ETV Bharat / bharat

ಇದು 'ಮಾವು' ಆದರೂ 'ಹಣ್ಣಲ್ಲ'.. ಸೌತೆಕಾಯಿಯ ಸ್ವಾದ ನೀಡುವ 'ರಾಣಿ ರಾಮಣ್ಣ'

ಛತ್ತೀಸ್​ಗಢದ ಈ ಮಾವನ್ನು ಕಾಯಿ ಇದ್ದಾಗಲೇ ತಿನ್ನಬೇಕಂತೆ. ಹಣ್ಣಾದ ಬಳಿಕ ಇದು ರುಚಿಸುವುದಿಲ್ಲ ಮತ್ತು ಹುಳುಗಳ ಬಾಧೆಯಿಂದ ವ್ಯರ್ಥವಾಗುತ್ತದೆ. ಇದನ್ನು ತಿಂದರೆ ಸೌತೆಕಾಯಿ ತಿಂದಂತಹ ಅನುಭವ ಆಗುತ್ತದೆ.

author img

By

Published : May 7, 2022, 4:08 PM IST

unique-cucumber
ಮಾವು ಆದರೂ ಹಣ್ಣಲ್ಲ

ಸರ್ಗುಜಾ (ಛತ್ತೀಸ್‌ಗಢ): ಮಾವು ಹಣ್ಣಾದ ಮೇಲೆ ತಿಂದರೆ ಅದರ ಸ್ವಾದವೇ ಬೇರೆ. ಕಾಯಿಯಾಗಿದ್ದಾಗ ಒಗರು ಮತ್ತು ಹುಳಿಯಾಗಿರುವ ಕಾರಣ ಅದನ್ನು ತಿನ್ನುವ ಮನಸ್ಸು ಬರುವುದಿಲ್ಲ. ಆದರೆ, ಛತ್ತೀಸ್​ಗಢದ ಮಾವಿನ ತಳಿಯೊಂದು ಹಣ್ಣಾದ ಮೇಲೆ ಅದನ್ನು ತಿನ್ನಲು ಬರುವುದಿಲ್ಲವಂತೆ. ಕಾರಣ ಹಣ್ಣಿನ ತುಂಬಾ ಹುಳುಗಳು ಮುತ್ತಿಕೊಂಡಿರುತ್ತವಂತೆ. ಅಲ್ಲದೇ, ಇದು ಸೌತೆಕಾಯಿಯ ರುಚಿ ನೀಡುತ್ತಿದೆ ಎಂಬುದು ವಿಶೇಷ.

ಛತ್ತೀಸ್​ಗಢದ ಸರ್ಗುಜಾ ಜಿಲ್ಲೆಯ ಶಂಕರ್ ಗುಪ್ತಾ ಎಂಬುವರ ಮಾಲೀಕತ್ವದ ಮಾವಿನ ತೋಟದಲ್ಲಿ ಈ ವಿಧದ ಮಾವು ಬೆಳೆಯಲಾಗಿದೆ. ಇದು ಸೌತೆಕಾಯಿ ರುಚಿ ಹೋಲುತ್ತದಂತೆ. ಹಾಗಾಗಿ ಈ ಮಾವು ಆಕರ್ಷಣೆಯ ಕೇಂದ್ರವಾಗಿದೆ. ಇದನ್ನು ತಿಂದರೆ ಸಲಾಡ್​ ತಿಂದ ರುಚಿ ನೀಡುತ್ತದಂತೆ. ಇದನ್ನು ಕಾಯಿ ಇದ್ದಾಗಲೇ ತಿನ್ನಬೇಕು. ಹಣ್ಣಾದ ಮೇಲೆ ಇದು ನಿಷ್ಪ್ರಯೋಜಕ. ಕಾರಣ ಹುಳುಗಳು ಮಾವನ್ನು ತಿಂದು ಹಾಕುತ್ತವಂತೆ.

