ETV Bharat / bharat

ಲೋಕಸಭೆ ಕಲಾಪ: ಸುಗಮ ಕಲಾಪಕ್ಕೆ ರಾಜನಾಥ್ ಮನವಿ... ಸದನದಲ್ಲೂ ರೈತರ ಕಿಚ್ಚು

ಲೋಕಸಭೆ ಕಪಾಲದಲ್ಲಿ ರೈತ ಆಂದೋಲನದ ಕುರಿತ ಚರ್ಚೆ ಬಿರುಸು ಪಡದಿತ್ತು. ಪ್ರತಿಪಕ್ಷಗಳು ಆಡಳಿತರೂಢ ಬಿಜೆಪಿ ರೈತರ ಅಸ್ತ್ರ ಪ್ರಯೋಗಿಸಿ ಗದ್ದಲಕ್ಕೆ ಕಾರಣವಾದವು. ರಾಷ್ಟ್ರಪತಿ ಭಾಷಣದ ವಂದನಾ ಸಮರ್ಪಣೆಗೂ ಅಡ್ಡಿಯಾಗಿದ್ದು, ಬಳಿಕ ಸ್ಪೀಕರ್​ ಹಾಗೂ ಸಚಿವ ರಾಜನಾಥ್ ಸಿಂಗ್ ಸುಗಮ ಕಲಾಪಕ್ಕೆ ಮನವಿ ಮಾಡಿದರು.

author img

By

Published : Feb 9, 2021, 12:20 AM IST

Lok Sabha,
ಲೋಕಸಭೆ ಕಲಾಪ

ನವದೆಹಲಿ: ಲೋಕಸಭೆ ಕಲಾಪ ಮಧ್ಯರಾತ್ರಿಯವರೆಗೂ ನಡೆಯಲಿದ್ದು, ರಾಷ್ಟ್ರಪತಿ ಭಾಷಣ ವಂದನಾ ಸಮರ್ಪಣೆ ನಡೆಯಲಿದೆ. ಆದರೆ ಇದಕ್ಕೂ ಮೊದಲು ಕಲಾಪಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದವು. ಕಲಾಪದ ಆರಂಭದಿಂದಲೂ ಪ್ರತಿಪಕ್ಷಗಳು ಗದ್ದಲ ಮಾಡಿ ಕೃಷಿ ಮಸೂದೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದವು.

ಇನ್ನು ಗದ್ದಲದ ನಡುವೆ ಕಲಾಪವು ಸುಗಮವಾಗಿ ನಡೆಸಲು ರಕ್ಷಣಾ ಸಚಿವ ರಾಜನಾಥ್​ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು. ರಾಷ್ಟ್ರಪತಿಗಳ ಭಾಷಣದ ಮೇಲೆ ನಿರ್ಣಯ ಅಂಗೀಕರಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದ್ದು, ಅದಕ್ಕಾಗಿ ಗೌರವ ಹಾಗೂ ಅದನ್ನು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ. ಲೋಕಸಭೆಯಲ್ಲಿ ಈ ಸಂಪ್ರದಾಯ ಮುರಿಯಬಾರದು ಎಂದು ಮನವಿ ಮಾಡಿದರು. ಬಳಿಕ ಈ ಮನವಿಯನ್ನು ಪ್ರತಿಯೊಬ್ಬ ಸದಸ್ಯರು ಒಪ್ಪಿಕೊಂಡು ವಂದನಾ ನಿರ್ಣಯಕ್ಕೆ ಅನುವು ಮಾಡಿಕೊಡಲಾಯಿತು.

ಈ ವಿಷಯವನ್ನು ಇಟ್ಟುಕೊಂಡು ಸದನದ ಬಾವಿಗಿಳಿದ ವಿಪಕ್ಷಗಳು ಗದ್ದಲ ಸೃಷ್ಟಿಸಿದವು. ಈ ಹಿನ್ನೆಲೆ ಸಭಾಪತಿ ಓಮ್​ ಬಿರ್ಲಾ ಕಲಾಪವನ್ನು ಕೆಲ ಕಾಲ ಮುಂದೂಡಿದ್ದರು. ಇಂದಿನ ಕಲಾಪದಲ್ಲಿ ರೈತ ಹೋರಾಟ ಕುರಿತ ಚರ್ಚೆ ಸದನದಲ್ಲಿ ಪ್ರತಿಧ್ವನಿಸಿತು. ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಜನವರಿ 26ರ ಗಲಭೆಗೆ ಬಿಜೆಪಿಯೇ ನೇರ ಕಾರಣ ಎಂದು ಆರೋಪಿಸಿದರು.

ಜನವರಿ 26ರಂದು ದೆಹಲಿಯ ಕೆಂಪುಕೋಟೆಯ ಬಳಿ ಎಂದಿಗಿಂತ ಹೆಚ್ಚಿನ ಭದ್ರತೆ ಇರಬೇಕಿತ್ತು. ಹೀಗಾದರೂ ಕೆಂಪುಕೋಟೆಯೊಳಗೆ ನುಗ್ಗಲು ಬಿಟ್ಟಿದ್ದು ಯಾರು. ನೀವು ಕಳುಹಿಸಿದ ಜನರೇ ರೈತರಂತೆ ಕೋಟೆಯೊಳಗೆ ನುಗ್ಗಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಈ ವೇಳೆ ಮಾತನಾಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಾಗ್ದಾಳಿ ನಡೆಸಿದರು. 2019ರಲ್ಲಿ ಇದೇ ಸಭೆಯಲ್ಲಿ ಸಿಎಎ ಕಾಯ್ದೆ ಜಾರಿ ಮಾಡಲಾಯಿತು. ಇದರಿಂದಾಗಿ ದಶಕಗಳಿಂದ ನಮ್ಮ ದೇಶದಲ್ಲಿ ವಾಸಿಸಿರುವ ಕೋಟ್ಯಂತರ ಜನರು ಅಭದ್ರತೆಗೆ ದೂಡಿದರು. ಆದರೆ 2020ರ ಡಿಸೆಂಬರ್ ವೇಳೆಗೆ ಈ ಕಾಯ್ದೆ ಜಾರಿಗೆ ಬರುವ ನಿಯಮಗಳನ್ನು ಇನ್ನೂ ಸಿದ್ಧಪಡಿಸಲಾಗಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಸದನದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ಕೈ ನಾಯಕ ಚೌಧರಿ ಗುಡುಗು..

