ETV Bharat / bharat

ಪಠ್ಯಕ್ರಮದಿಂದ ಹಿಂದೂ-ಮುಸ್ಲಿಂ, ಆರ್​ಎಸ್​ಎಸ್​, ಗಾಂಧಿ ಮುಂತಾದ ಪಠ್ಯ ಕೈಬಿಟ್ಟ ಎನ್​ಸಿಇಆರ್​ಟಿ

author img

By

Published : Apr 5, 2023, 5:17 PM IST

Updated : Apr 5, 2023, 9:10 PM IST

12ನೇ ತರಗತಿ ಪಠ್ಯಪುಸ್ತಕಗಳಲ್ಲಿನ ಕೆಲವು ಪಠ್ಯಗಳನ್ನು ಎನ್​ಸಿಇಆರ್​ಟಿ ಕೈಬಿಟ್ಟಿದೆ. ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್​ಸಿಇಆರ್​ಟಿ ಹೇಳಿದೆ.

NCERT drops texts on Gandhi HinduMuslim unity RSS ban from class 12 textbook
NCERT drops texts on Gandhi HinduMuslim unity RSS ban from class 12 textbook

ನವದೆಹಲಿ : ಎನ್​ಸಿಇಆರ್​ಟಿ ತನ್ನ 12ನೇ ತರಗತಿ ಪಠ್ಯಪುಸ್ತಗಳಲ್ಲಿನ ಕೆಲವೊಂದು ಪಠ್ಯಗಳನ್ನು ತೆಗೆದುಹಾಕಿದೆ. 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಿನ Gandhiji's death had magical effect on communal situation in the country (ಗಾಂಧೀಜಿಯವರ ಮರಣವು ದೇಶದ ಕೋಮು ಪರಿಸ್ಥಿತಿಯ ಮೇಲೆ ಮಾಂತ್ರಿಕ ಪರಿಣಾಮ ಬೀರಿತು), Gandhi's pursuit of Hindu-Muslim unity provoked Hindu extremists (ಗಾಂಧಿಯವರು ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಪ್ರಯತ್ನಿಸಿದ್ದು ಹಿಂದೂವಾದಿಗಳನ್ನು ಕೆರಳಿಸಿತು) ಮತ್ತು Organizations like RSS were banned for some time (ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ಕೆಲಕಾಲ ನಿಷೇಧಿಸಲಾಗಿತ್ತು) ಇವೇ ಮುಂತಾದ ವಿಷಯಗಳನ್ನು ಹೊಸ ಶೈಕ್ಷಣಿಕ ಅವಧಿಯಿಂದ ಎನ್​ಸಿಇಆರ್​ಟಿ ತೆಗೆದುಹಾಕಿದೆ.

ಆದಾಗ್ಯೂ, ಈ ವರ್ಷ ಯಾವುದೇ ಪಠ್ಯಕ್ರಮವನ್ನು ಕಡಿತ ಮಾಡಲಾಗಿಲ್ಲ ಮತ್ತು ಕಳೆದ ವರ್ಷ ಜೂನ್‌ನಲ್ಲಿ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲಾಗಿದೆ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಹೇಳಿಕೊಂಡಿದೆ. ಕಳೆದ ವರ್ಷ ತನ್ನ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವ ಕಾರ್ಯದ ಭಾಗವಾಗಿ ಎನ್‌ಸಿಇಆರ್‌ಟಿ, ಗುಜರಾತ್ ಗಲಭೆಗಳು, ಮೊಘಲ್ ನ್ಯಾಯಾಲಯಗಳು, ತುರ್ತು ಪರಿಸ್ಥಿತಿ, ಶೀತಲ ಸಮರ, ನಕ್ಸಲೀಯ ಚಳವಳಿಯ ಪಾಠಗಳನ್ನು ಒಳಗೊಂಡಂತೆ ಕೆಲವು ಭಾಗಗಳನ್ನು ಕೈಬಿಟ್ಟಿತು. ಇದರಲ್ಲಿ ಕೆಲ ವಿಷಯಗಳು ಪುನರಾವರ್ತನೆಯಾಗಿರುವುದರಿಂದ ಹಾಗೂ ಅಪ್ರಸ್ತುತವಾಗಿರುವುದರಿಂದ ಅವುಗಳನ್ನು ತೆಗೆದು ಹಾಕಲಾಗಿದೆ ಎಂದು ಎನ್​​ಸಿಇಆರ್​ಟಿ ಹೇಳಿತ್ತು.

