ETV Bharat / bharat

ಭ್ರಷ್ಟಾಚಾರ ಬಯಲಿಗೆಳೆದು, ದುಷ್ಕರ್ಮಿಗಳಿಂದ 7 ಗುಂಡೇಟು ತಿಂದಿದ್ದ ರಿಂಕು ಸಿಂಗ್​​ ಯುಪಿಎಸ್​ಸಿ ಪಾಸ್​​

author img

By

Published : Jun 2, 2022, 1:00 PM IST

ಸರ್ಕಾರಿ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರ ಬಯಲಿಗೆಳೆದು, ದುಷ್ಕರ್ಮಿಗಳಿಂದ ಗುಂಡೇಟು ತಿಂದು ಬದುಕುಳಿದ ಅಧಿಕಾರಿಯೋರ್ವರು ಇದೀಗ ಯುಪಿಎಸ್​​ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.

UP RINKU SINGH RAHI
UP RINKU SINGH RAHI

ಹಾಪುರ್​(ಉತ್ತರ ಪ್ರದೇಶ): ಸರ್ಕಾರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಬಯಲಿಗೆಳೆದು, ದುಷ್ಕರ್ಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಪ್ರದೇಶ ಪಿಸಿಎಸ್​ ಅಧಿಕಾರಿ ರಿಂಕು ಸಿಂಗ್​ ರಾಹಿ ಯುಪಿಎಸ್​​ಸಿ ಪರೀಕ್ಷೆಯಲ್ಲಿ ತೇರ್ಗೆಡೆಯಾಗಿದ್ದಾರೆ. ಬರೋಬ್ಬರಿ 13ನೇ ಪ್ರಯತ್ನದಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸ್​ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರಿದು ರಿಂಕು ಸಿಂಗ್?​: ಹತ್ರಾಸ್​​ನಲ್ಲಿ ಜನಿಸಿದ ರಿಂಕು ಸಿಂಗ್​, ತಮ್ಮ ಪ್ರಾಥಮಿಕ ಶಿಕ್ಷಣವನ್ನ ಅಲಿಗಢ​ನಲ್ಲಿ ಪಡೆದುಕೊಂಡಿದ್ದರು. ನಂತರ ಉನ್ನತ ವ್ಯಾಸಂಗ ಜಮ್ಶೆಡ್‌ಪುರದಲ್ಲಿ ಮುಗಿಸಿದರು. 2004ರಲ್ಲಿ ಕೇವಲ 26 ವರ್ಷದವರಾಗಿದ್ದಾಗ ಪಿಸಿಎಸ್ ಪರೀಕ್ಷೆ(ಉತ್ತರ ಪ್ರದೇಶ ಪಬ್ಲಿಕ್​​ ಸರ್ವೀಸ್​) ಪಾಸ್ ಮಾಡಿದ ಬಳಿಕ 2008ರಲ್ಲಿ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯಾಗಿ ನಿಯೋಜನೆಗೊಳ್ಳುತ್ತಾರೆ.

ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕಾಗಿ ಗುಂಡೇಟು: ಮುಜಾಫರ್​ನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿವೇತನ ಮತ್ತು ಪಿಂಚಣಿಯಲ್ಲಿ ಬರೋಬ್ಬರಿ 83 ಕೋಟಿ ರೂ. ಭ್ರಷ್ಟಾಚಾರ ಬಹಿರಂಗಪಡಿಸಿದ್ದರು. ಹೀಗಾಗಿ, ಮಾರ್ಚ್​​ 2009ರ 26ರಂದು ಬ್ಯಾಡ್ಮಿಂಟನ್​ ಆಡ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ವೇಳೆ ರಿಂಕು ಸಿಂಗ್​​ ದೇಹದಲ್ಲಿ ಒಟ್ಟು ಏಳು ಗುಂಡುಗಳು ತಗುಲಿದ್ದವು. ಒಂದು ಗುಂಡು ಮುಖದ ಭಾಗಕ್ಕೆ ತಾಗಿ, ದವಡೆಯಿಂದ ಹೊರಬಂದಿತ್ತು. ಹೀಗಾಗಿ, ಒಂದು ಕಣ್ಣು, ಕಿವಿ ಸಂಪೂರ್ಣವಾಗಿ ಹಾನಿಯಾಗಿದ್ದವು. ಮೀರತ್​​ನ ಹೈಯರ್​ ಸೆಂಟರ್​ನಲ್ಲಿ ದಾಖಲು ಮಾಡಿದ ಬಳಿಕ, ಬರೋಬ್ಬರಿ ಒಂದು ತಿಂಗಳ ಕಾಲ ಸುಭಾರ್ತಿ ವೈದ್ಯಕೀಯ ಕಾಲೇಜ್​​ ಮೀರತ್​ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: ಅತ್ತೆಯ ಕಿರುಕುಳವೇ ಸ್ಫೂರ್ತಿ; UPSC ಪಾಸ್ ಮಾಡಿದ 7 ವರ್ಷದ ಮಗುವಿನ ತಾಯಿ

