ETV Bharat / bharat

'ಮದುವೆಯನ್ನೇ ನುಂಗಿದ ಮಟನ್​ ಊಟ': ತೆಲಂಗಾಣದಲ್ಲಿ ಮಾಂಸದೂಟ ನೀಡದ್ದಕ್ಕೆ ವಿವಾಹವೇ ರದ್ದು!

author img

By ETV Bharat Karnataka Team

Published : Dec 27, 2023, 6:54 AM IST

Updated : Dec 27, 2023, 7:03 AM IST

ಕ್ಷುಲ್ಲಕ ಕಾರಣ ದೊಡ್ಡ ಸಂಭ್ರಮವನ್ನೇ ಬಲಿ ತೆಗೆದುಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಾಂಸದೂಟ ಹಾಕಿಸಲಿಲ್ಲ ಎಂಬ ಕಾರಣಕ್ಕಾಗಿ ನಿಶ್ಚಯವಾಗಿದ್ದ ವಿವಾಹವನ್ನೇ ರದ್ದು ಮಾಡಲಾಗಿದೆ.

ಮಾಂಸದೂಟ ನೀಡದ್ದಕ್ಕೆ ವಿವಾಹವೇ ರದ್ದು
ಮಾಂಸದೂಟ ನೀಡದ್ದಕ್ಕೆ ವಿವಾಹವೇ ರದ್ದು

ಹೈದರಾಬಾದ್​ : ನೀವು ತೆಲುಗಿನ 'ಬಳಗಂ' ಸಿನಿಮಾವನ್ನು ನೋಡಿದ್ದರೆ, ಅದರ ಸನ್ನಿವೇಶವೊಂದು ನಗು ತರಿಸುತ್ತದೆ. ವ್ಯಕ್ತಿಯ ಸಾವಿನ ಬಳಿಕ ತಿಥಿ ಕಾರ್ಯದಲ್ಲಿ ಮಟನ್​ ಮೂಳೆಗಳು ಇಲ್ಲ ಎಂಬ ಕಾರಣಕ್ಕಾಗಿ ದೊಡ್ಡ ಗಲಾಟೆಯೇ ನಡೆಯುತ್ತದೆ. ಅಂಥದ್ದೇ ಒಂದು ಘಟನೆ ನಿಜಜೀವನದಲ್ಲಿ ನಡೆದಿದೆ. ಇದರ ಪರಿಣಾಮ ಮದುವೆಯೇ ರದ್ದಾಗಿದೆ.

ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ. ಜಗ್ತಿಯಾಲ್ ಜಿಲ್ಲೆಯ ಮೆಟ್ಪಲ್ಲಿ ಮಂಡಲದ ಯುವಕನೊಂದಿಗೆ ಇಲ್ಲಿನ ಯುವತಿಗೆ ವಿವಾಹ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳು ವರದಕ್ಷಿಣೆ, ಉಡುಗೊರೆಗಳು ಮತ್ತು ಇತರ ಸಾಂಪ್ರದಾಯಿಕ ಕೊಡು ತೆಗೆದುಕೊಳ್ಳುವಿಕೆ ಬಗ್ಗೆ ಮಾತು ಮುಗಿಸಿದ್ದಾರೆ. ಬಳಿಕ ಯುವತಿಯ ಮನೆಯಲ್ಲಿ ಮಾಂಸಾಹಾರದ ಔತಣಕೂಟ ಹಮ್ಮಿಕೊಂಡಿದ್ದರು. ಅದರಲ್ಲಿ ಮಟನ್​ ಮಾಡಿಲ್ಲ ಎಂದು ಹುಡುಗನ ಕಡೆಯವರು ವರಾತ ತೆಗೆದಿದ್ದಾರೆ.

ಮಟನ್​ ಊಟಕ್ಕಾಗಿ ಬಡಿದಾಟ: ಔತಣಕೂಟದಲ್ಲಿ ಮುಖ್ಯವಾಗಿ ಮಟನ್​ ಪದಾರ್ಥವೇ ಇಲ್ಲ ಎಂದು ಯುವಕನ ಸಂಬಂಧಿಕರು, ಯುವತಿಯ ಮನೆಯವರೊಂದಿಗೆ ತಗಾದೆ ತೆಗೆದಿದ್ದಾರೆ. ನೀವು ಮಟನ್​ ಊಟ ಹಾಕಿಸುವುದಾಗಿ ಹೇಳಿದ್ದೀರಿ, ಈಗ ನೋಡಿದರೆ, ಆ ಭೋಜನವೇ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಕಾರಣ, ಎರಡೂ ಕುಟುಂಬಗಳ ಮಧ್ಯೆ ದೊಡ್ಡ ರಂಪಾಟವೇ ನಡೆದಿದೆ. ವಿಚಿತ್ರ ಅದರಲ್ಲಿ ಕೆಲವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸಂಘರ್ಷ ತೀವ್ರವಾಗಿ ಪೊಲೀಸ್​ ಮೆಟ್ಟಿಲೇರುವವರೆಗೂ ಹೋಗಿದೆ.