ಕಳೆದ ವರ್ಷವೇ ತರ್ಕಬದ್ಧಗೊಳಿಸುವ ಸಂಪೂರ್ಣ ಕೆಲಸ ಮುಗಿಸಲಾಗಿದೆ. ಈ ವರ್ಷ ಹೊಸದೇನನ್ನೂ ಮಾಡಿಲ್ಲ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಹೇಳಿದ್ದಾರೆ. ಆದರೆ ಪಠ್ಯವನ್ನು ತರ್ಕಬದ್ಧಗೊಳಿಸುವ ಟಿಪ್ಪಣಿಯಲ್ಲಿ ಮಹಾತ್ಮಾ ಗಾಂಧಿಯವರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಆದಾಗ್ಯೂ ತರ್ಕಬದ್ಧಗೊಳಿಸುವ ಸಮಯದಲ್ಲಿ ಯಾವುದೇ ಸೂಚನೆ ನೀಡದೆ ಪಠ್ಯಕ್ರಮದ ಕೆಲ ಭಾಗಗಳು ಕಾಣೆಯಾಗಿರುವ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ.

ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಯಿಂದ, ವಿದ್ಯಾರ್ಥಿಗಳ ಮೇಲಿನ ವಿಷಯದ ಹೊರೆ ಕಡಿಮೆ ಮಾಡುವುದು ಕಡ್ಡಾಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಸಹ ವಿಷಯದ ಹೊರೆ ಕಡಿಮೆ ಮಾಡಲು ಮತ್ತು ಅನುಭವದ ಕಲಿಕೆಗೆ ಅವಕಾಶಗಳನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ, ಎನ್​ಸಿಇಆರ್​ಟಿ ಎಲ್ಲಾ ತರಗತಿಗಳು ಮತ್ತು ಎಲ್ಲಾ ವಿಷಯಗಳ ಪಠ್ಯಪುಸ್ತಕಗಳನ್ನು ತರ್ಕಬದ್ಧಗೊಳಿಸಲು ಕ್ರಮ ಕೈಗೊಂಡಿದೆ ಎಂದು ಎನ್​​ಸಿಇಆರ್​ಟಿ ತನ್ನ ವೆಬ್‌ಸೈಟ್‌ನಲ್ಲಿನ ಟಿಪ್ಪಣಿಯಲ್ಲಿ ಹೇಳಿದೆ.

ಪ್ರಸ್ತುತ ಆವೃತ್ತಿಯು ಬದಲಾವಣೆಗಳನ್ನು ಮಾಡಿದ ನಂತರ ಮರು ಫಾರ್ಮ್ಯಾಟ್ ಮಾಡಲಾದ ಆವೃತ್ತಿಯಾಗಿದೆ. ಪ್ರಸ್ತುತ ಪಠ್ಯಪುಸ್ತಕಗಳು ತರ್ಕಬದ್ಧ ಪಠ್ಯಪುಸ್ತಕಗಳಾಗಿವೆ. ಇವುಗಳನ್ನು 2022-23 ಶೈಕ್ಷಣಿಕ ವರ್ಷಕ್ಕಾಗಿ ತರ್ಕಬದ್ಧಗೊಳಿಸಲಾಗಿದೆ ಮತ್ತು 2023-24 ರಲ್ಲಿ ಇವು ಮುಂದುವರಿಯುತ್ತವೆ ಎಂದು ಟಿಪ್ಪಣಿಯಲ್ಲಿ ಬರೆಯಲಾಗಿದೆ. ಎನ್‌ಇಪಿ ಪ್ರಕಾರ ಹೊಸ ಪಠ್ಯಕ್ರಮದ ಚೌಕಟ್ಟನ್ನು ಇನ್ನೂ ರೂಪಿಸಲಾಗುತ್ತಿದೆ ಮತ್ತು ನವೀಕರಿಸಿದ ಪಠ್ಯಕ್ರಮದ ಪ್ರಕಾರ ಹೊಸ ಪಠ್ಯಪುಸ್ತಕಗಳನ್ನು 2024 ರ ಶೈಕ್ಷಣಿಕ ಅಧಿವೇಶನದಿಂದ ಮಾತ್ರ ಪರಿಚಯಿಸಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ: ಶಿಗ್ಗಾಂವಿ ಅಲ್ಲ.. ಕುಂದಗೋಳ ಕ್ಷೇತ್ರದ ಮೇಲೆ ಸಿಎಂ ಬೊಮ್ಮಾಯಿ ಕಣ್ಣು

