ETV Bharat / bharat

‘ಆಪರೇಷನ್ ನಿರಾಯುಧ’: 3,325 ಕೊಲೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

author img

By

Published : Oct 1, 2021, 12:23 PM IST

ತಮಿಳುನಾಡಿನಲ್ಲಿ ಅಪರಾಧ ಕೃತ್ಯ ಎಸಗುತ್ತಿದ್ದವರ ಮೇಲೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ವಿವಿಧ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಜೊತೆ ಮಾರಕಾಸ್ತ್ರಗಳ ಹೊಂದಿದ್ದ 3 ಸಾವಿರಕ್ಕೂ ಅಧಿಕ ಮಂದಿ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.

tn-police-arrest-3325-murder-accused-in-operation-disarm
3,325 ಮಂದಿ ಕೊಲೆ ಆರೋಪಿಗಳ ಬಂಧಿಸಿದ ಪೊಲೀಸರು

ಚೆನ್ನೈ (ತಮಿಳುನಾಡು): ತಮಿಳುನಾಡಿನ ತಿರುನೆಲ್ವೇಲಿ ಮತ್ತು ದಿಂಡಿಗಲ್​ನಲ್ಲಿ 5 ದಿನಗಳ ಅವಧಿಯಲ್ಲಿ ನಡೆದಿದ್ದ ನಾಲ್ವರು ಕೊಲೆ ಪ್ರಕರಣ ಜನರನ್ನು ಬೆಚ್ಚಿಬೀಳಿಸಿತ್ತು. ಪ್ರಕರಣದಿಂದ ಎಚ್ಚೆತ್ತ ಪೊಲೀಸ್ ಇಲಾಖೆ ವಿವಿಧೆಡೆ ಕಾರ್ಯಾಚರಣೆಗೆ ಮುಂದಾಗಿದ್ದು, ಸಾವಿರಾರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಪ್ರಕರಣ ಹಿನ್ನೆಲೆ ಆರೋಪಿಗಳು ಸೇರಿದಂತೆ ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಲು ‘ಆಪರೇಷನ್ ನಿರಾಯುಧ’ ಆರಂಭಿಸಿದ್ದರು. ಈ ವೇಳೆ, ನಗರದ ಹಲವೆಡೆ ದಾಳಿ ನಡೆಸಿ 3000ಕ್ಕೂ ಅಧಿಕ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪಿಗಳು ಮತ್ತು ಶಂಕಿತರನ್ನು ಬಂಧಿಸಲು ದಾಳಿಗಳನ್ನು ನಡೆಸಲಾಗಿತ್ತು. ಈ ವೇಳೆ, 3,325 ಮಂದಿ ಕೊಲೆ ಆರೋಪಿಗಳನ್ನು ಬಂಧಿಸಲಾಯಿತು ಮತ್ತು ಅವರಿಂದ 1,000 ಚಾಕುಗಳು ಮತ್ತು 7 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಧುರೈ ಮತ್ತು ತಿರುನೆಲ್ವೇಲಿಯಲ್ಲಿ ನಡೆದ ಎರಡು ಉನ್ನತ ಮಟ್ಟದ ಸಭೆಗಳಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಿ. ಸಲೇಂದ್ರ ಬಾಬು ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಈ ಹಿಂದೆ ಕೊಲೆ, ಗಲಭೆ ಮತ್ತು ಹಲ್ಲೆಯಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದರು. ಸೇಡು ಹತ್ಯೆಗಳ ಇತಿಹಾಸವನ್ನು ಅಧ್ಯಯನ ಮಾಡಲು ಮತ್ತು ಇದಕ್ಕಾಗಿ ಸಂಚು ರೂಪಿಸುವ ಎಲ್ಲ ಆರೋಪಿಗಳ ಬಂಧಿಸಲು ತಿಳಿಸಲಾಗಿತ್ತು. ಬಳಿಕ ಈ ಎರಡೂ ನಗರದಲ್ಲಿ ನಡೆದ ಕಾರ್ಯಾಚರಣೆ ವೇಳೆ 3,325 ಮಂದಿಯನ್ನ ಬಂಧಿಸಲಾಗಿದೆ.

ಅಲ್ಲದೇ ನಗರದಲ್ಲಿ ಕಬ್ಬಿಣ ಕೆಲಸ, ಚಾಕು ಮಾರಾಟಗಾರರು ಮತ್ತು ಅಕ್ಕಸಾಲಿಗರು ಸೇರಿದಂತೆ ಇಂತಹ ಹರಿತ ವಸ್ತು ಮಾರಾಟಗಾರರ ಸಭೆ ಕರೆಯಲಾಗಿತ್ತು. ಅವರ ಬಳಿ ಹರಿತವಾದ ವಸ್ತುಗಳ ಖರೀದಿಸುವವರ ಹೆಸರು, ಮೊಬೈಲ್​ ನಂಬರ್ ಸೇರಿದಂತೆ ವಸ್ತು ಖರೀದಿಯ ಕಾರಣ ದಾಖಲಿಸುವಂತೆ ಸೂಚಿಸಲಾಗಿತ್ತು. ನಗರದ 579 ಕಡೆ ನಡೆಸಲಾಗಿದ್ದ ಸಭೆಯಲ್ಲಿ ಸುಮಾರು 2,500 ಮಂದಿ ಭಾಗಿಯಾಗಿದ್ದರು. ಜೊತೆಗೆ ಅವರಿಂದ ಮಾರಾಟವಾದ ವಸ್ತುಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿರುವಂತೆಯೂ ಸೂಚಿಸಲಾಗಿತ್ತು.

