ETV Bharat / bharat

Digital Bribery: ಫೋನ್ ಪೇ, ಗೂಗಲ್ ಪೇ ಮೂಲಕ ಲಂಚ.. ಭ್ರಷ್ಟಾಚಾರ ನಿಗ್ರಹ ಇಲಾಖೆಗೆ ತಲೆನೋವಾದ ಡಿಜಿಟಲ್ ಲಂಚ ಪ್ರಕರಣಗಳು..

ಫೋನ್ ಪೇ, ಗೂಗಲ್ ಪೇ ಸೇರಿದಂತೆ ಡಿಜಿಟಲ್ ವಹಿವಾಟಿನತ್ತ ಲಂಚದ ಮೊರೆ ಹೋಗಿರುವುದರಿಂದ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳಿಗೆ ಹೊಸ ಸವಾಲು ಎದುರಾಗಿದೆ.

author img

By

Published : Jun 24, 2023, 7:34 PM IST

Digital Bribery
Digital Bribery

ಚೆನ್ನೈ (ತಮಿಳುನಾಡು): ಅಧಿಕಾರಿಗಳು ಲಂಚ ಕೇಳಿದರೆ ಅಥವಾ ಸ್ವೀಕರಿಸಿದರೆ, ನೊಂದ ಸಾರ್ವಜನಿಕರು ದೂರು ಸಲ್ಲಿಕೆ ಮಾಡಿದರೆ, ಸಾಮಾನ್ಯವಾಗಿ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ (ಡಿವಿಎಸಿ) ಪೊಲೀಸರು ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಅದರಲ್ಲೂ ಅಧಿಕಾರಿಗಳು ಲಂಚ ಪಡೆಯುತ್ತಿರುವ ಬಗ್ಗೆ ತಿಳಿಸಿದಾಗ ಲಂಚದ ಹಣ ನೀಡುವಂತೆ ಹೇಳಿ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಅವರು ಕೇಳಿದ ಲಂಚದ ಹಣಕ್ಕೆ ಕೆಮಿಕಲ್ ಹಾಕಿ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳನ್ನು ಬಲೆಗೆ ಬೀಳಿಸುತ್ತಾರೆ.

Google Pay, Phone Pay ಹಾಗೂ Paytmನಂತಹ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ವಹಿವಾಟುಗಳಲ್ಲಿ ಲಂಚವನ್ನು ಸ್ವೀಕರಿಸುವುದರಿಂದ ಇದನ್ನು ಕಂಡುಹಿಡಿಯುವುದು ತುಂಬಾ ಸವಾಲಿನ ಸಂಗತಿಯಾಗಿದೆ. ಲಂಚವನ್ನು ಸಾಬೀತು ಪಡಿಸುವುದು ಕೂಡ ಕಷ್ಟ ಎನ್ನುತ್ತಾರೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು.

ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳ ಮಾಹಿತಿ: ಕಳೆದ 4 ವರ್ಷಗಳಲ್ಲಿ ಚೆನ್ನೈನಲ್ಲಿ ಮಾತ್ರ, 2019ರಲ್ಲಿ 74 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 16 ಎಂಟ್ರಾಮೆಂಟ್ ಮತ್ತು 67 ಪ್ರಕರಣಗಳು 2020ರಲ್ಲಿ ದಾಖಲಾಗಿವೆ. ಜೊತೆಗೆ 18 ಎಂಟ್ರಾಪಮೆಂಟ್ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 2021ರಲ್ಲಿ 44 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 16 ಪ್ರಕರಣಗಳನ್ನು ಅಧಿಕಾರಿಗಳನ್ನು ಬಲೆಗೆ ಬೀಳಿಸಿ ದಾಖಲಿಸಲಾಗಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಕಳೆದ ವರ್ಷವೂ 39 ಪ್ರಕರಣಗಳು ಮತ್ತು 6 ಎಂಟ್ರಾಪಮೆಂಟ್ ಪ್ರಕರಣಗಳು ದಾಖಲಾಗಿವೆ ಎಂಬುದು ಗಮನಾರ್ಹ. ಈ 4 ವರ್ಷಗಳಲ್ಲಿ ದಾಖಲಾದ ಪ್ರಕರಣಗಳನ್ನು ಹೋಲಿಸಿದರೆ ಈ ವರ್ಷ ಮೇ ತಿಂಗಳವರೆಗೆ ಚೆನ್ನೈ ಒಂದರಲ್ಲೇ 11 ಕೇಸ್​ಗಳು ದಾಖಲಾಗಿವೆ. ಅಲ್ಲದೆ, ಮಾರ್ಚ್ ನಲ್ಲಿ ಪಲ್ಲವರಂನಲ್ಲಿ ರಿಜಿಸ್ಟ್ರಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಲಂಚವು ಡಿಜಿಟಲ್ ಆಗಿ ಹೋಗಿದೆ. ಇದರಿಂದ ಕಡಿಮೆ ದರದಲ್ಲಿ ಕೇಸ್​ಗಳು ವರದಿಯಾಗುತ್ತಿವೆ ಎಂದು ಅವರು ಹೇಳುತ್ತಾರೆ.

