ETV Bharat / bharat

ಜನಿಸಿದ ಒಂದೇ ದಿನದಲ್ಲಿ ಶಿಶು ಸಾವನ್ನಪ್ಪಿದೆ ಎಂದು ಮರಣ ಪ್ರಮಾಣಪತ್ರ ನೀಡಿದ್ದ ವೈದ್ಯರು.. ಅಂತ್ಯಕ್ರಿಯೆ ವೇಳೆ ಅತ್ತ ಕೂಸು!

author img

By ETV Bharat Karnataka Team

Published : Oct 5, 2023, 12:02 PM IST

Updated : Oct 5, 2023, 12:54 PM IST

ಮಗು ಜನಿಸಿದ ಖುಷಿಯಲ್ಲಿದ್ದ ಹೆತ್ತವರಿಗೆ ವೈದ್ಯರ ಹೇಳಿಕೆ ಶಾಕ್​ ನೀಡಿತ್ತು. ನವಜಾತ ಶಿಶು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಕ್ಕೆ ಪೋಷಕರಿಗೆ ದಿಕ್ಕೇ ತೋಚದಂತಾಗಿತ್ತು.

The doctor declared the infant dead alive before cremation
The doctor declared the infant dead alive before cremation

ಗುವಾಹಟಿ(ಅಸ್ಸೋಂ): ಚಿಕಿತ್ಸೆ ಫಲಿಸದೇ ನವಜಾತ ಶಿಶು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ ಬಳಿಕ ಅಂತ್ಯ ಸಂಸ್ಕಾರ ನಡೆಸುವ ವೇಳೆ ಮಗು ಬದುಕಿರುವ ಘಟನೆ ಅಸ್ಸೋಂನ ಸಿಲ್ಚರ್​ ಟೌನ್​ನಲ್ಲಿ ನಡೆದಿದೆ. ರತನ್​ ದಾಸ್​ (29) ಎಂಬುವರ ಮಗು ಅದೃಷ್ಟವಶಾತ್​ ಅಂತ್ಯ ಸಂಸ್ಕಾರದ ವೇಳೆ ಜೀವಂತ ಇರುವುದು ಗೊತ್ತಾಗಿದೆ.

ಏನಿದು ಘಟನೆ: ರತನ್​ ದಾಸ್​​ ಅವರ ಆರು ತಿಂಗಳ ಗರ್ಭಿಣಿ ಹೆಂಡತಿ ಗರ್ಭಾವಸ್ಥೆಯಲ್ಲಿ ಉಂಟಾದ ತೊಂದರೆಯಿಂದಾಗಿ ಸಿಲ್ಚರ್​ನ ಖಾಸಗಿ ಆಸ್ಪತ್ರೆಗೆ ಮಂಗಳವಾರ ರಾತ್ರಿ ದಾಖಲಾಗಿದ್ದರು. ಈ ವೇಳೆ ಗರ್ಭಿಣಿಯ ಆರೋಗ್ಯದಲ್ಲಿ ತೊಂದರೆಯಾದ ಹಿನ್ನೆಲೆ ವೈದ್ಯರು ತಾಯಿ ಅಥವಾ ಮಗುವನ್ನು ಮಾತ್ರ ಬದುಕಿಸಲು ಸಾಧ್ಯ ಎಂದು ತಿಳಿಸಿದ್ದರು.

ಈ ವೇಳೆ ದಾಸ್​ ಮಗುವನ್ನು ಬದುಕಿಸುವಂತೆ ಅನುಮತಿ ನೀಡಿದ್ದಾರೆ. ಈ ವೇಳೆ ಅಕಾಲಿಕ ಮಗುವಿನ ಜನನ ನಡೆಸಲಾಗಿದೆ. ಆದರೆ, ಅವಧಿ ಪೂರ್ವವಾಗಿ ಮಗು ಹುಟ್ಟಿದ ಪರಿಣಾಮ ಮಗು ಚಿಕಿತ್ಸೆಯು ಫಲಕಾರಿಯಾಗದೇ, ಬುಧವಾರ ಬೆಳಗ್ಗೆ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ, ಆಸ್ಪತ್ರೆಯ ಸಿಬ್ಬಂದಿ ಮಗುವಿನ ದೇಹ ಮತ್ತು ಮರಣ ಪ್ರಮಾಣ ಪತ್ರವನ್ನು ಕೂಡ ನೀಡಿದ್ದರು.

