ETV Bharat / bharat

ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಡಾನ್ ಅಬು ಸಲೇಂ ಸೋದರಳಿಯ ಆರಿಫ್ ಬಂಧನ

author img

By

Published : May 26, 2023, 10:46 PM IST

ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಡಾನ್ ಅಬು ಸಲೇಂ ಅವರ ಸೋದರಳಿಯ ಆರಿಫ್​ನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

Etv Bharat
Etv Bharat

ಅಜಂಗಢ (ಉತ್ತರ ಪ್ರದೇಶ): ಯೋಗಿ ಸರ್ಕಾರ ರಚನೆ ಮಾಡಿದಾಗಿನಿಂದ ಅಪರಾಧಗಳ ಸಂಖ್ಯೆ ಕಡಿಮೆ ಮಾಡಲು ರೌಡಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಫ್ರೀ ಹ್ಯಾಂಡ್​ ನೀಡಿದ್ದರು. ಇದರಿಂದ ಹಲವಾರು ಪ್ರಕರಣಗಳಲ್ಲಿ ಪೊಲೀಸರು ಕ್ರಿಮಿನಲ್​ಗಳನ್ನು ಹತ್ಯೆ ಮಾಡಿದ್ದರು. ಅಲ್ಲದೇ ರೌಡಿಗಳ ಮನೆ ಮೇಲೆ ಬುಲ್ಡೋಜರ್​ ಹತ್ತಿಸಿ ಅವರ ಪುಂಡಾಟವನ್ನು ಕಡಿಮೆ ಮಾಡಿದ್ದರು.

ಆದರೆ, ಮುಂಬೈನ ಡಾನ್ ಅಬು ಸಲೇಂ ಅವರ ಸೋದರಳಿಯ ಆರಿಫ್‌ ತಲೆಮರೆಸಿಕೊಂಡಿದ್ದ. ಆರೀಫ್ ಹೆಸರು ​ದುಷ್ಕರ್ಮಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಯುಪಿ ಪೊಲೀಸರು ಆರಿಫ್‌ಗಾಗಿ ಹುಡುಕುತ್ತಿದ್ದರು. ಆತನ ಬಂಧನಕ್ಕಾಗಿ ಯುಪಿ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದರು. ಆದರೆ, ಯಶಸ್ಸು ಕಾಣಲಿಲ್ಲ.

ಈ ನಡುವೆ ಆರಿಫ್ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಯುಪಿ ಪೊಲೀಸರಿಗೆ ಸಿಕ್ಕಿದೆ. ಅಂದಿನಿಂದ ಯುಪಿ ಪೊಲೀಸರು ಅಲ್ಲಿಯೇ ಮೊಕ್ಕಾಂ ಹೂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಆರಿಫ್ ಬಾಂದ್ರಾ ಹಿಲ್ ರೋಡ್ ಬಳಿ ಇರುವ ಟೀ ಅಂಗಡಿಗೆ ಬರಲು ಹೊರಟಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದರ ಮೇಲೆ ಯುಪಿ ಪೊಲೀಸರು ಮುಂಬೈ ಪೊಲೀಸರ ಸಹಾಯದಿಂದ ಅಲ್ಲಿಗೆ ಮುತ್ತಿಗೆ ಹಾಕಿದರು.

ಆರೀಫ್ ಅಂಗಡಿಗೆ ಬಂದು ಟೀ ಕುಡಿಯಲು ಆರಂಭಿಸಿದ ತಕ್ಷಣ ಪೊಲೀಸ್ ತಂಡ ಆತನನ್ನು ಹಿಡಿದಿದೆ. ಪೊಲೀಸರು ಆರೀಫ್‌ಗಾಗಿ ಬಹಳ ದಿನಗಳಿಂದ ಹುಡುಕುತ್ತಿದ್ದರು. ಆತನಿಗಾಗಿ ಯುಪಿ ಪೊಲೀಸರು ಹಲವು ಕಡೆ ದಾಳಿ ನಡೆಸಿದ್ದರು. ಇದೀಗ ಮುಂಬೈನಿಂದ ಬಂಧಿತ ಆರೀಫ್​ನನ್ನು ಪೊಲೀಸ್ ಅಜಂಗಢಕ್ಕೆ ಕರೆತರಲಿದ್ದಾರೆ.

ಗುರುವಾರ, ಆರಿಫ್ ವಿರುದ್ಧ ಅಜಂಗಢ್ ನಗರದ ಕೊತ್ವಾಲಿಯಲ್ಲಿ ವಂಚನೆಯಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಸುಲಿಗೆಗೆ ಒತ್ತಾಯಿಸಿದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರ ಹೆಸರಿದ್ದು, ಅವರನ್ನು ಪೊಲೀಸರು ಬಂಧಿಸಿದ್ದರು.

