ETV Bharat / bharat

Nikah ceremony: ಬಡ ಮುಸ್ಲಿಂ ಜೋಡಿಗೆ ಹಿಂದು ದೇವಾಲಯದಲ್ಲಿ ನಿಕಾಹ್.. ಸೌಹಾರ್ದತೆ ಮೆರೆದ ಯುವಕ ಮಂಡಳಿ

ಗುಜರಾತ್​ನಲ್ಲಿ ಬಡ ಮುಸ್ಲಿಂ ಜೋಡಿಗೆ ಹಿಂದು ಯುವಕರು ದೇವಾಲಯದಲ್ಲಿ ನಿಕಾಹ್​ ಮಾಡಿಸಿಕೊಟ್ಟು ಸೌಹಾರ್ದತೆ ಮೆರೆದಿದ್ದಾರೆ.

author img

By

Published : Jul 3, 2023, 12:54 PM IST

Updated : Jul 3, 2023, 1:09 PM IST

ಬಡ ಮುಸ್ಲಿಂ ಜೋಡಿಗೆ ಹಿಂದು ದೇವಾಲಯದಲ್ಲಿ ನಿಕಾಹ್​
ಬಡ ಮುಸ್ಲಿಂ ಜೋಡಿಗೆ ಹಿಂದು ದೇವಾಲಯದಲ್ಲಿ ನಿಕಾಹ್​

ಜುನಾಗಢ (ಗುಜರಾತ್​): ಕೋಮು ಘರ್ಷಣೆಗಳ ಮಧ್ಯೆ ಇಂಥದ್ದೊಂದು ಸುದ್ದಿ ಉತ್ತಮ ಸಂದೇಶ ಸಾರುತ್ತದೆ. ಗುಜರಾತ್​ನ ಜುನಾಗಢದ ಹಿಂದು ದೇವಾಲಯದಲ್ಲಿ ಮುಸ್ಲಿಂ ಜೋಡಿಯೊಂದು ನಿಕಾಹ್​ ಮಾಡಿಕೊಂಡಿದೆ. ಬಡ ಕುಟುಂಬದ ವಿವಾಹಕ್ಕೆ ಸತ್ಯಂ ಸೇವಾ ಯುವಕ ಮಂಡಳಿ ಪೌರೋಹಿತ್ಯ ವಹಿಸಿದ್ದು, ಧಾರ್ಮಿಕ ಐಕ್ಯತೆಗೆ ಉತ್ತಮ ಉದಾಹರಣೆಯಾಗಿದೆ.

ಜುನಾಗಢದ ಅಖಂಡ ರಾಮ್‌ಧುನ್ ಸಂಕೀರ್ತನ ದೇವಸ್ಥಾನದಲ್ಲಿ ಈ ವಿವಾಹ ನಡೆದಿದೆ. ಇಲ್ಲಿನ ಸತ್ಯಂ ಸೇವಾ ಯುವಕ ಮಂಡಳಿ ವತಿಯಿಂದ ಮುಸ್ಲಿಂ ಕುಟುಂಬದ ಜೋಡಿಗೆ ಸಾಂಪ್ರದಾಯಿಕವಾಗಿ ನಿಕಾಹ್​ ಮಾಡಿಕೊಡಲಾಗಿದೆ. ಹಿನಾ ಮತ್ತು ಅಬ್ದುಲ್ ಖುರೇಷಿ ಇಸ್ಲಾಂ ಧರ್ಮದ ಪ್ರಕಾರವೇ ಹಿಂದೂ ದೇವಾಲಯದ ಆವರಣದಲ್ಲಿ ಕೈಹಿಡಿದರು.

