ETV Bharat / bharat

ಡಿಜಿಟಲ್ ಇಂಡಿಯಾ ಕನಸಿಗೆ ಕನ್ನ... ಕಳ್ಳರ ಕಾಟಕ್ಕೆ 17 ATM ಬಂದ್​​!

author img

By

Published : Jul 16, 2022, 9:47 PM IST

ಗೋಪಾಲ್​ಗಂಜ್​​ನ ಗ್ರಾಮೀಣ ಪ್ರದೇಶಗಳಲ್ಲಿರುವ ಬರೋಬ್ಬರಿ 17 ಎಟಿಎಂ ಕೇಂದ್ರಗಳನ್ನ ಕಳ್ಳರ ಕಾಟದಿಂದ ಬಂದ್ ಮಾಡಲಾಗಿದೆ.

Gopalganj Police Closed 17 ATM
Gopalganj Police Closed 17 ATM

ಗೋಪಾಲ್​ಗಂಜ್​(ಬಿಹಾರ): ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್​ ಇಂಡಿಯಾ ಕನಸಿಗೆ ಕಳ್ಳರು ಕನ್ನ ಹಾಕ್ತಿದ್ದು, ಬಿಹಾರದ ಗೋಪಾಲ್​ಗಂಜ್​​ನಲ್ಲಿರುವ ಅನೇಕ ಎಟಿಎಂಗಳಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಎಲ್ಲ ಎಟಿಎಂ ಬಂದ್ ಮಾಡಲಾಗಿದೆ. ಗೋಪಾಲ್​​ಗಂಜ್​​ನ ಗ್ರಾಮೀಣ ಪ್ರದೇಶಗಳಲ್ಲಿರುವ 17 ಎಟಿಎಂಗಳಿಗೆ ಕಳ್ಳರ ಕಾಟ ಹೆಚ್ಚಾಗಿರುವ ಕಾರಣ ಬೀಗ ಹಾಕಲಾಗಿದ್ದು, ಅವುಗಳನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬ್ಯಾಂಕ್​ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಗೋಪಾಲ್​ಗಂಜ್​ನ ವಿವಿಧ ಪ್ರದೇಶಗಳಲ್ಲಿ ಎಟಿಎಂ ಅಳವಡಿಕೆ ಮಾಡಲಾಗಿದೆ. ಆದರೆ, ಈ ಯಂತ್ರಗಳನ್ನ ಪದೇ ಪದೇ ಕಳ್ಳರು ಕಳ್ಳತನ ಮಾಡಿಕೊಂಡು ಹೋಗ್ತಿದ್ದಾರೆ. ಇದು ಪೊಲೀಸರಿಗೂ ತಲೆನೋವು ಆಗಿದೆ. ಹೀಗಾಗಿ, ಎಲ್ಲ ಎಟಿಎಂ ಬಂದ್​ ಆಗಿದ್ದು, ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.

ಕಳ್ಳರ ಕಾಟಕ್ಕೆ 17 ATM ಬಂದ್​​!

