ETV Bharat / bharat

ಅತೀಕ್ ಅಹ್ಮದ್ ಅಂತಿಮ ದರ್ಶನಕ್ಕೆ ಪತ್ನಿ ಶೈಸ್ತಾ ಪ್ರಯಾಗ್​ರಾಜ್​ಗೆ ಬಂದಿದ್ದರು: ಸ್ಫೋಟಕ ಮಾಹಿತಿ ಬಹಿರಂಗ

author img

By

Published : May 6, 2023, 3:44 PM IST

ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೈಸ್ತಾ ಪರ್ವೀನ್, ಸಬೀರ್ ಆರೋಪಿಗಳ ವಿಚಾರಣೆಗೆ ಹಾಗೂ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಅತೀಕ್ ಮತ್ತು ಅಶ್ರಫ್ ಹತ್ಯೆಯ ನಂತರ ಪತಿಯ ಅಂತಿಮ ದರ್ಶನ ಪಡೆಯಲು ಶೈಸ್ತಾ ಪರ್ವೀನ್ ಪ್ರಯಾಗ್​ರಾಜ್​ಗೆ ಬಂದಿದ್ದರು ಎಂಬ ಮಾಹಿತಿಯನ್ನು ಆರೋಪಿ ಅತೀನ್ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ.

Umesh Pal's murder convict Atiq Ahmeds wife Shaista
ಉಮೇಶ್ ಪಾಲ್ ಹತ್ಯೆ ಅಪರಾಧಿ ಅತೀಕ್ ಅಹ್ಮದ್ ಪತ್ನಿ ಶೈಸ್ತಾ

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ತಲೆಮರೆಸಿಕೊಂಡಿರುವ ಅತೀಕ್ ಅಹ್ಮದ್​​​​​ನ ಪತ್ನಿ ಶೈಸ್ತಾ ಪರ್ವೀನ್‌ಗೆ ಸಂಬಂಧಿಸಿದ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಪ್ರಯಾಗ್‌ರಾಜ್‌ನಲ್ಲಿ ಹತ್ಯೆಯ ನಂತರ ಅತೀಕ್‌ಗೆ ಅಂತಿಮ ನಮನ ಸಲ್ಲಿಸಲು ಶೈಸ್ತಾ ನಗರಕ್ಕೆ ಆಗಮಿಸಿದ್ದರು. ಪರಿಚಯಸ್ಥರ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಶೈಸ್ತಾ ಪರ್ವೀನ್‌ ಶೂಟರ್ ಸಬೀರ್ ಜತೆ ಮಾರುವೇಷದಲ್ಲಿ ಕಸರಿ ಮಸಾರಿ ಸ್ಮಶಾನಕ್ಕೆ ಹೋಗಲು ಯೋಜನೆ ರೂಪಿಸಿದ್ದರು. ಆದರೆ ಪೊಲೀಸರ ಬಿಗಿ ಭದ್ರತೆ ಇರುವುದನ್ನು ಮನಗೊಂಡು ಶೈಸ್ತಾಗೆ ತಲುಪಲು ಸಾಧ್ಯವಾಗಲಿಲ್ಲ ಎಂದು ಶೈಸ್ತಾಗೆ ಸಂಬಂಧಿಸಿದ ಹಲವು ರಹಸ್ಯಗಳನ್ನು ಅಸದ್ ಸ್ನೇಹಿತ ಆರೋಪಿ ಅತೀನ್ ಜಾಫರ್​ ಪೊಲೀಸರ ಮುಂದೆ ಬಹಿರಂಗಪಡಿಸಿರುವ ಮಾಹಿತಿ ಬೆಳಕಿಗೆ ಬಂದಿದೆ.