ನವದೆಹಲಿ : ಎನ್​ಸಿಇಆರ್​ಟಿ ತನ್ನ 12ನೇ ತರಗತಿ ಪಠ್ಯಪುಸ್ತಗಳಲ್ಲಿನ ಕೆಲವೊಂದು ಪಠ್ಯಗಳನ್ನು ತೆಗೆದುಹಾಕಿದೆ. 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಿನ Gandhiji's death had magical effect on communal situation in the country (ಗಾಂಧೀಜಿಯವರ ಮರಣವು ದೇಶದ ಕೋಮು ಪರಿಸ್ಥಿತಿಯ ಮೇಲೆ ಮಾಂತ್ರಿಕ ಪರಿಣಾಮ ಬೀರಿತು), Gandhi's pursuit of Hindu-Muslim unity provoked Hindu extremists (ಗಾಂಧಿಯವರು ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಪ್ರಯತ್ನಿಸಿದ್ದು ಹಿಂದೂವಾದಿಗಳನ್ನು ಕೆರಳಿಸಿತು) ಮತ್ತು Organizations like RSS were banned for some time (ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ಕೆಲಕಾಲ ನಿಷೇಧಿಸಲಾಗಿತ್ತು) ಇವೇ ಮುಂತಾದ ವಿಷಯಗಳನ್ನು ಹೊಸ ಶೈಕ್ಷಣಿಕ ಅವಧಿಯಿಂದ ಎನ್​ಸಿಇಆರ್​ಟಿ ತೆಗೆದುಹಾಕಿದೆ.

ಆದಾಗ್ಯೂ, ಈ ವರ್ಷ ಯಾವುದೇ ಪಠ್ಯಕ್ರಮವನ್ನು ಕಡಿತ ಮಾಡಲಾಗಿಲ್ಲ ಮತ್ತು ಕಳೆದ ವರ್ಷ ಜೂನ್‌ನಲ್ಲಿ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲಾಗಿದೆ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಹೇಳಿಕೊಂಡಿದೆ. ಕಳೆದ ವರ್ಷ ತನ್ನ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವ ಕಾರ್ಯದ ಭಾಗವಾಗಿ ಎನ್‌ಸಿಇಆರ್‌ಟಿ, ಗುಜರಾತ್ ಗಲಭೆಗಳು, ಮೊಘಲ್ ನ್ಯಾಯಾಲಯಗಳು, ತುರ್ತು ಪರಿಸ್ಥಿತಿ, ಶೀತಲ ಸಮರ, ನಕ್ಸಲೀಯ ಚಳವಳಿಯ ಪಾಠಗಳನ್ನು ಒಳಗೊಂಡಂತೆ ಕೆಲವು ಭಾಗಗಳನ್ನು ಕೈಬಿಟ್ಟಿತು. ಇದರಲ್ಲಿ ಕೆಲ ವಿಷಯಗಳು ಪುನರಾವರ್ತನೆಯಾಗಿರುವುದರಿಂದ ಹಾಗೂ ಅಪ್ರಸ್ತುತವಾಗಿರುವುದರಿಂದ ಅವುಗಳನ್ನು ತೆಗೆದು ಹಾಕಲಾಗಿದೆ ಎಂದು ಎನ್​​ಸಿಇಆರ್​ಟಿ ಹೇಳಿತ್ತು.

