ETV Bharat / bharat

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯೋಧ

author img

By

Published : Apr 21, 2021, 5:37 PM IST

ತಾರಕೇಶ್ವರ ರಾವ್ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಇದೇ ಕಾರಣ ಇರಬಹುದೆಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ..

SSB jawan from Srikakulam commits suicide in Siliguri
ಆತ್ಮಹತ್ಯೆ ಮಾಡಿಕೊಂಡ ಯೋಧ

ಸಿಲಿಗುರಿ (ಪಶ್ಚಿಮ ಬಂಗಾಳ): ಅನಾರೋಗ್ಯದಿಂದ ಬಳಲುತ್ತಿದ್ದ ಯೋಧನೊಬ್ಬ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಚೌದರಿಕೊಟ್ಟೂರಿನ ರೊಕ್ಕಂ ತಾರಕೇಶ್ವರ ರಾವ್ ಆತ್ಮಹತ್ಯೆ ಮಾಡಿಕೊಂಡ (ಎಸ್​ಎಸ್​ಬಿ) ಯೋಧ ಎಂದು ತಿಳಿದು ಬಂದಿದೆ.

ನಕ್ಸಲ್ಬಾರಿ ಚೆಕ್‌ಪೋಸ್ಟ್‌ನಲ್ಲಿ ಬಂದೂಕಿನಂದ ಹೊರ ಬಂದ ಶಬ್ದ ಕೇಳುತ್ತಿದ್ದಂತೆ ಸ್ಥಳಕ್ಕೆ ತೆರಳಿ ನೋಡಿದಾಗ ತಾರಕೇಶ್ವರ ರಾವ್ ತನ್ನಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದು ಗೊತ್ತಾಗಿದೆ. ಅಲ್ಲಿದ್ದ ಹಿರಿಯ ಅಧಿಕಾರಿಗಳು ಈ ಬಗ್ಗೆ ಖಚಿತಪಡಿಸಿಕೊಂಡು ಯೋಧನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

SSB jawan from Srikakulam commits suicide in Siliguri
ಆತ್ಮಹತ್ಯೆ ಮಾಡಿಕೊಂಡ ಯೋಧ

ತಾರಕೇಶ್ವರ ರಾವ್ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಇದೇ ಕಾರಣ ಇರಬಹುದೆಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

ಮೃತ ತಂದೆ ಪ್ರಭಾಕರ ರಾವ್ ಅದೇ ಗ್ರಾಮದಲ್ಲಿದ್ದರೆ, ಅವರ ತಾಯಿ ಜಯಲಕ್ಷ್ಮಿ ರಾಜಮಂಡ್ರಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿದ್ದಾರೆ. ಯೋಧನ ಪತ್ನಿ ಲಕ್ಷ್ಮಿ ಪ್ರಸನ್ನ ತನ್ನ ಮಗಳು ಶಿವಾನಿಯೊಂದಿಗೆ ಒಡಿಶಾದ ಕಾಶಿನಗರದಲ್ಲಿ ತನ್ನ ಹೆತ್ತವರ ಮನೆಯಲ್ಲಿದ್ದಾಳೆ.

ಸಿಲಿಗುರಿ (ಪಶ್ಚಿಮ ಬಂಗಾಳ): ಅನಾರೋಗ್ಯದಿಂದ ಬಳಲುತ್ತಿದ್ದ ಯೋಧನೊಬ್ಬ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಚೌದರಿಕೊಟ್ಟೂರಿನ ರೊಕ್ಕಂ ತಾರಕೇಶ್ವರ ರಾವ್ ಆತ್ಮಹತ್ಯೆ ಮಾಡಿಕೊಂಡ (ಎಸ್​ಎಸ್​ಬಿ) ಯೋಧ ಎಂದು ತಿಳಿದು ಬಂದಿದೆ.

ನಕ್ಸಲ್ಬಾರಿ ಚೆಕ್‌ಪೋಸ್ಟ್‌ನಲ್ಲಿ ಬಂದೂಕಿನಂದ ಹೊರ ಬಂದ ಶಬ್ದ ಕೇಳುತ್ತಿದ್ದಂತೆ ಸ್ಥಳಕ್ಕೆ ತೆರಳಿ ನೋಡಿದಾಗ ತಾರಕೇಶ್ವರ ರಾವ್ ತನ್ನಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದು ಗೊತ್ತಾಗಿದೆ. ಅಲ್ಲಿದ್ದ ಹಿರಿಯ ಅಧಿಕಾರಿಗಳು ಈ ಬಗ್ಗೆ ಖಚಿತಪಡಿಸಿಕೊಂಡು ಯೋಧನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

SSB jawan from Srikakulam commits suicide in Siliguri
ಆತ್ಮಹತ್ಯೆ ಮಾಡಿಕೊಂಡ ಯೋಧ

ತಾರಕೇಶ್ವರ ರಾವ್ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಇದೇ ಕಾರಣ ಇರಬಹುದೆಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

ಮೃತ ತಂದೆ ಪ್ರಭಾಕರ ರಾವ್ ಅದೇ ಗ್ರಾಮದಲ್ಲಿದ್ದರೆ, ಅವರ ತಾಯಿ ಜಯಲಕ್ಷ್ಮಿ ರಾಜಮಂಡ್ರಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿದ್ದಾರೆ. ಯೋಧನ ಪತ್ನಿ ಲಕ್ಷ್ಮಿ ಪ್ರಸನ್ನ ತನ್ನ ಮಗಳು ಶಿವಾನಿಯೊಂದಿಗೆ ಒಡಿಶಾದ ಕಾಶಿನಗರದಲ್ಲಿ ತನ್ನ ಹೆತ್ತವರ ಮನೆಯಲ್ಲಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.