ಶೈಸ್ತಾ ಕಸರಿ ತನ್ನ ಪತಿ ಅತೀಕ್ ಅಹ್ಮದ್‌ಗೆ ಅಂತಿಮ ನಮನ ಸಲ್ಲಿಸಲು ಮಸಾರಿ ಸ್ಮಶಾನಕ್ಕೆ ತೆರಳಿದ್ದರು ಎಂದು ಅತೀನ್ ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಪೊಲೀಸರ ಬಿಗಿ ಬಂದೋಬಸ್ತ್ ನೋಡಿ ಪ್ರಾಣ ಭಯ ಕಾಡತೊಡಗಿತು. ಅದರ ನಂತರ ಅವರು ಹಿಂತಿರುಗಿದರು. ಶೈಸ್ತಾ ಮತ್ತು ಶೂಟರ್ ಸಬೀರ್ ಜತೆ ಕಾರಿನಲ್ಲಿ ಬಂದಿರುವುದಾಗಿ ಅತೀನ್ ತಿಳಿಸಿದ್ದಾನೆ.

ಕಾರನ್ನು ಸಹ ಅವರೇ ಚಲಾಯಿಸುತ್ತಿದ್ದರು. ಪೊಲೀಸರ ಬಿಗಿ ಭದ್ರತೆ ಕಂಡ ಶೈಸ್ತಾ ಕೊನೆಯ ಕ್ಷಣದಲ್ಲಿ ಸ್ಮಶಾನದೊಳಗೆ ಹೋಗುವ ನಿರ್ಧಾರವನ್ನು ಬದಲಾಯಿಸಿದರು. ಇದಾದ ಬಳಿಕ ಶೈಸ್ತಾ ವಾಪಸಾಗಿದ್ದರು. ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್‌ಗೆ ಸಂಬಂಧಿಸಿದ ಇನ್ನೂ ಅನೇಕ ರಹಸ್ಯಗಳು ಜನರ ಮುಂದೆ ಬರಬಹುದು ಎಂದು ಬರಬಹುದೆಂದು ಪೊಲೀಸರು ನಿರೀಕ್ಷಿಸಿದ್ದಾರೆ.

ಪೊಲೀಸರು ಧುಮನಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಅತೀನ್​ನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಏಪ್ರಿಲ್ 15 ರಂದು ಅತೀಕ್ ಅಹ್ಮದ್ ಮತ್ತು ಅಶ್ರಫ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕ್ಯಾಲ್ವಿನ್ ಆಸ್ಪತ್ರೆಗೆ ಕರೆದೊಯ್ಯುವಾಗ, ಮೂವರು ಶೂಟರ್‌ಗಳು ಇಬ್ಬರನ್ನೂ ಗುಂಡಿಕ್ಕಿ ಕೊಂದಿದ್ದರು.

ಏಪ್ರಿಲ್ 16 ರಂದು ಅತೀಕ್ ಮತ್ತು ಅಶ್ರಫ್ ಅವರ ಮೃತ ದೇಹಗಳ ಮರಣೋತ್ತರ ಪರೀಕ್ಷೆಯ ನಂತರ, ಕಸರಿಯನ್ನು ಮಸಾರಿಯಲ್ಲಿ ಸ್ಮಶಾನದಲ್ಲಿ ಹೂಳಲಾಯಿತು. ಈ ಸಮಯದಲ್ಲಿ, ಶೈಸ್ತಾ ಬಗ್ಗೆ ಅನೇಕ ವದಂತಿಗಳು ಹುಟ್ಟಿಕೊಂಡವು. ಕೆಲವು ಮಹಿಳೆಯರ ಮುಖವಾಡಗಳನ್ನು ಪೊಲೀಸರು ಗುರುತಿಸಲಿಲ್ಲ ಎಂದಿದ್ದಾನೆ.

ಅದೇ ಸಮಯದಲ್ಲಿ ಅತೀನ್​ ಈ ಹೇಳಿಕೆಯು ಸಹ ಪೊಲೀಸರನ್ನು ನಿದ್ದೆಗೆಡಿಸಿದೆ. ಅಷ್ಟೆಲ್ಲಾ ಭದ್ರತೆ ಶೈಸ್ತಾ ಇಲ್ಲಿಗೆ ತಲುಪಿದ್ದು ಹೇಗೆ, ಆ ಬಳಿಕ ಪರಾರಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಪೊಲೀಸರಿಗೆ ಕಾಡುತ್ತಿದೆ.

