ಲಿ ತಂದೆ ಮತ್ತು ಮಗಳ ಯಶಸ್ವಿ ಯಕೃತ್​ ಕಸಿ ಚಿಕಿತ್ಸೆ ನಡೆಸಲಾಗಿದೆ. ಇದೀಗ ದೇಶದಲ್ಲಿಯೇ ಕಿರಿಯ ವಯಸ್ಸಿನಲ್ಲಿ ಅಂಗಾಂಗ ದಾನ ಮಾಡಿದ ದಾಖಲೆಯನ್ನು ಆಕೆ ಮಾಡಿದ್ದಾಳೆ.

ಶಸ್ತ್ರ ಚಿಕಿತ್ಸೆಗಾಗಿ 9 ದಿನಗಳ ಕಾಲ ಆಸ್ಪತ್ರೆಗೆ ದಾಖಲಾದ ದೇವಾನಂದ ಇದೀಗ ಗುಣಮುಖಳಾಗಿದ್ದಾಳೆ. ಇಲ್ಲಿನ ತಜ್ಞ ವೈದ್ಯರ ತಂಡವಾದ ಡಾ ರಾಮಚಂದ್ರ ನಾರಾಯಣ ಮೆನನ್​, ಡಾ. ಜಾನ್​ ಶಾಜಿ ಮ್ಯಾಥ್ಯು, ಜೋಸೆಫ್​ ಜಾರ್ಗ್​​, ಸಿರಿಕ್​ ಅಬೆ ಪಿಲಿಪ್​, ಜಾರ್ಜ್​ ಜಾಕೋಬ್​, ಶಾಲಿನಿ ರಾಮಕೃಷ್ಣನ್​ ಮತ್ತು ಜಯಶಂಕರ್​ ಯಶಸ್ವಿಯಾಗಿ ಈ ಯಕೃತ್​ ಕಸಿ ಚಿಕಿತ್ಸೆ ನಡೆಸಿದ್ದಾರೆ.

ಚಿಕಿತ್ಸೆ ವೆಚ್ಚ ಭರಿಸಿದ ಆಸ್ಪತ್ರೆ: ಇನ್ನು, ಸಣ್ಣ ವಯಸ್ಸಿನಲ್ಲೇ ತಂದೆ ಜೀವ ಉಳಿಸಿಕೊಳ್ಳಲು ಮುಂದಾಗಿರುವ ದೇವಾನಂದಾ ಅವರ ದಿಟ್ಟತನಕ್ಕೆ ಮೆಚ್ಚಿದ ರಾಜಗಿರಿ ಆಸ್ಪತ್ರೆಯ ಆಡಳಿತ ಮಂಡಳಿ ಶಸ್ತ್ರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರೋಗಿಗಳ ಬದಲಾಗಿ ತಾವೇ ಭರಿಸಲು ಮುಂದಾಗಿದೆ. ಆಸ್ಪತ್ರೆಯ ಈ ನಿರ್ಧಾರದಿಂದ ಮಧ್ಯಮ ವರ್ಗ ದೇವಾನಂದ ಕುಟುಂಬಕ್ಕೆ ಕೂಡ ದೊಡ್ಡ ಸಹಾಯವಾಗಿದೆ. ದೇವಾನಂದ ತ್ರಿಸ್ಸೂರ್​ನ ಸೆಕ್ರೇಡ್​​ ಹಾರ್ಟ್​​ ಕಾನ್ವೆಂಟ್​ನಲ್ಲಿ ಪ್ಲಸ್​ 2 ಓದುತ್ತಿದ್ದು, ಇದೀಗ ಮಾರ್ಚ್​ನಲ್ಲಿ ಪರೀಕ್ಷೆ ಬರೆಯಲು ಸಿದ್ಧಳಾಗಿದ್ದಾಳೆ. ಈಕೆಯ ತಂದೆ 48 ವರ್ಷದ ಪ್ರತೀಶ್​​, ತ್ರಿಶೂರ್​ನಲ್ಲಿ ಕಾಫಿ ಅಂಗಡಿ ನಡೆಸುತ್ತಾರೆ. ಯಕೃತ್​ ಸಮಸ್ಯೆ ಜೊತೆಗೆ ಕ್ಯಾನ್ಸರ್​ ಲೆಸಿಯಾನ್​ ಸಮಸ್ಯೆಗೆ ಒಳಗಾಗಿದ್ದ ಅವರ ಪ್ರಾಣ ಉಳಿಸಲು ಯಕೃತ್​ ಕಸಿ ಒಂದೇ ಮಾರ್ಗವಾಗಿದೆ ಎಂದು ವೈದ್ಯರು ತಿಳಿಸಿದ್ದರು.

