ETV Bharat / bharat

ಹೈದರಾಬಾದ್​ ಪ್ರವಾಹದ ವೇಳೆ ಕೇಂದ್ರ ಯಾವ ನೆರವೂ ನೀಡಿಲ್ಲ : ಅಸಾಸುದ್ದೀನ್ ಓವೈಸಿ

author img

By

Published : Nov 22, 2020, 4:28 PM IST

ಹೈದರಾಬಾದ್ ಪ್ರವಾಹಕ್ಕೆ ತುತ್ತಾದಾಗ ಮೋದಿ ಸರ್ಕಾರ ಯಾವ ಆರ್ಥಿಕ ಸಹಾಯವನ್ನೂ ನೀಡಿಲ್ಲ. ಈಗ ಜಿಹೆಚ್​ಎಂಸಿ ಚುನಾವಣೆಗೆ ಕೋಮು ಬಣ್ಣ ಬಳಿಯುಲು ಪ್ರಯತ್ನಿಸುತ್ತಿದೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

Asaduddin Owaisi barrage against Center
ಕೇಂದ್ರದ ವಿರುದ್ಧ ಅಸಾದುದ್ದೀನ್ ಓವೈಸಿ ವಾಗ್ದಾಳಿ

ಹೈದರಾಬಾದ್ : ಇತ್ತೀಚೆಗೆ ಹೈದರಾಬಾದ್​ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಕೇಂದ್ರ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಆಸಾದುದ್ದೀನ್ ಓವೈಸಿ ಹೇಳಿದ್ದಾರೆ. ಅಲ್ಲದೆ, ಮುಂಬರುವ ಹೈದರಾಬಾದ್​ ಮಹಾನಗರ ಪಾಲಿಕೆ ಚುನಾವಣೆಗೆ ಕೇಂದ್ರ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ನಾವು ವರ್ಷದ ಎಲ್ಲಾ ದಿನವೂ ತೆಲಂಗಾಣಕ್ಕೋಸ್ಕರ ಕೆಲಸ ಮಾಡುತ್ತೇವೆ. ಅರ್ಧ ರಾತ್ರಿಯಲ್ಲಿ ಒಬ್ಬ ನಾಯಕನನ್ನು ಕರೆದು ಕೆಲ ಹೆಸರು ಹೇಳುವಂತೆ ಕೇಳಿದ್ರೂ, ಅವರು ಓವೈಸಿ ಎಂದು ಹೇಳುತ್ತಾರೆ. ಇಷ್ಟಾದರೂ ಬಿಜೆಪಿ ಭಯೋತ್ಪಾದನೆ, ಪಾಕಿಸ್ತಾನ ಎಂದೆಲ್ಲಾ ಹೇಳುತ್ತಿದೆ. 2019 ರ ಬಳಿಕ ಬಿಜೆಪಿ ತೆಲಂಗಾಣಕ್ಕೆ, ವಿಶೇಷವಾಗಿ ಹೈದರಾಬಾದ್​ಗೆ ಯಾವ ಆರ್ಥಿಕ ಸಹಾಯ ನೀಡಿದೆ ಎಂದು ಪ್ರಶ್ನಿಸಿದ್ದಾರೆ.

ಹೈದರಾಬಾದ್ ಪ್ರವಾಹಕ್ಕೆ ತುತ್ತಾದಾಗ ಮೋದಿ ಸರ್ಕಾರ ಯಾವ ಆರ್ಥಿಕ ಸಹಾಯವ ನೀಡಿತ್ತು..? ಅವರು ಯಾವುದೇ ಸಹಾಯ ನೀಡಿಲ್ಲ. ಈಗ, ಚುನಾವಣೆಗೆ ಕೋಮು ಬಣ್ಣವ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ ಪ್ರವಾಹ ಸಮಯದಲ್ಲಿ ಅವರು ಯಾವುದೇ ಸಹಾಯ ನೀಡಿರಲಿಲ್ಲ. ಕೋಮು ರಾಜಕೀಯ ಕೆಲಸ ಮಾಡುವುದಿಲ್ಲ, ಜನರಿಗೆ ಈ ಬಗ್ಗೆ ತಿಳಿದಿದೆ ಎಂದು ಓವೈಸಿ ಹೇಳಿದರು.

ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್ ಕಾರ್ಪೋರೇಶನ್ (ಜಿಹೆಚ್‌ಎಂಸಿ ) ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದ್ದು, ಡಿಸೆಂಬರ್ 4 ರಂದು ಮತ ಎಣಿಕೆ ನಡೆಯಲಿದೆ.

'ಲವ್ ಜಿಹಾದ್' ವಿರುದ್ಧದ ಕಾನೂನಿನ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, ಇದು ಸಂವಿಧಾನದ ವಿಶೇಷ ವಿವಾಹ ಕಾಯ್ದೆಯ 14 ಮತ್ತು 21 ನೇ ವಿಧಿಗಳ ಸಂಪೂರ್ಣ ಉಲ್ಲಂಘನೆಯಾಗಿದೆ, ಇಂತಹ ದ್ವೇಷದ ಪ್ರಚಾರ ಕೆಲಸ ಮಾಡುವುದಿಲ್ಲ. ನಿರುದ್ಯೋಗದಿಂದ ತತ್ತರಿಸಿರುವ ಯುವಕರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಈ ನಾಟಕ ಮಾಡುತ್ತಿದೆ ಎಂದು ಹೇಳಿದರು.

