ETV Bharat / bharat

ಸರ್ವಪಕ್ಷಗಳ ಸಭೆ: ಅದಾನಿ ಗ್ರೂಪ್ ವಂಚನೆ, ಬಿಬಿಸಿ ಸಾಕ್ಷ್ಯಚಿತ್ರ ಚರ್ಚೆಗೆ ಒತ್ತಾಯ

author img

By

Published : Jan 30, 2023, 8:17 PM IST

ಸಂಸತ್ತಿನ ಬಜೆಟ್ ಅಧಿವೇಶನ- ಸರ್ವಪಕ್ಷ ಸಭೆಯಲ್ಲಿ ಹಲವು ವಿಷಯ ಪ್ರಸ್ತಾಪ - ಪ್ರತಿಧ್ವನಿಸಿತು ರಾಜ್ಯಗಳಲ್ಲಿನ ಗವರ್ನರ್‌ಗಳ ಹಸ್ತಕ್ಷೇಪದ ವಿಷಯ

all-party-meeting
ಸರ್ವಪಕ್ಷಗಳ ಸಭೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಅದಾನಿ ಗ್ರೂಪ್​ ವಂಚನೆ ಆರೋಪ, ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಮತ್ತು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಗವರ್ನರ್‌ಗಳ ಹಸ್ತಕ್ಷೇಪ ವಿಷಯಗಳು ಪ್ರತಿಧ್ವನಿಸಿದವು. ಅದಾನಿ ಗ್ರೂಪ್ ಷೇರುಗಳಿಗೆ ಸಂಬಂಧಿಸಿದ ಆರೋಪಕ್ಕೆ ಹಲವಾರು ವಿರೋಧ ಪಕ್ಷಗಳು ಧ್ವನಿಗೂಡಿಸಿವೆ. ಈ ವಿಷಯದ ಬಗ್ಗೆ ಚರ್ಚೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಆರ್‌ಜೆಡಿ, ಸಿಪಿಐ-ಎಂ, ಸಿಪಿಐ, ಆಮ್ ಆದ್ಮಿ ಪಾರ್ಟಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದವು. ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಸಿಬಿಐ, ಇಡಿ, ಸೆಬಿ ಸಂಸ್ಥೆಗಳು ಈಗ ಎಲ್ಲಿವೆ?. ಸಾರ್ವಜನಿಕರಿಗೆ ಸೇರಿದ ಹಣವನ್ನು ಲಪಟಾಯಿಸಲು ಏಕೆ ಅನುಮತಿಸಲಾಗಿದೆ? ಸದನದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು. ಸರ್ಕಾರ ಇದನ್ನು ಪ್ರಮುಖವೆಂದು ಪರಿಗಣಿಸಬೇಕು ಎಂದು ಎಎಪಿ ನಾಯಕರು ಒತ್ತಾಯಿಸಿದರು.

ಬಿಬಿಸಿಯಂತಹ ಸಾಕ್ಷ್ಯಚಿತ್ರಗಳ ನಿಷೇಧದಿಂದ ಸರ್ಕಾರಕ್ಕೆ ಏನು ಲಾಭ?. ಇದು ಅನಗತ್ಯ ಕುತೂಹಲವನ್ನು ಮಾತ್ರ ಸೃಷ್ಟಿಸುತ್ತದೆ ಎಂದು ಪ್ರತಿಪಕ್ಷಗಳು ವಾದಿಸಿದವು. ಈ ಕುರಿತು ಚರ್ಚೆಗೆ ಕೇಳಿದ್ದೇವೆ. ನಮಗೆ ಸ್ಪಷ್ಟತೆ ಬೇಕು ಎಂದು ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ ಹೇಳಿದರು. ಇನ್ನು ಹಲವು ಪಕ್ಷಗಳು ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಮತ್ತು ವಿರೋಧ ವಿಷಯವನ್ನು ಪ್ರಸ್ತಾಪಿಸಿದವು. ಬಿಆರ್‌ಎಸ್ ಮತ್ತು ಡಿಎಂಕೆ ಪಕ್ಷಗಳು ಈ ಕುರಿತು ವಿಶೇಷವಾಗಿ ಧ್ವನಿ ಎತ್ತಿದ್ದವು.