ನವದೆಹಲಿ: ಲೋಕಸಭೆ ಕಲಾಪ ಮಧ್ಯರಾತ್ರಿಯವರೆಗೂ ನಡೆಯಲಿದ್ದು, ರಾಷ್ಟ್ರಪತಿ ಭಾಷಣ ವಂದನಾ ಸಮರ್ಪಣೆ ನಡೆಯಲಿದೆ. ಆದರೆ ಇದಕ್ಕೂ ಮೊದಲು ಕಲಾಪಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದವು. ಕಲಾಪದ ಆರಂಭದಿಂದಲೂ ಪ್ರತಿಪಕ್ಷಗಳು ಗದ್ದಲ ಮಾಡಿ ಕೃಷಿ ಮಸೂದೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದವು.

ಇನ್ನು ಗದ್ದಲದ ನಡುವೆ ಕಲಾಪವು ಸುಗಮವಾಗಿ ನಡೆಸಲು ರಕ್ಷಣಾ ಸಚಿವ ರಾಜನಾಥ್​ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು. ರಾಷ್ಟ್ರಪತಿಗಳ ಭಾಷಣದ ಮೇಲೆ ನಿರ್ಣಯ ಅಂಗೀಕರಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದ್ದು, ಅದಕ್ಕಾಗಿ ಗೌರವ ಹಾಗೂ ಅದನ್ನು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ. ಲೋಕಸಭೆಯಲ್ಲಿ ಈ ಸಂಪ್ರದಾಯ ಮುರಿಯಬಾರದು ಎಂದು ಮನವಿ ಮಾಡಿದರು. ಬಳಿಕ ಈ ಮನವಿಯನ್ನು ಪ್ರತಿಯೊಬ್ಬ ಸದಸ್ಯರು ಒಪ್ಪಿಕೊಂಡು ವಂದನಾ ನಿರ್ಣಯಕ್ಕೆ ಅನುವು ಮಾಡಿಕೊಡಲಾಯಿತು.

ಈ ವಿಷಯವನ್ನು ಇಟ್ಟುಕೊಂಡು ಸದನದ ಬಾವಿಗಿಳಿದ ವಿಪಕ್ಷಗಳು ಗದ್ದಲ ಸೃಷ್ಟಿಸಿದವು. ಈ ಹಿನ್ನೆಲೆ ಸಭಾಪತಿ ಓಮ್​ ಬಿರ್ಲಾ ಕಲಾಪವನ್ನು ಕೆಲ ಕಾಲ ಮುಂದೂಡಿದ್ದರು. ಇಂದಿನ ಕಲಾಪದಲ್ಲಿ ರೈತ ಹೋರಾಟ ಕುರಿತ ಚರ್ಚೆ ಸದನದಲ್ಲಿ ಪ್ರತಿಧ್ವನಿಸಿತು. ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಜನವರಿ 26ರ ಗಲಭೆಗೆ ಬಿಜೆಪಿಯೇ ನೇರ ಕಾರಣ ಎಂದು ಆರೋಪಿಸಿದರು.

ಜನವರಿ 26ರಂದು ದೆಹಲಿಯ ಕೆಂಪುಕೋಟೆಯ ಬಳಿ ಎಂದಿಗಿಂತ ಹೆಚ್ಚಿನ ಭದ್ರತೆ ಇರಬೇಕಿತ್ತು. ಹೀಗಾದರೂ ಕೆಂಪುಕೋಟೆಯೊಳಗೆ ನುಗ್ಗಲು ಬಿಟ್ಟಿದ್ದು ಯಾರು. ನೀವು ಕಳುಹಿಸಿದ ಜನರೇ ರೈತರಂತೆ ಕೋಟೆಯೊಳಗೆ ನುಗ್ಗಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಈ ವೇಳೆ ಮಾತನಾಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಾಗ್ದಾಳಿ ನಡೆಸಿದರು. 2019ರಲ್ಲಿ ಇದೇ ಸಭೆಯಲ್ಲಿ ಸಿಎಎ ಕಾಯ್ದೆ ಜಾರಿ ಮಾಡಲಾಯಿತು. ಇದರಿಂದಾಗಿ ದಶಕಗಳಿಂದ ನಮ್ಮ ದೇಶದಲ್ಲಿ ವಾಸಿಸಿರುವ ಕೋಟ್ಯಂತರ ಜನರು ಅಭದ್ರತೆಗೆ ದೂಡಿದರು. ಆದರೆ 2020ರ ಡಿಸೆಂಬರ್ ವೇಳೆಗೆ ಈ ಕಾಯ್ದೆ ಜಾರಿಗೆ ಬರುವ ನಿಯಮಗಳನ್ನು ಇನ್ನೂ ಸಿದ್ಧಪಡಿಸಲಾಗಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಸದನದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ಕೈ ನಾಯಕ ಚೌಧರಿ ಗುಡುಗು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.