ETV Bharat / bharat

ಹೆಣ್ಣು ಮಗುವಿನ ತಂದೆಯಾದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್

author img

By

Published : Mar 27, 2023, 1:01 PM IST

ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಹೆಣ್ಣು ಮಗುವಿನ ತಂದೆಯಾಗಿದ್ದು, ಟ್ವಿಟರ್​ನಲ್ಲಿ ಫೋಟೋ ಶೇರ್​​ ಮಾಡಿದ್ದಾರೆ.

Tejashwi Yadav
ತೇಜಸ್ವಿ ಯಾದವ್

ಪಾಟ್ನಾ : ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ಪತ್ನಿ ರಾಜಶ್ರೀ ಯಾದವ್ ತಂದೆ-ತಾಯಿಯಾಗಿದ್ದಾರೆ. ಇಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದು, ಈ ಕುರಿತು ಟ್ವೀಟ್​ ಮಾಡಿ ಸಿಹಿ ಸುದ್ದಿ ಹಂಚಿಕೊಂಡ ತೇಜಸ್ವಿ ಯಾದವ್, "ದೇವರು ಸಂತೋಷಪಟ್ಟು ಮಗಳ ರೂಪದಲ್ಲಿ ನನಗೆ ಉಡುಗೊರೆ ಕಳುಹಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

  • ईश्वर ने आनंदित होकर पुत्री रत्न के रूप में उपहार भेजा है। pic.twitter.com/UCikoi3RkM

    — Tejashwi Yadav (@yadavtejashwi) March 27, 2023 " class="align-text-top noRightClick twitterSection" data=" ">

2021ರ ಡಿಸೆಂಬರ್​ 9ರಂದು ತೇಜಸ್ವಿ ಯಾದವ್ ಅವರು ತಮ್ಮ ಬಹುಕಾಲದ ಗೆಳತಿ ರಾಚೆಲ್ ಗೊಡಿನ್ಹೋ ಅವರನ್ನು ವಿವಾಹವಾದರು. ಮದುವೆಯ ಬಳಿಕ ರಾಚೆಲ್ ಅವರು ರಾಜಶ್ರೀ ಯಾದವ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ರಾಚೆಲ್ ಮೂಲತಃ ಹರಿಯಾಣದವರಾಗಿದ್ದು, ಬಾಲ್ಯದಿಂದಲೂ ದೆಹಲಿಯಲ್ಲಿ ವಾಸವಾಗಿದ್ದರು. ದೆಹಲಿಯ ಆರ್.​ಕೆ.ಪುರಂನಲ್ಲಿರುವ ಡಿಪಿಎಸ್ ಶಾಲೆಯಲ್ಲಿ ತೇಜಸ್ವಿ ಯಾದವ್ ಮತ್ತು ರಾಜಶ್ರೀ ಯಾದವ್ ಒಟ್ಟಿಗೆ ವ್ಯಾಸಂಗ ಮಾಡಿದ್ದರು. ಮೊದಲಿನಿಂದಲೂ ಸ್ನೇಹಿತರಾಗಿದ್ದ ಅವರು, ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ಇದೀಗ, ದಂಪತಿ ಮೊದಲ ಮಗುವನ್ನು ಕುಟುಂಬಕ್ಕೆ ಬರಮಾಡಿಕೊಂಡಿದ್ದು, ತೇಜಸ್ವಿ ಯಾದವ್ ತಂದೆಯಾದ ಬಳಿಕ ಅವರ ಕುಟುಂಬಸ್ಥರು ಸೇರಿದಂತೆ ಹಲವು ರಾಜಕೀಯ ವ್ಯಕ್ತಿಗಳು ಮಗುವಿಗೆ ಆಶೀರ್ವಾದ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : 35 ವರ್ಷದ ನಂತ್ರ ಹೆಣ್ಣು ಮಗುವಿನ ಜನನ.. ಮನೆಗೆ ಕರೆತರಲು 4.5 ಲಕ್ಷ ರೂ. ನೀಡಿ ಹೆಲಿಕಾಪ್ಟರ್ ಬುಕ್​!