ಸಹಕಾರಿ ಒಕ್ಕೂಟವು ಪ್ರಜಾಪ್ರಭುತ್ವಕ್ಕೆ ಪ್ರಮುಖವಾಗಿದೆ. ರಾಜ್ಯಪಾಲರು ಸರ್ಕಾರದಲ್ಲಿ ನಿರಂತರವಾಗಿ ಮಧ್ಯಪ್ರವೇಶಿಸುತ್ತಿರುವ ಕಾರಣ ತನ್ನ ಕೆಲಸವನ್ನು ಮಾಡಲು ನ್ಯಾಯಾಲಯದ ಮೊರೆ ಹೋಗಬೇಕೇ? ಇದರ ವಿರುದ್ಧ ನಾವು ತೀವ್ರವಾಗಿ ಧ್ವನಿ ಎತ್ತುತ್ತೇವೆ ಎಂದು ಟಿಆರ್​ಎಸ್​ ನಾಯಕ ಕೆ ಕೇಶವ ರಾವ್ ತಿಳಿಸಿದರು.

ವೈಎಸ್ಆರ್ ಕಾಂಗ್ರೆಸ್ ಜಾತಿ ಮತ್ತು ಮೀಸಲಾತಿಯ ಪ್ರಮುಖ ವಿಷಯವನ್ನು ಪ್ರಸ್ತಾಪಿಸಿತು. ಆರ್ಥಿಕ ಜನಗಣತಿಯ ದಾಖಲೆಗಾಗಿ ಒತ್ತಾಯಿಸಿತು. ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ಕಾರ ತರಬೇಕು. ಬಿಜು ಜನತಾ ದಳ (ಬಿಜೆಡಿ) ಮತ್ತು ಟಿಎಂಸಿ ಮಹಿಳಾ ಮೀಸಲಾತಿ ಮಸೂದೆಯನ್ನು ತರುವುದಕ್ಕೆ ಬೆಂಬಲ ನೀಡಿದವು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಪಿಯೂಷ್ ಗೋಯಲ್, ರಾಜ್ಯ ಸಚಿವ ಅರ್ಜುನ, ರಾಮ್ ಮೇಘವಾಲ್ ಮತ್ತು ವಿ ಮುರಳೀಧರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಡಿಎಂಕೆ ನಾಯಕರಾದ ಟಿಆರ್ ಮತ್ತು ಬಾಲು, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಮತ್ತು ಸುಖೇಂದು ಶೇಖರ್ ರೇ, ಟಿಆರ್‌ಎಸ್ ಮುಖಂಡರಾದ ಕೆ ಕೇಶವ ರಾವ್ ಮತ್ತು ನಾಮ ನಾಗೇಶ್ವರರಾವ್, ವೈಎಸ್‌ಆರ್ ಕಾಂಗ್ರೆಸ್‌ನಿಂದ ವಿಜಯಸಾಯಿ ರೆಡ್ಡಿ, ನ್ಯಾಷನಲ್ ಕಾನ್ಫರೆನ್ಸ್‌ನಿಂದ ಫಾರೂಕ್ ಅಬ್ದುಲ್ಲಾ, ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ಪ್ರೊಫೆಸರ್ ಮನೋಜ್ ಝಾ ಮತ್ತು ಜನತಾ ದಳ (ಯುನೈಟೆಡ್) (ಜೆಡಿಯು) ರಾಮ್ ನಾಥ್ ಠಾಕೂರ್ ಸೇರಿದಂತೆ ಇತರ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.

