ETV Bharat / bharat

ಪರಿಸರ ಮತ್ತು ಜೀವ ಸಂಕುಲಕ್ಕೆ ಮಾರಕ ಪ್ಲಾಸ್ಟಿಕ್​.. ಸರ್ವ ವ್ಯಾಪಿಯಾದ ಈ ವಿನಾಶಕಾರಿ ನಿಯಂತ್ರಣಕ್ಕೆ ಬೇಕಿದೆ ತುರ್ತು ಕ್ರಮ

author img

By ETV Bharat Karnataka Team

Published : Sep 16, 2023, 2:18 PM IST

Updated : Sep 16, 2023, 9:11 PM IST

ಪ್ಲಾಸ್ಟಿಕ್​ ಎಂಬುದು ಮನುಷ್ಯ ವಿನಾಶಕ್ಕೆ ಕಂಡುಕೊಂಡಿರುವ ಮಾರ್ಗವೂ ಆಗಿರುವ ಹಿನ್ನೆಲೆ ಈ ನಿಟ್ಟಿನಲ್ಲಿ ಮನುಷ್ಯನೇ ನಿಯಂತ್ರಣ ಮಾಡಬೇಕಿದೆ.

Plastic
ಪ್ಲಾಸ್ಟಿಕ್​

ಭೂಮಿ, ಗಾಳಿ, ನೀರು ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್​ ತ್ಯಾಜ್ಯ ಸಂಗ್ರಹಣೆ ಮತ್ತು ಬಳಕೆ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಪ್ಲಾಸ್ಟಿಕ್​ ಮನುಷ್ಯನ ದೇಹ ಹೊಕ್ಕರೆ ಇದು ಮಾರಣಾಂತಿಕ ಸಮಸ್ಯೆಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನದಲ್ಲಿ ನ್ಯಾಷನಲ್​ ಇನ್ಸುಟಿಟ್ಯೂಟ್​​ ಆಫ್​ ನ್ಯೂಟ್ರಿಷಿಯನ್​ (ಎನ್ಐಎನ್​) ಎಚ್ಚರಿಕೆ ನೀಡಿದೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕ ಬಿಪಿಎ, ಗರ್ಭಿಣಿಯರ ದೇಹವನ್ನು ಪ್ರವೇಶಿಸಿದಾಗ ಭವಿಷ್ಯದ ಗಂಡು ಸಂತಾನದಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಪ್ಲಾಸ್ಟಿಕ್​ ಉತ್ಪನ್ನಗಳು ಗಂಭೀರ ಅಡ್ಡಪರಿಣಾಮವನ್ನು ಬೀರುವ ಹಿನ್ನೆಲೆ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.

