ETV Bharat / bharat

ಲಂಕಾ ತಂಡದಲ್ಲಿ ಕೋವಿಡ್​: IND vs SL ಕ್ರಿಕೆಟ್​ ಸರಣಿ ಜು.13ರ ಬದಲು ಜು.17ಕ್ಕೆ ಆರಂಭ?

author img

By

Published : Jul 9, 2021, 8:54 PM IST

ಜುಲೈ 13ರಿಂದ ಆರಂಭವಾಗಬೇಕಿದ್ದ ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್​​ ಸರಣಿ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಹಾಗಾಗಿ, ಟೂರ್ನಿ ಕೆಲ ದಿನಗಳ ಕಾಲ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

Sri Lanka-India
Sri Lanka-India

ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್​ ಸರಣಿಗೂ ಕೊರೊನಾ ವೈರಸ್​ ಕರಿಛಾಯೆ ಬಿದ್ದಿದ್ದು, ಉಭಯ ತಂಡಗಳ ನಡುವಿನ ಕ್ರಿಕೆಟ್​ ಸರಣಿ ಜುಲೈ 13ರ ಬದಲಾಗಿ ಜುಲೈ 17ರಿಂದ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಇಂಗ್ಲೆಂಡ್​ ಪ್ರವಾಸ ಮುಗಿಸಿ ಶ್ರೀಲಂಕಾ ತಂಡ ನಿನ್ನೆ ತವರಿಗೆ ವಾಪಸ್​ ಆಗಿದೆ. ಈ ವೇಳೆ ತಂಡದ ಬ್ಯಾಟಿಂಗ್​ ಕೋಚ್​ ಸೇರಿ ಇಬ್ಬರಿಗೆ ಕೊರೊನಾ ಸೋಂಕು ದೃಢಗೊಂಡಿದೆ. ಹೀಗಾಗಿ ಸಂಪೂರ್ಣ ತಂಡ ಕ್ವಾರಂಟೈನ್​ಗೊಳಗಾಗಿದೆ. ಮುಂದಿನ ಕೆಲ ದಿನಗಳ ಕಾಲ ಎಲ್ಲರೂ ಕ್ವಾರಂಟೈನ್​​ನಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಬೇರೆ ದಾರಿ ಇಲ್ಲದೇ ಉಭಯ ತಂಡಗಳ ನಡುವಿನ ಕ್ರಿಕೆಟ್​ ಸರಣಿ ಮುಂದೂಡಿಕೆ ಮಾಡಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿರಿ: ಅಣ್ಣನ ಹಾದಿಯಲ್ಲೇ ತಂಗಿಯ ಹೆಜ್ಜೆ... ಹೊಸ ಪಕ್ಷ ಸ್ಥಾಪಿಸಿದ ಜಗನ್​ ಸಹೋದರಿ

ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ 'ಬಿ' ತಂಡ ಮೈದಾನಕ್ಕಿಳಿಸಲು ಯೋಜನೆ ಹಾಕಿಕೊಂಡಿದೆ. ಆದರೆ ಆ ತಂಡದಲ್ಲಿ ಯಾವುದೇ ಪ್ರಮುಖ ಪ್ಲೇಯರ್ಸ್​​ ಇಲ್ಲದ ಕಾರಣ ಸರಣಿ ಕೆಲವು ದಿನಗಳ ಕಾಲ ಮುಂದೂಡಿಕೆ ಮಾಡಿ, ಇಂಗ್ಲೆಂಡ್​ ಪ್ರವಾಸದಲ್ಲಿದ್ದ ತಂಡದಿಂದಲೇ ಕ್ರಿಕೆಟ್​ ಆಡಿಸಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಕ್ರಿಕೆಟ್ ಮಂಡಳಿ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಆದರೆ ನಾಳೆ ಸಂಜೆಯ ವೇಳೆಗೆ ಮಹತ್ವದ ನಿರ್ಧಾರ ಬರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿರಿ: 'ಸಮವಸ್ತ್ರ ತೆಗೆದು ಜಗಳಕ್ಕೆ ಬನ್ನಿ, 5 ನಿಮಿಷದಲ್ಲಿ ಸೋಲಿಸ್ತೀವಿ': ತಪ್ಪೆಸಗಿಯೂ 'ಜೋಡಿ ಹಕ್ಕಿ'ಗಳ ತೋಳ್ಬಲ ಪ್ರದರ್ಶನ!