ಕಾಂಗ್ರೆಸ್​ ನಾಯಕರು ಗೈರು: ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರು ಸರ್ವಪಕ್ಷಗಳ ಸಭೆಗೆ ಹಾಜರಾಗಬೇಕಿತ್ತು. ಆದರೆ, ಭಾರತ್​ ಜೋಡೋ ಯಾತ್ರೆ ಇಂದು ಶ್ರೀನಗರದಲ್ಲಿ ಮುಕ್ತಾಯಗೊಂಡಿದ್ದು, ಈ ಕಾರಣಕ್ಕಾಗಿ ಅವರು ಸಭೆಗೆ ಹಾಜರಾಗಿಲ್ಲ.

ಓದಿ: ನಾಳೆಯಿಂದ ಬಜೆಟ್​ ಅಧಿವೇಶನ: ಇಂದು ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಅದಾನಿ ಗ್ರೂಪ್​ ವಂಚನೆ ಆರೋಪ, ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಮತ್ತು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಗವರ್ನರ್‌ಗಳ ಹಸ್ತಕ್ಷೇಪ ವಿಷಯಗಳು ಪ್ರತಿಧ್ವನಿಸಿದವು. ಅದಾನಿ ಗ್ರೂಪ್ ಷೇರುಗಳಿಗೆ ಸಂಬಂಧಿಸಿದ ಆರೋಪಕ್ಕೆ ಹಲವಾರು ವಿರೋಧ ಪಕ್ಷಗಳು ಧ್ವನಿಗೂಡಿಸಿವೆ. ಈ ವಿಷಯದ ಬಗ್ಗೆ ಚರ್ಚೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಆರ್‌ಜೆಡಿ, ಸಿಪಿಐ-ಎಂ, ಸಿಪಿಐ, ಆಮ್ ಆದ್ಮಿ ಪಾರ್ಟಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದವು. ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಸಿಬಿಐ, ಇಡಿ, ಸೆಬಿ ಸಂಸ್ಥೆಗಳು ಈಗ ಎಲ್ಲಿವೆ?. ಸಾರ್ವಜನಿಕರಿಗೆ ಸೇರಿದ ಹಣವನ್ನು ಲಪಟಾಯಿಸಲು ಏಕೆ ಅನುಮತಿಸಲಾಗಿದೆ? ಸದನದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು. ಸರ್ಕಾರ ಇದನ್ನು ಪ್ರಮುಖವೆಂದು ಪರಿಗಣಿಸಬೇಕು ಎಂದು ಎಎಪಿ ನಾಯಕರು ಒತ್ತಾಯಿಸಿದರು.

ಬಿಬಿಸಿಯಂತಹ ಸಾಕ್ಷ್ಯಚಿತ್ರಗಳ ನಿಷೇಧದಿಂದ ಸರ್ಕಾರಕ್ಕೆ ಏನು ಲಾಭ?. ಇದು ಅನಗತ್ಯ ಕುತೂಹಲವನ್ನು ಮಾತ್ರ ಸೃಷ್ಟಿಸುತ್ತದೆ ಎಂದು ಪ್ರತಿಪಕ್ಷಗಳು ವಾದಿಸಿದವು. ಈ ಕುರಿತು ಚರ್ಚೆಗೆ ಕೇಳಿದ್ದೇವೆ. ನಮಗೆ ಸ್ಪಷ್ಟತೆ ಬೇಕು ಎಂದು ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ ಹೇಳಿದರು. ಇನ್ನು ಹಲವು ಪಕ್ಷಗಳು ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಮತ್ತು ವಿರೋಧ ವಿಷಯವನ್ನು ಪ್ರಸ್ತಾಪಿಸಿದವು. ಬಿಆರ್‌ಎಸ್ ಮತ್ತು ಡಿಎಂಕೆ ಪಕ್ಷಗಳು ಈ ಕುರಿತು ವಿಶೇಷವಾಗಿ ಧ್ವನಿ ಎತ್ತಿದ್ದವು.

