ETV Bharat / bharat

ವಾಟ್ಸ್​ಆ್ಯಪ್​​​ ಡಿಪಿಗೆ ತೆಲಂಗಾಣದ ಮಾಜಿ ಸಿಜೆ ಫೋಟೋ ಬಳಸಿ 2 ಲಕ್ಷ ರೂ. ವಂಚನೆ

ತೆಲಂಗಾಣದ ಮಾಜಿ ಸಿಜೆ ಫೋಟೋ ವಾಟ್ಸ್​ಆ್ಯಪ್​ ​​ ಡಿಪಿಯಾಗಿ ಬಳಸಿಕೊಂಡಿರುವ ಸೈಬರ್ ಕಳ್ಳರು ಸಬ್​​ ರಿಜಿಸ್ಟ್ರಾರ್​ಗೆ ವಂಚನೆ ಮಾಡಿದ್ದಾರೆ.

author img

By

Published : Jul 19, 2022, 3:44 PM IST

Ex-CJ of Telangana whatsup DP
Ex-CJ of Telangana whatsup DP

ಹೈದರಾಬಾದ್​(ತೆಲಂಗಾಣ): ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಈ ಕೃತ್ಯಗಳು ನಡೆಯುತ್ತಿವೆ. ಸದ್ಯ ತೆಲಂಗಾಣದ ಮಾಜಿ ಸಿಜೆ ಸತೀಶ್ ಚಂದ್ರಶರ್ಮಾ ಅವರ ಫೋಟೋ ವಾಟ್ಸ್​​ಆ್ಯಪ್​ ​ ಡಿಪಿಯಾಗಿ ಬಳಸಿಕೊಂಡ ಸೈಬರ್ ಕಳ್ಳರು 2 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ.

ತೆಲಂಗಾಣ ಹೈಕೋರ್ಟ್​​ನಲ್ಲಿ ಸಬ್ ರಿಜಿಸ್ಟ್ರಾರ್​ ಆಗಿ ಕೆಲಸ ಮಾಡ್ತಿರುವ ಶ್ರೀಮನ್ನಾರಾಯಣ ಅವರಿಗೆ​ ವಂಚನೆ ಮಾಡಲಾಗಿದೆ. ವಾಟ್ಸ್​ಆ್ಯಪ್​ನಲ್ಲಿ ತಾವು ನ್ಯಾಯಮೂರ್ತಿ ಸತೀಶ್​ ಚಂದ್ರ ಶರ್ಮಾ ಎಂದು ಹೇಳಿಕೊಂಡು ಮೋಸ ಮಾಡಿದ್ದಾರೆ. 'ನಾನು ಮೀಟಿಂಗ್​​ನಲ್ಲಿದ್ದು, ತುರ್ತಾಗಿ ಹಣ ಬೇಕಾಗಿದೆ. ನನ್ನಲ್ಲಿರುವ ಎಲ್ಲ ಬ್ಯಾಂಕ್ ಕಾರ್ಡ್​​ಗಳು ಬ್ಲಾಕ್​ ಆಗಿವೆ. ನಿಮಗೆ ಅಮೆಜಾನ್ ಲಿಂಕ್ ಕಳುಹಿಸುತ್ತೇನೆ. ಅದರ ಮೂಲಕ 2 ಲಕ್ಷ ರೂಪಾಯಿ ನೀಡುವಂತೆ' ಸೈಬರ್​ ಕಳ್ಳರು ಮನವಿ ಮಾಡಿದ್ದಾರೆ.

ಸೈಬರ್​ ಕಳ್ಳರ ತಿಳಿಸಿರುವಂತೆ ಅಧಿಕಾರಿ ಶ್ರೀಮನ್ನಾರಾಯಣ 2 ಲಕ್ಷ ರೂಪಾಯಿ ಕಳುಹಿಸಿದ್ದಾರೆ. ಇದಾದ ಬಳಿಕ ವಾಟ್ಸ್​ಆ್ಯಪ್​ ಸಂಖ್ಯೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರ ಬೆನ್ನಲ್ಲೇ ಸೈಬರ್​ ಕ್ರೈಂ ಪೊಲೀಸರನ್ನ ಸಂಪರ್ಕಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಇದೀಗ ಆರೋಪಿಗಳಿಗೋಸ್ಕರ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿರಿ: ಹೆಚ್ಚುತ್ತಿದೆ ನಕಲಿ ಆ್ಯಪ್​ಗಳ ಹಾವಳಿ.. ಡಿಜಿಟಲ್ ಪಾವತಿ ವೇಳೆ ಎಚ್ಚರ ತಪ್ಪಿದರೆ ದುಡ್ಡು ಕಳೆದುಕೊಳ್ಳೋದು ಗ್ಯಾರೆಂಟಿ!!

