ETV Bharat / bharat

ವಿಶ್ವಬ್ಯಾಂಕ್​​​ನಿಂದ ರೈಲ್ವೆ ಇಲಾಖೆ ₹12,000 ಕೋಟಿ ಸಾಲ ಪಡೆದಿದೆ: ಅಶ್ವಿನಿ ವೈಷ್ಣವ್​

author img

By

Published : Jul 22, 2022, 4:56 PM IST

ವಿಶ್ವ ಬ್ಯಾಂಕ್​​​ನಿಂದ ರೈಲ್ವೆ ಇಲಾಖೆ 12,000 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

Ashwini Vaishnaw
Ashwini Vaishnaw

ನವದೆಹಲಿ: ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (Eastern Dedicated Freight Corridor) ನಿರ್ಮಾಣಕ್ಕಾಗಿ ರೈಲ್ವೆ ಸಚಿವಾಲಯ ವಿಶ್ವಬ್ಯಾಂಕ್‌ನಿಂದ 12,543 ಕೋಟಿ ರೂಪಾಯಿ(1775 ಮಿಲಿಯನ್ ಯುಎಸ್ ಡಾಲರ್) ದೀರ್ಘಾವಧಿ ಸಾಲ ತೆಗೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್​ ಲಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ. ವಿಶ್ವಬ್ಯಾಂಕ್​​ನಿಂದ ಮೂರು ಹಂತಗಳಲ್ಲಿ ಸಾಲ ಪಡೆದುಕೊಳ್ಳಲಾಗಿದೆ. ಅಕ್ಟೋಬರ್ 27, 2011, ಡಿಸೆಂಬರ್ 11, 2014 ಮತ್ತು 21 ಅಕ್ಟೋಬರ್ 2016 ಆಗಿದೆ. ಸಾಲದ ಮೊತ್ತವು 555 US$ ಮಿಲಿಯನ್, 660 US$ ಮಿಲಿಯನ್ ಹಾಗೂ 560 US$ ಮಿಲಿಯನ್ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ವಿಶೇಷಚೇತನ ಕಲಾವಿದನ ಆಸೆ ಪೂರೈಸಿದ ಅಸ್ಸೋಂ ಸಿಎಂ.. ಪಿಎಂಗೆ ವಿಶೇಷ ಗಿಫ್ಟ್​​ ನೀಡಿದ ಅಭಿಜೀತ್​!

ಇದೇ ವೇಳೆ, ಸರಕು ಸಾಗಣೆ ಕಾರಿಡಾರ್​​ ಕಾಮಗಾರಿಗೋಸ್ಕರ 90,723 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಸಾಲದಲ್ಲಿ ಕೇಂದ್ರ ಸರ್ಕಾರ ಶೇ.100ರಷ್ಟು ಹಣ ನೀಡುತ್ತಿದೆ. ರಾಜ್ಯ ಸರ್ಕಾರಗಳು ಭೂಸ್ವಾಧೀನ, ಪರಿಸರ ಅನುಮತಿ, ರೋಡ್​ ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಮಾತ್ರ ಮಾಡುತ್ತಿವೆ ಎಂದಿದ್ದಾರೆ.

ಇದೇ ವೇಳೆ ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರೈಲ್ವೆ ಇಲಾಖೆ ಬರೋಬ್ಬರಿ 259.44 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದಿದ್ದಾರೆ.

ನವದೆಹಲಿ: ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (Eastern Dedicated Freight Corridor) ನಿರ್ಮಾಣಕ್ಕಾಗಿ ರೈಲ್ವೆ ಸಚಿವಾಲಯ ವಿಶ್ವಬ್ಯಾಂಕ್‌ನಿಂದ 12,543 ಕೋಟಿ ರೂಪಾಯಿ(1775 ಮಿಲಿಯನ್ ಯುಎಸ್ ಡಾಲರ್) ದೀರ್ಘಾವಧಿ ಸಾಲ ತೆಗೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್​ ಲಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ. ವಿಶ್ವಬ್ಯಾಂಕ್​​ನಿಂದ ಮೂರು ಹಂತಗಳಲ್ಲಿ ಸಾಲ ಪಡೆದುಕೊಳ್ಳಲಾಗಿದೆ. ಅಕ್ಟೋಬರ್ 27, 2011, ಡಿಸೆಂಬರ್ 11, 2014 ಮತ್ತು 21 ಅಕ್ಟೋಬರ್ 2016 ಆಗಿದೆ. ಸಾಲದ ಮೊತ್ತವು 555 US$ ಮಿಲಿಯನ್, 660 US$ ಮಿಲಿಯನ್ ಹಾಗೂ 560 US$ ಮಿಲಿಯನ್ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ವಿಶೇಷಚೇತನ ಕಲಾವಿದನ ಆಸೆ ಪೂರೈಸಿದ ಅಸ್ಸೋಂ ಸಿಎಂ.. ಪಿಎಂಗೆ ವಿಶೇಷ ಗಿಫ್ಟ್​​ ನೀಡಿದ ಅಭಿಜೀತ್​!

ಇದೇ ವೇಳೆ, ಸರಕು ಸಾಗಣೆ ಕಾರಿಡಾರ್​​ ಕಾಮಗಾರಿಗೋಸ್ಕರ 90,723 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಸಾಲದಲ್ಲಿ ಕೇಂದ್ರ ಸರ್ಕಾರ ಶೇ.100ರಷ್ಟು ಹಣ ನೀಡುತ್ತಿದೆ. ರಾಜ್ಯ ಸರ್ಕಾರಗಳು ಭೂಸ್ವಾಧೀನ, ಪರಿಸರ ಅನುಮತಿ, ರೋಡ್​ ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಮಾತ್ರ ಮಾಡುತ್ತಿವೆ ಎಂದಿದ್ದಾರೆ.

ಇದೇ ವೇಳೆ ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರೈಲ್ವೆ ಇಲಾಖೆ ಬರೋಬ್ಬರಿ 259.44 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.