ಕಳೆದ ವರ್ಷವೇ ತರ್ಕಬದ್ಧಗೊಳಿಸುವ ಸಂಪೂರ್ಣ ಕೆಲಸ ಮುಗಿಸಲಾಗಿದೆ. ಈ ವರ್ಷ ಹೊಸದೇನನ್ನೂ ಮಾಡಿಲ್ಲ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಹೇಳಿದ್ದಾರೆ. ಆದರೆ ಪಠ್ಯವನ್ನು ತರ್ಕಬದ್ಧಗೊಳಿಸುವ ಟಿಪ್ಪಣಿಯಲ್ಲಿ ಮಹಾತ್ಮಾ ಗಾಂಧಿಯವರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಆದಾಗ್ಯೂ ತರ್ಕಬದ್ಧಗೊಳಿಸುವ ಸಮಯದಲ್ಲಿ ಯಾವುದೇ ಸೂಚನೆ ನೀಡದೆ ಪಠ್ಯಕ್ರಮದ ಕೆಲ ಭಾಗಗಳು ಕಾಣೆಯಾಗಿರುವ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ.

ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಯಿಂದ, ವಿದ್ಯಾರ್ಥಿಗಳ ಮೇಲಿನ ವಿಷಯದ ಹೊರೆ ಕಡಿಮೆ ಮಾಡುವುದು ಕಡ್ಡಾಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಸಹ ವಿಷಯದ ಹೊರೆ ಕಡಿಮೆ ಮಾಡಲು ಮತ್ತು ಅನುಭವದ ಕಲಿಕೆಗೆ ಅವಕಾಶಗಳನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ, ಎನ್​ಸಿಇಆರ್​ಟಿ ಎಲ್ಲಾ ತರಗತಿಗಳು ಮತ್ತು ಎಲ್ಲಾ ವಿಷಯಗಳ ಪಠ್ಯಪುಸ್ತಕಗಳನ್ನು ತರ್ಕಬದ್ಧಗೊಳಿಸಲು ಕ್ರಮ ಕೈಗೊಂಡಿದೆ ಎಂದು ಎನ್​​ಸಿಇಆರ್​ಟಿ ತನ್ನ ವೆಬ್‌ಸೈಟ್‌ನಲ್ಲಿನ ಟಿಪ್ಪಣಿಯಲ್ಲಿ ಹೇಳಿದೆ.

ಪ್ರಸ್ತುತ ಆವೃತ್ತಿಯು ಬದಲಾವಣೆಗಳನ್ನು ಮಾಡಿದ ನಂತರ ಮರು ಫಾರ್ಮ್ಯಾಟ್ ಮಾಡಲಾದ ಆವೃತ್ತಿಯಾಗಿದೆ. ಪ್ರಸ್ತುತ ಪಠ್ಯಪುಸ್ತಕಗಳು ತರ್ಕಬದ್ಧ ಪಠ್ಯಪುಸ್ತಕಗಳಾಗಿವೆ. ಇವುಗಳನ್ನು 2022-23 ಶೈಕ್ಷಣಿಕ ವರ್ಷಕ್ಕಾಗಿ ತರ್ಕಬದ್ಧಗೊಳಿಸಲಾಗಿದೆ ಮತ್ತು 2023-24 ರಲ್ಲಿ ಇವು ಮುಂದುವರಿಯುತ್ತವೆ ಎಂದು ಟಿಪ್ಪಣಿಯಲ್ಲಿ ಬರೆಯಲಾಗಿದೆ. ಎನ್‌ಇಪಿ ಪ್ರಕಾರ ಹೊಸ ಪಠ್ಯಕ್ರಮದ ಚೌಕಟ್ಟನ್ನು ಇನ್ನೂ ರೂಪಿಸಲಾಗುತ್ತಿದೆ ಮತ್ತು ನವೀಕರಿಸಿದ ಪಠ್ಯಕ್ರಮದ ಪ್ರಕಾರ ಹೊಸ ಪಠ್ಯಪುಸ್ತಕಗಳನ್ನು 2024 ರ ಶೈಕ್ಷಣಿಕ ಅಧಿವೇಶನದಿಂದ ಮಾತ್ರ ಪರಿಚಯಿಸಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ: ಶಿಗ್ಗಾಂವಿ ಅಲ್ಲ.. ಕುಂದಗೋಳ ಕ್ಷೇತ್ರದ ಮೇಲೆ ಸಿಎಂ ಬೊಮ್ಮಾಯಿ ಕಣ್ಣು

Last Updated : Apr 5, 2023, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.