ಛಾಪ್ರಾ (ಬಿಹಾರ): ಇಲ್ಲಿನ ಮಾರುತಿ ಮಾನಸ ಮಂದಿರದ ಪ್ರಧಾನ ಕಾರ್ಯದರ್ಶಿ ರಂಜಯ್ ಸಿಂಗ್ ಅವರು ಹನುಮ ಜಯಂತಿ ಪ್ರಯುಕ್ತ ವೇದಿಕೆಯಲ್ಲಿ ಪ್ರವಚನ ನಿಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದರು. ತಕ್ಷಣ ಅಲ್ಲಿದ್ದವರು ರಂಜಯ್ ಸಿಂಗ್ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಮಾರುತಿ ಮಾನಸ ಮಂದಿರದಲ್ಲಿ ಪ್ರತೀ ವರ್ಷ ಹನುಮ ಜಯಂತಿ ನಿಮಿತ್ತ ಪ್ರವಚನ ಕಾರ್ಯಕ್ರಮಗಳನ್ನು ಇವರು ಆಯೋಜಿಸುತ್ತಾರೆ. ಈ ಬಾರಿ ವೇದಿಕೆಯಲ್ಲಿ ಪ್ರವಚನ ನೀಡುತ್ತಿದ್ದಾಗ ಘಟನೆ ನಡೆದಿದೆ. ಪ್ರವಚನದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಕಾರಣ ಅವರು ಮಾತನಾಡುತ್ತಿದ್ದಂತೆ ಕುಸಿದು ಬೀಳುವುದು ಸೆರೆಯಾಗಿದೆ.
ಇದನ್ನೂ ಓದಿ : ಮನೆಯಲ್ಲಿ ಅಗ್ನಿ ಅವಘಡ: ನಿವೃತ್ತ IPS ಅಧಿಕಾರಿ ಸಾವು, ಪತ್ನಿ-ಪುತ್ರನಿಗೆ ಗಾಯ