ETV Bharat / bharat

ಕೈಯಿಂದ ಕೈಗೆ ಬದಲಾಗುತ್ತಿದ್ದ ಹವಾಲಾ ಹಣ.. 2.5 ಕೋಟಿ ರೂಪಾಯಿ ನಗದು ವಶಕ್ಕೆ ಪಡೆದ ಪೊಲೀಸರು

author img

By

Published : Oct 10, 2022, 11:52 AM IST

ಎರಡೂವರೆ ಕೋಟಿ ರೂಪಾಯಿ ಹವಾಲಾ ಹಣ ಕೈಯಿಂದ ಕೈಗೆ ಬದಲಾಯಿಸುತ್ತಿದ್ದ ವೇಳೆ ತೆಲಂಗಾಣ ಪೊಲೀಸರು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.

Hawala money case in Hyderabad  people arrested in Hawala money case  Hyderabad Hawala money case  ಕೈಯಿಂದ ಕೈಗೆ ಬದಲಾಗುತ್ತಿದ್ದ ಹವಾಲಾ ಹಣ  ನಗದು ವಶಕ್ಕೆ ಪಡೆದ ಪೊಲೀಸರು  ತೆಲಂಗಾಣ ಪೊಲೀಸರು ವಶ  ಹವಾಲಾ ವ್ಯಾಪಾರಿ ಲಲಿತ್  ಬಂಧಿತರ ವಿರುದ್ಧ ಪ್ರಕರಣ
ಕೈಯಿಂದ ಕೈಗೆ ಬದಲಾಗುತ್ತಿದ್ದ ಹವಾಲಾ ಹಣ

ಹೈದರಾಬಾದ್(ತೆಲಂಗಾಣ)​: ಕೈಯಿಂದ ಕೈಗೆ ಬದಲಾಯಿಸುತ್ತಿದ್ದ ಭಾರಿ ಪ್ರಮಾಣದ ಹವಾಲಾ ಹಣವನ್ನು ಹೈದರಾಬಾದ್​ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ನಗರದ ಜುಬಿಲಿ ಹಿಲ್ಸ್ ಪೊಲೀಸರ ಪ್ರಕಾರ, ವಿಜಯನಗರ ಜಿಲ್ಲೆಯ ರಾಜಂ ತಾಲೂಕಿನ ಬಿ.ರಾಮು ಇಲ್ಲಿನ ಕೆಪಿಎಚ್‌ಬಿ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ದೆಹಲಿಯ ಪೋಲಾ ಸತ್ಯನಾರಾಯಣ ಅವರು ಜುಬಿಲಿ ಹಿಲ್ಸ್ ರಸ್ತೆಯಲ್ಲಿ ವಾಸಿಸುವ ವ್ಯಕ್ತಿಯಿಂದ 2.5 ಕೋಟಿ ರೂಪಾಯಿ ಹಣವನ್ನು ತೆಗೆದುಕೊಂಡು ಬೇಗಂಬಜಾರ್‌ನಲ್ಲಿ ವಾಸಿಸುವ ಹವಾಲಾ ವ್ಯಾಪಾರಿ ಲಲಿತ್​ಗೆ ನೀಡುವಂತೆ ಸೂಚಿಸಿದ್ದರು.

ಲಲಿತ್ ತನ್ನ ಬಳಿ ಕೆಲಸ ಮಾಡುತ್ತಿದ್ದ ಗುಜರಾತ್​ನ ಸುಧೀರ್ ಕುಮಾರ್ ಈಶ್ವರಲಾಲ್ ಪಟೇಲ್ ಮತ್ತು ರಾಜಸ್ಥಾನದ ಅಶೋಕ್ ಸಿಂಗ್​​ಗೆ ಆ ಹಣವನ್ನು ತರುವಂತೆ ಹೇಳಿದ್ದಾನೆ. ಈ ಕ್ರಮದಲ್ಲಿ ಇಬ್ಬರೂ ಶನಿವಾರ ರಾತ್ರಿ ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ 76ಕ್ಕೆ ತೆರಳಿ ರಾಮುದಿಂದ ನಗದು ತೆಗೆದುಕೊಂಡಿದ್ದರು. ಮಾಹಿತಿ ಪಡೆದ ಪೊಲೀಸರು ನಗದು ಬ್ಯಾಗ್ ಸಮೇತ ಮೂವರನ್ನು ಬಂಧಿಸಿದ್ದಾರೆ.