ಭಾರತ-ಶ್ರೀಲಂಕಾ ಮಧ್ಯೆ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ಕೊಲಂಬೊ ಮೈದಾನದಲ್ಲಿ ನಡೆಯಲಿದ್ದು, ಈಗಾಗಲೇ ಟೀಂ ಇಂಡಿಯಾ ಅಭ್ಯಾಸದಲ್ಲಿ ನಿರಂತವಾಗಿದೆ.

ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್​ ಸರಣಿಗೂ ಕೊರೊನಾ ವೈರಸ್​ ಕರಿಛಾಯೆ ಬಿದ್ದಿದ್ದು, ಉಭಯ ತಂಡಗಳ ನಡುವಿನ ಕ್ರಿಕೆಟ್​ ಸರಣಿ ಜುಲೈ 13ರ ಬದಲಾಗಿ ಜುಲೈ 17ರಿಂದ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಇಂಗ್ಲೆಂಡ್​ ಪ್ರವಾಸ ಮುಗಿಸಿ ಶ್ರೀಲಂಕಾ ತಂಡ ನಿನ್ನೆ ತವರಿಗೆ ವಾಪಸ್​ ಆಗಿದೆ. ಈ ವೇಳೆ ತಂಡದ ಬ್ಯಾಟಿಂಗ್​ ಕೋಚ್​ ಸೇರಿ ಇಬ್ಬರಿಗೆ ಕೊರೊನಾ ಸೋಂಕು ದೃಢಗೊಂಡಿದೆ. ಹೀಗಾಗಿ ಸಂಪೂರ್ಣ ತಂಡ ಕ್ವಾರಂಟೈನ್​ಗೊಳಗಾಗಿದೆ. ಮುಂದಿನ ಕೆಲ ದಿನಗಳ ಕಾಲ ಎಲ್ಲರೂ ಕ್ವಾರಂಟೈನ್​​ನಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಬೇರೆ ದಾರಿ ಇಲ್ಲದೇ ಉಭಯ ತಂಡಗಳ ನಡುವಿನ ಕ್ರಿಕೆಟ್​ ಸರಣಿ ಮುಂದೂಡಿಕೆ ಮಾಡಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿರಿ: ಅಣ್ಣನ ಹಾದಿಯಲ್ಲೇ ತಂಗಿಯ ಹೆಜ್ಜೆ... ಹೊಸ ಪಕ್ಷ ಸ್ಥಾಪಿಸಿದ ಜಗನ್​ ಸಹೋದರಿ

ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ 'ಬಿ' ತಂಡ ಮೈದಾನಕ್ಕಿಳಿಸಲು ಯೋಜನೆ ಹಾಕಿಕೊಂಡಿದೆ. ಆದರೆ ಆ ತಂಡದಲ್ಲಿ ಯಾವುದೇ ಪ್ರಮುಖ ಪ್ಲೇಯರ್ಸ್​​ ಇಲ್ಲದ ಕಾರಣ ಸರಣಿ ಕೆಲವು ದಿನಗಳ ಕಾಲ ಮುಂದೂಡಿಕೆ ಮಾಡಿ, ಇಂಗ್ಲೆಂಡ್​ ಪ್ರವಾಸದಲ್ಲಿದ್ದ ತಂಡದಿಂದಲೇ ಕ್ರಿಕೆಟ್​ ಆಡಿಸಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಕ್ರಿಕೆಟ್ ಮಂಡಳಿ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಆದರೆ ನಾಳೆ ಸಂಜೆಯ ವೇಳೆಗೆ ಮಹತ್ವದ ನಿರ್ಧಾರ ಬರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿರಿ: 'ಸಮವಸ್ತ್ರ ತೆಗೆದು ಜಗಳಕ್ಕೆ ಬನ್ನಿ, 5 ನಿಮಿಷದಲ್ಲಿ ಸೋಲಿಸ್ತೀವಿ': ತಪ್ಪೆಸಗಿಯೂ 'ಜೋಡಿ ಹಕ್ಕಿ'ಗಳ ತೋಳ್ಬಲ ಪ್ರದರ್ಶನ!

ಭಾರತ-ಶ್ರೀಲಂಕಾ ಮಧ್ಯೆ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ಕೊಲಂಬೊ ಮೈದಾನದಲ್ಲಿ ನಡೆಯಲಿದ್ದು, ಈಗಾಗಲೇ ಟೀಂ ಇಂಡಿಯಾ ಅಭ್ಯಾಸದಲ್ಲಿ ನಿರಂತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.