ತಂದೆಗಾಗಿ ಹೋರಾಟ: ಇಂಡಿಯನ್​ ಟ್ರಾನ್ಸ್​ಪ್ಲಾನೆಂಟೇಷನ್​ ಆಫ್​ ಹ್ಯೂಮನ್​ ಅರ್ಗ್​ ಆ್ಯಕ್ಟ್​ 1994ರ ಪ್ರಕಾರ ಅಪ್ರಾಪ್ತರು ಅಂಗಾಂಗ ದಾನ ಮಾಡುವಂತಿಲ್ಲ. ಈ ಹಿನ್ನೆಲೆ ಪ್ರತೀಶ್​ ಅವರಿಗೆ ಹೊಂದಿಕೆಯಾಗುವಂತಹ ಯಕೃತ್​ಗಾಗಿ ಕುಟುಂಬ ಹುಡುಕಾಟ ನಡೆಸಿದರೂ ಅವರಿಗೆ ಎಲ್ಲೂ ಸಿಕ್ಕಿರಲಿಲ್ಲ. ಕೊನೆಗೆ ದೇವಾನಂದ ತಂದೆಗೆ ಯಕೃತ್​ ದಾನ ಮಾಡಲು ಮುಂದಾದಳು. 17ವರ್ಷ ಬಾಲಕಿ ತಂದೆ ಜೀವ ಉಳಿಸಲು ಅನೇಕ ಕಷ್ಟ ಎದುರಿಸಿದಳು. ಇದಕ್ಕಾಗಿ ಕಾನೂನು ಹೋರಾಟ ನಡೆಸಿದಳು. ಜೊತೆಗೆ ಆರೋಗ್ಯಯುತ ಜೀವನ ಶೈಲಿ ಕಾಪಾಡಿಕೊಳ್ಳಲು ಜಿಮ್​ಗೆ ಸೇರಿದಳು. ದೇವಾನಂದಾ ಅರ್ಜಿ ಆಲಿಸಲು ಮುಂದಾದ ಹೈಕೋರ್ಟ್​​, ಆಕೆಯ ವೈದ್ಯಕೀಯ ವರದಿ ಮತ್ತು ದಾಖಲೆಗಳ ವೀಕ್ಷಣೆಗೆ ವೈದ್ಯಕೀಯ ಮಂಡಳಿ ನೇಮಿಸಿತು. ವಯೋಮಿತಿ ಪರಿಗಣನೆ ನಡೆಸದೇ ತಂದೆ ಜೀವ ಉಳಿಸಲು ಅಂಗಾಂಗ ದಾನ ಮಾಡುವ ದೇವಾನಂದ ನಿರ್ಧಾರಕ್ಕೆ ಕೋರ್ಟ್​ ಸಮ್ಮತಿ ನೀಡಿತು.

ಇದನ್ನೂ ಓದಿ: ಇಂದು ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನೆರವೇರಲಿದೆ ನಂದಮೂರಿ ತಾರಕ ರತ್ನ ಅಂತ್ಯಕ್ರಿಯೆ

ಎರ್ನಾಕುಲಂ(ಕೇರಳ): ತಂದೆಯ ಜೀವ ಉಳಿಸುವ ಸಲುವಾಗಿ ಕಾನೂನು ಹೋರಾಟ ಮಾಡಿ ವಿಜಯ ಸಾಧಿಸಿದ ಅಪ್ರಾಪ್ತ ವಯಸ್ಸಿನ ಮಗಳು ತನ್ನ ಯಕೃತ್​ನ ಭಾಗವನ್ನು ದಾನವಾಗಿ ನೀಡಿ ಮಾದರಿಯಾಗಿರುವ ಘಟನೆ ನೆರೆಯ ಕೇರಳದಲ್ಲಿ ನಡೆದಿದೆ. ತ್ರಿಶೂರ್​ನ 17 ವರ್ಷದ ಬಾಲಕಿ ದೇವಾನಂದ ಇದೀಗ ಅನೇಕರಿಗೆ ಮಾದರಿ ಮತ್ತು ಸ್ಫೂರ್ತಿಯಾಗಿದ್ದಾಳೆ.

