ETV Bharat / bharat

ಬುಡಕಟ್ಟು ಜನರ ಅಭಿವೃದ್ಧಿಗಾಗಿ ಪವಾರ್ ಕೈಗೊಂಡ ಉಪಕ್ರಮಗಳು ಉತ್ತಮವಾಗಿದ್ದವು: ಪ್ರಫುಲ್ ಪಟೇಲ್

author img

By

Published : Mar 8, 2021, 9:33 AM IST

ಮಹಾರಾಷ್ಟ್ರದ ಬುಡಕಟ್ಟು ಜನಾಂಗದವರ ಉನ್ನತಿಗಾಗಿ ವಿಶೇಷ ಉಪಕ್ರಮಗಳನ್ನು ಶರದ್ ಪವಾರ್ ಕೈಗೊಂಡರು. ಈ ಮೂಲಕ ಮಹಾರಾಷ್ಟ್ರವು ಉನ್ನತ ರಾಜ್ಯವಾಗಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಫುಲ್ ಪಟೇಲ್ ಹೇಳಿದ್ದಾರೆ.

Praful Patel
ಪ್ರಫುಲ್ ಪಟೇಲ್

ರಾಂಚಿ (ಜಾರ್ಖಂಡ್): ಮಹಾರಾಷ್ಟ್ರದ ಬುಡಕಟ್ಟು ಜನಾಂಗದವರ ಉನ್ನತಿಗಾಗಿ ವಿಶೇಷ ಉಪಕ್ರಮಗಳನ್ನು ಕೈಗೊಂಡವರಲ್ಲಿ ಶರದ್ ಪವಾರ್ ಮೊದಲಿಗರು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ಮತ್ತು ಅಖಿಲ ಭಾರತ ಫುಟ್ಬಾಲ್​ ಫೆಡರೇಷನ್ (ಎಐಎಫ್ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ.

"ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಒಟ್ಟು ಬಜೆಟ್‌ನ ಒಂಬತ್ತು ಪ್ರತಿಶತವನ್ನು ಆದಿವಾಸಿಗಳ ಸುಧಾರಣೆಗೆ ಖರ್ಚು ಮಾಡಲಾಯಿತು. ಪವಾರ್ ಬುಡಕಟ್ಟು ಜನಾಂಗದವರಿಗೆ ಮತ್ತು ಮಹಾರಾಷ್ಟ್ರದಲ್ಲಿ ಅವರ ಉನ್ನತಿಗಾಗಿ ಒಂದು ಯೋಜನೆಯನ್ನು ತಂದರು" ಎಂದು ರಾಂಚಿಯಲ್ಲಿ ನಡೆದ ಸಮಾವೇಶದಲ್ಲಿ ಪಟೇಲ್ ಹೇಳಿದ್ದಾರೆ.

"ಜಾರ್ಖಂಡ್‌ನಲ್ಲಿ ಅವಕಾಶಗಳ ಕೊರತೆಯಿಂದಾಗಿ ರಾಜ್ಯದ ಯುವಕರು ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಿದ್ದಾರೆ. ಮಹಾರಾಷ್ಟ್ರವು ಯುವಕರಿಗೆ ಅವಕಾಶಗಳನ್ನು ಸೃಷ್ಟಿಸಿದೆ. ಶರದ್ ಪವಾರ್ ಅವರ ದೂರದೃಷ್ಟಿಯಿಂದ ಇದು ಸಾಧ್ಯವಾಯಿತು. ಇಂದು ಅವರ ಪ್ರಯತ್ನದಿಂದಾಗಿ ಮಹಾರಾಷ್ಟ್ರವು ಉನ್ನತ ರಾಜ್ಯವಾಗಿದೆ. ನಾವು ಜಾರ್ಖಂಡ್‌ನಲ್ಲಿ ಎನ್‌ಸಿಪಿಗೆ ಹೊಸ ಆರಂಭವನ್ನು ನೀಡಲು ಬಯಸುತ್ತೇವೆ. ಎನ್‌ಸಿಪಿ ಹೊಸ ಗುರುತನ್ನು ಸೃಷ್ಟಿಸಬೇಕೆಂದು ನಾವು ಬಯಸುತ್ತೇವೆ" ಎಂದು ಅವರು ಹೇಳಿದ್ದಾರೆ.

ರಾಂಚಿ (ಜಾರ್ಖಂಡ್): ಮಹಾರಾಷ್ಟ್ರದ ಬುಡಕಟ್ಟು ಜನಾಂಗದವರ ಉನ್ನತಿಗಾಗಿ ವಿಶೇಷ ಉಪಕ್ರಮಗಳನ್ನು ಕೈಗೊಂಡವರಲ್ಲಿ ಶರದ್ ಪವಾರ್ ಮೊದಲಿಗರು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ಮತ್ತು ಅಖಿಲ ಭಾರತ ಫುಟ್ಬಾಲ್​ ಫೆಡರೇಷನ್ (ಎಐಎಫ್ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ.

"ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಒಟ್ಟು ಬಜೆಟ್‌ನ ಒಂಬತ್ತು ಪ್ರತಿಶತವನ್ನು ಆದಿವಾಸಿಗಳ ಸುಧಾರಣೆಗೆ ಖರ್ಚು ಮಾಡಲಾಯಿತು. ಪವಾರ್ ಬುಡಕಟ್ಟು ಜನಾಂಗದವರಿಗೆ ಮತ್ತು ಮಹಾರಾಷ್ಟ್ರದಲ್ಲಿ ಅವರ ಉನ್ನತಿಗಾಗಿ ಒಂದು ಯೋಜನೆಯನ್ನು ತಂದರು" ಎಂದು ರಾಂಚಿಯಲ್ಲಿ ನಡೆದ ಸಮಾವೇಶದಲ್ಲಿ ಪಟೇಲ್ ಹೇಳಿದ್ದಾರೆ.

"ಜಾರ್ಖಂಡ್‌ನಲ್ಲಿ ಅವಕಾಶಗಳ ಕೊರತೆಯಿಂದಾಗಿ ರಾಜ್ಯದ ಯುವಕರು ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಿದ್ದಾರೆ. ಮಹಾರಾಷ್ಟ್ರವು ಯುವಕರಿಗೆ ಅವಕಾಶಗಳನ್ನು ಸೃಷ್ಟಿಸಿದೆ. ಶರದ್ ಪವಾರ್ ಅವರ ದೂರದೃಷ್ಟಿಯಿಂದ ಇದು ಸಾಧ್ಯವಾಯಿತು. ಇಂದು ಅವರ ಪ್ರಯತ್ನದಿಂದಾಗಿ ಮಹಾರಾಷ್ಟ್ರವು ಉನ್ನತ ರಾಜ್ಯವಾಗಿದೆ. ನಾವು ಜಾರ್ಖಂಡ್‌ನಲ್ಲಿ ಎನ್‌ಸಿಪಿಗೆ ಹೊಸ ಆರಂಭವನ್ನು ನೀಡಲು ಬಯಸುತ್ತೇವೆ. ಎನ್‌ಸಿಪಿ ಹೊಸ ಗುರುತನ್ನು ಸೃಷ್ಟಿಸಬೇಕೆಂದು ನಾವು ಬಯಸುತ್ತೇವೆ" ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.