ಬಳಿಕ ಊರಿನ ಕೆಲವರು ಮಧ್ಯಸ್ಥಿಕೆ ವಹಿಸಿ ಎರಡೂ ಕುಟುಂಬಸ್ಥರನ್ನು ಮನವೊಲಿಸಿ ಶಾಂತಗೊಳಿಸಿದ್ದಾರೆ. ಬಳಿಕ ಮದುವೆ ಪ್ರಸ್ತಾಪವನ್ನೇ ರದ್ದು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಊರಿನ ದೊಡ್ಡವರು ಮಟನ್​​ಗಾಗಿ ಮದುವೆಯನ್ನು ಕಡಿದುಕೊಳ್ಳುವುದು ಬೇಡ ಎಂದು ಬುದ್ಧಿ ಹೇಳಿದರೂ, ಸುತಾರಾಂ ಇದಕ್ಕೆ ಒಪ್ಪಿಲ್ಲ. ಕೊನೆಗೆ ಸಂಭ್ರಮದಿಂದ ನಡೆಯಬೇಕಿದ್ದ ವಿವಾಹವನ್ನೇ ಮುರಿದುಕೊಂಡಿದ್ದಾರೆ. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿ ಮೇಲೆ ರದ್ದು; ಇದು ಥೇಟ್​ ಬಳಗಂ ಸಿನಿಮಾದಲ್ಲಿನ ಸನ್ನಿವೇಶದಂತೆಯೇ ನಡೆದಿದೆ. ಮಾಂಸದ ಊಟವು ಒಂದು ಮದುವೆಯನ್ನೇ ಬಲಿ ಪಡೆದಿರುವುದು ಹಲವರನ್ನು ಅಚ್ಚರಿಗೀಡು ಮಾಡಿದ್ದಲ್ಲದೇ, ಎರಡೂ ಕುಟುಂಬಗಳ ಮೇಲೆ ಅಸಮಾಧಾನ ಕೂಡ ತರಿಸಿದೆ. 'ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ' ಎಂಬ ಮಾತಿದೆ. ಅದು ಭೂಲೋಕದಲ್ಲಿ ಇಂತ ಸಣ್ಣ ವಿಚಾರಕ್ಕೆ ರದ್ದಾಗಿದ್ದು ಮಾತ್ರ ಸೋಜಿಗದ ಸಂಗತಿ. ಕೆಲವೊಮ್ಮೆ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಅಹಂಕಾರ, ದುರಾಸೆ ಎಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂಬುದು ಇಲ್ಲಿ ವಿಧಿತವಾಗುತ್ತದೆ. ಈ ಘಟನೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದು, ಸಣ್ಣ ಸಮಸ್ಯೆಗಳಿಗೆ ಮದುವೆ ರದ್ದಾಗಿರುವುದು ಹಲವರ ಗಮನ ಸೆಳೆದಿದೆ.

ಇದನ್ನೂ ಓದಿ: ಮದುವೆ ಹಿಂದಿನ ದಿನ ಕೈ ಕೊಟ್ಟ ವರ: ಹುಡುಗನ ಮನೆ ಮುಂದೆ ವಧು ಧರಣಿ

ಹೈದರಾಬಾದ್​ : ನೀವು ತೆಲುಗಿನ 'ಬಳಗಂ' ಸಿನಿಮಾವನ್ನು ನೋಡಿದ್ದರೆ, ಅದರ ಸನ್ನಿವೇಶವೊಂದು ನಗು ತರಿಸುತ್ತದೆ. ವ್ಯಕ್ತಿಯ ಸಾವಿನ ಬಳಿಕ ತಿಥಿ ಕಾರ್ಯದಲ್ಲಿ ಮಟನ್​ ಮೂಳೆಗಳು ಇಲ್ಲ ಎಂಬ ಕಾರಣಕ್ಕಾಗಿ ದೊಡ್ಡ ಗಲಾಟೆಯೇ ನಡೆಯುತ್ತದೆ. ಅಂಥದ್ದೇ ಒಂದು ಘಟನೆ ನಿಜಜೀವನದಲ್ಲಿ ನಡೆದಿದೆ. ಇದರ ಪರಿಣಾಮ ಮದುವೆಯೇ ರದ್ದಾಗಿದೆ.

ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ. ಜಗ್ತಿಯಾಲ್ ಜಿಲ್ಲೆಯ ಮೆಟ್ಪಲ್ಲಿ ಮಂಡಲದ ಯುವಕನೊಂದಿಗೆ ಇಲ್ಲಿನ ಯುವತಿಗೆ ವಿವಾಹ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳು ವರದಕ್ಷಿಣೆ, ಉಡುಗೊರೆಗಳು ಮತ್ತು ಇತರ ಸಾಂಪ್ರದಾಯಿಕ ಕೊಡು ತೆಗೆದುಕೊಳ್ಳುವಿಕೆ ಬಗ್ಗೆ ಮಾತು ಮುಗಿಸಿದ್ದಾರೆ. ಬಳಿಕ ಯುವತಿಯ ಮನೆಯಲ್ಲಿ ಮಾಂಸಾಹಾರದ ಔತಣಕೂಟ ಹಮ್ಮಿಕೊಂಡಿದ್ದರು. ಅದರಲ್ಲಿ ಮಟನ್​ ಮಾಡಿಲ್ಲ ಎಂದು ಹುಡುಗನ ಕಡೆಯವರು ವರಾತ ತೆಗೆದಿದ್ದಾರೆ.

