ETV Bharat / bharat

ಪ್ರಜೆಗಳ ಸ್ಥಿತಿಯಿಂದ ನಾಗರಿಕ ಸ್ಥಾನಮಾನ ಪರಿವರ್ತನೆಯೇ ಸಂವಿಧಾನ ಪೀಠಿಕೆಯ ಜೀವಾಳ: ಸಿಜೆಐ ಚಂದ್ರಚೂಡ್

author img

By

Published : Feb 12, 2023, 5:09 PM IST

ನ್ಯಾಯವು ಅನ್ಯಾಯದ ಮೂಲ ಕಾರಣವನ್ನು ನಿಭಾಯಿಸುತ್ತದೆ, ಆದರೆ ದಾನವು ಅನ್ಯಾಯದ ನಂತರದ ಪರಿಣಾಮಗಳನ್ನು ಪರಿಹರಿಸುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ. ಕಾನೂನು ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

Preamble marks transition of people from subjects to citizens CJI DY Chandrachud
Preamble marks transition of people from subjects to citizens CJI DY Chandrachud

ನಾಗ್ಪುರ (ಮಹಾರಾಷ್ಟ್ರ) : ನ್ಯಾಯದಾನ ವ್ಯವಸ್ಥೆಯು ಅನ್ಯಾಯದ ಮೂಲ ಕಾರಣವನ್ನು ನಿಭಾಯಿಸುತ್ತದೆ. ಆದರೆ ಧರ್ಮಾರ್ಥವು ಅದರ ಪರಿಣಾಮಗಳನ್ನು ಪರಿಹರಿಸುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶನಿವಾರ ಹೇಳಿದ್ದಾರೆ. ನಾಗ್ಪುರದಲ್ಲಿ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಸಿಜೆಐ, ಪೀಠಿಕೆಯು ಸಂವಿಧಾನದ ಒಂದು ಚಿಕ್ಕದಾದರೂ ಮಹತ್ವದ ಭಾಗವಾಗಿದೆ. ಭಾರತದ ಜನ ಈ ಸಂವಿಧಾನವನ್ನು ತಮಗೆ ತಾವೇ ಕೊಟ್ಟಿದ್ದಾರೆ ಎಂಬುದನ್ನು ಹೇಳುತ್ತದೆ. ಇದು ಭಾರತೀಯ ಸಮಾಜವನ್ನು 'ಪ್ರಜೆ' ಸ್ಥಿತಿಯಿಂದ 'ನಾಗರಿಕ' ಸ್ಥಾನಮಾನದ ಪರಿವರ್ತನೆಯನ್ನು ಸೂಚಿಸುತ್ತದೆ.

ವಸಾಹತುಶಾಹಿ ಆಡಳಿತಗಾರರು ಸಂವಿಧಾನವನ್ನು ಅನುಗ್ರಹದ ವಿಷಯವಾಗಿ ನೀಡಲಿಲ್ಲ, ಬದಲಿಗೆ ಅದು ಸ್ವದೇಶಿಯಾಗಿದೆ. ಸಾಂವಿಧಾನಿಕ ಮೌಲ್ಯಗಳಿಂದ ಮಾರ್ಗದರ್ಶನ ಪಡೆದರೆ ನೀವು ವಿಫಲರಾಗುವುದಿಲ್ಲ ಎಂದು ಅವರು ಹೇಳಿದರು. ಸಿಜೆಐ ಚಂದ್ರಚೂಡ್ ಅವರು ನ್ಯಾಯ ಮತ್ತು ಧರ್ಮಾರ್ಥಗಳ ನಡುವಿನ ವ್ಯತ್ಯಾಸವನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು ಮತ್ತು ಧರ್ಮಾರ್ಥ ಎಂಬುದು ನಾಗರಿಕನ ಸಂಪೂರ್ಣ ಹಕ್ಕುಗಳ ಚಲಾವಣೆಯ ದುರ್ಬಲ ಪರ್ಯಾಯವಾಗಿದೆ ಎಂದು ಹೇಳಿದರು.