ಶೈಸ್ತಾ ಪರ್ವೀನ್‌ ಬಂಧಿಸಲು ಜಾಲ ಬೀಸಿರುವ ಪೊಲೀಸರು: ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಶಾಹಿಸ್ತಾ ಪರ್ವೀನ್, ಸಬೀರ್ ಮತ್ತು ಗುಡ್ಡು ಮುಸ್ಲಿಂ ಎಂಬ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಹುಡುಕುತ್ತಿದ್ದಾರೆ. ತಲೆಮರೆಸಿಕೊಂಡಿರುವ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್‌ ಬಂಧನಕ್ಕೆ ಜಾಲ ಬೀಸಿದ್ದು, ಆದರೆ ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಕೆಲವು ದಿನಗಳ ಹಿಂದೆ ಮಾಫಿಯಾ ಅತೀಕ್ ಅಹ್ಮದ್‌ನ ಪತ್ನಿ ಶೈಸ್ತಾ ಹಾಗೂ ಶೂಟರ್ ಸಬೀರ್ ಪತ್ತೆಗಾಗಿ ಜಿಲ್ಲೆಯ ಕ್ಯಾಚಾರ್ ಪ್ರದೇಶಗಳಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಕೌಶಂಬಿ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಬೃಹತ್ ಪೊಲೀಸ್ ಪಡೆಯನ್ನು ಕ್ಯಾಚಾರ್ ಪ್ರದೇಶದಲ್ಲಿ ನಿಯೋಜಿಸಿದ್ದರು. ಪೊಲೀಸರು ಶೈಸ್ತಾಗೆ ಪತ್ತೆಗಾಗಿ ಡ್ರೋನ್ ಸಹ ಬಳಸಿದ್ದರು.

ಏಪ್ರಿಲ್ 15 ರ ರಾತ್ರಿ ಅತೀಕ್ ಅಹ್ಮದ್ ಮತ್ತು ಅಶ್ರಫ್ ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯುವಾಗ ಪ್ರಯಾಗರಾಜ್‌ನ ಕ್ಯಾಲ್ವಿನ್ ಆಸ್ಪತ್ರೆಯಲ್ಲಿ ಗುಂಡು ಹಾರಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂಓದಿ:ಚುನಾವಣಾ ಅಕ್ರಮ: 20 ಕೋಟಿ ಮೌಲ್ಯದ ವಜ್ರಾಭರಣ, ನಗದು ಜಪ್ತಿ

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ತಲೆಮರೆಸಿಕೊಂಡಿರುವ ಅತೀಕ್ ಅಹ್ಮದ್​​​​​ನ ಪತ್ನಿ ಶೈಸ್ತಾ ಪರ್ವೀನ್‌ಗೆ ಸಂಬಂಧಿಸಿದ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಪ್ರಯಾಗ್‌ರಾಜ್‌ನಲ್ಲಿ ಹತ್ಯೆಯ ನಂತರ ಅತೀಕ್‌ಗೆ ಅಂತಿಮ ನಮನ ಸಲ್ಲಿಸಲು ಶೈಸ್ತಾ ನಗರಕ್ಕೆ ಆಗಮಿಸಿದ್ದರು. ಪರಿಚಯಸ್ಥರ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಶೈಸ್ತಾ ಪರ್ವೀನ್‌ ಶೂಟರ್ ಸಬೀರ್ ಜತೆ ಮಾರುವೇಷದಲ್ಲಿ ಕಸರಿ ಮಸಾರಿ ಸ್ಮಶಾನಕ್ಕೆ ಹೋಗಲು ಯೋಜನೆ ರೂಪಿಸಿದ್ದರು. ಆದರೆ ಪೊಲೀಸರ ಬಿಗಿ ಭದ್ರತೆ ಇರುವುದನ್ನು ಮನಗೊಂಡು ಶೈಸ್ತಾಗೆ ತಲುಪಲು ಸಾಧ್ಯವಾಗಲಿಲ್ಲ ಎಂದು ಶೈಸ್ತಾಗೆ ಸಂಬಂಧಿಸಿದ ಹಲವು ರಹಸ್ಯಗಳನ್ನು ಅಸದ್ ಸ್ನೇಹಿತ ಆರೋಪಿ ಅತೀನ್ ಜಾಫರ್​ ಪೊಲೀಸರ ಮುಂದೆ ಬಹಿರಂಗಪಡಿಸಿರುವ ಮಾಹಿತಿ ಬೆಳಕಿಗೆ ಬಂದಿದೆ.