ಇದನ್ನು ಪರಿಶೀಲಿಸಲು 'ಈಟಿವಿ ಭಾರತ' ತಂಡ ಈ ಮಾವಿನ ತಳಿಯನ್ನು ಬೆಳೆಯಲಾಗುವ ತೋಟಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಈ ಮಾವಿನ ತಳಿ ತಿಂದ ನಂತರ ಅದು ರುಚಿ ನೀಡದಿರುವುದು ಕಂಡು ಬಂದಿದೆ.

ಈ ಮಾವಿನ ತಳಿ ಸ್ವಲ್ಪ ಒಗರಾಗಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ಇದನ್ನು ಕಾಯಿ ಇದ್ದಾಗಲೇ ತಿನ್ನಬೇಕು. ಇದನ್ನು ಪೂರ್ತಿ ಹಣ್ಣಾದ ಬಳಿಕ ತಿನ್ನಲು ಬರುವುದಿಲ್ಲ. ರುಚಿಯೂ ಇರುವುದಿಲ್ಲ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ.

ಇನ್ನು ಈ ತಳಿಯ ಬಗ್ಗೆ ತೋಟಗಾರಿಕಾ ವಿಜ್ಞಾನಿ ಸಂದೀಪ್ ಶರ್ಮಾ ಹೀಗೆ ವಿವರಿಸಿದ್ದು, ಈ ಜಾತಿಯ ಮಾವನ್ನು 'ರಾಣಿ ರಾಮಣ್ಣ' ಎಂದು ಕರೆಯುತ್ತಾರೆ. ರಾಜ್ಯದಲ್ಲಿ 100 ಕ್ಕೂ ಅಧಿಕ ತಳಿಯ ಮಾವುಗಳನ್ನು ಬೆಳೆಯಲಾಗುತ್ತದೆ. ಆದರೆ, ಈ ರಾಣಿ ರಾಮಣ್ಣ ವಿಧವನ್ನು ಕಚ್ಚಾ ರೂಪದಲ್ಲಿ(ಕಾಯಿಯಿದ್ದಾಗ) ತಿನ್ನಲಾಗುತ್ತದೆ. ಇದನ್ನು ನಾರಿಯಲ್ (ತೆಂಗಿನಕಾಯಿ) ಮಾವು ಎಂದೂ ಕರೆಯುತ್ತಾರೆ ಎಂದಿದ್ದಾರೆ.

ಓದಿ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ಸಾಧ್ಯತೆ.. ಸರ್ವಪಕ್ಷ ಸರ್ಕಾರ ರಚನೆಯಾಗುತ್ತಾ?

ಸರ್ಗುಜಾ (ಛತ್ತೀಸ್‌ಗಢ): ಮಾವು ಹಣ್ಣಾದ ಮೇಲೆ ತಿಂದರೆ ಅದರ ಸ್ವಾದವೇ ಬೇರೆ. ಕಾಯಿಯಾಗಿದ್ದಾಗ ಒಗರು ಮತ್ತು ಹುಳಿಯಾಗಿರುವ ಕಾರಣ ಅದನ್ನು ತಿನ್ನುವ ಮನಸ್ಸು ಬರುವುದಿಲ್ಲ. ಆದರೆ, ಛತ್ತೀಸ್​ಗಢದ ಮಾವಿನ ತಳಿಯೊಂದು ಹಣ್ಣಾದ ಮೇಲೆ ಅದನ್ನು ತಿನ್ನಲು ಬರುವುದಿಲ್ಲವಂತೆ. ಕಾರಣ ಹಣ್ಣಿನ ತುಂಬಾ ಹುಳುಗಳು ಮುತ್ತಿಕೊಂಡಿರುತ್ತವಂತೆ. ಅಲ್ಲದೇ, ಇದು ಸೌತೆಕಾಯಿಯ ರುಚಿ ನೀಡುತ್ತಿದೆ ಎಂಬುದು ವಿಶೇಷ.

