ETV Bharat / bharat

ಧಾರ್ಮಿಕ ಭಾವೈಕ್ಯತೆ: ತೆಲಂಗಾಣದ ದರ್ಗಾದಲ್ಲಿ ನಡೆಯುತ್ತೆ ಸೀತಾರಾಮ ಕಲ್ಯಾಣ

author img

By

Published : Mar 31, 2023, 10:56 AM IST

ದರ್ಗಾದಲ್ಲಿ ಮುಸ್ಲಿಮರು ಶ್ರೀರಾಮನವಮಿ ಆಚರಿಸಿದರೆ, ಹಿಂದೂಗಳು ಹಜರತ್​ ನಕೂಲ್​ ಮೀರಾ ಉರುಸ್​ ಆಚರಿಸಿ ಭಾವೈಕ್ಯತೆ ಮರೆದರು.

Sitaram Kalyana was held in Dargah in Telangana
Sitaram Kalyana was held in Dargah in Telangana

ಭದ್ರಾದ್ರಿ ಕೊತಗುಡೆಮ್​ (ತೆಲಂಗಾಣ): ಮುಸ್ಲಿಮರ ಉರುಸ್​ ಸಂಭ್ರಮಗಳಲ್ಲಿ ಹಿಂದೂಗಳು ಭಾಗಿಯಾಗುವುದು, ಹಿಂದೂಗಳ ಹಬ್ಬ ಗಣೇಶೋತ್ಸವದಲ್ಲಿ ಮುಸ್ಲಿಮರು ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸುವ ಅನೇಕ ಸಾಮರಸ್ಯದ ಘಟನೆಗಳನ್ನು ನಾವು ಕಂಡಿದ್ದೇವೆ. ಈಗ ಮತ್ತೊಮ್ಮೆ ಇಂಥದ್ದೇ ಧಾರ್ಮಿಕ ಭಾವೈಕ್ಯತೆಯ ಸಂದೇಶ ಸಾರುವ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಮ್​ ಎಂಬಲ್ಲಿನ ಸತ್ಯನಾರಾಯಣಪುರಂನಲ್ಲಿರುವ ದರ್ಗಾದಲ್ಲಿ ನಡೆದಿದೆ. ದರ್ಗಾದಲ್ಲಿ ಶ್ರೀರಾಮ ಮತ್ತು ಸೀತಾ ದೇವಿಯ ಕಲ್ಯಾಣವನ್ನು ಹಿಂದೂ ಮತ್ತು ಮುಸ್ಲಿಮರು ಒಟ್ಟುಸೇರಿ ಆಚರಿಸಿದರು. ಈ ಮೂಲಕ ಎರಡೂ ಸಮುದಾಯದ ಜನರು ಸಾಮರಸ್ಯದಿಂದ ಬದುಕುವ ಸಂದೇಶ ಪಸರಿಸಿದರು.

40 ವರ್ಷಗಳಿಂದ ನಡೆದು ಬಂದ ಆಚರಣೆ: ಉಭಯ ಧರ್ಮಗಳ ಸಾಮರಸ್ಯದ ಸಂಕೇತವಾಗಿ ದರ್ಗಾದಲ್ಲಿ ಸೀತಾರಾಮ ಕಲ್ಯಾಣವನ್ನು ಏರ್ಪಡಿಸಲಾಗಿತ್ತು. ದರ್ಗಾದಲ್ಲಿ ರಾಮನವಮಿ ಜೊತೆಗೆ ಹಿಂದೂಗಳು ಹಜರತ್​ ನಕೂಲ್​ ಮೀರಾ ಉರುಸ್​ ಅನ್ನು ಕಳೆದ 40 ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಈಗ ಇದೇ ಮಾದರಿಯಲ್ಲಿ ದರ್ಗಾದಲ್ಲಿ ಮುಸ್ಲಿಮರು ಶ್ರೀ ರಾಮನವಮಿ ಆಚರಸಿದ್ದಾರೆ. ಈ ಪೂಜೆಯಲ್ಲಿ ಯಾವುದೇ ಜಾತಿ, ಧರ್ಮದ ತಾರತಮ್ಯವಿಲ್ಲ. ಪ್ರತಿಯೊಬ್ಬರೂ ಭಾಗಿಯಾಗಲು ಅವಕಾಶ ನೀಡಲಾಗಿತ್ತು.