ಪ್ಲಾಸ್ಟಿಕ್​ ಯಾವ ರೀತಿ ಪರಿಸರದಲ್ಲಿ ಹೆಚ್ಚಾಗಿ ಪ್ರಾಣಿಗಳ ದೇಹ ಸೇರುತ್ತಿದೆ ಎಂದರೆ ನಮ್ಮ ದೇಶದಲ್ಲಿನ ಪ್ರತಿ ಹಸು ಮತ್ತು ಎಮ್ಮೆಗಳ ಹೊಟ್ಟೆಯಲ್ಲಿ 30 ಕೆಜಿ ಪ್ಲಾಸ್ಟಿಕ್​ ಇದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಮೈಕ್ರೋಪ್ಲಾಸ್ಟಿಕ್​ ಮತ್ತು ನ್ಯಾನೋಪ್ಲಾಸ್ಟಿಕ್​ಗಳು ಸಾಗರದ ಜೀವಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರುತ್ತಿದ್ದು, ಇದನ್ನು ಸೇವಿಸುವ ಜನರ ಮೇಲೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಕರಾವಳಿ ತೀರದ ಜನರ ಶ್ವಾಸಕೋಶ, ಯಕೃತ್​, ಮೂತ್ರದಲ್ಲಿ ಮೈಕ್ರೋಪ್ಲಾಸ್ಟಿಕ್​ ಅಂಶಗಳು ಪತ್ತೆಯಾಗುತ್ತಿದ್ದು, ಈ ಬಗ್ಗೆ ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಇದು ಕ್ಯಾನ್ಸರ್​ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಗಾಳಿ ಅಥವಾ ಭೂಮಿಯ ಮೇಲಿರುವ ಪ್ಲಾಸ್ಟಿಕ್​ ತ್ಯಾಜ್ಯಗಳು ಹೀಗೆ ಮಾನವನ ದೇಹ ಸೇರುತ್ತಿದ್ದು, ಇದು ಡಿಎನ್​ಎ ಮತ್ತು ಕೋಶಗಳನ್ನು ಹಾನಿ ಮಾಡುತ್ತಿದೆ ಎಂಬ ಬಗ್ಗೆ ಈ ಹಿಂದಿನ ಸಂಶೋಧನೆಗಳು ಕೂಡ ಎಚ್ಚರಿಸಿವೆ. ನೆದರ್​​ಲ್ಯಾಂಡ್​ನ ವಿಜ್ಞಾನಿಗಳು ಮೈಕ್ರೋಪ್ಲಾಸ್ಟಿಕ್​ಗಳು ಮಾನವನ ರಕ್ತ ನಾಳವನ್ನು ಪ್ರವೇಶಿಸುತ್ತಿದೆ ಎಂದು ದೃಢಪಡಿಸಿದ್ದಾರೆ. ಇತ್ತೀಚಿನ ಚೀನಾ ಅಧ್ಯಯನದಲ್ಲಿ ಪ್ಲಾಸ್ಟಿಕ್​ನ ಇರುವಿಕೆ ಹೃದಯದಲ್ಲೂ ಪತ್ತೆಯಾಗಿದೆ ಎಂದು ದೃಢಪಡಿಸಿದ್ದಾರೆ. ನ್ಯಾಷನಲ್​ ಇನ್ಸ್​ಟಿಟ್ಯೂಟ್​ ಆಫ್​ ನ್ಯೂಟ್ರಿಷಿಯನ್​ನ ಇತ್ತೀಚಿನ ಸಂಶೋಧನೆಯಲ್ಲಿ ಪ್ಲಾಸ್ಟಿಕ್​ ತ್ಯಾಜ್ಯ ಭ್ರೂಣಗಳ ಬೆಳವಣಿಗೆಯಲ್ಲಿ ಅಡ್ಡಿ ಮಾಡುತ್ತಿದ್ದು, ಇದಕ್ಕೆ ತತ್​ಕ್ಷಣದಲ್ಲಿ ಪರಿಹಾರ ಕಾರ್ಯ ನಡೆಸಬೇಕಿದೆ ಎಂದು ಬೆಳಕು ಚೆಲ್ಲಿದ್ದಾರೆ.

ಇಂದು ಸಮಸ್ಯೆಯಾಗಿ ಬೆಳೆದಿರುವ ಈ ಪ್ಲಾಸ್ಟಿಕ್​ ಅನ್ನು ಶತಮಾನಗಳ ಹಿಂದೆ ಲಿಯೋ ಬೇಕ್ಲ್ಯಾಂಡ್ ಎಂಬ ರಾಸಾಯನಶಾಸ್ತ್ರಜ್ಞ ಪ್ರಯೋಗದ ಮೂಲಕ ಕಂಡುಹಿಡಿದ. ಕಾಫಿಯಿಂದ ಕಂಪ್ಯೂಟರ್​ವರೆಗೆ ಇದು ಈಗ ಅನೇಕ ವಿಧದಲ್ಲಿ ಲಭ್ಯವಿದೆ. ಈ ಅಂದಾಜಿನ ಪ್ರಕಾರ 2050ರಲ್ಲಿ ಸಾಗರದಲ್ಲಿ ಸಮುದ್ರದಲ್ಲಿ ಮೀನಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್​ ಇರಲಿದ್ದು, ಇದು ಜನಸಂಖ್ಯೆಗೆ ಬೆದರಿಕೆ ಒಡ್ಡಲಿದೆ. ದೀರ್ಘ ಕಾಲ ಬದುಕುವುದು ಪಾಪ ಎಂಬ ಮಾತು ಕೂಡ ಈ ಪ್ಲಾಸ್ಟಿಕ್​ ತ್ಯಾಜ್ಯಕ್ಕೆ ಕೂಡ ಅನ್ವಯವಾಗುತ್ತದೆ. ಬಾಳೆಹಣ್ಣಿನ ಸಿಪ್ಪೆ 20 ದಿನದಲ್ಲಿ ಮಣ್ಣಿನಲ್ಲಿ ಕರಗಿದರೆ, ಕಬ್ಬಿನ ಜಲ್ಲೆಗೆ 2 ತಿಂಗಳ ಅವಧಿಗೆ ಬೇಕು. ಆದರೆ ಪ್ಲಾಸ್ಟಿಕ್​ಗೆ ಸಾವಿರಾರು ವರ್ಷ ಬೇಕಾಗುತ್ತದೆ.