ಆರ್ಥಿಕವಾಗಿ ದುರ್ಬಲವಾಗಿದ್ದ ಕುಟುಂಬ ವಿವಾಹಕ್ಕೆ ಪರದಾಡುತ್ತಿರುವಾಗ ಸತ್ಯಂ ಸೇವಾ ಯುವಕ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಉಚಿತ ಮತ್ತು ಸರಳವಾಗಿ ವಿವಾಹ ಮಾಡಿಕೊಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿರುವ ಮಂಡಳಿ ಆ ಕುಟುಂಬಕ್ಕೆ ನೆರವು ನೀಡಲು ಒಪ್ಪಿದ್ದಾರೆ. ಅದರಂತೆ ದೇವಾಲಯದ ಆವರಣದಲ್ಲಿ ಉಭಯ ಕುಟುಂಬಗಳ ಬಂಧುಗಳ ಸಮ್ಮುಖದಲ್ಲಿ ಅವರ ಸಂಪ್ರದಾಯದಂತೆಯೇ ಸರಳವಾಗಿ ವಿವಾಹ ನೆರವೇರಿಸಿಕೊಟ್ಟಿದ್ದಾರೆ.

ಸಕಲ ನೆರವು: ಬರೀ ವಿವಾಹ ಮಾಡಿಕೊಟ್ಟಿದ್ದಲ್ಲದೇ ಮಂಡಳಿಯಿಂದ ನವಜೋಡಿಗೆ ಕುಟುಂಬ ನಿರ್ವಹಣೆಗೆ ಬೇಕಾಗುವ ಅಗತ್ಯ ಪರಿಕರಗಳಾದ ಗಡಿಯಾರ, ಬಟ್ಟೆ, ತಟ್ಟೆ, ಲೋಟ, ಗಾಜಿನ ಪಾತ್ರೆಗಳು, ಸ್ಟೀಲ್ ಬಾಕ್ಸ್, ಹಾಸಿಗೆ, ಮಂಗಳಸೂತ್ರ, ಕುರ್ಚಿ ಸೇರಿದಂತೆ 57 ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಲವು ವರ್ಷಗಳಿಂದ ಮಂಡಳಿ ಈ ಕಾರ್ಯ ಮಾಡುತ್ತಾ ಬಂದಿದೆ. ಇದಕ್ಕಾಗಿ ಅವರಿಂದ ಯಾವುದೇ ವೆಚ್ಚವನ್ನು ಪಡೆದುಕೊಳ್ಳುವುದಿಲ್ಲ. ಇಲ್ಲಿಯವರೆಗೆ ಅನೇಕ ಹಿಂದೂ ಬಡ ಹೆಣ್ಣುಮಕ್ಕಳು ಮಂಡಳಿಯ ಸಾಮಾಜಿಕ ಕಾರ್ಯದಿಂದ ಪ್ರಾಪಂಚಿಕ ಜೀವನವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಮೂವರು ಮುಸ್ಲಿಂ ಜೋಡಿಗಳೂ ಇದ್ದಾರೆ.

ವಿವಾಹದ ಬಳಿಕ ಮಾತನಾಡಿದ ವರ ಅಬ್ದುಲ್​ ಖುರೇಷಿ, ಮಂಡಳಿಯ ನೆರವಿನಿಂದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಇದು ನನಗೆ ತುಂಬಾ ಸಂತೋಷ ತಂದಿದೆ. 30 ವರ್ಷಗಳಿಂದ ಇಲ್ಲಿ ಮಂತ್ರಾಕ್ಷತೆ ಕಾರ್ಯ ನಡೆಯುತ್ತಿದೆ. ಹಿಂದು ದೇವಾಲಯವಾಗಿದ್ದರೂ ಮೌಲ್ವಿಯವರ ಸಮ್ಮುಖದಲ್ಲಿ ನಿಕಾಹ್ ಮಾಡಲಾಗಿದೆ. ಇದು ಕೋಮು ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.