ಸಾವನ್ನಪ್ಪಿದ ಮಗುವಿನ ದೇಹದ ಪಾರ್ಸೆಲ್​ ಅನ್ನು ನೀಡಿದ ಬಳಿಕ ಕುಟುಂಬಸ್ಥರು ಸಿಲ್ಚಾರ್​ನ ಶವಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಈ ವೇಳೆ ಮಗು ದೇಹವನ್ನು ಅಲುಗಾಡಿಸಿದ್ದು, ಉಸಿರಾಡಿದೆ. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು ಎಂದು ದಾಸ್​ ವಿವರಣೆ ನೀಡಿದ್ದಾರೆ.

ಜೀವಂತ ಮಗು ಸಾವನ್ನಪ್ಪಿದೆ ಎಂದು ತಪ್ಪು ಮಾಹಿತಿ ನೀಡಿದ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಮತ್ತು ನೆರೆ ಹೊರೆಯವರು ಪ್ರತಿಭಟನೆ ನಡೆಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಸ್ಥಳೀಯರಾಗಿರುವ ಸುಜೀತ್​ ದಾಸ್​ ಚೌಧರಿ, ಆಸ್ಪತ್ರೆಯ ಸಿಬ್ಬಂದಿ ಮಗುವಿಗೆ ಸೂಕ್ತ ಚಿಕಿತ್ಸೆ ನೀಡದೇ ಎಂಟು ಗಂಟೆಗಳ ಕಾಲ ಪ್ಯಾಕೆಟ್​ನಲ್ಲಿದ್ದಾರೆ. ಮಗು ಜೀವಂತವಾಗಿದ್ದರೂ ಸಾವನ್ನಪ್ಪಿದೆ ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಕುಟುಂಬಸ್ಥರು ಎಫ್​ಐಆರ್​ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಮಾತ್ರ ತಾವು ಎಂಟು ಗಂಟೆಗಳ ಚಿಕಿತ್ಸೆ ನೀಡಿ ವಿಫಲವಾದ ಬಳಿಕವೇ ಸಾವನ್ನು ಘೋಷಣೆ ಮಾಡಿದ್ದೇವೆ. ನಾವು ಪದೇ ಪದೇ ಮಗುವಿನ ಪರೀಕ್ಷೆ ನಡೆಸಿದ್ದು, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈ ಹಿನ್ನೆಲೆ ನಾವು ನವಜಾತ ಶಿಶು ಸಾವನ್ನಪ್ಪಿದೆ ಎಂದು ಕುಟುಂಬಸ್ಥರಿಗೆ ನೀಡಿದ್ದೇವೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. (ಐಎಎನ್​ಎಸ್)

ಇದನ್ನೂ ಓದಿ: IAS ಹುದ್ದೆಗೆ ರಾಜೀನಾಮೆ ನೀಡಿದ ಉತ್ತರ ಪ್ರದೇಶದ ವಿವಾದಿತ ಅಧಿಕಾರಿ; ಸಿನಿಮಾದಲ್ಲಿ ನಟಿಸಲು ನಿರ್ಧಾರ?

ಗುವಾಹಟಿ(ಅಸ್ಸೋಂ): ಚಿಕಿತ್ಸೆ ಫಲಿಸದೇ ನವಜಾತ ಶಿಶು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ ಬಳಿಕ ಅಂತ್ಯ ಸಂಸ್ಕಾರ ನಡೆಸುವ ವೇಳೆ ಮಗು ಬದುಕಿರುವ ಘಟನೆ ಅಸ್ಸೋಂನ ಸಿಲ್ಚರ್​ ಟೌನ್​ನಲ್ಲಿ ನಡೆದಿದೆ. ರತನ್​ ದಾಸ್​ (29) ಎಂಬುವರ ಮಗು ಅದೃಷ್ಟವಶಾತ್​ ಅಂತ್ಯ ಸಂಸ್ಕಾರದ ವೇಳೆ ಜೀವಂತ ಇರುವುದು ಗೊತ್ತಾಗಿದೆ.

ಏನಿದು ಘಟನೆ: ರತನ್​ ದಾಸ್​​ ಅವರ ಆರು ತಿಂಗಳ ಗರ್ಭಿಣಿ ಹೆಂಡತಿ ಗರ್ಭಾವಸ್ಥೆಯಲ್ಲಿ ಉಂಟಾದ ತೊಂದರೆಯಿಂದಾಗಿ ಸಿಲ್ಚರ್​ನ ಖಾಸಗಿ ಆಸ್ಪತ್ರೆಗೆ ಮಂಗಳವಾರ ರಾತ್ರಿ ದಾಖಲಾಗಿದ್ದರು. ಈ ವೇಳೆ ಗರ್ಭಿಣಿಯ ಆರೋಗ್ಯದಲ್ಲಿ ತೊಂದರೆಯಾದ ಹಿನ್ನೆಲೆ ವೈದ್ಯರು ತಾಯಿ ಅಥವಾ ಮಗುವನ್ನು ಮಾತ್ರ ಬದುಕಿಸಲು ಸಾಧ್ಯ ಎಂದು ತಿಳಿಸಿದ್ದರು.