ಸಹಕಾರಿ ಒಕ್ಕೂಟವು ಪ್ರಜಾಪ್ರಭುತ್ವಕ್ಕೆ ಪ್ರಮುಖವಾಗಿದೆ. ರಾಜ್ಯಪಾಲರು ಸರ್ಕಾರದಲ್ಲಿ ನಿರಂತರವಾಗಿ ಮಧ್ಯಪ್ರವೇಶಿಸುತ್ತಿರುವ ಕಾರಣ ತನ್ನ ಕೆಲಸವನ್ನು ಮಾಡಲು ನ್ಯಾಯಾಲಯದ ಮೊರೆ ಹೋಗಬೇಕೇ? ಇದರ ವಿರುದ್ಧ ನಾವು ತೀವ್ರವಾಗಿ ಧ್ವನಿ ಎತ್ತುತ್ತೇವೆ ಎಂದು ಟಿಆರ್​ಎಸ್​ ನಾಯಕ ಕೆ ಕೇಶವ ರಾವ್ ತಿಳಿಸಿದರು.

ವೈಎಸ್ಆರ್ ಕಾಂಗ್ರೆಸ್ ಜಾತಿ ಮತ್ತು ಮೀಸಲಾತಿಯ ಪ್ರಮುಖ ವಿಷಯವನ್ನು ಪ್ರಸ್ತಾಪಿಸಿತು. ಆರ್ಥಿಕ ಜನಗಣತಿಯ ದಾಖಲೆಗಾಗಿ ಒತ್ತಾಯಿಸಿತು. ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ಕಾರ ತರಬೇಕು. ಬಿಜು ಜನತಾ ದಳ (ಬಿಜೆಡಿ) ಮತ್ತು ಟಿಎಂಸಿ ಮಹಿಳಾ ಮೀಸಲಾತಿ ಮಸೂದೆಯನ್ನು ತರುವುದಕ್ಕೆ ಬೆಂಬಲ ನೀಡಿದವು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಪಿಯೂಷ್ ಗೋಯಲ್, ರಾಜ್ಯ ಸಚಿವ ಅರ್ಜುನ, ರಾಮ್ ಮೇಘವಾಲ್ ಮತ್ತು ವಿ ಮುರಳೀಧರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಡಿಎಂಕೆ ನಾಯಕರಾದ ಟಿಆರ್ ಮತ್ತು ಬಾಲು, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಮತ್ತು ಸುಖೇಂದು ಶೇಖರ್ ರೇ, ಟಿಆರ್‌ಎಸ್ ಮುಖಂಡರಾದ ಕೆ ಕೇಶವ ರಾವ್ ಮತ್ತು ನಾಮ ನಾಗೇಶ್ವರರಾವ್, ವೈಎಸ್‌ಆರ್ ಕಾಂಗ್ರೆಸ್‌ನಿಂದ ವಿಜಯಸಾಯಿ ರೆಡ್ಡಿ, ನ್ಯಾಷನಲ್ ಕಾನ್ಫರೆನ್ಸ್‌ನಿಂದ ಫಾರೂಕ್ ಅಬ್ದುಲ್ಲಾ, ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ಪ್ರೊಫೆಸರ್ ಮನೋಜ್ ಝಾ ಮತ್ತು ಜನತಾ ದಳ (ಯುನೈಟೆಡ್) (ಜೆಡಿಯು) ರಾಮ್ ನಾಥ್ ಠಾಕೂರ್ ಸೇರಿದಂತೆ ಇತರ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.

ಕಾಂಗ್ರೆಸ್​ ನಾಯಕರು ಗೈರು: ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರು ಸರ್ವಪಕ್ಷಗಳ ಸಭೆಗೆ ಹಾಜರಾಗಬೇಕಿತ್ತು. ಆದರೆ, ಭಾರತ್​ ಜೋಡೋ ಯಾತ್ರೆ ಇಂದು ಶ್ರೀನಗರದಲ್ಲಿ ಮುಕ್ತಾಯಗೊಂಡಿದ್ದು, ಈ ಕಾರಣಕ್ಕಾಗಿ ಅವರು ಸಭೆಗೆ ಹಾಜರಾಗಿಲ್ಲ.

ಓದಿ: ನಾಳೆಯಿಂದ ಬಜೆಟ್​ ಅಧಿವೇಶನ: ಇಂದು ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.