ETV Bharat / bharat

'ಕೇಂದ್ರದ ಗಿಣಿ': ಕ್ಯಾ.ಅಮರೀಂದರ್‌ ವಿರುದ್ಧ ಸಿಧು ವಾಗ್ದಾಳಿ

author img

By

Published : Jan 7, 2022, 5:12 PM IST

ಪ್ರಧಾನಿ ನರೇಂದ್ರ ಮೋದಿಗೆ ಉಂಟಾಗಿರುವ ಭದ್ರತಾ ಲೋಪ ಬಿಜೆಪಿ-ಕಾಂಗ್ರೆಸ್​ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಇದೇ ವಿಷಯವನ್ನಿಟ್ಟುಕೊಂಡು ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಇದೀಗ ಮಾಜಿ ಸಿಎಂ ಕ್ಯಾ.ಅಮರೀಂದರ್​ ಸಿಂಗ್​​ ವಿರುದ್ಧ ವಾಗ್ದಾಳಿ ನಡೆಸಿದರು.

PM Modi security breach
PM Modi security breach

ಚಂಡೀಗಢ(ಪಂಜಾಬ್​): ಪಂಜಾಬ್​ನ ಫಿರೋಜ್​ಪುರ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಎದುರಿಸಿರುವ ಕುರಿತಾಗಿ ಕಾಂಗ್ರೆಸ್​ ಮುಖಂಡ ನವಜೋತ್​​ ಸಿಂಗ್​ ಸಿಧು ಇದೀಗ ಪಂಜಾಬ್​ ಮಾಜಿ ಸಿಎಂ ಕ್ಯಾ. ಅಮರೀಂದರ್​ ಸಿಂಗ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಪಂಜಾಬ್​​ನಲ್ಲಿ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಮಾತನಾಡುವ ಕ್ಯಾ.ಅಮರೀಂದರ್​ ಸಿಂಗ್​ ನಿಮ್ಮ 'ಗಿಣಿ'(ಕೇಂದ್ರದ) ಇದ್ದಹಾಗೆ ಎಂದಿದ್ದಾರೆ.

ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಪಂಜಾಬ್‌ನ ಚನ್ನಿ ಸರ್ಕಾರದ ನಡೆ ಸಮರ್ಥಿಸಿಕೊಂಡಿರುವ ಸಿಧು, ಕಳೆದ ಎರಡು ದಿನಗಳಿಂದ ಭದ್ರತೆ ಬಗ್ಗೆ ಕೆಲ ಬುದ್ಧಿಹೀನರು ಮಾತನಾಡುತ್ತಿದ್ದಾರೆ. ಅದರಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​​ ಕೂಡ ಒಬ್ಬರು. ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ತಕ್ಕ ಶಾಸ್ತಿ ಆಗಲಿದೆ ಎಂದು ಹೇಳಿದರು.

  • They (BJP) must stop playing politics. You will get a befitting reply here. All those talking about President's Rule (in Punjab), are your (BJP) parrots: Punjab Congress Chief Navjot Singh Sidhu in Chandigarh pic.twitter.com/hQxnEcsJ8J

    — ANI (@ANI) January 7, 2022 " class="align-text-top noRightClick twitterSection" data=" ">

ರಾಜ್ಯದಲ್ಲಿ ಬಿಜೆಪಿಗೆ ಮತವೂ ಇಲ್ಲ, ಬೆಂಬಲವೂ ಇಲ್ಲ ಎಂದು ವಾಗ್ದಾಳಿ ನಡೆಸಿರುವ ಸಿಧು, 7,000 ಕುರ್ಚಿ ಹಾಕಲಾಗಿದ್ದ ಸಭೆಯಲ್ಲಿ ಕೇವಲ 500 ಜನರು ಕುಳಿತುಕೊಂಡಿದ್ದರು. ಇಂತಹ ಸಭೆಯಲ್ಲಿ ಪ್ರಧಾನಿ ಹೇಗೆ ಮಾತನಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಅರೆರೆ, ಇದು ನಾಯಿ ಮರಿ ಅಲ್ವೇ? ಖಂಡಿತಾ ಅಲ್ಲ, ಅಸಲಿ ಚಿತ್ರ ಒಳಗಿದೆ ನೋಡಿ!

ಪ್ರಧಾನಿ ಕಚೇರಿ ರಕ್ಷಣೆ ಮಾಡಲು ಲಕ್ಷಾಂತರ ಪಂಜಾಬಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬ ಪಂಜಾಬಿ ಮತ್ತು ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ರಾಷ್ಟ್ರ ರಕ್ಷಣೆ ಮಾಡಲು ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಡುತ್ತಾರೆ ಎಂದು ತಿಳಿಸಿದರು.

ಪ್ರಧಾನಿ ಮೋದಿಗೆ ಭದ್ರತಾ ಲೋಪ ಉಂಟಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕ್ಯಾ. ಅಮರೀಂದರ್​ ಸಿಂಗ್​, ಪಂಜಾಬ್​​ನಲ್ಲಿ ಕಾಂಗ್ರೆಸ್​ ಸರ್ಕಾರವನ್ನು ವಜಾಗೊಳಿಸಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಒತ್ತಾಯಿಸಿದ್ದರು.