ಹೌದು, ದೇವಾನಂದಾ ತಂದೆ ಪಿಜಿ ಪ್ರತೀಶ್​​ ಯಕೃತ್​ ಸಮಸ್ಯೆಯಿಂದ ಬಳಲುತ್ತಿದ್ದರು. ತಂದೆಯ ಯಕೃತ್​ ಹಾನಿಯಾದ ಹಿನ್ನೆಲೆ ಅವರಿಗೆ ತನ್ನ ಯಕೃತ್​ನ ಒಂದು ಭಾಗ ನೀಡಲು ದೇವಾನಂದ ಮುಂದಾಗಿದ್ದಾಳೆ. ಆಕೆಯ ವೈದ್ಯಕೀಯ ವರದಿಗಳು ತಂದೆಯ ಈ ಯಕೃತ್​ ಚಿಕಿತ್ಸೆಗೆ ಹೊಂದಿಕೆ ಆಗಿತ್ತು. ಆದರೆ, ಆಕೆ ಅಪ್ರಾಪ್ತ ವಯಸ್ಕಳು ಎಂಬ ಕಾರಣಕ್ಕೆ ಕಾನೂನು ತೊಡಕು ಉಂಟಾಗಿತ್ತು. ಅಪ್ರಾಪ್ತರು ಅಂಗಾಂಗ ದಾನಕ್ಕೆ ಕಾನೂನು ಸಮ್ಮತಿ ನೀಡದ ಕಾರಣ ಈ ಸಂಬಂಧ ದೀರ್ಘ ಕಾನೂನು ಹೋರಾಟ ನಡೆಸಿದ್ದಳು. ಈಕೆಯ ಮನವಿ ಆಲಿಸಿದ ನ್ಯಾಯಾಲಯ ಕೂಡ ಒಪ್ಪಿಗೆ ಸೂಚಿಸಿದ್ದು, ಇದೀಗ ಇಲ್ಲಿನ ಅಲುವ ರಾಜಗಿರಿ ಆಸ್ಪತ್ರೆಯಲ್ಲಿ ತಂದೆ ಮತ್ತು ಮಗಳ ಯಶಸ್ವಿ ಯಕೃತ್​ ಕಸಿ ಚಿಕಿತ್ಸೆ ನಡೆಸಲಾಗಿದೆ. ಇದೀಗ ದೇಶದಲ್ಲಿಯೇ ಕಿರಿಯ ವಯಸ್ಸಿನಲ್ಲಿ ಅಂಗಾಂಗ ದಾನ ಮಾಡಿದ ದಾಖಲೆಯನ್ನು ಆಕೆ ಮಾಡಿದ್ದಾಳೆ.

ಶಸ್ತ್ರ ಚಿಕಿತ್ಸೆಗಾಗಿ 9 ದಿನಗಳ ಕಾಲ ಆಸ್ಪತ್ರೆಗೆ ದಾಖಲಾದ ದೇವಾನಂದ ಇದೀಗ ಗುಣಮುಖಳಾಗಿದ್ದಾಳೆ. ಇಲ್ಲಿನ ತಜ್ಞ ವೈದ್ಯರ ತಂಡವಾದ ಡಾ ರಾಮಚಂದ್ರ ನಾರಾಯಣ ಮೆನನ್​, ಡಾ. ಜಾನ್​ ಶಾಜಿ ಮ್ಯಾಥ್ಯು, ಜೋಸೆಫ್​ ಜಾರ್ಗ್​​, ಸಿರಿಕ್​ ಅಬೆ ಪಿಲಿಪ್​, ಜಾರ್ಜ್​ ಜಾಕೋಬ್​, ಶಾಲಿನಿ ರಾಮಕೃಷ್ಣನ್​ ಮತ್ತು ಜಯಶಂಕರ್​ ಯಶಸ್ವಿಯಾಗಿ ಈ ಯಕೃತ್​ ಕಸಿ ಚಿಕಿತ್ಸೆ ನಡೆಸಿದ್ದಾರೆ.

