ETV Bharat / bharat

ಲಾಕ್​​ಡೌನ್​ ತಂದ ಸಂಕಷ್ಟ... ಹಸಿವಿನಿಂದ ಅನಾರೋಗ್ಯಕ್ಕೀಡಾದ ಮಹಿಳೆ ಮತ್ತು ಐದು ಮಕ್ಕಳು... ಬದುಕು ಚಿಂತಾಜನಕ

author img

By

Published : Jun 16, 2021, 6:17 PM IST

ಮೂರು ಮಕ್ಕಳ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗ್ತಿದೆ. ಕೆಲವು ಎನ್‌ಜಿಒಗಳು ಈ ನಿರ್ಗತಿಕ ಕುಟುಂಬಕ್ಕೆ ಸಹಾಯ ನೀಡಲು ಮುಂದಾಗಿವೆ. ಸಹಾಯ ಮಾಡುವವರು ನನ್ನನ್ನು ಸಂಪರ್ಕಿಸಬಹುದು ಎಂದು ಮಲ್ಖಾನ್ ಸಿಂಗ್ ಜಿಲ್ಲಾ ಆಸ್ಪತ್ರೆಯ ತುರ್ತು ಮೇಲ್ವಿಚಾರಕ ಡಾ.ಅಮಿತ್ ಹೇಳಿದ್ದಾರೆ.

starvation
starvation

ಅಲಿಗಢ( ಉತ್ತರಪ್ರದೇಶ): ಹಸಿವಿನಿಂದ ಅನಾರೋಗ್ಯಕ್ಕೀಡಾದ ಮಹಿಳೆ ಹಾಗೂ ಆಕೆಯ ಐವರು ಮಕ್ಕಳನ್ನು ಉತ್ತರ ಪ್ರದೇಶದ ಅಲಿಗಢ ಮಲ್ಖಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಈ ಕುಟುಂಬವು ಎರಡು ತಿಂಗಳಿನಿಂದ ತಿನ್ನಲು ಅನ್ನವಿಲ್ಲದೇ ಬಳಲುತ್ತಿದೆ.

ಮೂರು ಮಕ್ಕಳ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗ್ತಿದೆ. ಕೆಲವು ಎನ್‌ಜಿಒಗಳು ಈ ನಿರ್ಗತಿಕ ಕುಟುಂಬಕ್ಕೆ ಸಹಾಯ ನೀಡಲು ಮುಂದಾಗಿವೆ. ಸಹಾಯ ಮಾಡುವವರು ನನ್ನನ್ನು ಸಂಪರ್ಕಿಸಬಹುದು ಎಂದು ಮಲ್ಖಾನ್ ಸಿಂಗ್ ಜಿಲ್ಲಾ ಆಸ್ಪತ್ರೆಯ ತುರ್ತು ಮೇಲ್ವಿಚಾರಕ ಡಾ.ಅಮಿತ್ ಹೇಳಿದ್ದಾರೆ.

ಕೋವಿಡ್​ ಲಾಕ್​ಡೌನ್​ ಮಧ್ಯೆಯೂ ಜನರಿಗೆ ಸರ್ಕಾರ ಪಡಿತರ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಎಲ್ಲಾ ಜನರನ್ನು ತಲುಪುತ್ತಿದೆಯೇ ಎಂಬುದನ್ನು ಈಗ ಮಕ್ಕಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ 40 ವರ್ಷದ ಗುಡ್ಡೆ ಎಂಬ ಮಹಿಳೆಯನ್ನು ನೋಡಿದರೆ ತಿಳಿಯುತ್ತದೆ. ಈಕೆಯ 20 ವರ್ಷದ ಹಿರಿಯ ಮಗ ಸೇರಿ 5 ವರ್ಷದ ಕಿರಿಯ ಮಗನವರೆಗೂ ಎಲ್ಲರೂ ತಿನ್ನಲು ಅನ್ನವಿಲ್ಲದೇ ಆಹಾರಕ್ಕಾಗಿ 2 ತಿಂಗಳಿನಿಂದ ಪರಿತಪಿಸುತ್ತಿದ್ದಾರೆ.

2020ರಲ್ಲಿ ಗಂಡನ ನಿಧನದ ನಂತರ ಗುಡ್ಡಿ ಫ್ಯಾಕ್ಟರಿಯೊಂದಕ್ಕೆ ಹೋಗುತ್ತಿದ್ದರು, ತಿಂಗಳಿಗೆ 4000 ರೂ ಸಂಬಳ ಬರುತ್ತಿತ್ತು. ಹಿರಿಯ ಮಗ ಅಜಯ್​ ಸಹ ಕೆಲಸಕ್ಕೆ ಹೋಗಲು ಆರಂಭಿಸಿದ್ದ. ಆದರೆ, ಲಾಕ್​ಡೌನ್​ ಹೇರಿದ ಪರಿಣಾಮ ಅಮ್ಮ ಮಗ ಇಬ್ಬರಿಗೂ ಉದ್ಯೋಗ ಇಲ್ಲದಂತಾಯ್ತು. ಅಕ್ಕ -ಪಕ್ಕದವರು ನೀಡಿದ ಫುಡ್​ ಕಿಟ್​ಗಳು 6 ಜನರಿರುವ ಈ ಕುಟುಂಬಕ್ಕೆ ಸಾಕಾಗುತ್ತಿರಲಿಲ್ಲ. ಎಷ್ಟೋ ದಿನ ನೀರು ಕುಡಿದು ಬದುಕಿದ್ದಾರಂತೆ. 2 ತಿಂಗಳಿಂದ ಸರಿಯಾಗಿ ಊಟ ಮಾಡದೇ ಇದೀಗ ಎಲ್ಲರೂ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.