ಈ ದೇವಾಲಯ ಜುನಾಗಢ್‌ನ ಅಂಬಿಕಾ ಚೌಕ್‌ನಲ್ಲಿದೆ. ಇದರ ಸುಪರ್ದಿಗೆ ಬರುವ ಸತ್ಯಂ ಸೇವಾ ಯುವಕ ಮಂಡಳಿ ಜಾತಿ-ಧರ್ಮ ಭೇದವಿಲ್ಲದೆ ಹಲವು ಸೇವಾ ಕಾರ್ಯಗಳು ನಡೆಸುತ್ತಿದೆ. ನಿರ್ಗತಿಕರ ಮದುವೆಯನ್ನು ಕೂಡ ಅದು ನಡೆಸುತ್ತದೆ. ಇದು ಜುನಾಗಢದಲ್ಲಿ ಕೋಮು ಸೌಹಾರ್ದತೆಯ ಪರವಾಗಿ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್​ ಹಾರಾಟ ಶಂಕೆ; ಬಿಗಿ ಪೊಲೀಸ್ ಬಂದೋಬಸ್ತ್​

ಜುನಾಗಢ (ಗುಜರಾತ್​): ಕೋಮು ಘರ್ಷಣೆಗಳ ಮಧ್ಯೆ ಇಂಥದ್ದೊಂದು ಸುದ್ದಿ ಉತ್ತಮ ಸಂದೇಶ ಸಾರುತ್ತದೆ. ಗುಜರಾತ್​ನ ಜುನಾಗಢದ ಹಿಂದು ದೇವಾಲಯದಲ್ಲಿ ಮುಸ್ಲಿಂ ಜೋಡಿಯೊಂದು ನಿಕಾಹ್​ ಮಾಡಿಕೊಂಡಿದೆ. ಬಡ ಕುಟುಂಬದ ವಿವಾಹಕ್ಕೆ ಸತ್ಯಂ ಸೇವಾ ಯುವಕ ಮಂಡಳಿ ಪೌರೋಹಿತ್ಯ ವಹಿಸಿದ್ದು, ಧಾರ್ಮಿಕ ಐಕ್ಯತೆಗೆ ಉತ್ತಮ ಉದಾಹರಣೆಯಾಗಿದೆ.

ಜುನಾಗಢದ ಅಖಂಡ ರಾಮ್‌ಧುನ್ ಸಂಕೀರ್ತನ ದೇವಸ್ಥಾನದಲ್ಲಿ ಈ ವಿವಾಹ ನಡೆದಿದೆ. ಇಲ್ಲಿನ ಸತ್ಯಂ ಸೇವಾ ಯುವಕ ಮಂಡಳಿ ವತಿಯಿಂದ ಮುಸ್ಲಿಂ ಕುಟುಂಬದ ಜೋಡಿಗೆ ಸಾಂಪ್ರದಾಯಿಕವಾಗಿ ನಿಕಾಹ್​ ಮಾಡಿಕೊಡಲಾಗಿದೆ. ಹಿನಾ ಮತ್ತು ಅಬ್ದುಲ್ ಖುರೇಷಿ ಇಸ್ಲಾಂ ಧರ್ಮದ ಪ್ರಕಾರವೇ ಹಿಂದೂ ದೇವಾಲಯದ ಆವರಣದಲ್ಲಿ ಕೈಹಿಡಿದರು.

ಆರ್ಥಿಕವಾಗಿ ದುರ್ಬಲವಾಗಿದ್ದ ಕುಟುಂಬ ವಿವಾಹಕ್ಕೆ ಪರದಾಡುತ್ತಿರುವಾಗ ಸತ್ಯಂ ಸೇವಾ ಯುವಕ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಉಚಿತ ಮತ್ತು ಸರಳವಾಗಿ ವಿವಾಹ ಮಾಡಿಕೊಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿರುವ ಮಂಡಳಿ ಆ ಕುಟುಂಬಕ್ಕೆ ನೆರವು ನೀಡಲು ಒಪ್ಪಿದ್ದಾರೆ. ಅದರಂತೆ ದೇವಾಲಯದ ಆವರಣದಲ್ಲಿ ಉಭಯ ಕುಟುಂಬಗಳ ಬಂಧುಗಳ ಸಮ್ಮುಖದಲ್ಲಿ ಅವರ ಸಂಪ್ರದಾಯದಂತೆಯೇ ಸರಳವಾಗಿ ವಿವಾಹ ನೆರವೇರಿಸಿಕೊಟ್ಟಿದ್ದಾರೆ.