ಈ ಘಟನೆಯಲ್ಲಿ ಲಲಿತ್ ಮತ್ತು ಪೋಳ ಸತ್ಯನಾರಾಯಣ ತಲೆಮರೆಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ: ರೈಲಿನಲ್ಲಿ ದಾಖಲೆ ಇಲ್ಲದೆ 2 ಕೋಟಿ ರೂ ಸಾಗಾಟ; ಕರಾವಳಿಯಲ್ಲಿ ಮತ್ತೆ ಜೋರಾಯ್ತಾ ಹವಾಲ ದಂಧೆ?

ಹೈದರಾಬಾದ್(ತೆಲಂಗಾಣ)​: ಕೈಯಿಂದ ಕೈಗೆ ಬದಲಾಯಿಸುತ್ತಿದ್ದ ಭಾರಿ ಪ್ರಮಾಣದ ಹವಾಲಾ ಹಣವನ್ನು ಹೈದರಾಬಾದ್​ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ನಗರದ ಜುಬಿಲಿ ಹಿಲ್ಸ್ ಪೊಲೀಸರ ಪ್ರಕಾರ, ವಿಜಯನಗರ ಜಿಲ್ಲೆಯ ರಾಜಂ ತಾಲೂಕಿನ ಬಿ.ರಾಮು ಇಲ್ಲಿನ ಕೆಪಿಎಚ್‌ಬಿ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ದೆಹಲಿಯ ಪೋಲಾ ಸತ್ಯನಾರಾಯಣ ಅವರು ಜುಬಿಲಿ ಹಿಲ್ಸ್ ರಸ್ತೆಯಲ್ಲಿ ವಾಸಿಸುವ ವ್ಯಕ್ತಿಯಿಂದ 2.5 ಕೋಟಿ ರೂಪಾಯಿ ಹಣವನ್ನು ತೆಗೆದುಕೊಂಡು ಬೇಗಂಬಜಾರ್‌ನಲ್ಲಿ ವಾಸಿಸುವ ಹವಾಲಾ ವ್ಯಾಪಾರಿ ಲಲಿತ್​ಗೆ ನೀಡುವಂತೆ ಸೂಚಿಸಿದ್ದರು.

ಲಲಿತ್ ತನ್ನ ಬಳಿ ಕೆಲಸ ಮಾಡುತ್ತಿದ್ದ ಗುಜರಾತ್​ನ ಸುಧೀರ್ ಕುಮಾರ್ ಈಶ್ವರಲಾಲ್ ಪಟೇಲ್ ಮತ್ತು ರಾಜಸ್ಥಾನದ ಅಶೋಕ್ ಸಿಂಗ್​​ಗೆ ಆ ಹಣವನ್ನು ತರುವಂತೆ ಹೇಳಿದ್ದಾನೆ. ಈ ಕ್ರಮದಲ್ಲಿ ಇಬ್ಬರೂ ಶನಿವಾರ ರಾತ್ರಿ ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ 76ಕ್ಕೆ ತೆರಳಿ ರಾಮುದಿಂದ ನಗದು ತೆಗೆದುಕೊಂಡಿದ್ದರು. ಮಾಹಿತಿ ಪಡೆದ ಪೊಲೀಸರು ನಗದು ಬ್ಯಾಗ್ ಸಮೇತ ಮೂವರನ್ನು ಬಂಧಿಸಿದ್ದಾರೆ.

ಈ ಘಟನೆಯಲ್ಲಿ ಲಲಿತ್ ಮತ್ತು ಪೋಳ ಸತ್ಯನಾರಾಯಣ ತಲೆಮರೆಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ: ರೈಲಿನಲ್ಲಿ ದಾಖಲೆ ಇಲ್ಲದೆ 2 ಕೋಟಿ ರೂ ಸಾಗಾಟ; ಕರಾವಳಿಯಲ್ಲಿ ಮತ್ತೆ ಜೋರಾಯ್ತಾ ಹವಾಲ ದಂಧೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.