ಇದೇ ವಿಚಾರವಾಗಿ ನಿನ್ನೆ ಮಾತನಾಡಿದ್ದ ನವಜೋತ್ ಸಿಂಗ್​ ಸಿಧು, ದೆಹಲಿ ಗಡಿಯಲ್ಲಿ ರೈತರು ಒಂದು ವರ್ಷದಿಂದ ಪ್ರತಿಭಟನೆಗೆ ಕುಳಿತಿದ್ದರು. ಆದರೆ, ನಿನ್ನೆ ಕೇವಲ 15 ನಿಮಿಷಗಳ ಕಾಲ ಕಾಯಲು ಪ್ರಧಾನಿಗೆ ಆಗಲಿಲ್ಲ, ಇದರಿಂದ ಅವರಿಗೆ ತೊಂದರೆ ಆಗಿದೆ. ಈ ರೀತಿಯ ಎರಡು ಮಾನದಂಡ ಏಕೆ? ಎಂದು ಟೀಕಿಸಿದ್ದರು.

ಚಂಡೀಗಢ(ಪಂಜಾಬ್​): ಪಂಜಾಬ್​ನ ಫಿರೋಜ್​ಪುರ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಎದುರಿಸಿರುವ ಕುರಿತಾಗಿ ಕಾಂಗ್ರೆಸ್​ ಮುಖಂಡ ನವಜೋತ್​​ ಸಿಂಗ್​ ಸಿಧು ಇದೀಗ ಪಂಜಾಬ್​ ಮಾಜಿ ಸಿಎಂ ಕ್ಯಾ. ಅಮರೀಂದರ್​ ಸಿಂಗ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಪಂಜಾಬ್​​ನಲ್ಲಿ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಮಾತನಾಡುವ ಕ್ಯಾ.ಅಮರೀಂದರ್​ ಸಿಂಗ್​ ನಿಮ್ಮ 'ಗಿಣಿ'(ಕೇಂದ್ರದ) ಇದ್ದಹಾಗೆ ಎಂದಿದ್ದಾರೆ.

ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಪಂಜಾಬ್‌ನ ಚನ್ನಿ ಸರ್ಕಾರದ ನಡೆ ಸಮರ್ಥಿಸಿಕೊಂಡಿರುವ ಸಿಧು, ಕಳೆದ ಎರಡು ದಿನಗಳಿಂದ ಭದ್ರತೆ ಬಗ್ಗೆ ಕೆಲ ಬುದ್ಧಿಹೀನರು ಮಾತನಾಡುತ್ತಿದ್ದಾರೆ. ಅದರಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​​ ಕೂಡ ಒಬ್ಬರು. ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ತಕ್ಕ ಶಾಸ್ತಿ ಆಗಲಿದೆ ಎಂದು ಹೇಳಿದರು.

  • They (BJP) must stop playing politics. You will get a befitting reply here. All those talking about President's Rule (in Punjab), are your (BJP) parrots: Punjab Congress Chief Navjot Singh Sidhu in Chandigarh pic.twitter.com/hQxnEcsJ8J

    — ANI (@ANI) January 7, 2022 " class="align-text-top noRightClick twitterSection" data=" ">

ರಾಜ್ಯದಲ್ಲಿ ಬಿಜೆಪಿಗೆ ಮತವೂ ಇಲ್ಲ, ಬೆಂಬಲವೂ ಇಲ್ಲ ಎಂದು ವಾಗ್ದಾಳಿ ನಡೆಸಿರುವ ಸಿಧು, 7,000 ಕುರ್ಚಿ ಹಾಕಲಾಗಿದ್ದ ಸಭೆಯಲ್ಲಿ ಕೇವಲ 500 ಜನರು ಕುಳಿತುಕೊಂಡಿದ್ದರು. ಇಂತಹ ಸಭೆಯಲ್ಲಿ ಪ್ರಧಾನಿ ಹೇಗೆ ಮಾತನಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಅರೆರೆ, ಇದು ನಾಯಿ ಮರಿ ಅಲ್ವೇ? ಖಂಡಿತಾ ಅಲ್ಲ, ಅಸಲಿ ಚಿತ್ರ ಒಳಗಿದೆ ನೋಡಿ!

ಪ್ರಧಾನಿ ಕಚೇರಿ ರಕ್ಷಣೆ ಮಾಡಲು ಲಕ್ಷಾಂತರ ಪಂಜಾಬಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬ ಪಂಜಾಬಿ ಮತ್ತು ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ರಾಷ್ಟ್ರ ರಕ್ಷಣೆ ಮಾಡಲು ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಡುತ್ತಾರೆ ಎಂದು ತಿಳಿಸಿದರು.

ಪ್ರಧಾನಿ ಮೋದಿಗೆ ಭದ್ರತಾ ಲೋಪ ಉಂಟಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕ್ಯಾ. ಅಮರೀಂದರ್​ ಸಿಂಗ್​, ಪಂಜಾಬ್​​ನಲ್ಲಿ ಕಾಂಗ್ರೆಸ್​ ಸರ್ಕಾರವನ್ನು ವಜಾಗೊಳಿಸಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಒತ್ತಾಯಿಸಿದ್ದರು.

ಇದೇ ವಿಚಾರವಾಗಿ ನಿನ್ನೆ ಮಾತನಾಡಿದ್ದ ನವಜೋತ್ ಸಿಂಗ್​ ಸಿಧು, ದೆಹಲಿ ಗಡಿಯಲ್ಲಿ ರೈತರು ಒಂದು ವರ್ಷದಿಂದ ಪ್ರತಿಭಟನೆಗೆ ಕುಳಿತಿದ್ದರು. ಆದರೆ, ನಿನ್ನೆ ಕೇವಲ 15 ನಿಮಿಷಗಳ ಕಾಲ ಕಾಯಲು ಪ್ರಧಾನಿಗೆ ಆಗಲಿಲ್ಲ, ಇದರಿಂದ ಅವರಿಗೆ ತೊಂದರೆ ಆಗಿದೆ. ಈ ರೀತಿಯ ಎರಡು ಮಾನದಂಡ ಏಕೆ? ಎಂದು ಟೀಕಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.