ಅಲಿಗಢ( ಉತ್ತರಪ್ರದೇಶ): ಹಸಿವಿನಿಂದ ಅನಾರೋಗ್ಯಕ್ಕೀಡಾದ ಮಹಿಳೆ ಹಾಗೂ ಆಕೆಯ ಐವರು ಮಕ್ಕಳನ್ನು ಉತ್ತರ ಪ್ರದೇಶದ ಅಲಿಗಢ ಮಲ್ಖಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಈ ಕುಟುಂಬವು ಎರಡು ತಿಂಗಳಿನಿಂದ ತಿನ್ನಲು ಅನ್ನವಿಲ್ಲದೇ ಬಳಲುತ್ತಿದೆ.

ಮೂರು ಮಕ್ಕಳ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗ್ತಿದೆ. ಕೆಲವು ಎನ್‌ಜಿಒಗಳು ಈ ನಿರ್ಗತಿಕ ಕುಟುಂಬಕ್ಕೆ ಸಹಾಯ ನೀಡಲು ಮುಂದಾಗಿವೆ. ಸಹಾಯ ಮಾಡುವವರು ನನ್ನನ್ನು ಸಂಪರ್ಕಿಸಬಹುದು ಎಂದು ಮಲ್ಖಾನ್ ಸಿಂಗ್ ಜಿಲ್ಲಾ ಆಸ್ಪತ್ರೆಯ ತುರ್ತು ಮೇಲ್ವಿಚಾರಕ ಡಾ.ಅಮಿತ್ ಹೇಳಿದ್ದಾರೆ.

ಕೋವಿಡ್​ ಲಾಕ್​ಡೌನ್​ ಮಧ್ಯೆಯೂ ಜನರಿಗೆ ಸರ್ಕಾರ ಪಡಿತರ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಎಲ್ಲಾ ಜನರನ್ನು ತಲುಪುತ್ತಿದೆಯೇ ಎಂಬುದನ್ನು ಈಗ ಮಕ್ಕಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ 40 ವರ್ಷದ ಗುಡ್ಡೆ ಎಂಬ ಮಹಿಳೆಯನ್ನು ನೋಡಿದರೆ ತಿಳಿಯುತ್ತದೆ. ಈಕೆಯ 20 ವರ್ಷದ ಹಿರಿಯ ಮಗ ಸೇರಿ 5 ವರ್ಷದ ಕಿರಿಯ ಮಗನವರೆಗೂ ಎಲ್ಲರೂ ತಿನ್ನಲು ಅನ್ನವಿಲ್ಲದೇ ಆಹಾರಕ್ಕಾಗಿ 2 ತಿಂಗಳಿನಿಂದ ಪರಿತಪಿಸುತ್ತಿದ್ದಾರೆ.

2020ರಲ್ಲಿ ಗಂಡನ ನಿಧನದ ನಂತರ ಗುಡ್ಡಿ ಫ್ಯಾಕ್ಟರಿಯೊಂದಕ್ಕೆ ಹೋಗುತ್ತಿದ್ದರು, ತಿಂಗಳಿಗೆ 4000 ರೂ ಸಂಬಳ ಬರುತ್ತಿತ್ತು. ಹಿರಿಯ ಮಗ ಅಜಯ್​ ಸಹ ಕೆಲಸಕ್ಕೆ ಹೋಗಲು ಆರಂಭಿಸಿದ್ದ. ಆದರೆ, ಲಾಕ್​ಡೌನ್​ ಹೇರಿದ ಪರಿಣಾಮ ಅಮ್ಮ ಮಗ ಇಬ್ಬರಿಗೂ ಉದ್ಯೋಗ ಇಲ್ಲದಂತಾಯ್ತು. ಅಕ್ಕ -ಪಕ್ಕದವರು ನೀಡಿದ ಫುಡ್​ ಕಿಟ್​ಗಳು 6 ಜನರಿರುವ ಈ ಕುಟುಂಬಕ್ಕೆ ಸಾಕಾಗುತ್ತಿರಲಿಲ್ಲ. ಎಷ್ಟೋ ದಿನ ನೀರು ಕುಡಿದು ಬದುಕಿದ್ದಾರಂತೆ. 2 ತಿಂಗಳಿಂದ ಸರಿಯಾಗಿ ಊಟ ಮಾಡದೇ ಇದೀಗ ಎಲ್ಲರೂ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.