ದೆಹಲಿ ಸಿಜೆ ಆಗಿ ಸತೀಶ್​ ಚಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ತೆಲಂಗಾಣದ ಸಿಜೆ ಆಗಿ ಅವರು ಕೆಲಸ ಮಾಡಿದ್ದಾರೆ. ತೆಲಂಗಾಣ ಹೈಕೋರ್ಟ್‌ನಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮನ್ನಾರಾಯಣ ಅವರಿಗೆ ಸೈಬರ್​ ಕಳ್ಳರು ಮೋಸ ಮಾಡಿದ್ದಾರೆ.

ಹೈದರಾಬಾದ್​(ತೆಲಂಗಾಣ): ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಈ ಕೃತ್ಯಗಳು ನಡೆಯುತ್ತಿವೆ. ಸದ್ಯ ತೆಲಂಗಾಣದ ಮಾಜಿ ಸಿಜೆ ಸತೀಶ್ ಚಂದ್ರಶರ್ಮಾ ಅವರ ಫೋಟೋ ವಾಟ್ಸ್​​ಆ್ಯಪ್​ ​ ಡಿಪಿಯಾಗಿ ಬಳಸಿಕೊಂಡ ಸೈಬರ್ ಕಳ್ಳರು 2 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ.

ತೆಲಂಗಾಣ ಹೈಕೋರ್ಟ್​​ನಲ್ಲಿ ಸಬ್ ರಿಜಿಸ್ಟ್ರಾರ್​ ಆಗಿ ಕೆಲಸ ಮಾಡ್ತಿರುವ ಶ್ರೀಮನ್ನಾರಾಯಣ ಅವರಿಗೆ​ ವಂಚನೆ ಮಾಡಲಾಗಿದೆ. ವಾಟ್ಸ್​ಆ್ಯಪ್​ನಲ್ಲಿ ತಾವು ನ್ಯಾಯಮೂರ್ತಿ ಸತೀಶ್​ ಚಂದ್ರ ಶರ್ಮಾ ಎಂದು ಹೇಳಿಕೊಂಡು ಮೋಸ ಮಾಡಿದ್ದಾರೆ. 'ನಾನು ಮೀಟಿಂಗ್​​ನಲ್ಲಿದ್ದು, ತುರ್ತಾಗಿ ಹಣ ಬೇಕಾಗಿದೆ. ನನ್ನಲ್ಲಿರುವ ಎಲ್ಲ ಬ್ಯಾಂಕ್ ಕಾರ್ಡ್​​ಗಳು ಬ್ಲಾಕ್​ ಆಗಿವೆ. ನಿಮಗೆ ಅಮೆಜಾನ್ ಲಿಂಕ್ ಕಳುಹಿಸುತ್ತೇನೆ. ಅದರ ಮೂಲಕ 2 ಲಕ್ಷ ರೂಪಾಯಿ ನೀಡುವಂತೆ' ಸೈಬರ್​ ಕಳ್ಳರು ಮನವಿ ಮಾಡಿದ್ದಾರೆ.

ಸೈಬರ್​ ಕಳ್ಳರ ತಿಳಿಸಿರುವಂತೆ ಅಧಿಕಾರಿ ಶ್ರೀಮನ್ನಾರಾಯಣ 2 ಲಕ್ಷ ರೂಪಾಯಿ ಕಳುಹಿಸಿದ್ದಾರೆ. ಇದಾದ ಬಳಿಕ ವಾಟ್ಸ್​ಆ್ಯಪ್​ ಸಂಖ್ಯೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರ ಬೆನ್ನಲ್ಲೇ ಸೈಬರ್​ ಕ್ರೈಂ ಪೊಲೀಸರನ್ನ ಸಂಪರ್ಕಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಇದೀಗ ಆರೋಪಿಗಳಿಗೋಸ್ಕರ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿರಿ: ಹೆಚ್ಚುತ್ತಿದೆ ನಕಲಿ ಆ್ಯಪ್​ಗಳ ಹಾವಳಿ.. ಡಿಜಿಟಲ್ ಪಾವತಿ ವೇಳೆ ಎಚ್ಚರ ತಪ್ಪಿದರೆ ದುಡ್ಡು ಕಳೆದುಕೊಳ್ಳೋದು ಗ್ಯಾರೆಂಟಿ!!

ದೆಹಲಿ ಸಿಜೆ ಆಗಿ ಸತೀಶ್​ ಚಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ತೆಲಂಗಾಣದ ಸಿಜೆ ಆಗಿ ಅವರು ಕೆಲಸ ಮಾಡಿದ್ದಾರೆ. ತೆಲಂಗಾಣ ಹೈಕೋರ್ಟ್‌ನಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮನ್ನಾರಾಯಣ ಅವರಿಗೆ ಸೈಬರ್​ ಕಳ್ಳರು ಮೋಸ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.