230 ಪ್ರಕರಣಗಳು ದಾಖಲು: ತಿರುವಳ್ಳೂರು, ಥೇಣಿ ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ಈ ವರ್ಷ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಕಾಂಚೀಪುರಂ, ತಿರುವಳ್ಳೂರು, ವೆಲ್ಲೂರು, ಕಡಲೂರು, ವಿಲ್ಲುಪುರಂ, ತಿರುವಣ್ಣಾಮಲೈ, ಚೆಂಗಲ್ಪಟ್ಟು, ತಿರುಪತ್ತೂರು, ರಾಣಿಪೆಟ್ಟೈ ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಕೇವಲ ಎಂಟು ಪ್ರಕರಣಗಳು ವರದಿಯಾಗಿವೆ. ತಿರುಚ್ಚಿ ಮಾತ್ರ ಗರಿಷ್ಠ ಏಳು ಪ್ರಕರಣಗಳನ್ನು ವರದಿ ಮಾಡಿದೆ. ಕಳೆದ ವರ್ಷವೊಂದರಲ್ಲೇ 230 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 100ರಿಂದ 120 ಮಂದಿಯನ್ನು ಗುರಿಯಾಗಿಸಿಕೊಂಡು ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಲಂಚ ಪಡೆಯುವುದು ಡಿಜಿಟಲ್ ಆಗಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ, ಪರಿಣಾಮ ಸಾರ್ವಜನಿಕರು ದೂರು ದಾಖಲಿಸಿದಾಗ, ಅಧಿಕಾರಿಗಳು ಸೆಲ್ ಫೋನ್ ಟವರ್ ಸ್ಥಳಗಳು ಮತ್ತು ಹಣದ ವಹಿವಾಟಿನ ಆಧಾರದ ಮೇಲೆ ಲಂಚವನ್ನು ಪಡೆದಿರುವವರನ್ನು ಕಂಡುಹಿಡಿಯುತ್ತಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಬೇನಾಮಿ ಹೆಸರಿನಲ್ಲಿ ಹಣ ಪಡೆಯಲಾಗುತ್ತದೆ ಎಂಬ ಬಗ್ಗೆ ತನಿಖೆ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಲಂಚ ಪಡೆಯುವುದು ಡಿಜಿಟಲ್ ಆಗಿರುವುದರಿಂದ, ಸಾರ್ವಜನಿಕರು ಅಹವಾಲು ಸಲ್ಲಿಸಿದರೆ ಮಾತ್ರ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Fake License Scam: 500ಕ್ಕೂ ಹೆಚ್ಚು ನಕಲಿ ಡ್ರೈವಿಂಗ್ ಲೈಸನ್ಸ್​ಗಳು ವಶಕ್ಕೆ, ಇಬ್ಬರು ಆರೋಪಿಗಳು ಅಂದರ್

ಚೆನ್ನೈ (ತಮಿಳುನಾಡು): ಅಧಿಕಾರಿಗಳು ಲಂಚ ಕೇಳಿದರೆ ಅಥವಾ ಸ್ವೀಕರಿಸಿದರೆ, ನೊಂದ ಸಾರ್ವಜನಿಕರು ದೂರು ಸಲ್ಲಿಕೆ ಮಾಡಿದರೆ, ಸಾಮಾನ್ಯವಾಗಿ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ (ಡಿವಿಎಸಿ) ಪೊಲೀಸರು ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಅದರಲ್ಲೂ ಅಧಿಕಾರಿಗಳು ಲಂಚ ಪಡೆಯುತ್ತಿರುವ ಬಗ್ಗೆ ತಿಳಿಸಿದಾಗ ಲಂಚದ ಹಣ ನೀಡುವಂತೆ ಹೇಳಿ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಅವರು ಕೇಳಿದ ಲಂಚದ ಹಣಕ್ಕೆ ಕೆಮಿಕಲ್ ಹಾಕಿ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳನ್ನು ಬಲೆಗೆ ಬೀಳಿಸುತ್ತಾರೆ.

Google Pay, Phone Pay ಹಾಗೂ Paytmನಂತಹ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ವಹಿವಾಟುಗಳಲ್ಲಿ ಲಂಚವನ್ನು ಸ್ವೀಕರಿಸುವುದರಿಂದ ಇದನ್ನು ಕಂಡುಹಿಡಿಯುವುದು ತುಂಬಾ ಸವಾಲಿನ ಸಂಗತಿಯಾಗಿದೆ. ಲಂಚವನ್ನು ಸಾಬೀತು ಪಡಿಸುವುದು ಕೂಡ ಕಷ್ಟ ಎನ್ನುತ್ತಾರೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು.

ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳ ಮಾಹಿತಿ: ಕಳೆದ 4 ವರ್ಷಗಳಲ್ಲಿ ಚೆನ್ನೈನಲ್ಲಿ ಮಾತ್ರ, 2019ರಲ್ಲಿ 74 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 16 ಎಂಟ್ರಾಮೆಂಟ್ ಮತ್ತು 67 ಪ್ರಕರಣಗಳು 2020ರಲ್ಲಿ ದಾಖಲಾಗಿವೆ. ಜೊತೆಗೆ 18 ಎಂಟ್ರಾಪಮೆಂಟ್ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 2021ರಲ್ಲಿ 44 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 16 ಪ್ರಕರಣಗಳನ್ನು ಅಧಿಕಾರಿಗಳನ್ನು ಬಲೆಗೆ ಬೀಳಿಸಿ ದಾಖಲಿಸಲಾಗಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಕಳೆದ ವರ್ಷವೂ 39 ಪ್ರಕರಣಗಳು ಮತ್ತು 6 ಎಂಟ್ರಾಪಮೆಂಟ್ ಪ್ರಕರಣಗಳು ದಾಖಲಾಗಿವೆ ಎಂಬುದು ಗಮನಾರ್ಹ. ಈ 4 ವರ್ಷಗಳಲ್ಲಿ ದಾಖಲಾದ ಪ್ರಕರಣಗಳನ್ನು ಹೋಲಿಸಿದರೆ ಈ ವರ್ಷ ಮೇ ತಿಂಗಳವರೆಗೆ ಚೆನ್ನೈ ಒಂದರಲ್ಲೇ 11 ಕೇಸ್​ಗಳು ದಾಖಲಾಗಿವೆ. ಅಲ್ಲದೆ, ಮಾರ್ಚ್ ನಲ್ಲಿ ಪಲ್ಲವರಂನಲ್ಲಿ ರಿಜಿಸ್ಟ್ರಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಲಂಚವು ಡಿಜಿಟಲ್ ಆಗಿ ಹೋಗಿದೆ. ಇದರಿಂದ ಕಡಿಮೆ ದರದಲ್ಲಿ ಕೇಸ್​ಗಳು ವರದಿಯಾಗುತ್ತಿವೆ ಎಂದು ಅವರು ಹೇಳುತ್ತಾರೆ.

230 ಪ್ರಕರಣಗಳು ದಾಖಲು: ತಿರುವಳ್ಳೂರು, ಥೇಣಿ ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ಈ ವರ್ಷ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಕಾಂಚೀಪುರಂ, ತಿರುವಳ್ಳೂರು, ವೆಲ್ಲೂರು, ಕಡಲೂರು, ವಿಲ್ಲುಪುರಂ, ತಿರುವಣ್ಣಾಮಲೈ, ಚೆಂಗಲ್ಪಟ್ಟು, ತಿರುಪತ್ತೂರು, ರಾಣಿಪೆಟ್ಟೈ ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಕೇವಲ ಎಂಟು ಪ್ರಕರಣಗಳು ವರದಿಯಾಗಿವೆ. ತಿರುಚ್ಚಿ ಮಾತ್ರ ಗರಿಷ್ಠ ಏಳು ಪ್ರಕರಣಗಳನ್ನು ವರದಿ ಮಾಡಿದೆ. ಕಳೆದ ವರ್ಷವೊಂದರಲ್ಲೇ 230 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 100ರಿಂದ 120 ಮಂದಿಯನ್ನು ಗುರಿಯಾಗಿಸಿಕೊಂಡು ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಲಂಚ ಪಡೆಯುವುದು ಡಿಜಿಟಲ್ ಆಗಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ, ಪರಿಣಾಮ ಸಾರ್ವಜನಿಕರು ದೂರು ದಾಖಲಿಸಿದಾಗ, ಅಧಿಕಾರಿಗಳು ಸೆಲ್ ಫೋನ್ ಟವರ್ ಸ್ಥಳಗಳು ಮತ್ತು ಹಣದ ವಹಿವಾಟಿನ ಆಧಾರದ ಮೇಲೆ ಲಂಚವನ್ನು ಪಡೆದಿರುವವರನ್ನು ಕಂಡುಹಿಡಿಯುತ್ತಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಬೇನಾಮಿ ಹೆಸರಿನಲ್ಲಿ ಹಣ ಪಡೆಯಲಾಗುತ್ತದೆ ಎಂಬ ಬಗ್ಗೆ ತನಿಖೆ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಲಂಚ ಪಡೆಯುವುದು ಡಿಜಿಟಲ್ ಆಗಿರುವುದರಿಂದ, ಸಾರ್ವಜನಿಕರು ಅಹವಾಲು ಸಲ್ಲಿಸಿದರೆ ಮಾತ್ರ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Fake License Scam: 500ಕ್ಕೂ ಹೆಚ್ಚು ನಕಲಿ ಡ್ರೈವಿಂಗ್ ಲೈಸನ್ಸ್​ಗಳು ವಶಕ್ಕೆ, ಇಬ್ಬರು ಆರೋಪಿಗಳು ಅಂದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.