ETV Bharat / bharat

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಹೈದರಾಬಾದ್‌ ​ಬಿಜೆಪಿ ಶಾಸಕನ​ ವಿರುದ್ಧ ಪ್ರಕರಣ - ಹೈದರಾಬಾದ್​ನ ಬಿಜೆಪಿ ಶಾಸಕ ರಾಜಾಸಿಂಗ್​

ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಶಾಸಕ ರಾಜಾಸಿಂಗ್ ಮಾತನಾಡಿರುವ ವಿಡಿಯೋ ವೈರಲ್​ ಆಗಿದ್ದು, ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Telangana BJP MLA booked for hurting religious sentiments
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ​ಬಿಜೆಪಿ ಶಾಸಕ ರಾಜಾಸಿಂಗ್​ ವಿರುದ್ಧ ಕೇಸ್
author img

By

Published : Jun 8, 2022, 3:21 PM IST

ಹೈದರಾಬಾದ್​ (ತೆಲಂಗಾಣ): ನಿರ್ದಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಹೈದರಾಬಾದ್​ನ ಗೋಶಾಮಹಲ್​ ಕ್ಷೇತ್ರದ​ ಬಿಜೆಪಿ ಶಾಸಕ ರಾಜಾಸಿಂಗ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಸಕರ ವಿರುದ್ಧ ಉದ್ಯಮಿ ಮೊಹಮ್ಮದ್​​ ಅಲಿ ಎಂಬುವರು ನೀಡಿದ ದೂರಿನ ಮೇರೆಗೆ ಕಾಂಚನಭಾಗ್​ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​​ 295-ಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಇನ್​ಸ್ಪೆಕ್ಟರ್​​ ಪಿ.ಉಮಾ ಮಹೇಶ್ವರರಾವ್​ ತಿಳಿಸಿದ್ದಾರೆ.

ಸಮುದಾಯವೊಂದನ್ನು ಗುರಿಯಾಗಿಸಿ ರಾಜಾಸಿಂಗ್ ನೀಡಿರುವ ಹೇಳಿಕೆಯ ವೈರಲ್​ ವಿಡಿಯೋ ನನ್ನ ಬಳಿ ಇದೆ. ಇಂಥ ಹೇಳಿಕೆಯಿಂದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದ್ದು, ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅಲಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ: ನೂಪುರ್​ ಶರ್ಮಾ ಪರ ಬ್ಯಾಟಿಂಗ್ ಮಾಡಿದ ಕಂಗನಾ ರಣಾವತ್

ಹೈದರಾಬಾದ್​ (ತೆಲಂಗಾಣ): ನಿರ್ದಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಹೈದರಾಬಾದ್​ನ ಗೋಶಾಮಹಲ್​ ಕ್ಷೇತ್ರದ​ ಬಿಜೆಪಿ ಶಾಸಕ ರಾಜಾಸಿಂಗ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಸಕರ ವಿರುದ್ಧ ಉದ್ಯಮಿ ಮೊಹಮ್ಮದ್​​ ಅಲಿ ಎಂಬುವರು ನೀಡಿದ ದೂರಿನ ಮೇರೆಗೆ ಕಾಂಚನಭಾಗ್​ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​​ 295-ಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಇನ್​ಸ್ಪೆಕ್ಟರ್​​ ಪಿ.ಉಮಾ ಮಹೇಶ್ವರರಾವ್​ ತಿಳಿಸಿದ್ದಾರೆ.

ಸಮುದಾಯವೊಂದನ್ನು ಗುರಿಯಾಗಿಸಿ ರಾಜಾಸಿಂಗ್ ನೀಡಿರುವ ಹೇಳಿಕೆಯ ವೈರಲ್​ ವಿಡಿಯೋ ನನ್ನ ಬಳಿ ಇದೆ. ಇಂಥ ಹೇಳಿಕೆಯಿಂದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದ್ದು, ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅಲಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ: ನೂಪುರ್​ ಶರ್ಮಾ ಪರ ಬ್ಯಾಟಿಂಗ್ ಮಾಡಿದ ಕಂಗನಾ ರಣಾವತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.