ಸಕಲ ನೆರವು: ಬರೀ ವಿವಾಹ ಮಾಡಿಕೊಟ್ಟಿದ್ದಲ್ಲದೇ ಮಂಡಳಿಯಿಂದ ನವಜೋಡಿಗೆ ಕುಟುಂಬ ನಿರ್ವಹಣೆಗೆ ಬೇಕಾಗುವ ಅಗತ್ಯ ಪರಿಕರಗಳಾದ ಗಡಿಯಾರ, ಬಟ್ಟೆ, ತಟ್ಟೆ, ಲೋಟ, ಗಾಜಿನ ಪಾತ್ರೆಗಳು, ಸ್ಟೀಲ್ ಬಾಕ್ಸ್, ಹಾಸಿಗೆ, ಮಂಗಳಸೂತ್ರ, ಕುರ್ಚಿ ಸೇರಿದಂತೆ 57 ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಲವು ವರ್ಷಗಳಿಂದ ಮಂಡಳಿ ಈ ಕಾರ್ಯ ಮಾಡುತ್ತಾ ಬಂದಿದೆ. ಇದಕ್ಕಾಗಿ ಅವರಿಂದ ಯಾವುದೇ ವೆಚ್ಚವನ್ನು ಪಡೆದುಕೊಳ್ಳುವುದಿಲ್ಲ. ಇಲ್ಲಿಯವರೆಗೆ ಅನೇಕ ಹಿಂದೂ ಬಡ ಹೆಣ್ಣುಮಕ್ಕಳು ಮಂಡಳಿಯ ಸಾಮಾಜಿಕ ಕಾರ್ಯದಿಂದ ಪ್ರಾಪಂಚಿಕ ಜೀವನವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಮೂವರು ಮುಸ್ಲಿಂ ಜೋಡಿಗಳೂ ಇದ್ದಾರೆ.

ವಿವಾಹದ ಬಳಿಕ ಮಾತನಾಡಿದ ವರ ಅಬ್ದುಲ್​ ಖುರೇಷಿ, ಮಂಡಳಿಯ ನೆರವಿನಿಂದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಇದು ನನಗೆ ತುಂಬಾ ಸಂತೋಷ ತಂದಿದೆ. 30 ವರ್ಷಗಳಿಂದ ಇಲ್ಲಿ ಮಂತ್ರಾಕ್ಷತೆ ಕಾರ್ಯ ನಡೆಯುತ್ತಿದೆ. ಹಿಂದು ದೇವಾಲಯವಾಗಿದ್ದರೂ ಮೌಲ್ವಿಯವರ ಸಮ್ಮುಖದಲ್ಲಿ ನಿಕಾಹ್ ಮಾಡಲಾಗಿದೆ. ಇದು ಕೋಮು ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.

ಈ ದೇವಾಲಯ ಜುನಾಗಢ್‌ನ ಅಂಬಿಕಾ ಚೌಕ್‌ನಲ್ಲಿದೆ. ಇದರ ಸುಪರ್ದಿಗೆ ಬರುವ ಸತ್ಯಂ ಸೇವಾ ಯುವಕ ಮಂಡಳಿ ಜಾತಿ-ಧರ್ಮ ಭೇದವಿಲ್ಲದೆ ಹಲವು ಸೇವಾ ಕಾರ್ಯಗಳು ನಡೆಸುತ್ತಿದೆ. ನಿರ್ಗತಿಕರ ಮದುವೆಯನ್ನು ಕೂಡ ಅದು ನಡೆಸುತ್ತದೆ. ಇದು ಜುನಾಗಢದಲ್ಲಿ ಕೋಮು ಸೌಹಾರ್ದತೆಯ ಪರವಾಗಿ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್​ ಹಾರಾಟ ಶಂಕೆ; ಬಿಗಿ ಪೊಲೀಸ್ ಬಂದೋಬಸ್ತ್​

Last Updated : Jul 3, 2023, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.