ಮುಂಬೈ(ಮಹಾರಾಷ್ಟ್ರ): ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯಾ ಕಳೆದುಕೊಂಡು ಪ್ಲಾಟ್ಫಾರ್ಮ್ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದ ಪ್ರಯಾಣಿಕನೊಬ್ಬನ ಪ್ರಾಣ ಕಾಪಾಡುವಲ್ಲಿ ಆರ್ಪಿಎಫ್ ಮಹಿಳಾ ಕಾನ್ಸ್ಟೇಬಲ್ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಹರ್ಬಾರ್ ಮಾರ್ಗದಲ್ಲಿರುವ ವಡಾಲಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ರೈಲು ಏರಲು ಹೋಗಿದ್ದಾನೆ. ಈ ವೇಳೆ, ಆಯಾತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಅದನ್ನ ನೋಡಿರುವ ಆರ್ಪಿಎಫ್ ಕಾನ್ಸ್ಟೇಬಲ್ ದೀಪಾ ರಾಣಿ ಆತನನ್ನ ಮೇಲೆ ಎಳೆದಿದ್ದಾಳೆ.
ಇದನ್ನೂ ಓದಿರಿ: ನಿಷೇಧವಿದ್ದರೂ ರಜನಿ ಯುಎಸ್ಗೆ ಹೋಗಿದ್ದೇಗೆ? ನಟಿ ಕಸ್ತೂರಿ ಶಂಕರ್ ಟ್ವೀಟ್
ಇಂದು ಬೆಳಗ್ಗೆ 9:50ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.