ETV Bharat / bharat

ಕೋಲ್ಕತ್ತಾದಲ್ಲಿ ಕೋವ್ಯಾಕ್ಸಿನ್ ನ 3ನೇ ಹಂತದ ಪ್ರಯೋಗಕ್ಕೆ ಚಾಲನೆ - ಕೊಲ್ಕತ್ತಾದಲ್ಲಿ ಕೋವಾಕ್ಸಿನ್ ನ ಮೂರನೇ ಹಂತದ ಪ್ರಯೋಗ

ಐಸಿಎಂಆರ್ ನಲ್ಲಿ ಕೋವ್ಯಾಕ್ಸಿನ್ ನ 3ನೇ ಹಂತದ ಪ್ರಯೋಗವನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಖರ್ ಉದ್ಘಾಟಿಸಿದರು. ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಭಾರತದ ಸಾಧನೆಯನ್ನು ಶ್ಲಾಘಿಸಿದರು.

ಕೊಲ್ಕತ್ತಾದಲ್ಲಿ ಕೋವಾಕ್ಸಿನ್ ನ 3ನೇ ಹಂತದ ಪ್ರಯೋಗಕ್ಕೆ ಚಾಲನೆ
ಕೊಲ್ಕತ್ತಾದಲ್ಲಿ ಕೋವಾಕ್ಸಿನ್ ನ 3ನೇ ಹಂತದ ಪ್ರಯೋಗಕ್ಕೆ ಚಾಲನೆ
author img

By

Published : Dec 2, 2020, 3:05 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರು ಐಸಿಎಂಆರ್ ನಲ್ಲಿ ಕೋವ್ಯಾಕ್ಸಿನ್ ನ 3ನೇ ಹಂತದ ಪ್ರಯೋಗವನ್ನು ಉದ್ಘಾಟಿಸಿದರು. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ ದೇಶದ ನಾಯಕತ್ವವನ್ನು ಶ್ಲಾಘಿಸಿದರು.

ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಕೊರೊನಾ ವೈರಸ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕಾಗಿ ದೇಶದ 24 ಕೇಂದ್ರಗಳಲ್ಲಿ ಎನ್‌ಐಸಿಇಡಿ ಅನ್ನು ಆಯ್ಕೆ ಮಾಡಲಾಗಿದೆ ಎಂದು ಧನ್ಖರ್ ಹೇಳಿದರು ಮತ್ತು ಕಾರ್ಯವಿಧಾನವನ್ನು ಸುಗಮವಾಗಿ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಭಾರತದ ಸಾಧನೆ ಶ್ಲಾಘನೀಯವಾಗಿದೆ. ಇದಕ್ಕೆ ದೇಶದ ದೂರದೃಷ್ಟಿಯ ನಾಯಕತ್ವವೇ ಕಾರಣ ಎಂದು ಹೇಳಿದರು. ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯು ಬಿಕ್ಕಟ್ಟಿನ ಮಧ್ಯೆ ಅನೇಕರಿಗೆ ಸಹಾಯವನ್ನು ನೀಡಿದೆ ಎಂದು ರಾಜ್ಯಪಾಲರು ಹೇಳಿದರು.

ವಿಶೇಷವೆಂದರೆ, ಈ ಯೋಜನೆಯನ್ನು ಪಶ್ಚಿಮ ಬಂಗಾಳದಲ್ಲಿ ಇಲ್ಲಿಯವರೆಗೆ ಜಾರಿಗೆ ತರಲಾಗಿಲ್ಲ.

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರು ಐಸಿಎಂಆರ್ ನಲ್ಲಿ ಕೋವ್ಯಾಕ್ಸಿನ್ ನ 3ನೇ ಹಂತದ ಪ್ರಯೋಗವನ್ನು ಉದ್ಘಾಟಿಸಿದರು. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ ದೇಶದ ನಾಯಕತ್ವವನ್ನು ಶ್ಲಾಘಿಸಿದರು.

ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಕೊರೊನಾ ವೈರಸ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕಾಗಿ ದೇಶದ 24 ಕೇಂದ್ರಗಳಲ್ಲಿ ಎನ್‌ಐಸಿಇಡಿ ಅನ್ನು ಆಯ್ಕೆ ಮಾಡಲಾಗಿದೆ ಎಂದು ಧನ್ಖರ್ ಹೇಳಿದರು ಮತ್ತು ಕಾರ್ಯವಿಧಾನವನ್ನು ಸುಗಮವಾಗಿ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಭಾರತದ ಸಾಧನೆ ಶ್ಲಾಘನೀಯವಾಗಿದೆ. ಇದಕ್ಕೆ ದೇಶದ ದೂರದೃಷ್ಟಿಯ ನಾಯಕತ್ವವೇ ಕಾರಣ ಎಂದು ಹೇಳಿದರು. ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯು ಬಿಕ್ಕಟ್ಟಿನ ಮಧ್ಯೆ ಅನೇಕರಿಗೆ ಸಹಾಯವನ್ನು ನೀಡಿದೆ ಎಂದು ರಾಜ್ಯಪಾಲರು ಹೇಳಿದರು.

ವಿಶೇಷವೆಂದರೆ, ಈ ಯೋಜನೆಯನ್ನು ಪಶ್ಚಿಮ ಬಂಗಾಳದಲ್ಲಿ ಇಲ್ಲಿಯವರೆಗೆ ಜಾರಿಗೆ ತರಲಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.