ಅಜಂಗಢ ನಗರದ ಚಕ್ಲಾ ಪಹಾರ್‌ಪುರ ನಿವಾಸಿ ಶಬಾನಾ ಪರ್ವೀನ್ ಎಂಬುವವರು ಭೂಗತ ಪಾತಕಿ ಅಬು ಸಲೇಂನ ಸೋದರಳಿಯ ಮೊಹಮ್ಮದ್ ಪಠಾಂತೋಳ, ಆರೀಫ್ ಅವರ ಪುತ್ರ ಅಬ್ದುಲ್ ಹಕೀಂ ಅವರು ಸರೈಮಿರ್ ಮೂಲಕ ನನ್ನ ಮತ್ತು ಕುಟುಂಬದ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಆರೀಫ್ ಅವರಿಂದ ಸುಲಿಗೆಗೆ ಬೆದರಿಕೆ ಕರೆಗಳು ಬರುತ್ತಿವೆ. ಇದರೊಂದಿಗೆ ನಕಲಿ ದಾಖಲೆಗಳ ಆಧಾರದಲ್ಲಿ ಅವರ ಹಾಗೂ ಕುಟುಂಬದ ಆಸ್ತಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ದೂರು ನೀಡಿದ್ದರು.

ಈ ಸಂಬಂಧ ಎಸ್​ಪಿ ಅನುರಾಗ್ ಆರ್ಯ ಅವರು ಮಾತನಾಡಿ, "ಫೋರ್ಜರಿ ಮತ್ತು ಸುಲಿಗೆ ಪ್ರಕರಣದಲ್ಲಿ ಭೂಗತ ಪಾತಕಿ ಅಬು ಸಲೇಂ ಅವರ ಸೋದರಳಿಯ ಮೊಹಮ್ಮದ್ ಆರೀಫ್ ಸೇರಿ ಮೂವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಹೆನಾ ಮತ್ತು ಸಲ್ಮಾನ್​ನನ್ನು ಬಂಧಿಸಿ ಕೆಸ್​ ದಾಖಲಿಸಲಾಗಿದೆ. ಡಾನ್ ಅಬು ಸಲೇಂ ಅವರ ಸೋದರಳಿಯನನ್ನೂ ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ" ಎಂದಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಇಬ್ಬರ ಹತ್ಯೆ ಪ್ರಕರಣ: 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು!

ಅಜಂಗಢ (ಉತ್ತರ ಪ್ರದೇಶ): ಯೋಗಿ ಸರ್ಕಾರ ರಚನೆ ಮಾಡಿದಾಗಿನಿಂದ ಅಪರಾಧಗಳ ಸಂಖ್ಯೆ ಕಡಿಮೆ ಮಾಡಲು ರೌಡಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಫ್ರೀ ಹ್ಯಾಂಡ್​ ನೀಡಿದ್ದರು. ಇದರಿಂದ ಹಲವಾರು ಪ್ರಕರಣಗಳಲ್ಲಿ ಪೊಲೀಸರು ಕ್ರಿಮಿನಲ್​ಗಳನ್ನು ಹತ್ಯೆ ಮಾಡಿದ್ದರು. ಅಲ್ಲದೇ ರೌಡಿಗಳ ಮನೆ ಮೇಲೆ ಬುಲ್ಡೋಜರ್​ ಹತ್ತಿಸಿ ಅವರ ಪುಂಡಾಟವನ್ನು ಕಡಿಮೆ ಮಾಡಿದ್ದರು.

ಆದರೆ, ಮುಂಬೈನ ಡಾನ್ ಅಬು ಸಲೇಂ ಅವರ ಸೋದರಳಿಯ ಆರಿಫ್‌ ತಲೆಮರೆಸಿಕೊಂಡಿದ್ದ. ಆರೀಫ್ ಹೆಸರು ​ದುಷ್ಕರ್ಮಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಯುಪಿ ಪೊಲೀಸರು ಆರಿಫ್‌ಗಾಗಿ ಹುಡುಕುತ್ತಿದ್ದರು. ಆತನ ಬಂಧನಕ್ಕಾಗಿ ಯುಪಿ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದರು. ಆದರೆ, ಯಶಸ್ಸು ಕಾಣಲಿಲ್ಲ.