ನ್ಯಾಯವು ದೃಢವಾಗಿ ಬೇರೂರಿದೆ, ಪ್ರತಿಯೊಬ್ಬ ಜನರು ಕೆಲವು ಬೇರ್ಪಡಿಸಲಾಗದ ಹಕ್ಕುಗಳನ್ನು ಹೊಂದಿದ್ದಾರೆ. ಮತ್ತೊಂದೆಡೆ, ದಾನವು ದಾನ ಮಾಡುವ ವ್ಯಕ್ತಿಯ ಶ್ರೇಷ್ಠತೆಯ ಮೇಲೆ ಆಧಾರಿತವಾಗಿದೆ. ನ್ಯಾಯವು ಅನ್ಯಾಯದ ಮೂಲ ಕಾರಣವನ್ನು ನಿಭಾಯಿಸುತ್ತದೆ. ಆದರೆ ದಾನವು ಅನ್ಯಾಯದ ನಂತರದ ಪರಿಣಾಮಗಳನ್ನು ಪರಿಹರಿಸುತ್ತದೆ. ನ್ಯಾಯವು ನಾಗರಿಕರನ್ನು ಸಬಲೀಕರಣಗೊಳಿಸುವುದು ಮತ್ತು ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಮತ್ತು ಅವರಿಗೆ ಅರ್ಹವಾದ ಎಲ್ಲಾ ಹಕ್ಕುಗಳನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಆದರೆ, ದಾನ ಮಾಡುವುದರ ವಿರುದ್ಧ ಯಾರಿಗೂ ಸಲಹೆ ನೀಡುತ್ತಿಲ್ಲ ಎಂದು ಸಿಜೆಐ ಹೇಳಿದ್ದಾರೆ. ಏನನ್ನೂ ಹೇಳದಿರುವುದು ಅಥವಾ ಮಾಡದಿರುವುದು ಬಹುಶಃ ಸುರಕ್ಷಿತ ಅಥವಾ ಕಡಿಮೆ ಅಪಾಯಕಾರಿ ಆಯ್ಕೆಯಾಗಿದೆ ಎಂದು ನಾನು ನಿಮಗೆ ಎಚ್ಚರಿಕೆ ನೀಡಬಯಸುತ್ತೇನೆ. ಆದರೆ ಹೆಚ್ಚು ಕಷ್ಟಕರವಾದ ಆಯ್ಕೆಯನ್ನು ಆರಿಸುವುದು ಮತ್ತು ಆ ಮೂಲಕ ಬದಲಾವಣೆ ತರುವುದು ಹಾಗೂ ಕಾನೂನು ಮತ್ತು ಸಮಾಜವನ್ನು ನ್ಯಾಯದೊಂದಿಗೆ ಮರು ಹೊಂದಿಸಲು ಪ್ರಯತ್ನಿಸುವುದು ಹೆಚ್ಚು ಧೈರ್ಯಶಾಲಿ ಆಯ್ಕೆಯಾಗಿದೆ ಎಂದು ಅವರು ತಿಳಿಸಿದರು.

ಚಂದ್ರಚೂಡ್ ವಿರುದ್ಧದ ಅರ್ಜಿ ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್: ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿದ್ದನ್ನು ತಿರಸ್ಕರಿಸಿದ ತನ್ನ ಆದೇಶವನ್ನು ಮರು ಪರಿಶೀಲಿಸಬೇಕೆಂದು ಕೋರಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಜನವರಿ 16, 2023 ರಂದು ವಜಾಗೊಳಿಸಿತ್ತು. ಅರ್ಜಿಯ ಮರು ವಿಚಾರಣೆಯನ್ನು ಕೋರುವ ನೆಪದಲ್ಲಿ ಈ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿತ್ತು.

ಹೈಕೋರ್ಟ್‌ನ ಮತ್ತೊಂದು ಪೀಠವು 2022 ರ ನವೆಂಬರ್ 11 ರ ಆದೇಶವನ್ನು ಪರಿಶೀಲಿಸಲು ಯಾವುದೇ ಆಧಾರವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಸಚ್‌ದೇವ ಮತ್ತು ವಿಕಾಸ್ ಮಹಾಜನ್ ಅವರಿದ್ದ ಪೀಠ ಹೇಳಿದೆ. ಅಲ್ಲದೆ ಅರ್ಜಿದಾರರಿಗೆ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಸಿಜೆಐ ಆಗಿ ನೇಮಕ ಮಾಡುವುದರ ವಿರುದ್ಧ ಸಂಜೀವ್ ಕುಮಾರ್ ತಿವಾರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಕಳೆದ ವರ್ಷ ವಜಾಗೊಳಿಸಿತ್ತು.