ರಾಷ್ಟ್ರೀಯ ಜನತಾ ದಳದ ನಾಯಕನ ಸಹೋದರಿ ರೋಹಿಣಿ ಆಚಾರ್ಯ ಕೂಡ ಟ್ವಿಟರ್​ನಲ್ಲಿ ತೇಜಸ್ವಿ ಯಾದವ್ ಅವರು ಮಗುವನ್ನು ಹಿಡಿದಿರುವ ಫೊಟೋವನ್ನು ಶೇರ್​ ಮಾಡಿ, ನನ್ನ ಮನೆ ಈಗ ಸಂತೋಷದ ಕ್ಷಣದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮಗುವಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ

पवित्र नवरात्र के दिनों में माता रानी के इस आशीर्वाद के लिए आपको एवं आपके पूरे परिवार को बहुत-बहुत बधाई तेजस्वी जी। बिटिया रानी को ख़ूब सारा दुलार एवं आशीर्वाद, ईश्वर आपके परिवार को सदा ख़ुश रखें। https://t.co/8C1pLLd6Nc

— Arvind Kejriwal (@ArvindKejriwal) March 27, 2023 " class="align-text-top noRightClick twitterSection" data=" ">

ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬಿಹಾರದ ಉಪ ಮುಖ್ಯಮಂತ್ರಿ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದ್ದು, "ನವರಾತ್ರಿಯಲ್ಲಿ ಮಾತಾ ರಾಣಿಯ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಇಡೀ ಕುಟುಂಬದ ಮೇಲಿದೆ. ಅಭಿನಂದನೆಗಳು ತೇಜಸ್ವಿ ಜೀ ಯವರೇ. ದೇವರು ನಿಮ್ಮ ಕುಟುಂಬವನ್ನು ಯಾವಾಗಲೂ ಆಶೀರ್ವದಿಸಲಿ" ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಗುವಿನ ಜನನ: 'ಭಾರತ' ಎಂದು ನಾಮಕರಣ

ಪರಿಸರ ಸಚಿವ ತೇಜ್ ಪ್ರತಾಪ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದು," ನವರಾತ್ರಿಯ ವೇಳೆ ದುರ್ಗಾ ಮಾತೆ ನಮ್ಮ ಕುಟುಂಬಕ್ಕೆ ಆಶೀರ್ವದಿಸಿದ್ದಾಳೆ. ಶೀಘ್ರದಲ್ಲೇ ಎಲ್ಲ ಸಮಸ್ಯೆಗಳು ಕೊನೆಗೊಳ್ಳುತ್ತವೆ" ಎಂದು ಹರಸಿದ್ದಾರೆ.

ಇದನ್ನೂ ಓದಿ : ಬಿಹಾರದಲ್ಲಿ 4 ಕಾಲು, 4 ಕೈಗಳಿರುವ ವಿಚಿತ್ರ ಮಗು ಜನನ: ಕುಟುಂಬಸ್ಥರು ಕಂಗಾಲು- ವಿಡಿಯೋ

ಇದನ್ನೂ ಓದಿ : ಮಗುವಿನ ಜನನ ಕುರಿತು ಘೋಷಿಸಲು ವಿಶೇಷ ಕಲಾಕೃತಿ ಹಂಚಿಕೊಂಡ ನಟಿ ಸೋನಂ ಕಪೂರ್

ಪಾಟ್ನಾ : ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ಪತ್ನಿ ರಾಜಶ್ರೀ ಯಾದವ್ ತಂದೆ-ತಾಯಿಯಾಗಿದ್ದಾರೆ. ಇಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದು, ಈ ಕುರಿತು ಟ್ವೀಟ್​ ಮಾಡಿ ಸಿಹಿ ಸುದ್ದಿ ಹಂಚಿಕೊಂಡ ತೇಜಸ್ವಿ ಯಾದವ್, "ದೇವರು ಸಂತೋಷಪಟ್ಟು ಮಗಳ ರೂಪದಲ್ಲಿ ನನಗೆ ಉಡುಗೊರೆ ಕಳುಹಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

  • ईश्वर ने आनंदित होकर पुत्री रत्न के रूप में उपहार भेजा है। pic.twitter.com/UCikoi3RkM

    — Tejashwi Yadav (@yadavtejashwi) March 27, 2023 " class="align-text-top noRightClick twitterSection" data=" ">