ಪ್ಲಾಸ್ಟಿಕ್​​ ತ್ಯಾಜ್ಯ ಸಂಗ್ರಹದಿಂದ ಉಂಟಾಗುವ ವಿನಾಶ ದೊಡ್ಡದಿದೆ. ಇದು ಪ್ರವಾಹಕ್ಕೆ ಕೂಡ ಕಾರಣವಾಗುತ್ತದೆ. ಭೂಮಿಯ ಮೇಲಿನ ಪ್ಲಾಸ್ಟಿಕ್​ಗಳು ಮಳೆ ನೀರಿನ ಹರಿವಿಗೆ ತಡೆಯೊಡ್ಡುತ್ತದೆ. ಅಲ್ಲದೇ ಇದು ಹಕ್ಕಿಗಳು ಆಮೆಗಳು ಮತ್ತು ಸಾಗರ ಜೀವಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಮಾನವರಿಗೆ ಮತ್ತು ಪರಿಸರದ ಮೇಲೆ ಹೆಚ್ಚಿನ ಅಡ್ಡಪರಿಣಾಮ ಬೀರುವ ಪ್ಲಾಸ್ಟಿಕ್​ ಅನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆಯಾದರೂ ಇದು ಯಶಸ್ವಿಯಾಗಿರುವುದು ಕೇವಲ ಸಿಕ್ಕೀಂನಲ್ಲಿ ಮಾತ್ರ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ ಕೂಡ ಪ್ರಮುಖವಾಗಿದೆ. ದಶಕದ ಹಿಂದೆ ಈ ಬಗ್ಗೆ ಸುಪ್ರೀಂಕೋರ್ಟ್​ ನಾವು ಪ್ಲಾಸ್ಟಿಕ್​ ಬಾಂಬ್​ ತಯಾರಿಸುತ್ತಿದ್ದೇವೆ ಎಂದು​​ ಎಚ್ಚರಿಸಿದೆ.

ಪ್ಲಾಸ್ಟಿಕ್​ ಬಳಕೆ ಮಾಡಿಕೊಂಡು ರಸ್ತೆ ನಿರ್ಮಿಸುವ ಮೂಲಕ ನೆದರ್​ಲ್ಯಾಂಡ್​ ಇದರ ವಿಲೇವಾರಿಗೆ ಪರ್ಯಾಯ ಮಾರ್ಗವನ್ನು ಹುಡುಕಿದೆ. ಇದು ಯುಕೆಯಂತಹ ದೇಶದಲ್ಲೂ ಗಮನ ಸೆಳೆಯುತ್ತಿದೆ. ಡೆಹ್ರಾಡೂನ್​ನ ಇಂಡಿಯನ್​ ಪೆಟ್ರೋಲಿಯಂ ಇನ್ಸುಟಿಟ್ಯೂಟ್​ನಲ್ಲಿ ಕೂಡ ಪ್ಲಾಸ್ಟಿಕ್​ ತ್ಯಾಜ್ಯವನ್ನು ಬಳಕೆ ಮಾಡಿಕೊಳ್ಳುವ ತಂತ್ರಜ್ಞಾನ ಅಭಿವೃದ್ಧಿ ಮಾಡಲಾಗಿದೆ. ತೆಲಂಗಾಣದ ಯುವ ಇಂಜಿನಿಯರ್​​ ಒಬ್ಬ ಹತ್ತು ಟನ್​ ಪ್ಲಾಸ್ಟಿಕ್​ ತ್ಯಾಜ್ಯದಿಂದ 6000 ಲೀಟರ್​ ಡಿಸೇಲ್​ ಅನ್ನು ಉತ್ಪಾದಿಸಿದ್ದಾನೆ. ಈ ರೀತಿ ಹಲವು ಉದಾಹರಣೆ ಇದೆ. ಪ್ರತಿ ವರ್ಷ 34 ಲಕ್ಷ ಟನ್​ ತ್ಯಾಜ್ಯದಲ್ಲಿ ಮೂರನೇ ಒಂದು ಭಾಗ ಮರುಬಳಕೆ ಮಾಡಲಾಗುತ್ತಿದೆ. ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರೆಸಬೇಕಿದೆ.

ಇದನ್ನೂ ಓದಿ: 2050ರ ವೇಳೆಗೆ ಸಾಗರದಲ್ಲಿ ಮೀನಿಗಿಂತ ಹೆಚ್ಚಿರಲಿದೆ ಪ್ಲಾಸ್ಟಿಕ್​; ಇದಕ್ಕೆಲ್ಲ ಬೇಕಿದೆ ಪರಿಹಾರ

ಭೂಮಿ, ಗಾಳಿ, ನೀರು ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್​ ತ್ಯಾಜ್ಯ ಸಂಗ್ರಹಣೆ ಮತ್ತು ಬಳಕೆ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಪ್ಲಾಸ್ಟಿಕ್​ ಮನುಷ್ಯನ ದೇಹ ಹೊಕ್ಕರೆ ಇದು ಮಾರಣಾಂತಿಕ ಸಮಸ್ಯೆಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನದಲ್ಲಿ ನ್ಯಾಷನಲ್​ ಇನ್ಸುಟಿಟ್ಯೂಟ್​​ ಆಫ್​ ನ್ಯೂಟ್ರಿಷಿಯನ್​ (ಎನ್ಐಎನ್​) ಎಚ್ಚರಿಕೆ ನೀಡಿದೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕ ಬಿಪಿಎ, ಗರ್ಭಿಣಿಯರ ದೇಹವನ್ನು ಪ್ರವೇಶಿಸಿದಾಗ ಭವಿಷ್ಯದ ಗಂಡು ಸಂತಾನದಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಪ್ಲಾಸ್ಟಿಕ್​ ಉತ್ಪನ್ನಗಳು ಗಂಭೀರ ಅಡ್ಡಪರಿಣಾಮವನ್ನು ಬೀರುವ ಹಿನ್ನೆಲೆ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.

ಪ್ಲಾಸ್ಟಿಕ್​ ಯಾವ ರೀತಿ ಪರಿಸರದಲ್ಲಿ ಹೆಚ್ಚಾಗಿ ಪ್ರಾಣಿಗಳ ದೇಹ ಸೇರುತ್ತಿದೆ ಎಂದರೆ ನಮ್ಮ ದೇಶದಲ್ಲಿನ ಪ್ರತಿ ಹಸು ಮತ್ತು ಎಮ್ಮೆಗಳ ಹೊಟ್ಟೆಯಲ್ಲಿ 30 ಕೆಜಿ ಪ್ಲಾಸ್ಟಿಕ್​ ಇದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಮೈಕ್ರೋಪ್ಲಾಸ್ಟಿಕ್​ ಮತ್ತು ನ್ಯಾನೋಪ್ಲಾಸ್ಟಿಕ್​ಗಳು ಸಾಗರದ ಜೀವಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರುತ್ತಿದ್ದು, ಇದನ್ನು ಸೇವಿಸುವ ಜನರ ಮೇಲೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಕರಾವಳಿ ತೀರದ ಜನರ ಶ್ವಾಸಕೋಶ, ಯಕೃತ್​, ಮೂತ್ರದಲ್ಲಿ ಮೈಕ್ರೋಪ್ಲಾಸ್ಟಿಕ್​ ಅಂಶಗಳು ಪತ್ತೆಯಾಗುತ್ತಿದ್ದು, ಈ ಬಗ್ಗೆ ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಇದು ಕ್ಯಾನ್ಸರ್​ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಗಾಳಿ ಅಥವಾ ಭೂಮಿಯ ಮೇಲಿರುವ ಪ್ಲಾಸ್ಟಿಕ್​ ತ್ಯಾಜ್ಯಗಳು ಹೀಗೆ ಮಾನವನ ದೇಹ ಸೇರುತ್ತಿದ್ದು, ಇದು ಡಿಎನ್​ಎ ಮತ್ತು ಕೋಶಗಳನ್ನು ಹಾನಿ ಮಾಡುತ್ತಿದೆ ಎಂಬ ಬಗ್ಗೆ ಈ ಹಿಂದಿನ ಸಂಶೋಧನೆಗಳು ಕೂಡ ಎಚ್ಚರಿಸಿವೆ. ನೆದರ್​​ಲ್ಯಾಂಡ್​ನ ವಿಜ್ಞಾನಿಗಳು ಮೈಕ್ರೋಪ್ಲಾಸ್ಟಿಕ್​ಗಳು ಮಾನವನ ರಕ್ತ ನಾಳವನ್ನು ಪ್ರವೇಶಿಸುತ್ತಿದೆ ಎಂದು ದೃಢಪಡಿಸಿದ್ದಾರೆ. ಇತ್ತೀಚಿನ ಚೀನಾ ಅಧ್ಯಯನದಲ್ಲಿ ಪ್ಲಾಸ್ಟಿಕ್​ನ ಇರುವಿಕೆ ಹೃದಯದಲ್ಲೂ ಪತ್ತೆಯಾಗಿದೆ ಎಂದು ದೃಢಪಡಿಸಿದ್ದಾರೆ. ನ್ಯಾಷನಲ್​ ಇನ್ಸ್​ಟಿಟ್ಯೂಟ್​ ಆಫ್​ ನ್ಯೂಟ್ರಿಷಿಯನ್​ನ ಇತ್ತೀಚಿನ ಸಂಶೋಧನೆಯಲ್ಲಿ ಪ್ಲಾಸ್ಟಿಕ್​ ತ್ಯಾಜ್ಯ ಭ್ರೂಣಗಳ ಬೆಳವಣಿಗೆಯಲ್ಲಿ ಅಡ್ಡಿ ಮಾಡುತ್ತಿದ್ದು, ಇದಕ್ಕೆ ತತ್​ಕ್ಷಣದಲ್ಲಿ ಪರಿಹಾರ ಕಾರ್ಯ ನಡೆಸಬೇಕಿದೆ ಎಂದು ಬೆಳಕು ಚೆಲ್ಲಿದ್ದಾರೆ.