ಇದನ್ನೂ ಓದಿ: ಅಯೋಧ್ಯೆ, ತ್ರಿವಳಿ ತಲಾಖ್‌..: ಐತಿಹಾಸಿಕ ತೀರ್ಪಿತ್ತ ಕರ್ನಾಟಕದ ನ್ಯಾ.ಅಬ್ದುಲ್‌ ನಜೀರ್‌ ಈಗ ಆಂಧ್ರ ರಾಜ್ಯಪಾಲ

ನಾಗ್ಪುರ (ಮಹಾರಾಷ್ಟ್ರ) : ನ್ಯಾಯದಾನ ವ್ಯವಸ್ಥೆಯು ಅನ್ಯಾಯದ ಮೂಲ ಕಾರಣವನ್ನು ನಿಭಾಯಿಸುತ್ತದೆ. ಆದರೆ ಧರ್ಮಾರ್ಥವು ಅದರ ಪರಿಣಾಮಗಳನ್ನು ಪರಿಹರಿಸುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶನಿವಾರ ಹೇಳಿದ್ದಾರೆ. ನಾಗ್ಪುರದಲ್ಲಿ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಸಿಜೆಐ, ಪೀಠಿಕೆಯು ಸಂವಿಧಾನದ ಒಂದು ಚಿಕ್ಕದಾದರೂ ಮಹತ್ವದ ಭಾಗವಾಗಿದೆ. ಭಾರತದ ಜನ ಈ ಸಂವಿಧಾನವನ್ನು ತಮಗೆ ತಾವೇ ಕೊಟ್ಟಿದ್ದಾರೆ ಎಂಬುದನ್ನು ಹೇಳುತ್ತದೆ. ಇದು ಭಾರತೀಯ ಸಮಾಜವನ್ನು 'ಪ್ರಜೆ' ಸ್ಥಿತಿಯಿಂದ 'ನಾಗರಿಕ' ಸ್ಥಾನಮಾನದ ಪರಿವರ್ತನೆಯನ್ನು ಸೂಚಿಸುತ್ತದೆ.

ವಸಾಹತುಶಾಹಿ ಆಡಳಿತಗಾರರು ಸಂವಿಧಾನವನ್ನು ಅನುಗ್ರಹದ ವಿಷಯವಾಗಿ ನೀಡಲಿಲ್ಲ, ಬದಲಿಗೆ ಅದು ಸ್ವದೇಶಿಯಾಗಿದೆ. ಸಾಂವಿಧಾನಿಕ ಮೌಲ್ಯಗಳಿಂದ ಮಾರ್ಗದರ್ಶನ ಪಡೆದರೆ ನೀವು ವಿಫಲರಾಗುವುದಿಲ್ಲ ಎಂದು ಅವರು ಹೇಳಿದರು. ಸಿಜೆಐ ಚಂದ್ರಚೂಡ್ ಅವರು ನ್ಯಾಯ ಮತ್ತು ಧರ್ಮಾರ್ಥಗಳ ನಡುವಿನ ವ್ಯತ್ಯಾಸವನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು ಮತ್ತು ಧರ್ಮಾರ್ಥ ಎಂಬುದು ನಾಗರಿಕನ ಸಂಪೂರ್ಣ ಹಕ್ಕುಗಳ ಚಲಾವಣೆಯ ದುರ್ಬಲ ಪರ್ಯಾಯವಾಗಿದೆ ಎಂದು ಹೇಳಿದರು.