ಈ ವೇಳೆ ದಾಸ್​ ಮಗುವನ್ನು ಬದುಕಿಸುವಂತೆ ಅನುಮತಿ ನೀಡಿದ್ದಾರೆ. ಈ ವೇಳೆ ಅಕಾಲಿಕ ಮಗುವಿನ ಜನನ ನಡೆಸಲಾಗಿದೆ. ಆದರೆ, ಅವಧಿ ಪೂರ್ವವಾಗಿ ಮಗು ಹುಟ್ಟಿದ ಪರಿಣಾಮ ಮಗು ಚಿಕಿತ್ಸೆಯು ಫಲಕಾರಿಯಾಗದೇ, ಬುಧವಾರ ಬೆಳಗ್ಗೆ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ, ಆಸ್ಪತ್ರೆಯ ಸಿಬ್ಬಂದಿ ಮಗುವಿನ ದೇಹ ಮತ್ತು ಮರಣ ಪ್ರಮಾಣ ಪತ್ರವನ್ನು ಕೂಡ ನೀಡಿದ್ದರು.

ಸಾವನ್ನಪ್ಪಿದ ಮಗುವಿನ ದೇಹದ ಪಾರ್ಸೆಲ್​ ಅನ್ನು ನೀಡಿದ ಬಳಿಕ ಕುಟುಂಬಸ್ಥರು ಸಿಲ್ಚಾರ್​ನ ಶವಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಈ ವೇಳೆ ಮಗು ದೇಹವನ್ನು ಅಲುಗಾಡಿಸಿದ್ದು, ಉಸಿರಾಡಿದೆ. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು ಎಂದು ದಾಸ್​ ವಿವರಣೆ ನೀಡಿದ್ದಾರೆ.

ಜೀವಂತ ಮಗು ಸಾವನ್ನಪ್ಪಿದೆ ಎಂದು ತಪ್ಪು ಮಾಹಿತಿ ನೀಡಿದ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಮತ್ತು ನೆರೆ ಹೊರೆಯವರು ಪ್ರತಿಭಟನೆ ನಡೆಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಸ್ಥಳೀಯರಾಗಿರುವ ಸುಜೀತ್​ ದಾಸ್​ ಚೌಧರಿ, ಆಸ್ಪತ್ರೆಯ ಸಿಬ್ಬಂದಿ ಮಗುವಿಗೆ ಸೂಕ್ತ ಚಿಕಿತ್ಸೆ ನೀಡದೇ ಎಂಟು ಗಂಟೆಗಳ ಕಾಲ ಪ್ಯಾಕೆಟ್​ನಲ್ಲಿದ್ದಾರೆ. ಮಗು ಜೀವಂತವಾಗಿದ್ದರೂ ಸಾವನ್ನಪ್ಪಿದೆ ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಕುಟುಂಬಸ್ಥರು ಎಫ್​ಐಆರ್​ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಮಾತ್ರ ತಾವು ಎಂಟು ಗಂಟೆಗಳ ಚಿಕಿತ್ಸೆ ನೀಡಿ ವಿಫಲವಾದ ಬಳಿಕವೇ ಸಾವನ್ನು ಘೋಷಣೆ ಮಾಡಿದ್ದೇವೆ. ನಾವು ಪದೇ ಪದೇ ಮಗುವಿನ ಪರೀಕ್ಷೆ ನಡೆಸಿದ್ದು, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈ ಹಿನ್ನೆಲೆ ನಾವು ನವಜಾತ ಶಿಶು ಸಾವನ್ನಪ್ಪಿದೆ ಎಂದು ಕುಟುಂಬಸ್ಥರಿಗೆ ನೀಡಿದ್ದೇವೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. (ಐಎಎನ್​ಎಸ್)

ಇದನ್ನೂ ಓದಿ: IAS ಹುದ್ದೆಗೆ ರಾಜೀನಾಮೆ ನೀಡಿದ ಉತ್ತರ ಪ್ರದೇಶದ ವಿವಾದಿತ ಅಧಿಕಾರಿ; ಸಿನಿಮಾದಲ್ಲಿ ನಟಿಸಲು ನಿರ್ಧಾರ?

Last Updated : Oct 5, 2023, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.