ದರ್ಗಾದಲ್ಲಿ ಪ್ರತಿ ವರ್ಷ ಹಜರತ್​ ನಕುಲ್​ ಮೀರಾ ಉರುಸ್​ ಮತ್ತು ಶ್ರೀ ರಾಮನವಮಿಯನ್ನು ಒಟ್ಟಿಗೆ ಆಚರಿಸಲಾಗುತ್ತದೆ. ಸೀತಾರಾಮ ಕಲ್ಯಾಣಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸ್ಥಳೀಯ ಬ್ರಾಹ್ಮಣ ಅರ್ಚಕರ ಸಹಾಯದಿಂದ ಈ ಆಚರಣೆ ಅದ್ದೂರಿಯಾಗಿ ನಡೆಯುತ್ತದೆ. ಮತ್ತೊಂದು ವಿಶೇಷತೆ ಎಂದರೆ, ದರ್ಗಾದ ಮಾಲೀಕ್​ (ಅರ್ಚಕರು) ಕೂಡ ಹಿಂದೂ. ಅವರೇ ದರ್ಗಾದ ಆಚರಣೆಯನ್ನು ಹಲವು ಕಾಲಗಳಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಇವರನ್ನು ಮುಸ್ಲಿಂ ಸಮುದಾಯದವರು ಒಪ್ಪಿಕೊಂಡಿದ್ದಾರೆ.

ಮತ್ತೊಂದು ಘಟನೆ: ಇದೇ ರೀತಿಯ ಮತ್ತೊಂದು ಘಟನೆಯೂ ಕೂಡ ತೆಲಂಗಾಣದ ಖಮ್ಮಂನ ತಲ್ಲಡಾದಲ್ಲಿ ನಡೆಯುತ್ತದೆ. ಇಲ್ಲಿನ ಗ್ರಾಮದಲ್ಲಿ ನಡೆಯುವ ರಾಮನವಮಿ ಉತ್ಸವದಲ್ಲಿ ಮುಸ್ಲಿಮರು ಆಗಮಿಸಿ, ದೇವರ ಆಶೀರ್ವಾದ ಪಡೆಯುತ್ತಾರೆ. ಮಂಡಲ್​ ಪರಿಷದ್​ ಕೊ ಅಪ್ಷನ್​ ಸದಸ್ಯರಾದ ಎಸಬ್​ ದಂಪತಿ ಹಿಂದೂಗಳು ಸಾಮಾನ್ಯವಾಗಿ ಧರಿಸುವ ರೇಷ್ಮೆ ಮತ್ತು ತಲಂಬರದೊಂದಿಗೆ ಹಾಜರಾಗುತ್ತಾರೆ. ಇಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ನಡೆಯುವ ಸೀತಾರಾಮ ಕಲ್ಯಾಣದಲ್ಲಿ ಭಾಗಿಯಾಗುವ ದಂಪತಿಯನ್ನು ದೇವಸ್ಥಾನದ ಸಮಿತಿ ಸದಸ್ಯರು ಸನ್ಮಾನಿಸುತ್ತಾರೆ.

ಇದನ್ನೂ ಓದಿ: Ram Navami 2023: ಈ ಬ್ಯಾಂಕ್​ ಅಲ್ಲಿ ದುಡ್ಡಲ್ಲ, ಜಮೆಯಾಗತ್ತೆ 'ರಾಮ ನಾಮ'; ವಾರಾಣಾಸಿಯಲ್ಲೊಂದು ವಿಶೇಷ

ಭದ್ರಾದ್ರಿ ಕೊತಗುಡೆಮ್​ (ತೆಲಂಗಾಣ): ಮುಸ್ಲಿಮರ ಉರುಸ್​ ಸಂಭ್ರಮಗಳಲ್ಲಿ ಹಿಂದೂಗಳು ಭಾಗಿಯಾಗುವುದು, ಹಿಂದೂಗಳ ಹಬ್ಬ ಗಣೇಶೋತ್ಸವದಲ್ಲಿ ಮುಸ್ಲಿಮರು ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸುವ ಅನೇಕ ಸಾಮರಸ್ಯದ ಘಟನೆಗಳನ್ನು ನಾವು ಕಂಡಿದ್ದೇವೆ. ಈಗ ಮತ್ತೊಮ್ಮೆ ಇಂಥದ್ದೇ ಧಾರ್ಮಿಕ ಭಾವೈಕ್ಯತೆಯ ಸಂದೇಶ ಸಾರುವ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಮ್​ ಎಂಬಲ್ಲಿನ ಸತ್ಯನಾರಾಯಣಪುರಂನಲ್ಲಿರುವ ದರ್ಗಾದಲ್ಲಿ ನಡೆದಿದೆ. ದರ್ಗಾದಲ್ಲಿ ಶ್ರೀರಾಮ ಮತ್ತು ಸೀತಾ ದೇವಿಯ ಕಲ್ಯಾಣವನ್ನು ಹಿಂದೂ ಮತ್ತು ಮುಸ್ಲಿಮರು ಒಟ್ಟುಸೇರಿ ಆಚರಿಸಿದರು. ಈ ಮೂಲಕ ಎರಡೂ ಸಮುದಾಯದ ಜನರು ಸಾಮರಸ್ಯದಿಂದ ಬದುಕುವ ಸಂದೇಶ ಪಸರಿಸಿದರು.

