ಬರ್ದ್ವಾನ್ (ಪಶ್ಚಿಮ ಬಂಗಾಳ): ದೀದಿ ನಾಡಿನ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರೈತರ ಸಹಾಯದೊಂದಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಬರ್ದ್ವಾನ್ದಲ್ಲಿ ಏಕ್ ಮೂತಿ ಚಾವಲ್( ಒಂದು ಹಿಡಿ ಅಕ್ಕಿ) ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಮತಾ ಬ್ಯಾನರ್ಜಿ ಸೋಲುವ ಭೀತಿಯಿಂದ ಹೆದರಲು ಶುರು ಮಾಡಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದು ಗ್ಯಾರಂಟಿ ಎಂದಿದ್ದಾರೆ.
ಓದಿ: ದೇಶದ ಜನರಿಗೆ 'ಕೊರೊನಾ ವ್ಯಾಕ್ಸಿನ್' ಉಚಿತವಾಗಿ ಸಿಗಲಿ: ಟ್ವೀಟ್ ಮೂಲಕ ಕೇಜ್ರಿವಾಲ್ ಮನವಿ!
ಕೃಷಿ ಮಸೂದೆ ವಿರೋಧಿಸಿದ್ದ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಜೆಪಿ ನಡ್ಡಾ ಏಕ್ ಮೂತಿ ಚಾವಲ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು ಈ ಅಭಿಯಾನ ಮುಂದುವರೆಸಲಿದ್ದು, ಬರೋಬ್ಬರಿ 48 ಸಾವಿರ ಕೃಷಿಕರ ಮನೆಗೆ ತೆರಳಿ ಒಂದು ಹಿಡಿ ಅಕ್ಕಿ ಸಂಗ್ರಹ ಮಾಡಲಿದ್ದಾರೆ.