ETV Bharat / bharat

ನಕ್ಸಲ್​ ಕೇಡರ್​ನಲ್ಲಿ ಉಸಿರುಗಟ್ಟಿಸುವ ವಾತಾವರಣ.. ಶಸ್ತ್ರಾಸ್ತ್ರ ತ್ಯಜಿಸಿ ಪ್ರತಿವರ್ಷ 400 ಬಂಡುಕೋರರು ಶರಣಾಗತಿ

author img

By

Published : Jul 21, 2022, 6:19 PM IST

ನಕ್ಸಲ್​ ಕೇಡರ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣ- ಬೇಸತ್ತಿರುವ ಬಂಡುಕೋರರು- ಪ್ರತಿ ವರ್ಷ ಮುಖ್ಯವಾಹಿನಿಗೆ ಬರುತ್ತಿದ್ದಾರೆ 400 ನಕ್ಸಲೀಯರು

Chhattisgarh's Bastar Red bastion has begun crumbling
ಪ್ರತಿ ವರ್ಷ ಶಸ್ತ್ರಾಸ್ತ್ರ ತ್ಯಜಿಸುತ್ತಿರುವ ಕನಿಷ್ಠ 400 ನಕ್ಸಲೀಯರು

ಬಸ್ತಾರ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಸ್ತಾರ್ ವಿಭಾಗದಲ್ಲಿ ನಿಷೇಧಿತ ಸಂಘಟನೆಯಾದ ಸಿಪಿಐ (ಮಾವೋವಾದಿ) ಭದ್ರಕೋಟೆ ವೇಗವಾಗಿ ಕುಸಿಯುತ್ತಿರುವಂತೆ ಕಾಣುತ್ತಿದೆ. ಪ್ರತಿ ವರ್ಷ 400 ಮಂದಿ ಬಂಡುಕೋರರು ಭದ್ರತಾ ಪಡೆಗಳ ಮುಂದೆ ಶರಣಾಗುತ್ತಿದ್ದಾರೆ ಎಂಬ ಅಂಶದಿಂದ ಇದನ್ನು ಅಳೆಯಬಹುದಾಗಿದೆ.

ನಕ್ಸಲ್​ ಕೇಡರ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದು, ಇದರಿಂದ ಬೇಸತ್ತಿರುವ ಬಂಡುಕೋರರು ಸಮಾಜದ ಮುಖ್ಯವಾಹಿನಿಗೆ ಬರಲು ಆರಂಭಿಸಿದ್ದಾರೆ. ಸಿಪಿಐ (ಮಾವೋವಾದಿ)ಯ ಕಠಿಣ ತತ್ವಗಳಿಂದ ಸಂಪೂರ್ಣ ವಿಚಲಿತರಾಗಿರುವ ಕೆಂಪು ಉಗ್ರರು, ಸರ್ಕಾರ ಕೈಗೊಂಡಿರುವ ಪುನರ್ವಸತಿ ನೀತಿಯನ್ನು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. ಜೀವನದ ಮುಖ್ಯವಾಹಿನಿಗೆ ಬರಲು ಇಚ್ಛಿಸಿ, ಅಪಾರ ಸಂಖ್ಯೆಯಲ್ಲಿ ಅರೆಸೇನಾ ಪಡೆಗಳ ಮುಂದೆ ಶರಣಾಗುತ್ತಿದ್ದಾರೆ ಎಂದು ಬಸ್ತಾರ್ ರೇಂಜ್ ಐಜಿ ಸುಂದರರಾಜ್ ಪಟ್ಟಿಲಿಂಗಂ ಹೇಳಿದ್ದಾರೆ.

ಇದನ್ನೂ ಓದಿ: ತೃತೀಯಲಿಂಗಿ ಮೇಲೆ 15 ಕಾಮುಕರಿಂದ ಸಾಮೂಹಿಕ ಅತ್ಯಾಚಾರ!