40 ವರ್ಷಗಳಿಂದ ನಡೆದು ಬಂದ ಆಚರಣೆ: ಉಭಯ ಧರ್ಮಗಳ ಸಾಮರಸ್ಯದ ಸಂಕೇತವಾಗಿ ದರ್ಗಾದಲ್ಲಿ ಸೀತಾರಾಮ ಕಲ್ಯಾಣವನ್ನು ಏರ್ಪಡಿಸಲಾಗಿತ್ತು. ದರ್ಗಾದಲ್ಲಿ ರಾಮನವಮಿ ಜೊತೆಗೆ ಹಿಂದೂಗಳು ಹಜರತ್​ ನಕೂಲ್​ ಮೀರಾ ಉರುಸ್​ ಅನ್ನು ಕಳೆದ 40 ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಈಗ ಇದೇ ಮಾದರಿಯಲ್ಲಿ ದರ್ಗಾದಲ್ಲಿ ಮುಸ್ಲಿಮರು ಶ್ರೀ ರಾಮನವಮಿ ಆಚರಸಿದ್ದಾರೆ. ಈ ಪೂಜೆಯಲ್ಲಿ ಯಾವುದೇ ಜಾತಿ, ಧರ್ಮದ ತಾರತಮ್ಯವಿಲ್ಲ. ಪ್ರತಿಯೊಬ್ಬರೂ ಭಾಗಿಯಾಗಲು ಅವಕಾಶ ನೀಡಲಾಗಿತ್ತು.

ದರ್ಗಾದಲ್ಲಿ ಪ್ರತಿ ವರ್ಷ ಹಜರತ್​ ನಕುಲ್​ ಮೀರಾ ಉರುಸ್​ ಮತ್ತು ಶ್ರೀ ರಾಮನವಮಿಯನ್ನು ಒಟ್ಟಿಗೆ ಆಚರಿಸಲಾಗುತ್ತದೆ. ಸೀತಾರಾಮ ಕಲ್ಯಾಣಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸ್ಥಳೀಯ ಬ್ರಾಹ್ಮಣ ಅರ್ಚಕರ ಸಹಾಯದಿಂದ ಈ ಆಚರಣೆ ಅದ್ದೂರಿಯಾಗಿ ನಡೆಯುತ್ತದೆ. ಮತ್ತೊಂದು ವಿಶೇಷತೆ ಎಂದರೆ, ದರ್ಗಾದ ಮಾಲೀಕ್​ (ಅರ್ಚಕರು) ಕೂಡ ಹಿಂದೂ. ಅವರೇ ದರ್ಗಾದ ಆಚರಣೆಯನ್ನು ಹಲವು ಕಾಲಗಳಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಇವರನ್ನು ಮುಸ್ಲಿಂ ಸಮುದಾಯದವರು ಒಪ್ಪಿಕೊಂಡಿದ್ದಾರೆ.

ಮತ್ತೊಂದು ಘಟನೆ: ಇದೇ ರೀತಿಯ ಮತ್ತೊಂದು ಘಟನೆಯೂ ಕೂಡ ತೆಲಂಗಾಣದ ಖಮ್ಮಂನ ತಲ್ಲಡಾದಲ್ಲಿ ನಡೆಯುತ್ತದೆ. ಇಲ್ಲಿನ ಗ್ರಾಮದಲ್ಲಿ ನಡೆಯುವ ರಾಮನವಮಿ ಉತ್ಸವದಲ್ಲಿ ಮುಸ್ಲಿಮರು ಆಗಮಿಸಿ, ದೇವರ ಆಶೀರ್ವಾದ ಪಡೆಯುತ್ತಾರೆ. ಮಂಡಲ್​ ಪರಿಷದ್​ ಕೊ ಅಪ್ಷನ್​ ಸದಸ್ಯರಾದ ಎಸಬ್​ ದಂಪತಿ ಹಿಂದೂಗಳು ಸಾಮಾನ್ಯವಾಗಿ ಧರಿಸುವ ರೇಷ್ಮೆ ಮತ್ತು ತಲಂಬರದೊಂದಿಗೆ ಹಾಜರಾಗುತ್ತಾರೆ. ಇಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ನಡೆಯುವ ಸೀತಾರಾಮ ಕಲ್ಯಾಣದಲ್ಲಿ ಭಾಗಿಯಾಗುವ ದಂಪತಿಯನ್ನು ದೇವಸ್ಥಾನದ ಸಮಿತಿ ಸದಸ್ಯರು ಸನ್ಮಾನಿಸುತ್ತಾರೆ.

ಇದನ್ನೂ ಓದಿ: Ram Navami 2023: ಈ ಬ್ಯಾಂಕ್​ ಅಲ್ಲಿ ದುಡ್ಡಲ್ಲ, ಜಮೆಯಾಗತ್ತೆ 'ರಾಮ ನಾಮ'; ವಾರಾಣಾಸಿಯಲ್ಲೊಂದು ವಿಶೇಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.