ಇದನ್ನೂ ಓದಿರಿ: ಭಗತ್​ ಸಿಂಗ್​ ಭಯೋತ್ಪಾದಕ: ಪಂಜಾಬ್​ ಸಂಸದನ ವಿವಾದಿತ ಹೇಳಿಕೆಗೆ ವ್ಯಾಪಕ ಟೀಕೆ

ಕಳೆದ ಮೂರ್ನಾಲ್ಕು ತಿಂಗಳಲ್ಲಿ ಎಲ್ಲ ಎಟಿಎಂಗಳಲ್ಲೂ ಕಳ್ಳತನವಾಗಿದ್ದು, ಎಟಿಎಂ ಯಂತ್ರ ಸಹ ಎತ್ತುಕೊಂಡು ಹೋಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬೈಕುಂಠಪುರ ಪೊಲೀಸ್ ಠಾಣೆಯ ಹಾರ್ದಿಕಾದಲ್ಲಿನ ಎರಡು ಎಟಿಎಂಗಳಲ್ಲಿ ಕಳ್ಳತನವಾಗಿದ್ದು, 7 ಲಕ್ಷ ರೂಪಾಯಿ ಎಗರಿಸಿದ್ದಾರೆ. ಹೀಗಾಗಿ, ಬ್ಯಾಂಕ್ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಬಿಲಾಸ್​ಪುರದ ಎಸ್​ಬಿಐ ಎಟಿಎಂ, ಬೈಕುಂತ್​ಪುರದ ಎರಡು ಎಟಿಎಂ, ತಾವೆ ಬಸ್ ನಿಲ್ದಾಣದ ಬಳಿಯ ಎಟಿಎಂನಲ್ಲೂ ಕಳ್ಳತನವಾಗಿದೆ. ಹೀಗಾಗಿ, ಸದ್ಯ ಎಲ್ಲ ಬ್ಯಾಂಕ್​ಗಳ ಎಟಿಎಂ ಕೇಂದ್ರ ಬಂದ್ ಮಾಡಲಾಗಿದ್ದು, ತಕ್ಷಣದಲ್ಲೇ ಬೇರೆ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಗೋಪಾಲ್​ಗಂಜ್​(ಬಿಹಾರ): ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್​ ಇಂಡಿಯಾ ಕನಸಿಗೆ ಕಳ್ಳರು ಕನ್ನ ಹಾಕ್ತಿದ್ದು, ಬಿಹಾರದ ಗೋಪಾಲ್​ಗಂಜ್​​ನಲ್ಲಿರುವ ಅನೇಕ ಎಟಿಎಂಗಳಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಎಲ್ಲ ಎಟಿಎಂ ಬಂದ್ ಮಾಡಲಾಗಿದೆ. ಗೋಪಾಲ್​​ಗಂಜ್​​ನ ಗ್ರಾಮೀಣ ಪ್ರದೇಶಗಳಲ್ಲಿರುವ 17 ಎಟಿಎಂಗಳಿಗೆ ಕಳ್ಳರ ಕಾಟ ಹೆಚ್ಚಾಗಿರುವ ಕಾರಣ ಬೀಗ ಹಾಕಲಾಗಿದ್ದು, ಅವುಗಳನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬ್ಯಾಂಕ್​ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಗೋಪಾಲ್​ಗಂಜ್​ನ ವಿವಿಧ ಪ್ರದೇಶಗಳಲ್ಲಿ ಎಟಿಎಂ ಅಳವಡಿಕೆ ಮಾಡಲಾಗಿದೆ. ಆದರೆ, ಈ ಯಂತ್ರಗಳನ್ನ ಪದೇ ಪದೇ ಕಳ್ಳರು ಕಳ್ಳತನ ಮಾಡಿಕೊಂಡು ಹೋಗ್ತಿದ್ದಾರೆ. ಇದು ಪೊಲೀಸರಿಗೂ ತಲೆನೋವು ಆಗಿದೆ. ಹೀಗಾಗಿ, ಎಲ್ಲ ಎಟಿಎಂ ಬಂದ್​ ಆಗಿದ್ದು, ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.

ಕಳ್ಳರ ಕಾಟಕ್ಕೆ 17 ATM ಬಂದ್​​!

ಇದನ್ನೂ ಓದಿರಿ: ಭಗತ್​ ಸಿಂಗ್​ ಭಯೋತ್ಪಾದಕ: ಪಂಜಾಬ್​ ಸಂಸದನ ವಿವಾದಿತ ಹೇಳಿಕೆಗೆ ವ್ಯಾಪಕ ಟೀಕೆ

ಕಳೆದ ಮೂರ್ನಾಲ್ಕು ತಿಂಗಳಲ್ಲಿ ಎಲ್ಲ ಎಟಿಎಂಗಳಲ್ಲೂ ಕಳ್ಳತನವಾಗಿದ್ದು, ಎಟಿಎಂ ಯಂತ್ರ ಸಹ ಎತ್ತುಕೊಂಡು ಹೋಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬೈಕುಂಠಪುರ ಪೊಲೀಸ್ ಠಾಣೆಯ ಹಾರ್ದಿಕಾದಲ್ಲಿನ ಎರಡು ಎಟಿಎಂಗಳಲ್ಲಿ ಕಳ್ಳತನವಾಗಿದ್ದು, 7 ಲಕ್ಷ ರೂಪಾಯಿ ಎಗರಿಸಿದ್ದಾರೆ. ಹೀಗಾಗಿ, ಬ್ಯಾಂಕ್ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಬಿಲಾಸ್​ಪುರದ ಎಸ್​ಬಿಐ ಎಟಿಎಂ, ಬೈಕುಂತ್​ಪುರದ ಎರಡು ಎಟಿಎಂ, ತಾವೆ ಬಸ್ ನಿಲ್ದಾಣದ ಬಳಿಯ ಎಟಿಎಂನಲ್ಲೂ ಕಳ್ಳತನವಾಗಿದೆ. ಹೀಗಾಗಿ, ಸದ್ಯ ಎಲ್ಲ ಬ್ಯಾಂಕ್​ಗಳ ಎಟಿಎಂ ಕೇಂದ್ರ ಬಂದ್ ಮಾಡಲಾಗಿದ್ದು, ತಕ್ಷಣದಲ್ಲೇ ಬೇರೆ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.