ಕೊರೊನಾದಿಂದ ಚೇತರಿಸಿಕೊಂಡವರಿಗೆ ಮತ್ತೊಂದು ಹೊಸ ಸಮಸ್ಯೆ ಕಾಡತೊಡಗಿದೆ. ಗುಜರಾತ್ನ ಸೂರತ್ನಲ್ಲಿ ವೈರಸ್ನಿಂದ ಚೇತರಿಸಿಕೊಂಡಿರುವ ಯುವಕರಲ್ಲಿ ತೀವ್ರ ಅಡ್ಡಪರಿಣಾಮಗಳು ಕಂಡು ಬಂದಿರುವುದು ಆಘಾತಕಾರಿ ಸಂಗತಿ ಎಂದು ವೈದ್ಯರು ಹೇಳುತ್ತಿದ್ದಾರೆ.
ನಗರದಲ್ಲಿ ಶೇ50 ರಿಂದ 60 ರಷ್ಟು ಕೊರೋನಾ ಪೀಡಿತರು ಸೌಮ್ಯವಾದ ಡಿ - ಡೈಮರ್ ಲಕ್ಷಣ ಹೊಂದಿರುವುದನ್ನು ಗುರುತಿಸಲಾಗಿದ್ದು, ಇವರಲ್ಲಿ ಶೇ 10 ರಿಂದ 15 ರಷ್ಟು ಮಂದಿಗೆ ಅಧಿಕವಾಗಿ ಇರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಪ್ರಮುಖ ಹೃದ್ರೋಗ ತಜ್ಞ ಡಾ.ಅತುಲ್ ಅಭ್ಯಾಂಕರ್ ಇಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಡಿ-ಡೈಮರ್ ಪರೀಕ್ಷೆಯ ಬಗ್ಗೆ ಡಾ.ಅತುಲ್ ಅಭ್ಯಾಂಕರ್ ಹೇಳಿದ್ದೇನು.?
ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಅದು ಸಾವಿಗೆ ಕಾರಣವಾಗಬಹುದು. ಕೊರೊನಾ ಅಡ್ಡಪರಿಣಾಮಗಳಿಂದಾಗಿ ಅನೇಕ ಜನರು ಸಾಯುತ್ತಿದ್ದು, ಯುವ ಜನತೆಯಲ್ಲಿ ಡಿ-ಡೈಮರ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಹೃದಯ ಸಮಸ್ಯೆಗಳಿರುವ ಜನರ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.