ಇಂದು ಸಮಸ್ಯೆಯಾಗಿ ಬೆಳೆದಿರುವ ಈ ಪ್ಲಾಸ್ಟಿಕ್​ ಅನ್ನು ಶತಮಾನಗಳ ಹಿಂದೆ ಲಿಯೋ ಬೇಕ್ಲ್ಯಾಂಡ್ ಎಂಬ ರಾಸಾಯನಶಾಸ್ತ್ರಜ್ಞ ಪ್ರಯೋಗದ ಮೂಲಕ ಕಂಡುಹಿಡಿದ. ಕಾಫಿಯಿಂದ ಕಂಪ್ಯೂಟರ್​ವರೆಗೆ ಇದು ಈಗ ಅನೇಕ ವಿಧದಲ್ಲಿ ಲಭ್ಯವಿದೆ. ಈ ಅಂದಾಜಿನ ಪ್ರಕಾರ 2050ರಲ್ಲಿ ಸಾಗರದಲ್ಲಿ ಸಮುದ್ರದಲ್ಲಿ ಮೀನಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್​ ಇರಲಿದ್ದು, ಇದು ಜನಸಂಖ್ಯೆಗೆ ಬೆದರಿಕೆ ಒಡ್ಡಲಿದೆ. ದೀರ್ಘ ಕಾಲ ಬದುಕುವುದು ಪಾಪ ಎಂಬ ಮಾತು ಕೂಡ ಈ ಪ್ಲಾಸ್ಟಿಕ್​ ತ್ಯಾಜ್ಯಕ್ಕೆ ಕೂಡ ಅನ್ವಯವಾಗುತ್ತದೆ. ಬಾಳೆಹಣ್ಣಿನ ಸಿಪ್ಪೆ 20 ದಿನದಲ್ಲಿ ಮಣ್ಣಿನಲ್ಲಿ ಕರಗಿದರೆ, ಕಬ್ಬಿನ ಜಲ್ಲೆಗೆ 2 ತಿಂಗಳ ಅವಧಿಗೆ ಬೇಕು. ಆದರೆ ಪ್ಲಾಸ್ಟಿಕ್​ಗೆ ಸಾವಿರಾರು ವರ್ಷ ಬೇಕಾಗುತ್ತದೆ.