ನ್ಯಾಯವು ದೃಢವಾಗಿ ಬೇರೂರಿದೆ, ಪ್ರತಿಯೊಬ್ಬ ಜನರು ಕೆಲವು ಬೇರ್ಪಡಿಸಲಾಗದ ಹಕ್ಕುಗಳನ್ನು ಹೊಂದಿದ್ದಾರೆ. ಮತ್ತೊಂದೆಡೆ, ದಾನವು ದಾನ ಮಾಡುವ ವ್ಯಕ್ತಿಯ ಶ್ರೇಷ್ಠತೆಯ ಮೇಲೆ ಆಧಾರಿತವಾಗಿದೆ. ನ್ಯಾಯವು ಅನ್ಯಾಯದ ಮೂಲ ಕಾರಣವನ್ನು ನಿಭಾಯಿಸುತ್ತದೆ. ಆದರೆ ದಾನವು ಅನ್ಯಾಯದ ನಂತರದ ಪರಿಣಾಮಗಳನ್ನು ಪರಿಹರಿಸುತ್ತದೆ. ನ್ಯಾಯವು ನಾಗರಿಕರನ್ನು ಸಬಲೀಕರಣಗೊಳಿಸುವುದು ಮತ್ತು ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಮತ್ತು ಅವರಿಗೆ ಅರ್ಹವಾದ ಎಲ್ಲಾ ಹಕ್ಕುಗಳನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಆದರೆ, ದಾನ ಮಾಡುವುದರ ವಿರುದ್ಧ ಯಾರಿಗೂ ಸಲಹೆ ನೀಡುತ್ತಿಲ್ಲ ಎಂದು ಸಿಜೆಐ ಹೇಳಿದ್ದಾರೆ. ಏನನ್ನೂ ಹೇಳದಿರುವುದು ಅಥವಾ ಮಾಡದಿರುವುದು ಬಹುಶಃ ಸುರಕ್ಷಿತ ಅಥವಾ ಕಡಿಮೆ ಅಪಾಯಕಾರಿ ಆಯ್ಕೆಯಾಗಿದೆ ಎಂದು ನಾನು ನಿಮಗೆ ಎಚ್ಚರಿಕೆ ನೀಡಬಯಸುತ್ತೇನೆ. ಆದರೆ ಹೆಚ್ಚು ಕಷ್ಟಕರವಾದ ಆಯ್ಕೆಯನ್ನು ಆರಿಸುವುದು ಮತ್ತು ಆ ಮೂಲಕ ಬದಲಾವಣೆ ತರುವುದು ಹಾಗೂ ಕಾನೂನು ಮತ್ತು ಸಮಾಜವನ್ನು ನ್ಯಾಯದೊಂದಿಗೆ ಮರು ಹೊಂದಿಸಲು ಪ್ರಯತ್ನಿಸುವುದು ಹೆಚ್ಚು ಧೈರ್ಯಶಾಲಿ ಆಯ್ಕೆಯಾಗಿದೆ ಎಂದು ಅವರು ತಿಳಿಸಿದರು.

ಚಂದ್ರಚೂಡ್ ವಿರುದ್ಧದ ಅರ್ಜಿ ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್: ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿದ್ದನ್ನು ತಿರಸ್ಕರಿಸಿದ ತನ್ನ ಆದೇಶವನ್ನು ಮರು ಪರಿಶೀಲಿಸಬೇಕೆಂದು ಕೋರಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಜನವರಿ 16, 2023 ರಂದು ವಜಾಗೊಳಿಸಿತ್ತು. ಅರ್ಜಿಯ ಮರು ವಿಚಾರಣೆಯನ್ನು ಕೋರುವ ನೆಪದಲ್ಲಿ ಈ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿತ್ತು.

ಹೈಕೋರ್ಟ್‌ನ ಮತ್ತೊಂದು ಪೀಠವು 2022 ರ ನವೆಂಬರ್ 11 ರ ಆದೇಶವನ್ನು ಪರಿಶೀಲಿಸಲು ಯಾವುದೇ ಆಧಾರವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಸಚ್‌ದೇವ ಮತ್ತು ವಿಕಾಸ್ ಮಹಾಜನ್ ಅವರಿದ್ದ ಪೀಠ ಹೇಳಿದೆ. ಅಲ್ಲದೆ ಅರ್ಜಿದಾರರಿಗೆ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಸಿಜೆಐ ಆಗಿ ನೇಮಕ ಮಾಡುವುದರ ವಿರುದ್ಧ ಸಂಜೀವ್ ಕುಮಾರ್ ತಿವಾರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಕಳೆದ ವರ್ಷ ವಜಾಗೊಳಿಸಿತ್ತು.

ಇದನ್ನೂ ಓದಿ: ಅಯೋಧ್ಯೆ, ತ್ರಿವಳಿ ತಲಾಖ್‌..: ಐತಿಹಾಸಿಕ ತೀರ್ಪಿತ್ತ ಕರ್ನಾಟಕದ ನ್ಯಾ.ಅಬ್ದುಲ್‌ ನಜೀರ್‌ ಈಗ ಆಂಧ್ರ ರಾಜ್ಯಪಾಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.