ETV Bharat / bharat

Cylinder Blast: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಏಳು ಮಂದಿ ಸಾವು

author img

By

Published : Jul 24, 2021, 8:17 AM IST

ಸಿಲಿಂಡರ್ ಸ್ಫೋಟಗೊಂಡು​ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.

seven-people-of-guna-killed-in-cylinder-blast-cm-shivraj-singh-chauhan-granted-4-lakh-rupees-to-each-deceased-family
ಸಿಲಿಂಡರ್ ಬ್ಲಾಸ್ಟ್​ನಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಏಳು ಮಂದಿ ಸಾವು

ಗುನಾ(ಮಧ್ಯಪ್ರದೇಶ): ಕೆಲಸಕ್ಕಾಗಿ ಗುಜರಾತ್​​ಗೆ ತೆರಳಿದ್ದ ಮಧ್ಯಪ್ರದೇಶದ ಒಂದೇ ಕುಟುಂಬದ ಏಳು ಮಂದಿ ಗ್ಯಾಸ್​​ ಸಿಲಿಂಡರ್​ ಸ್ಫೋಟದಿಂದ ಅಹಮದಾಬಾದ್​ನಲ್ಲಿ ಸಾವನ್ನಪ್ಪಿದ್ದು, ಮೂವರು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರಲ್ಲಿ ಮಕ್ಕಳೂ ಇದ್ದಾರೆ.

ದುರ್ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸಂತಾಪ ಸೂಚಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮೃತರ ಸಂಬಂಧಿಕರಿಗೆ 4 ಲಕ್ಷ ರೂಪಾಯಿ ಮತ್ತು ಮೃತ ಮಕ್ಕಳ ಸಂಬಂಧಿಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • मुख्यमंत्री जी ने अहमदाबाद की फैक्ट्री में हुए हादसे पर संवेदना व्यक्त की और इसमें हताहत गुना के श्रमिकों के परिजनों को म.प्र. सरकार की ओर से 4 लाख, बच्चों के परिवार को 2 लाख देने व घायलों के नि:शुल्क इलाज की घोषणा की।

    — Office of Shivraj (@OfficeofSSC) July 23, 2021 " class="align-text-top noRightClick twitterSection" data=" ">

ಮಧ್ಯಪ್ರದೇಶದ ಮಕ್ಸುದನ್​ಗಢ್​ ತಹಸಿಲ್‌ನ ಬೆರವಾಸ್​​ ಗ್ರಾಮದವರಾದ ಮೃತರು, ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೆಲಸಕ್ಕೆ ಹೋಗಿದ್ದರು. ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿತ್ತು.

ಇದನ್ನೂ ಓದಿ: SLvIND: ಭಾರತದ ಸರಣಿ ಕ್ಲೀನ್ ಸ್ವೀಪ್ ಕನಸಿಗೆ ಸೋಲು... ಲಂಕಾಗೆ ಜಯ

ರಾಘವ್​ಗಢ ಶಾಸಕ ಜಯವರ್ಧನ್ ಸಿಂಗ್ ಕೂಡಾ ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಗಳಿಗೆ ಹೆಚ್ಚಿನ ಸಹಾಯದ ಭರವಸೆ ನೀಡಿದ್ದಾರೆ.

ಗುನಾ(ಮಧ್ಯಪ್ರದೇಶ): ಕೆಲಸಕ್ಕಾಗಿ ಗುಜರಾತ್​​ಗೆ ತೆರಳಿದ್ದ ಮಧ್ಯಪ್ರದೇಶದ ಒಂದೇ ಕುಟುಂಬದ ಏಳು ಮಂದಿ ಗ್ಯಾಸ್​​ ಸಿಲಿಂಡರ್​ ಸ್ಫೋಟದಿಂದ ಅಹಮದಾಬಾದ್​ನಲ್ಲಿ ಸಾವನ್ನಪ್ಪಿದ್ದು, ಮೂವರು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರಲ್ಲಿ ಮಕ್ಕಳೂ ಇದ್ದಾರೆ.

ದುರ್ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸಂತಾಪ ಸೂಚಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮೃತರ ಸಂಬಂಧಿಕರಿಗೆ 4 ಲಕ್ಷ ರೂಪಾಯಿ ಮತ್ತು ಮೃತ ಮಕ್ಕಳ ಸಂಬಂಧಿಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • मुख्यमंत्री जी ने अहमदाबाद की फैक्ट्री में हुए हादसे पर संवेदना व्यक्त की और इसमें हताहत गुना के श्रमिकों के परिजनों को म.प्र. सरकार की ओर से 4 लाख, बच्चों के परिवार को 2 लाख देने व घायलों के नि:शुल्क इलाज की घोषणा की।

    — Office of Shivraj (@OfficeofSSC) July 23, 2021 " class="align-text-top noRightClick twitterSection" data=" ">

ಮಧ್ಯಪ್ರದೇಶದ ಮಕ್ಸುದನ್​ಗಢ್​ ತಹಸಿಲ್‌ನ ಬೆರವಾಸ್​​ ಗ್ರಾಮದವರಾದ ಮೃತರು, ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೆಲಸಕ್ಕೆ ಹೋಗಿದ್ದರು. ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿತ್ತು.

ಇದನ್ನೂ ಓದಿ: SLvIND: ಭಾರತದ ಸರಣಿ ಕ್ಲೀನ್ ಸ್ವೀಪ್ ಕನಸಿಗೆ ಸೋಲು... ಲಂಕಾಗೆ ಜಯ

ರಾಘವ್​ಗಢ ಶಾಸಕ ಜಯವರ್ಧನ್ ಸಿಂಗ್ ಕೂಡಾ ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಗಳಿಗೆ ಹೆಚ್ಚಿನ ಸಹಾಯದ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.