ಶೈಸ್ತಾ ಕಸರಿ ತನ್ನ ಪತಿ ಅತೀಕ್ ಅಹ್ಮದ್‌ಗೆ ಅಂತಿಮ ನಮನ ಸಲ್ಲಿಸಲು ಮಸಾರಿ ಸ್ಮಶಾನಕ್ಕೆ ತೆರಳಿದ್ದರು ಎಂದು ಅತೀನ್ ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಪೊಲೀಸರ ಬಿಗಿ ಬಂದೋಬಸ್ತ್ ನೋಡಿ ಪ್ರಾಣ ಭಯ ಕಾಡತೊಡಗಿತು. ಅದರ ನಂತರ ಅವರು ಹಿಂತಿರುಗಿದರು. ಶೈಸ್ತಾ ಮತ್ತು ಶೂಟರ್ ಸಬೀರ್ ಜತೆ ಕಾರಿನಲ್ಲಿ ಬಂದಿರುವುದಾಗಿ ಅತೀನ್ ತಿಳಿಸಿದ್ದಾನೆ.

ಕಾರನ್ನು ಸಹ ಅವರೇ ಚಲಾಯಿಸುತ್ತಿದ್ದರು. ಪೊಲೀಸರ ಬಿಗಿ ಭದ್ರತೆ ಕಂಡ ಶೈಸ್ತಾ ಕೊನೆಯ ಕ್ಷಣದಲ್ಲಿ ಸ್ಮಶಾನದೊಳಗೆ ಹೋಗುವ ನಿರ್ಧಾರವನ್ನು ಬದಲಾಯಿಸಿದರು. ಇದಾದ ಬಳಿಕ ಶೈಸ್ತಾ ವಾಪಸಾಗಿದ್ದರು. ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್‌ಗೆ ಸಂಬಂಧಿಸಿದ ಇನ್ನೂ ಅನೇಕ ರಹಸ್ಯಗಳು ಜನರ ಮುಂದೆ ಬರಬಹುದು ಎಂದು ಬರಬಹುದೆಂದು ಪೊಲೀಸರು ನಿರೀಕ್ಷಿಸಿದ್ದಾರೆ.

ಪೊಲೀಸರು ಧುಮನಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಅತೀನ್​ನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಏಪ್ರಿಲ್ 15 ರಂದು ಅತೀಕ್ ಅಹ್ಮದ್ ಮತ್ತು ಅಶ್ರಫ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕ್ಯಾಲ್ವಿನ್ ಆಸ್ಪತ್ರೆಗೆ ಕರೆದೊಯ್ಯುವಾಗ, ಮೂವರು ಶೂಟರ್‌ಗಳು ಇಬ್ಬರನ್ನೂ ಗುಂಡಿಕ್ಕಿ ಕೊಂದಿದ್ದರು.