2021ರ ಡಿಸೆಂಬರ್​ 9ರಂದು ತೇಜಸ್ವಿ ಯಾದವ್ ಅವರು ತಮ್ಮ ಬಹುಕಾಲದ ಗೆಳತಿ ರಾಚೆಲ್ ಗೊಡಿನ್ಹೋ ಅವರನ್ನು ವಿವಾಹವಾದರು. ಮದುವೆಯ ಬಳಿಕ ರಾಚೆಲ್ ಅವರು ರಾಜಶ್ರೀ ಯಾದವ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ರಾಚೆಲ್ ಮೂಲತಃ ಹರಿಯಾಣದವರಾಗಿದ್ದು, ಬಾಲ್ಯದಿಂದಲೂ ದೆಹಲಿಯಲ್ಲಿ ವಾಸವಾಗಿದ್ದರು. ದೆಹಲಿಯ ಆರ್.​ಕೆ.ಪುರಂನಲ್ಲಿರುವ ಡಿಪಿಎಸ್ ಶಾಲೆಯಲ್ಲಿ ತೇಜಸ್ವಿ ಯಾದವ್ ಮತ್ತು ರಾಜಶ್ರೀ ಯಾದವ್ ಒಟ್ಟಿಗೆ ವ್ಯಾಸಂಗ ಮಾಡಿದ್ದರು. ಮೊದಲಿನಿಂದಲೂ ಸ್ನೇಹಿತರಾಗಿದ್ದ ಅವರು, ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ಇದೀಗ, ದಂಪತಿ ಮೊದಲ ಮಗುವನ್ನು ಕುಟುಂಬಕ್ಕೆ ಬರಮಾಡಿಕೊಂಡಿದ್ದು, ತೇಜಸ್ವಿ ಯಾದವ್ ತಂದೆಯಾದ ಬಳಿಕ ಅವರ ಕುಟುಂಬಸ್ಥರು ಸೇರಿದಂತೆ ಹಲವು ರಾಜಕೀಯ ವ್ಯಕ್ತಿಗಳು ಮಗುವಿಗೆ ಆಶೀರ್ವಾದ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : 35 ವರ್ಷದ ನಂತ್ರ ಹೆಣ್ಣು ಮಗುವಿನ ಜನನ.. ಮನೆಗೆ ಕರೆತರಲು 4.5 ಲಕ್ಷ ರೂ. ನೀಡಿ ಹೆಲಿಕಾಪ್ಟರ್ ಬುಕ್​!

ರಾಷ್ಟ್ರೀಯ ಜನತಾ ದಳದ ನಾಯಕನ ಸಹೋದರಿ ರೋಹಿಣಿ ಆಚಾರ್ಯ ಕೂಡ ಟ್ವಿಟರ್​ನಲ್ಲಿ ತೇಜಸ್ವಿ ಯಾದವ್ ಅವರು ಮಗುವನ್ನು ಹಿಡಿದಿರುವ ಫೊಟೋವನ್ನು ಶೇರ್​ ಮಾಡಿ, ನನ್ನ ಮನೆ ಈಗ ಸಂತೋಷದ ಕ್ಷಣದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮಗುವಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ

ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬಿಹಾರದ ಉಪ ಮುಖ್ಯಮಂತ್ರಿ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದ್ದು, "ನವರಾತ್ರಿಯಲ್ಲಿ ಮಾತಾ ರಾಣಿಯ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಇಡೀ ಕುಟುಂಬದ ಮೇಲಿದೆ. ಅಭಿನಂದನೆಗಳು ತೇಜಸ್ವಿ ಜೀ ಯವರೇ. ದೇವರು ನಿಮ್ಮ ಕುಟುಂಬವನ್ನು ಯಾವಾಗಲೂ ಆಶೀರ್ವದಿಸಲಿ" ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಗುವಿನ ಜನನ: 'ಭಾರತ' ಎಂದು ನಾಮಕರಣ

ಪರಿಸರ ಸಚಿವ ತೇಜ್ ಪ್ರತಾಪ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದು," ನವರಾತ್ರಿಯ ವೇಳೆ ದುರ್ಗಾ ಮಾತೆ ನಮ್ಮ ಕುಟುಂಬಕ್ಕೆ ಆಶೀರ್ವದಿಸಿದ್ದಾಳೆ. ಶೀಘ್ರದಲ್ಲೇ ಎಲ್ಲ ಸಮಸ್ಯೆಗಳು ಕೊನೆಗೊಳ್ಳುತ್ತವೆ" ಎಂದು ಹರಸಿದ್ದಾರೆ.

ಇದನ್ನೂ ಓದಿ : ಬಿಹಾರದಲ್ಲಿ 4 ಕಾಲು, 4 ಕೈಗಳಿರುವ ವಿಚಿತ್ರ ಮಗು ಜನನ: ಕುಟುಂಬಸ್ಥರು ಕಂಗಾಲು- ವಿಡಿಯೋ

ಇದನ್ನೂ ಓದಿ : ಮಗುವಿನ ಜನನ ಕುರಿತು ಘೋಷಿಸಲು ವಿಶೇಷ ಕಲಾಕೃತಿ ಹಂಚಿಕೊಂಡ ನಟಿ ಸೋನಂ ಕಪೂರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.