ಸೂರಜಕುಂಡ್ (ಹರಿಯಾಣ): ತಂತ್ರಜ್ಞಾನ ಬಳಸಿಕೊಂಡು ದೇಶದ ಕಾನೂನು ಸುವ್ಯವಸ್ಥೆ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡಿದ್ದಾರೆ. ಶುಕ್ರವಾರ ಹರಿಯಾಣದ ಸೂರಜ್ಕುಂಡ್ನಲ್ಲಿ ರಾಜ್ಯಗಳ ಗೃಹ ಸಚಿವರ ಚಿಂತನ್ ಶಿಬಿರ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ತಂತ್ರಜ್ಞಾನದ ವೆಚ್ಚ ಇತರ ವೆಚ್ಚಗಳನ್ನು ಉಳಿಸುತ್ತದೆ ಎಂದು ಹೇಳಿದರು.
ಭಾರತದ ಕಾನೂನು ಮತ್ತು ಸುವ್ಯವಸ್ಥೆಯ ವ್ಯವಸ್ಥೆಯು ಸ್ಮಾರ್ಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ ಎಂದು ರಾಜ್ಯಗಳ ಗೃಹ ಸಚಿವರು, ಗೃಹ ಕಾರ್ಯದರ್ಶಿಗಳು, ಡಿಜಿಪಿಗಳು, ಸಿಎಪಿಎಫ್ಗಳು ಮತ್ತು ಸಿಪಿಒಗಳು ಭಾಗವಹಿಸಿದ್ದ ಎರಡು ದಿನಗಳ ಚಿಂತನ್ ಶಿಬಿರ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡ ಪ್ರಧಾನಿ ಮೋದಿ ಹೇಳಿದರು.
-
#WATCH | "In past few yrs, all govts have acted responsibly to demolish ground network of terror...We need to handle it by combining our forces. We'll have to defeat all forms of Naxalism - be it gun totting or pen wielding, we'll have to find a solution for all of them," says PM pic.twitter.com/4OcVJliHgK
— ANI (@ANI) October 28, 2022 " class="align-text-top noRightClick twitterSection" data="
">#WATCH | "In past few yrs, all govts have acted responsibly to demolish ground network of terror...We need to handle it by combining our forces. We'll have to defeat all forms of Naxalism - be it gun totting or pen wielding, we'll have to find a solution for all of them," says PM pic.twitter.com/4OcVJliHgK
— ANI (@ANI) October 28, 2022#WATCH | "In past few yrs, all govts have acted responsibly to demolish ground network of terror...We need to handle it by combining our forces. We'll have to defeat all forms of Naxalism - be it gun totting or pen wielding, we'll have to find a solution for all of them," says PM pic.twitter.com/4OcVJliHgK
— ANI (@ANI) October 28, 2022
ಪೊಲೀಸ್ ಪಡೆಗಳ ಆಧುನೀಕರಣ, ಮಹಿಳಾ ಸುರಕ್ಷತೆ ಮತ್ತು ಮಾದಕವಸ್ತು ಕಳ್ಳಸಾಗಣೆ ವಿಷಯ ಇವು ಸೂರಜ್ಕುಂಡ್ನಲ್ಲಿ ನಡೆಯುತ್ತಿರುವ ಎರಡು ದಿನಗಳ ಚಿಂತನ್ ಶಿಬಿರ್ನ ಕಾರ್ಯಸೂಚಿಯಲ್ಲಿ ಸೇರಿವೆ.
ಸೂರಜ್ಕುಂಡ್ನಲ್ಲಿ ನಡೆಯುತ್ತಿರುವ ರಾಜ್ಯಗಳ ಗೃಹಸಚಿವರ ಈ ಚಿಂತನ್ ಶಿಬಿರ್ ಸಹಕಾರಿ ಫೆಡರಲಿಸಂಗೆ ಅತ್ಯುತ್ತಮ ಉದಾಹರಣೆಯಾಗಿದೆ. ರಾಜ್ಯಗಳು ಪರಸ್ಪರ ಕಲಿಯಬಹುದು, ಪರಸ್ಪರ ಸ್ಫೂರ್ತಿ ಪಡೆಯಬಹುದು ಮತ್ತು ದೇಶದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಬಹುದು - ಇದು ಸಂವಿಧಾನದ ಆಶಯವಾಗಿದೆ ಮತ್ತು ನಮ್ಮ ನಾಗರಿಕರಿಗಾಗಿ ನಾವು ನಿಭಾಯಿಸಬೇಕಾದ ಕರ್ತವ್ಯವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ವಿವಿಧ ಸವಾಲುಗಳ ನಡುವೆ, ಹಬ್ಬಗಳ ಸಂದರ್ಭದಲ್ಲಿ ದೇಶದ ಏಕತೆಯನ್ನು ಬಲಪಡಿಸುವುದು ನಿಮ್ಮ ಸಿದ್ಧತೆಗಳ ಪ್ರತಿಬಿಂಬವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ಜವಾಬ್ದಾರಿಯಾಗಿದೆ. ಆದರೆ ಇವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಸಂಬಂಧಿಸಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನುಓದಿ :ರಿಷಿ ಸುನಕ್ ಜೊತೆ ಪ್ರಧಾನಿ ಮೋದಿ ಮೊದಲ ಮಾತುಕತೆ: ಮುಕ್ತ ವ್ಯಾಪಾರ ಒಪ್ಪಂದ ಬಗ್ಗೆ ಚರ್ಚೆ