ಮಟನ್​ ಊಟಕ್ಕಾಗಿ ಬಡಿದಾಟ: ಔತಣಕೂಟದಲ್ಲಿ ಮುಖ್ಯವಾಗಿ ಮಟನ್​ ಪದಾರ್ಥವೇ ಇಲ್ಲ ಎಂದು ಯುವಕನ ಸಂಬಂಧಿಕರು, ಯುವತಿಯ ಮನೆಯವರೊಂದಿಗೆ ತಗಾದೆ ತೆಗೆದಿದ್ದಾರೆ. ನೀವು ಮಟನ್​ ಊಟ ಹಾಕಿಸುವುದಾಗಿ ಹೇಳಿದ್ದೀರಿ, ಈಗ ನೋಡಿದರೆ, ಆ ಭೋಜನವೇ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಕಾರಣ, ಎರಡೂ ಕುಟುಂಬಗಳ ಮಧ್ಯೆ ದೊಡ್ಡ ರಂಪಾಟವೇ ನಡೆದಿದೆ. ವಿಚಿತ್ರ ಅದರಲ್ಲಿ ಕೆಲವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸಂಘರ್ಷ ತೀವ್ರವಾಗಿ ಪೊಲೀಸ್​ ಮೆಟ್ಟಿಲೇರುವವರೆಗೂ ಹೋಗಿದೆ.

ಬಳಿಕ ಊರಿನ ಕೆಲವರು ಮಧ್ಯಸ್ಥಿಕೆ ವಹಿಸಿ ಎರಡೂ ಕುಟುಂಬಸ್ಥರನ್ನು ಮನವೊಲಿಸಿ ಶಾಂತಗೊಳಿಸಿದ್ದಾರೆ. ಬಳಿಕ ಮದುವೆ ಪ್ರಸ್ತಾಪವನ್ನೇ ರದ್ದು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಊರಿನ ದೊಡ್ಡವರು ಮಟನ್​​ಗಾಗಿ ಮದುವೆಯನ್ನು ಕಡಿದುಕೊಳ್ಳುವುದು ಬೇಡ ಎಂದು ಬುದ್ಧಿ ಹೇಳಿದರೂ, ಸುತಾರಾಂ ಇದಕ್ಕೆ ಒಪ್ಪಿಲ್ಲ. ಕೊನೆಗೆ ಸಂಭ್ರಮದಿಂದ ನಡೆಯಬೇಕಿದ್ದ ವಿವಾಹವನ್ನೇ ಮುರಿದುಕೊಂಡಿದ್ದಾರೆ. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿ ಮೇಲೆ ರದ್ದು; ಇದು ಥೇಟ್​ ಬಳಗಂ ಸಿನಿಮಾದಲ್ಲಿನ ಸನ್ನಿವೇಶದಂತೆಯೇ ನಡೆದಿದೆ. ಮಾಂಸದ ಊಟವು ಒಂದು ಮದುವೆಯನ್ನೇ ಬಲಿ ಪಡೆದಿರುವುದು ಹಲವರನ್ನು ಅಚ್ಚರಿಗೀಡು ಮಾಡಿದ್ದಲ್ಲದೇ, ಎರಡೂ ಕುಟುಂಬಗಳ ಮೇಲೆ ಅಸಮಾಧಾನ ಕೂಡ ತರಿಸಿದೆ. 'ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ' ಎಂಬ ಮಾತಿದೆ. ಅದು ಭೂಲೋಕದಲ್ಲಿ ಇಂತ ಸಣ್ಣ ವಿಚಾರಕ್ಕೆ ರದ್ದಾಗಿದ್ದು ಮಾತ್ರ ಸೋಜಿಗದ ಸಂಗತಿ. ಕೆಲವೊಮ್ಮೆ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಅಹಂಕಾರ, ದುರಾಸೆ ಎಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂಬುದು ಇಲ್ಲಿ ವಿಧಿತವಾಗುತ್ತದೆ. ಈ ಘಟನೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದು, ಸಣ್ಣ ಸಮಸ್ಯೆಗಳಿಗೆ ಮದುವೆ ರದ್ದಾಗಿರುವುದು ಹಲವರ ಗಮನ ಸೆಳೆದಿದೆ.

ಇದನ್ನೂ ಓದಿ: ಮದುವೆ ಹಿಂದಿನ ದಿನ ಕೈ ಕೊಟ್ಟ ವರ: ಹುಡುಗನ ಮನೆ ಮುಂದೆ ವಧು ಧರಣಿ

Last Updated : Dec 27, 2023, 7:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.