ಚಿಕಿತ್ಸೆ ವೆಚ್ಚ ಭರಿಸಿದ ಆಸ್ಪತ್ರೆ: ಇನ್ನು, ಸಣ್ಣ ವಯಸ್ಸಿನಲ್ಲೇ ತಂದೆ ಜೀವ ಉಳಿಸಿಕೊಳ್ಳಲು ಮುಂದಾಗಿರುವ ದೇವಾನಂದಾ ಅವರ ದಿಟ್ಟತನಕ್ಕೆ ಮೆಚ್ಚಿದ ರಾಜಗಿರಿ ಆಸ್ಪತ್ರೆಯ ಆಡಳಿತ ಮಂಡಳಿ ಶಸ್ತ್ರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರೋಗಿಗಳ ಬದಲಾಗಿ ತಾವೇ ಭರಿಸಲು ಮುಂದಾಗಿದೆ. ಆಸ್ಪತ್ರೆಯ ಈ ನಿರ್ಧಾರದಿಂದ ಮಧ್ಯಮ ವರ್ಗ ದೇವಾನಂದ ಕುಟುಂಬಕ್ಕೆ ಕೂಡ ದೊಡ್ಡ ಸಹಾಯವಾಗಿದೆ. ದೇವಾನಂದ ತ್ರಿಸ್ಸೂರ್​ನ ಸೆಕ್ರೇಡ್​​ ಹಾರ್ಟ್​​ ಕಾನ್ವೆಂಟ್​ನಲ್ಲಿ ಪ್ಲಸ್​ 2 ಓದುತ್ತಿದ್ದು, ಇದೀಗ ಮಾರ್ಚ್​ನಲ್ಲಿ ಪರೀಕ್ಷೆ ಬರೆಯಲು ಸಿದ್ಧಳಾಗಿದ್ದಾಳೆ. ಈಕೆಯ ತಂದೆ 48 ವರ್ಷದ ಪ್ರತೀಶ್​​, ತ್ರಿಶೂರ್​ನಲ್ಲಿ ಕಾಫಿ ಅಂಗಡಿ ನಡೆಸುತ್ತಾರೆ. ಯಕೃತ್​ ಸಮಸ್ಯೆ ಜೊತೆಗೆ ಕ್ಯಾನ್ಸರ್​ ಲೆಸಿಯಾನ್​ ಸಮಸ್ಯೆಗೆ ಒಳಗಾಗಿದ್ದ ಅವರ ಪ್ರಾಣ ಉಳಿಸಲು ಯಕೃತ್​ ಕಸಿ ಒಂದೇ ಮಾರ್ಗವಾಗಿದೆ ಎಂದು ವೈದ್ಯರು ತಿಳಿಸಿದ್ದರು.

ತಂದೆಗಾಗಿ ಹೋರಾಟ: ಇಂಡಿಯನ್​ ಟ್ರಾನ್ಸ್​ಪ್ಲಾನೆಂಟೇಷನ್​ ಆಫ್​ ಹ್ಯೂಮನ್​ ಅರ್ಗ್​ ಆ್ಯಕ್ಟ್​ 1994ರ ಪ್ರಕಾರ ಅಪ್ರಾಪ್ತರು ಅಂಗಾಂಗ ದಾನ ಮಾಡುವಂತಿಲ್ಲ. ಈ ಹಿನ್ನೆಲೆ ಪ್ರತೀಶ್​ ಅವರಿಗೆ ಹೊಂದಿಕೆಯಾಗುವಂತಹ ಯಕೃತ್​ಗಾಗಿ ಕುಟುಂಬ ಹುಡುಕಾಟ ನಡೆಸಿದರೂ ಅವರಿಗೆ ಎಲ್ಲೂ ಸಿಕ್ಕಿರಲಿಲ್ಲ. ಕೊನೆಗೆ ದೇವಾನಂದ ತಂದೆಗೆ ಯಕೃತ್​ ದಾನ ಮಾಡಲು ಮುಂದಾದಳು. 17ವರ್ಷ ಬಾಲಕಿ ತಂದೆ ಜೀವ ಉಳಿಸಲು ಅನೇಕ ಕಷ್ಟ ಎದುರಿಸಿದಳು. ಇದಕ್ಕಾಗಿ ಕಾನೂನು ಹೋರಾಟ ನಡೆಸಿದಳು. ಜೊತೆಗೆ ಆರೋಗ್ಯಯುತ ಜೀವನ ಶೈಲಿ ಕಾಪಾಡಿಕೊಳ್ಳಲು ಜಿಮ್​ಗೆ ಸೇರಿದಳು. ದೇವಾನಂದಾ ಅರ್ಜಿ ಆಲಿಸಲು ಮುಂದಾದ ಹೈಕೋರ್ಟ್​​, ಆಕೆಯ ವೈದ್ಯಕೀಯ ವರದಿ ಮತ್ತು ದಾಖಲೆಗಳ ವೀಕ್ಷಣೆಗೆ ವೈದ್ಯಕೀಯ ಮಂಡಳಿ ನೇಮಿಸಿತು. ವಯೋಮಿತಿ ಪರಿಗಣನೆ ನಡೆಸದೇ ತಂದೆ ಜೀವ ಉಳಿಸಲು ಅಂಗಾಂಗ ದಾನ ಮಾಡುವ ದೇವಾನಂದ ನಿರ್ಧಾರಕ್ಕೆ ಕೋರ್ಟ್​ ಸಮ್ಮತಿ ನೀಡಿತು.

ಇದನ್ನೂ ಓದಿ: ಇಂದು ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನೆರವೇರಲಿದೆ ನಂದಮೂರಿ ತಾರಕ ರತ್ನ ಅಂತ್ಯಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.