ಪ್ರತಿ ವರ್ಷ ಕನಿಷ್ಠ 400 ನಕ್ಸಲೀಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಿದ್ದಾರೆ. ಸುಮಾರು 280 ಬಂಡುಕೋರರು ಸಶಸ್ತ್ರ ಪ್ರತಿರೋಧವನ್ನು ತ್ಯಜಿಸಿದ್ದಾರೆ ಮತ್ತು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಹೇಳಿದರು. ಇಲ್ಲಿಯವರೆಗೆ ಶಸ್ತ್ರಾಸ್ತ್ರ ತ್ಯಜಿಸಿದ ಕೆಲವು ನಕ್ಸಲೀಯರು ಬೆಚ್ಚಿಬೀಳಿಸುವ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಹಿರಿಯ ನಕ್ಸಲ್ ನಾಯಕರು ತಮ್ಮ ಅಧೀನ ಅಧಿಕಾರಿಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ. ಆದ್ದರಿಂದ ನಾವು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದೇವೆ ಎಂದು ಅವರು ಹೇಳಿದರು.

ಬಸ್ತಾರ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಸ್ತಾರ್ ವಿಭಾಗದಲ್ಲಿ ನಿಷೇಧಿತ ಸಂಘಟನೆಯಾದ ಸಿಪಿಐ (ಮಾವೋವಾದಿ) ಭದ್ರಕೋಟೆ ವೇಗವಾಗಿ ಕುಸಿಯುತ್ತಿರುವಂತೆ ಕಾಣುತ್ತಿದೆ. ಪ್ರತಿ ವರ್ಷ 400 ಮಂದಿ ಬಂಡುಕೋರರು ಭದ್ರತಾ ಪಡೆಗಳ ಮುಂದೆ ಶರಣಾಗುತ್ತಿದ್ದಾರೆ ಎಂಬ ಅಂಶದಿಂದ ಇದನ್ನು ಅಳೆಯಬಹುದಾಗಿದೆ.

ನಕ್ಸಲ್​ ಕೇಡರ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದು, ಇದರಿಂದ ಬೇಸತ್ತಿರುವ ಬಂಡುಕೋರರು ಸಮಾಜದ ಮುಖ್ಯವಾಹಿನಿಗೆ ಬರಲು ಆರಂಭಿಸಿದ್ದಾರೆ. ಸಿಪಿಐ (ಮಾವೋವಾದಿ)ಯ ಕಠಿಣ ತತ್ವಗಳಿಂದ ಸಂಪೂರ್ಣ ವಿಚಲಿತರಾಗಿರುವ ಕೆಂಪು ಉಗ್ರರು, ಸರ್ಕಾರ ಕೈಗೊಂಡಿರುವ ಪುನರ್ವಸತಿ ನೀತಿಯನ್ನು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. ಜೀವನದ ಮುಖ್ಯವಾಹಿನಿಗೆ ಬರಲು ಇಚ್ಛಿಸಿ, ಅಪಾರ ಸಂಖ್ಯೆಯಲ್ಲಿ ಅರೆಸೇನಾ ಪಡೆಗಳ ಮುಂದೆ ಶರಣಾಗುತ್ತಿದ್ದಾರೆ ಎಂದು ಬಸ್ತಾರ್ ರೇಂಜ್ ಐಜಿ ಸುಂದರರಾಜ್ ಪಟ್ಟಿಲಿಂಗಂ ಹೇಳಿದ್ದಾರೆ.

ಇದನ್ನೂ ಓದಿ: ತೃತೀಯಲಿಂಗಿ ಮೇಲೆ 15 ಕಾಮುಕರಿಂದ ಸಾಮೂಹಿಕ ಅತ್ಯಾಚಾರ!

ಪ್ರತಿ ವರ್ಷ ಕನಿಷ್ಠ 400 ನಕ್ಸಲೀಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಿದ್ದಾರೆ. ಸುಮಾರು 280 ಬಂಡುಕೋರರು ಸಶಸ್ತ್ರ ಪ್ರತಿರೋಧವನ್ನು ತ್ಯಜಿಸಿದ್ದಾರೆ ಮತ್ತು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಹೇಳಿದರು. ಇಲ್ಲಿಯವರೆಗೆ ಶಸ್ತ್ರಾಸ್ತ್ರ ತ್ಯಜಿಸಿದ ಕೆಲವು ನಕ್ಸಲೀಯರು ಬೆಚ್ಚಿಬೀಳಿಸುವ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಹಿರಿಯ ನಕ್ಸಲ್ ನಾಯಕರು ತಮ್ಮ ಅಧೀನ ಅಧಿಕಾರಿಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ. ಆದ್ದರಿಂದ ನಾವು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದೇವೆ ಎಂದು ಅವರು ಹೇಳಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.