ಪ್ಲಾಸ್ಟಿಕ್​​ ತ್ಯಾಜ್ಯ ಸಂಗ್ರಹದಿಂದ ಉಂಟಾಗುವ ವಿನಾಶ ದೊಡ್ಡದಿದೆ. ಇದು ಪ್ರವಾಹಕ್ಕೆ ಕೂಡ ಕಾರಣವಾಗುತ್ತದೆ. ಭೂಮಿಯ ಮೇಲಿನ ಪ್ಲಾಸ್ಟಿಕ್​ಗಳು ಮಳೆ ನೀರಿನ ಹರಿವಿಗೆ ತಡೆಯೊಡ್ಡುತ್ತದೆ. ಅಲ್ಲದೇ ಇದು ಹಕ್ಕಿಗಳು ಆಮೆಗಳು ಮತ್ತು ಸಾಗರ ಜೀವಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಮಾನವರಿಗೆ ಮತ್ತು ಪರಿಸರದ ಮೇಲೆ ಹೆಚ್ಚಿನ ಅಡ್ಡಪರಿಣಾಮ ಬೀರುವ ಪ್ಲಾಸ್ಟಿಕ್​ ಅನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆಯಾದರೂ ಇದು ಯಶಸ್ವಿಯಾಗಿರುವುದು ಕೇವಲ ಸಿಕ್ಕೀಂನಲ್ಲಿ ಮಾತ್ರ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವ ಕೂಡ ಪ್ರಮುಖವಾಗಿದೆ. ದಶಕದ ಹಿಂದೆ ಈ ಬಗ್ಗೆ ಸುಪ್ರೀಂಕೋರ್ಟ್​ ನಾವು ಪ್ಲಾಸ್ಟಿಕ್​ ಬಾಂಬ್​ ತಯಾರಿಸುತ್ತಿದ್ದೇವೆ ಎಂದು​​ ಎಚ್ಚರಿಸಿದೆ.

ಪ್ಲಾಸ್ಟಿಕ್​ ಬಳಕೆ ಮಾಡಿಕೊಂಡು ರಸ್ತೆ ನಿರ್ಮಿಸುವ ಮೂಲಕ ನೆದರ್​ಲ್ಯಾಂಡ್​ ಇದರ ವಿಲೇವಾರಿಗೆ ಪರ್ಯಾಯ ಮಾರ್ಗವನ್ನು ಹುಡುಕಿದೆ. ಇದು ಯುಕೆಯಂತಹ ದೇಶದಲ್ಲೂ ಗಮನ ಸೆಳೆಯುತ್ತಿದೆ. ಡೆಹ್ರಾಡೂನ್​ನ ಇಂಡಿಯನ್​ ಪೆಟ್ರೋಲಿಯಂ ಇನ್ಸುಟಿಟ್ಯೂಟ್​ನಲ್ಲಿ ಕೂಡ ಪ್ಲಾಸ್ಟಿಕ್​ ತ್ಯಾಜ್ಯವನ್ನು ಬಳಕೆ ಮಾಡಿಕೊಳ್ಳುವ ತಂತ್ರಜ್ಞಾನ ಅಭಿವೃದ್ಧಿ ಮಾಡಲಾಗಿದೆ. ತೆಲಂಗಾಣದ ಯುವ ಇಂಜಿನಿಯರ್​​ ಒಬ್ಬ ಹತ್ತು ಟನ್​ ಪ್ಲಾಸ್ಟಿಕ್​ ತ್ಯಾಜ್ಯದಿಂದ 6000 ಲೀಟರ್​ ಡಿಸೇಲ್​ ಅನ್ನು ಉತ್ಪಾದಿಸಿದ್ದಾನೆ. ಈ ರೀತಿ ಹಲವು ಉದಾಹರಣೆ ಇದೆ. ಪ್ರತಿ ವರ್ಷ 34 ಲಕ್ಷ ಟನ್​ ತ್ಯಾಜ್ಯದಲ್ಲಿ ಮೂರನೇ ಒಂದು ಭಾಗ ಮರುಬಳಕೆ ಮಾಡಲಾಗುತ್ತಿದೆ. ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರೆಸಬೇಕಿದೆ.

ಇದನ್ನೂ ಓದಿ: 2050ರ ವೇಳೆಗೆ ಸಾಗರದಲ್ಲಿ ಮೀನಿಗಿಂತ ಹೆಚ್ಚಿರಲಿದೆ ಪ್ಲಾಸ್ಟಿಕ್​; ಇದಕ್ಕೆಲ್ಲ ಬೇಕಿದೆ ಪರಿಹಾರ

Last Updated : Sep 16, 2023, 9:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.