ಇದನ್ನೂ ಓದಿ: Breaking News... Air Indiaವನ್ನು ಮತ್ತೆ ತನ್ನ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾದ TATA ಗ್ರೂಪ್.. ವರದಿ

ಚೆನ್ನೈ (ತಮಿಳುನಾಡು): ತಮಿಳುನಾಡಿನ ತಿರುನೆಲ್ವೇಲಿ ಮತ್ತು ದಿಂಡಿಗಲ್​ನಲ್ಲಿ 5 ದಿನಗಳ ಅವಧಿಯಲ್ಲಿ ನಡೆದಿದ್ದ ನಾಲ್ವರು ಕೊಲೆ ಪ್ರಕರಣ ಜನರನ್ನು ಬೆಚ್ಚಿಬೀಳಿಸಿತ್ತು. ಪ್ರಕರಣದಿಂದ ಎಚ್ಚೆತ್ತ ಪೊಲೀಸ್ ಇಲಾಖೆ ವಿವಿಧೆಡೆ ಕಾರ್ಯಾಚರಣೆಗೆ ಮುಂದಾಗಿದ್ದು, ಸಾವಿರಾರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಪ್ರಕರಣ ಹಿನ್ನೆಲೆ ಆರೋಪಿಗಳು ಸೇರಿದಂತೆ ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಲು ‘ಆಪರೇಷನ್ ನಿರಾಯುಧ’ ಆರಂಭಿಸಿದ್ದರು. ಈ ವೇಳೆ, ನಗರದ ಹಲವೆಡೆ ದಾಳಿ ನಡೆಸಿ 3000ಕ್ಕೂ ಅಧಿಕ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪಿಗಳು ಮತ್ತು ಶಂಕಿತರನ್ನು ಬಂಧಿಸಲು ದಾಳಿಗಳನ್ನು ನಡೆಸಲಾಗಿತ್ತು. ಈ ವೇಳೆ, 3,325 ಮಂದಿ ಕೊಲೆ ಆರೋಪಿಗಳನ್ನು ಬಂಧಿಸಲಾಯಿತು ಮತ್ತು ಅವರಿಂದ 1,000 ಚಾಕುಗಳು ಮತ್ತು 7 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಧುರೈ ಮತ್ತು ತಿರುನೆಲ್ವೇಲಿಯಲ್ಲಿ ನಡೆದ ಎರಡು ಉನ್ನತ ಮಟ್ಟದ ಸಭೆಗಳಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಿ. ಸಲೇಂದ್ರ ಬಾಬು ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಈ ಹಿಂದೆ ಕೊಲೆ, ಗಲಭೆ ಮತ್ತು ಹಲ್ಲೆಯಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದರು. ಸೇಡು ಹತ್ಯೆಗಳ ಇತಿಹಾಸವನ್ನು ಅಧ್ಯಯನ ಮಾಡಲು ಮತ್ತು ಇದಕ್ಕಾಗಿ ಸಂಚು ರೂಪಿಸುವ ಎಲ್ಲ ಆರೋಪಿಗಳ ಬಂಧಿಸಲು ತಿಳಿಸಲಾಗಿತ್ತು. ಬಳಿಕ ಈ ಎರಡೂ ನಗರದಲ್ಲಿ ನಡೆದ ಕಾರ್ಯಾಚರಣೆ ವೇಳೆ 3,325 ಮಂದಿಯನ್ನ ಬಂಧಿಸಲಾಗಿದೆ.

ಅಲ್ಲದೇ ನಗರದಲ್ಲಿ ಕಬ್ಬಿಣ ಕೆಲಸ, ಚಾಕು ಮಾರಾಟಗಾರರು ಮತ್ತು ಅಕ್ಕಸಾಲಿಗರು ಸೇರಿದಂತೆ ಇಂತಹ ಹರಿತ ವಸ್ತು ಮಾರಾಟಗಾರರ ಸಭೆ ಕರೆಯಲಾಗಿತ್ತು. ಅವರ ಬಳಿ ಹರಿತವಾದ ವಸ್ತುಗಳ ಖರೀದಿಸುವವರ ಹೆಸರು, ಮೊಬೈಲ್​ ನಂಬರ್ ಸೇರಿದಂತೆ ವಸ್ತು ಖರೀದಿಯ ಕಾರಣ ದಾಖಲಿಸುವಂತೆ ಸೂಚಿಸಲಾಗಿತ್ತು. ನಗರದ 579 ಕಡೆ ನಡೆಸಲಾಗಿದ್ದ ಸಭೆಯಲ್ಲಿ ಸುಮಾರು 2,500 ಮಂದಿ ಭಾಗಿಯಾಗಿದ್ದರು. ಜೊತೆಗೆ ಅವರಿಂದ ಮಾರಾಟವಾದ ವಸ್ತುಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿರುವಂತೆಯೂ ಸೂಚಿಸಲಾಗಿತ್ತು.

ಇದನ್ನೂ ಓದಿ: Breaking News... Air Indiaವನ್ನು ಮತ್ತೆ ತನ್ನ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾದ TATA ಗ್ರೂಪ್.. ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.