ಏಪ್ರಿಲ್ 16 ರಂದು ಅತೀಕ್ ಮತ್ತು ಅಶ್ರಫ್ ಅವರ ಮೃತ ದೇಹಗಳ ಮರಣೋತ್ತರ ಪರೀಕ್ಷೆಯ ನಂತರ, ಕಸರಿಯನ್ನು ಮಸಾರಿಯಲ್ಲಿ ಸ್ಮಶಾನದಲ್ಲಿ ಹೂಳಲಾಯಿತು. ಈ ಸಮಯದಲ್ಲಿ, ಶೈಸ್ತಾ ಬಗ್ಗೆ ಅನೇಕ ವದಂತಿಗಳು ಹುಟ್ಟಿಕೊಂಡವು. ಕೆಲವು ಮಹಿಳೆಯರ ಮುಖವಾಡಗಳನ್ನು ಪೊಲೀಸರು ಗುರುತಿಸಲಿಲ್ಲ ಎಂದಿದ್ದಾನೆ.

ಅದೇ ಸಮಯದಲ್ಲಿ ಅತೀನ್​ ಈ ಹೇಳಿಕೆಯು ಸಹ ಪೊಲೀಸರನ್ನು ನಿದ್ದೆಗೆಡಿಸಿದೆ. ಅಷ್ಟೆಲ್ಲಾ ಭದ್ರತೆ ಶೈಸ್ತಾ ಇಲ್ಲಿಗೆ ತಲುಪಿದ್ದು ಹೇಗೆ, ಆ ಬಳಿಕ ಪರಾರಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಪೊಲೀಸರಿಗೆ ಕಾಡುತ್ತಿದೆ.

ಶೈಸ್ತಾ ಪರ್ವೀನ್‌ ಬಂಧಿಸಲು ಜಾಲ ಬೀಸಿರುವ ಪೊಲೀಸರು: ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಶಾಹಿಸ್ತಾ ಪರ್ವೀನ್, ಸಬೀರ್ ಮತ್ತು ಗುಡ್ಡು ಮುಸ್ಲಿಂ ಎಂಬ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಹುಡುಕುತ್ತಿದ್ದಾರೆ. ತಲೆಮರೆಸಿಕೊಂಡಿರುವ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್‌ ಬಂಧನಕ್ಕೆ ಜಾಲ ಬೀಸಿದ್ದು, ಆದರೆ ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಕೆಲವು ದಿನಗಳ ಹಿಂದೆ ಮಾಫಿಯಾ ಅತೀಕ್ ಅಹ್ಮದ್‌ನ ಪತ್ನಿ ಶೈಸ್ತಾ ಹಾಗೂ ಶೂಟರ್ ಸಬೀರ್ ಪತ್ತೆಗಾಗಿ ಜಿಲ್ಲೆಯ ಕ್ಯಾಚಾರ್ ಪ್ರದೇಶಗಳಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಕೌಶಂಬಿ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಬೃಹತ್ ಪೊಲೀಸ್ ಪಡೆಯನ್ನು ಕ್ಯಾಚಾರ್ ಪ್ರದೇಶದಲ್ಲಿ ನಿಯೋಜಿಸಿದ್ದರು. ಪೊಲೀಸರು ಶೈಸ್ತಾಗೆ ಪತ್ತೆಗಾಗಿ ಡ್ರೋನ್ ಸಹ ಬಳಸಿದ್ದರು.

ಏಪ್ರಿಲ್ 15 ರ ರಾತ್ರಿ ಅತೀಕ್ ಅಹ್ಮದ್ ಮತ್ತು ಅಶ್ರಫ್ ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯುವಾಗ ಪ್ರಯಾಗರಾಜ್‌ನ ಕ್ಯಾಲ್ವಿನ್ ಆಸ್ಪತ್ರೆಯಲ್ಲಿ ಗುಂಡು ಹಾರಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂಓದಿ:ಚುನಾವಣಾ ಅಕ್ರಮ: 20 ಕೋಟಿ ಮೌಲ್ಯದ ವಜ್ರಾಭರಣ, ನಗದು ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.