2021 ರಲ್ಲಿ ತೃಣಮೂಲ ಕಾಂಗ್ರೆಸ್ ಜೊತೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎಐಐಎಂಐಎಂ ಸ್ಪರ್ಧಿಸಲಿದೆಯೇ ಎಂಬುವುದರ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭ ಬಂದರೆ, ಈ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಹೈದರಾಬಾದ್ : ಇತ್ತೀಚೆಗೆ ಹೈದರಾಬಾದ್​ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಕೇಂದ್ರ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಆಸಾದುದ್ದೀನ್ ಓವೈಸಿ ಹೇಳಿದ್ದಾರೆ. ಅಲ್ಲದೆ, ಮುಂಬರುವ ಹೈದರಾಬಾದ್​ ಮಹಾನಗರ ಪಾಲಿಕೆ ಚುನಾವಣೆಗೆ ಕೇಂದ್ರ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ನಾವು ವರ್ಷದ ಎಲ್ಲಾ ದಿನವೂ ತೆಲಂಗಾಣಕ್ಕೋಸ್ಕರ ಕೆಲಸ ಮಾಡುತ್ತೇವೆ. ಅರ್ಧ ರಾತ್ರಿಯಲ್ಲಿ ಒಬ್ಬ ನಾಯಕನನ್ನು ಕರೆದು ಕೆಲ ಹೆಸರು ಹೇಳುವಂತೆ ಕೇಳಿದ್ರೂ, ಅವರು ಓವೈಸಿ ಎಂದು ಹೇಳುತ್ತಾರೆ. ಇಷ್ಟಾದರೂ ಬಿಜೆಪಿ ಭಯೋತ್ಪಾದನೆ, ಪಾಕಿಸ್ತಾನ ಎಂದೆಲ್ಲಾ ಹೇಳುತ್ತಿದೆ. 2019 ರ ಬಳಿಕ ಬಿಜೆಪಿ ತೆಲಂಗಾಣಕ್ಕೆ, ವಿಶೇಷವಾಗಿ ಹೈದರಾಬಾದ್​ಗೆ ಯಾವ ಆರ್ಥಿಕ ಸಹಾಯ ನೀಡಿದೆ ಎಂದು ಪ್ರಶ್ನಿಸಿದ್ದಾರೆ.

ಹೈದರಾಬಾದ್ ಪ್ರವಾಹಕ್ಕೆ ತುತ್ತಾದಾಗ ಮೋದಿ ಸರ್ಕಾರ ಯಾವ ಆರ್ಥಿಕ ಸಹಾಯವ ನೀಡಿತ್ತು..? ಅವರು ಯಾವುದೇ ಸಹಾಯ ನೀಡಿಲ್ಲ. ಈಗ, ಚುನಾವಣೆಗೆ ಕೋಮು ಬಣ್ಣವ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ ಪ್ರವಾಹ ಸಮಯದಲ್ಲಿ ಅವರು ಯಾವುದೇ ಸಹಾಯ ನೀಡಿರಲಿಲ್ಲ. ಕೋಮು ರಾಜಕೀಯ ಕೆಲಸ ಮಾಡುವುದಿಲ್ಲ, ಜನರಿಗೆ ಈ ಬಗ್ಗೆ ತಿಳಿದಿದೆ ಎಂದು ಓವೈಸಿ ಹೇಳಿದರು.

ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್ ಕಾರ್ಪೋರೇಶನ್ (ಜಿಹೆಚ್‌ಎಂಸಿ ) ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದ್ದು, ಡಿಸೆಂಬರ್ 4 ರಂದು ಮತ ಎಣಿಕೆ ನಡೆಯಲಿದೆ.

'ಲವ್ ಜಿಹಾದ್' ವಿರುದ್ಧದ ಕಾನೂನಿನ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, ಇದು ಸಂವಿಧಾನದ ವಿಶೇಷ ವಿವಾಹ ಕಾಯ್ದೆಯ 14 ಮತ್ತು 21 ನೇ ವಿಧಿಗಳ ಸಂಪೂರ್ಣ ಉಲ್ಲಂಘನೆಯಾಗಿದೆ, ಇಂತಹ ದ್ವೇಷದ ಪ್ರಚಾರ ಕೆಲಸ ಮಾಡುವುದಿಲ್ಲ. ನಿರುದ್ಯೋಗದಿಂದ ತತ್ತರಿಸಿರುವ ಯುವಕರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಈ ನಾಟಕ ಮಾಡುತ್ತಿದೆ ಎಂದು ಹೇಳಿದರು.

2021 ರಲ್ಲಿ ತೃಣಮೂಲ ಕಾಂಗ್ರೆಸ್ ಜೊತೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎಐಐಎಂಐಎಂ ಸ್ಪರ್ಧಿಸಲಿದೆಯೇ ಎಂಬುವುದರ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭ ಬಂದರೆ, ಈ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.