ಈ ನಡುವೆ ಆರಿಫ್ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಯುಪಿ ಪೊಲೀಸರಿಗೆ ಸಿಕ್ಕಿದೆ. ಅಂದಿನಿಂದ ಯುಪಿ ಪೊಲೀಸರು ಅಲ್ಲಿಯೇ ಮೊಕ್ಕಾಂ ಹೂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಆರಿಫ್ ಬಾಂದ್ರಾ ಹಿಲ್ ರೋಡ್ ಬಳಿ ಇರುವ ಟೀ ಅಂಗಡಿಗೆ ಬರಲು ಹೊರಟಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದರ ಮೇಲೆ ಯುಪಿ ಪೊಲೀಸರು ಮುಂಬೈ ಪೊಲೀಸರ ಸಹಾಯದಿಂದ ಅಲ್ಲಿಗೆ ಮುತ್ತಿಗೆ ಹಾಕಿದರು.

ಆರೀಫ್ ಅಂಗಡಿಗೆ ಬಂದು ಟೀ ಕುಡಿಯಲು ಆರಂಭಿಸಿದ ತಕ್ಷಣ ಪೊಲೀಸ್ ತಂಡ ಆತನನ್ನು ಹಿಡಿದಿದೆ. ಪೊಲೀಸರು ಆರೀಫ್‌ಗಾಗಿ ಬಹಳ ದಿನಗಳಿಂದ ಹುಡುಕುತ್ತಿದ್ದರು. ಆತನಿಗಾಗಿ ಯುಪಿ ಪೊಲೀಸರು ಹಲವು ಕಡೆ ದಾಳಿ ನಡೆಸಿದ್ದರು. ಇದೀಗ ಮುಂಬೈನಿಂದ ಬಂಧಿತ ಆರೀಫ್​ನನ್ನು ಪೊಲೀಸ್ ಅಜಂಗಢಕ್ಕೆ ಕರೆತರಲಿದ್ದಾರೆ.

ಗುರುವಾರ, ಆರಿಫ್ ವಿರುದ್ಧ ಅಜಂಗಢ್ ನಗರದ ಕೊತ್ವಾಲಿಯಲ್ಲಿ ವಂಚನೆಯಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಸುಲಿಗೆಗೆ ಒತ್ತಾಯಿಸಿದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರ ಹೆಸರಿದ್ದು, ಅವರನ್ನು ಪೊಲೀಸರು ಬಂಧಿಸಿದ್ದರು.

ಅಜಂಗಢ ನಗರದ ಚಕ್ಲಾ ಪಹಾರ್‌ಪುರ ನಿವಾಸಿ ಶಬಾನಾ ಪರ್ವೀನ್ ಎಂಬುವವರು ಭೂಗತ ಪಾತಕಿ ಅಬು ಸಲೇಂನ ಸೋದರಳಿಯ ಮೊಹಮ್ಮದ್ ಪಠಾಂತೋಳ, ಆರೀಫ್ ಅವರ ಪುತ್ರ ಅಬ್ದುಲ್ ಹಕೀಂ ಅವರು ಸರೈಮಿರ್ ಮೂಲಕ ನನ್ನ ಮತ್ತು ಕುಟುಂಬದ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಆರೀಫ್ ಅವರಿಂದ ಸುಲಿಗೆಗೆ ಬೆದರಿಕೆ ಕರೆಗಳು ಬರುತ್ತಿವೆ. ಇದರೊಂದಿಗೆ ನಕಲಿ ದಾಖಲೆಗಳ ಆಧಾರದಲ್ಲಿ ಅವರ ಹಾಗೂ ಕುಟುಂಬದ ಆಸ್ತಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ದೂರು ನೀಡಿದ್ದರು.

ಈ ಸಂಬಂಧ ಎಸ್​ಪಿ ಅನುರಾಗ್ ಆರ್ಯ ಅವರು ಮಾತನಾಡಿ, "ಫೋರ್ಜರಿ ಮತ್ತು ಸುಲಿಗೆ ಪ್ರಕರಣದಲ್ಲಿ ಭೂಗತ ಪಾತಕಿ ಅಬು ಸಲೇಂ ಅವರ ಸೋದರಳಿಯ ಮೊಹಮ್ಮದ್ ಆರೀಫ್ ಸೇರಿ ಮೂವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಹೆನಾ ಮತ್ತು ಸಲ್ಮಾನ್​ನನ್ನು ಬಂಧಿಸಿ ಕೆಸ್​ ದಾಖಲಿಸಲಾಗಿದೆ. ಡಾನ್ ಅಬು ಸಲೇಂ ಅವರ ಸೋದರಳಿಯನನ್ನೂ ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ" ಎಂದಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಇಬ್ಬರ ಹತ್ಯೆ ಪ್ರಕರಣ: 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.