ಛತ್ತೀಸ್​ಗಢದ ಸರ್ಗುಜಾ ಜಿಲ್ಲೆಯ ಶಂಕರ್ ಗುಪ್ತಾ ಎಂಬುವರ ಮಾಲೀಕತ್ವದ ಮಾವಿನ ತೋಟದಲ್ಲಿ ಈ ವಿಧದ ಮಾವು ಬೆಳೆಯಲಾಗಿದೆ. ಇದು ಸೌತೆಕಾಯಿ ರುಚಿ ಹೋಲುತ್ತದಂತೆ. ಹಾಗಾಗಿ ಈ ಮಾವು ಆಕರ್ಷಣೆಯ ಕೇಂದ್ರವಾಗಿದೆ. ಇದನ್ನು ತಿಂದರೆ ಸಲಾಡ್​ ತಿಂದ ರುಚಿ ನೀಡುತ್ತದಂತೆ. ಇದನ್ನು ಕಾಯಿ ಇದ್ದಾಗಲೇ ತಿನ್ನಬೇಕು. ಹಣ್ಣಾದ ಮೇಲೆ ಇದು ನಿಷ್ಪ್ರಯೋಜಕ. ಕಾರಣ ಹುಳುಗಳು ಮಾವನ್ನು ತಿಂದು ಹಾಕುತ್ತವಂತೆ.

ಇದನ್ನು ಪರಿಶೀಲಿಸಲು 'ಈಟಿವಿ ಭಾರತ' ತಂಡ ಈ ಮಾವಿನ ತಳಿಯನ್ನು ಬೆಳೆಯಲಾಗುವ ತೋಟಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಈ ಮಾವಿನ ತಳಿ ತಿಂದ ನಂತರ ಅದು ರುಚಿ ನೀಡದಿರುವುದು ಕಂಡು ಬಂದಿದೆ.

ಈ ಮಾವಿನ ತಳಿ ಸ್ವಲ್ಪ ಒಗರಾಗಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ಇದನ್ನು ಕಾಯಿ ಇದ್ದಾಗಲೇ ತಿನ್ನಬೇಕು. ಇದನ್ನು ಪೂರ್ತಿ ಹಣ್ಣಾದ ಬಳಿಕ ತಿನ್ನಲು ಬರುವುದಿಲ್ಲ. ರುಚಿಯೂ ಇರುವುದಿಲ್ಲ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ.

ಇನ್ನು ಈ ತಳಿಯ ಬಗ್ಗೆ ತೋಟಗಾರಿಕಾ ವಿಜ್ಞಾನಿ ಸಂದೀಪ್ ಶರ್ಮಾ ಹೀಗೆ ವಿವರಿಸಿದ್ದು, ಈ ಜಾತಿಯ ಮಾವನ್ನು 'ರಾಣಿ ರಾಮಣ್ಣ' ಎಂದು ಕರೆಯುತ್ತಾರೆ. ರಾಜ್ಯದಲ್ಲಿ 100 ಕ್ಕೂ ಅಧಿಕ ತಳಿಯ ಮಾವುಗಳನ್ನು ಬೆಳೆಯಲಾಗುತ್ತದೆ. ಆದರೆ, ಈ ರಾಣಿ ರಾಮಣ್ಣ ವಿಧವನ್ನು ಕಚ್ಚಾ ರೂಪದಲ್ಲಿ(ಕಾಯಿಯಿದ್ದಾಗ) ತಿನ್ನಲಾಗುತ್ತದೆ. ಇದನ್ನು ನಾರಿಯಲ್ (ತೆಂಗಿನಕಾಯಿ) ಮಾವು ಎಂದೂ ಕರೆಯುತ್ತಾರೆ ಎಂದಿದ್ದಾರೆ.

ಓದಿ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ಸಾಧ್ಯತೆ.. ಸರ್ವಪಕ್ಷ ಸರ್ಕಾರ ರಚನೆಯಾಗುತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.