ಸಂಪೂರ್ಣವಾಗಿ ಗುಣಮುಖರಾಗಿ ಹೊರಬಂದ ಬಳಿಕ ಆರ್​ಟಿಐ ಅಡಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕೇಳಿದ್ದರು. ಆದರೆ, ವರ್ಷವಾದರೂ ಅವರಿಗೆ ಮಾಹಿತಿ ನೀಡಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ 2012ರಲ್ಲಿ ಅವರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಹೀಗಾಗಿ, ಅವರನ್ನ ಲಖನೌದ ಮಾನಸಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ರಿಂಕು ಸಿಂಗ್​, ಲಖನೌ, ಅಲಿಗಢ, ಭದೋಹಿ, ಶ್ರಾವಸ್ತಿ, ಲಲಿತ್​ಪುರ್​ದಲ್ಲಿ ಸೇವೆ ಸಲ್ಲಿಸಿದ್ದು, 2019ರಲ್ಲಿ ಹಾಪುರ್ ಜಿಲ್ಲೆಯ ನಿಜಾಂಪುರ್​​ ಸರ್ಕಾರಿ ಐಎಎಸ್, ಪಿಸಿಎಸ್ ಕೋಚಿಂಗ್ ಸೆಂಟರ್‌ನಲ್ಲಿ ಕೇಂದ್ರ ಉಸ್ತುವಾರಿಯಾಗಿ ನೇಮಕವಾಗುತ್ತಾರೆ. ಅವರ ನೇಮಕದ ನಂತರ ಇಲ್ಲಿ ತರಬೇತಿ ಪಡೆದ ಸುಮಾರು 300ಕ್ಕೂ ಅಧಿಕ ಅಭ್ಯರ್ಥಿಗಳು ಯುಪಿಎಸ್​​ಸಿ ಹಾಗೂ ಪಿಸಿಎಸ್​​ ಪರೀಕ್ಷೆ ಪಾಸ್​ ಆಗುತ್ತಾರೆ.

ತಮ್ಮ ಸರ್ಕಾರಿ ಸೇವೆ ನಡುವೆ ಕೂಡ ಬರೋಬ್ಬರಿ 13 ಸಲ ಯುಪಿಎಸ್​ಸಿ ಪರೀಕ್ಷೆ ಬರೆದಿದ್ದರು. 2021ರಲ್ಲಿ ಪಾಸ್​ ಆಗಿರುವ ಇವರು 683ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಪುರ್​(ಉತ್ತರ ಪ್ರದೇಶ): ಸರ್ಕಾರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಬಯಲಿಗೆಳೆದು, ದುಷ್ಕರ್ಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಪ್ರದೇಶ ಪಿಸಿಎಸ್​ ಅಧಿಕಾರಿ ರಿಂಕು ಸಿಂಗ್​ ರಾಹಿ ಯುಪಿಎಸ್​​ಸಿ ಪರೀಕ್ಷೆಯಲ್ಲಿ ತೇರ್ಗೆಡೆಯಾಗಿದ್ದಾರೆ. ಬರೋಬ್ಬರಿ 13ನೇ ಪ್ರಯತ್ನದಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸ್​ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರಿದು ರಿಂಕು ಸಿಂಗ್?​: ಹತ್ರಾಸ್​​ನಲ್ಲಿ ಜನಿಸಿದ ರಿಂಕು ಸಿಂಗ್​, ತಮ್ಮ ಪ್ರಾಥಮಿಕ ಶಿಕ್ಷಣವನ್ನ ಅಲಿಗಢ​ನಲ್ಲಿ ಪಡೆದುಕೊಂಡಿದ್ದರು. ನಂತರ ಉನ್ನತ ವ್ಯಾಸಂಗ ಜಮ್ಶೆಡ್‌ಪುರದಲ್ಲಿ ಮುಗಿಸಿದರು. 2004ರಲ್ಲಿ ಕೇವಲ 26 ವರ್ಷದವರಾಗಿದ್ದಾಗ ಪಿಸಿಎಸ್ ಪರೀಕ್ಷೆ(ಉತ್ತರ ಪ್ರದೇಶ ಪಬ್ಲಿಕ್​​ ಸರ್ವೀಸ್​) ಪಾಸ್ ಮಾಡಿದ ಬಳಿಕ 2008ರಲ್ಲಿ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯಾಗಿ ನಿಯೋಜನೆಗೊಳ್ಳುತ್ತಾರೆ.

ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕಾಗಿ ಗುಂಡೇಟು: ಮುಜಾಫರ್​ನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿವೇತನ ಮತ್ತು ಪಿಂಚಣಿಯಲ್ಲಿ ಬರೋಬ್ಬರಿ 83 ಕೋಟಿ ರೂ. ಭ್ರಷ್ಟಾಚಾರ ಬಹಿರಂಗಪಡಿಸಿದ್ದರು. ಹೀಗಾಗಿ, ಮಾರ್ಚ್​​ 2009ರ 26ರಂದು ಬ್ಯಾಡ್ಮಿಂಟನ್​ ಆಡ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ವೇಳೆ ರಿಂಕು ಸಿಂಗ್​​ ದೇಹದಲ್ಲಿ ಒಟ್ಟು ಏಳು ಗುಂಡುಗಳು ತಗುಲಿದ್ದವು. ಒಂದು ಗುಂಡು ಮುಖದ ಭಾಗಕ್ಕೆ ತಾಗಿ, ದವಡೆಯಿಂದ ಹೊರಬಂದಿತ್ತು. ಹೀಗಾಗಿ, ಒಂದು ಕಣ್ಣು, ಕಿವಿ ಸಂಪೂರ್ಣವಾಗಿ ಹಾನಿಯಾಗಿದ್ದವು. ಮೀರತ್​​ನ ಹೈಯರ್​ ಸೆಂಟರ್​ನಲ್ಲಿ ದಾಖಲು ಮಾಡಿದ ಬಳಿಕ, ಬರೋಬ್ಬರಿ ಒಂದು ತಿಂಗಳ ಕಾಲ ಸುಭಾರ್ತಿ ವೈದ್ಯಕೀಯ ಕಾಲೇಜ್​​ ಮೀರತ್​ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: ಅತ್ತೆಯ ಕಿರುಕುಳವೇ ಸ್ಫೂರ್ತಿ; UPSC ಪಾಸ್ ಮಾಡಿದ 7 ವರ್ಷದ ಮಗುವಿನ ತಾಯಿ

ಸಂಪೂರ್ಣವಾಗಿ ಗುಣಮುಖರಾಗಿ ಹೊರಬಂದ ಬಳಿಕ ಆರ್​ಟಿಐ ಅಡಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕೇಳಿದ್ದರು. ಆದರೆ, ವರ್ಷವಾದರೂ ಅವರಿಗೆ ಮಾಹಿತಿ ನೀಡಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ 2012ರಲ್ಲಿ ಅವರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಹೀಗಾಗಿ, ಅವರನ್ನ ಲಖನೌದ ಮಾನಸಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ರಿಂಕು ಸಿಂಗ್​, ಲಖನೌ, ಅಲಿಗಢ, ಭದೋಹಿ, ಶ್ರಾವಸ್ತಿ, ಲಲಿತ್​ಪುರ್​ದಲ್ಲಿ ಸೇವೆ ಸಲ್ಲಿಸಿದ್ದು, 2019ರಲ್ಲಿ ಹಾಪುರ್ ಜಿಲ್ಲೆಯ ನಿಜಾಂಪುರ್​​ ಸರ್ಕಾರಿ ಐಎಎಸ್, ಪಿಸಿಎಸ್ ಕೋಚಿಂಗ್ ಸೆಂಟರ್‌ನಲ್ಲಿ ಕೇಂದ್ರ ಉಸ್ತುವಾರಿಯಾಗಿ ನೇಮಕವಾಗುತ್ತಾರೆ. ಅವರ ನೇಮಕದ ನಂತರ ಇಲ್ಲಿ ತರಬೇತಿ ಪಡೆದ ಸುಮಾರು 300ಕ್ಕೂ ಅಧಿಕ ಅಭ್ಯರ್ಥಿಗಳು ಯುಪಿಎಸ್​​ಸಿ ಹಾಗೂ ಪಿಸಿಎಸ್​​ ಪರೀಕ್ಷೆ ಪಾಸ್​ ಆಗುತ್ತಾರೆ.

ತಮ್ಮ ಸರ್ಕಾರಿ ಸೇವೆ ನಡುವೆ ಕೂಡ ಬರೋಬ್ಬರಿ 13 ಸಲ ಯುಪಿಎಸ್​ಸಿ ಪರೀಕ್ಷೆ ಬರೆದಿದ್ದರು. 2021ರಲ್ಲಿ ಪಾಸ್​ ಆಗಿರುವ ಇವರು 683ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.