ETV Bharat / bharat

ಮಗು ಹೆರಲು ಪತಿಗೆ ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋದ ಮಹಿಳೆ!

ಮಗುವಿನ ಜನನಕ್ಕಾಗಿ ತನ್ನ ಪತಿಗೆ ತಾತ್ಕಾಲಿಕ ಜಾಮೀನು ನೀಡುವಂತೆ ಮಹಿಳೆಯೊಬ್ಬಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ನಿಗದಿಪಡಿಸಲಾಗಿದೆ.

author img

By ETV Bharat Karnataka Team

Published : Nov 24, 2023, 8:12 PM IST

Updated : Nov 24, 2023, 9:28 PM IST

high court
high court

ಜಬಲ್‌ಪುರ (ಮಧ್ಯಪ್ರದೇಶ): ಮಹಿಳೆಯೊಬ್ಬಳು ತಾಯ್ತನಕ್ಕಾಗಿ ತನ್ನ ಪತಿಗೆ ತಾತ್ಕಾಲಿಕ ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು, ಆಕೆ ಮಗು ಹೆರಲು ಶಕ್ತಳೇ ಎಂಬ ಮಾಹಿತಿ ನೀಡುವಂತೆ ನೇಮಕಗೊಂಡಿದ್ದ ಐವರು ವೈದ್ಯರ ತಂಡವು ಗುರುವಾರ ಹೈಕೋರ್ಟ್‌ನಲ್ಲಿ ತನ್ನ ವರದಿ ಸಲ್ಲಿಸಿದೆ. ವರದಿಯಲ್ಲಿ ಅರ್ಜಿದಾರ ಮಹಿಳೆಯ ಗರ್ಭಾವಸ್ಥೆಯಾಗುವ ವಯಸ್ಸು ಮೀರಿದೆ, ಮಕ್ಕಳನ್ನು ಹೊಂದುವಂತಿಲ್ಲ ಎಂದು ಉಲ್ಲೇಖಿಸಿದೆ.

ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆ ಆಕೆಯ ಪತಿ ಇಂದೋರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಮಗುವನ್ನು ಹೊಂದುವ ಹಿನ್ನೆಲೆ ತನ್ನ ಪತಿಗೆ ತಾತ್ಕಾಲಿಕ ಜಾಮೀನು ನೀಡುವಂತೆ ಕೋರಿ ಮಹಿಳೆಯು ಹೈಕೋರ್ಟ್‌ ಮೊರೆ ಹೋಗಿದ್ದಳು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ, ಮಹಿಳೆಯು ಈ ವಯಸ್ಸಿನಲ್ಲಿ ಗರ್ಭಿಣಿಯಾಗಬಹುದೇ ಎಂದು ಪರೀಕ್ಷಿಸಿ ವರದಿ ನೀಡುವಂತೆ ಸೂಚನೆ ನೀಡಿತ್ತು. ವೈದ್ಯರ ತಂಡ ತಮ್ಮ ವರದಿಯನ್ನು ಸಲ್ಲಿಸಿದ್ದು, ಅರ್ಜಿದಾರರು ಸಂತಾನ ಪ್ರಾಪ್ತಿಯಾಗುವ ವಯಸ್ಸನ್ನು ಮೀರಿದ್ದಾರೆ. ಅಲ್ಲದೇ ಋತುಬಂಧದಿಂದಾಗಿ ನೈಸರ್ಗಿಕವಾಗಿ ಅಥವಾ ಕೃತಕ ಗರ್ಭಧಾರಣೆಯ ಮೂಲಕ ಗರ್ಭಿಣಿಯಾಗಲು ಕೂಡ ಅಸಾಧ್ಯ. ಭಾರತದಲ್ಲಿ, 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಮುಟ್ಟು ನಿಲ್ಲುತ್ತದೆ. ಹಾಗಾಗಿ ಆಕೆಯ ಪತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ರಾಜಸ್ಥಾನದ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಸಂತಾನ ಹೊಂದುವ ಮೂಲಭೂತ ಹಕ್ಕನ್ನು ಪ್ರತಿಪಾದಿಸಿದರು. ಶಿಕ್ಷೆಗೊಳಗಾದ ಕೈದಿಯು ಅರ್ಜಿದಾರ ಮಹಿಳೆಯನ್ನು ಮದುವೆಯಾಗಿದ್ದು, ಅವರ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದೀಗ ಅರ್ಜಿದಾರರಿಗೆ ತಾಯ್ತನದ ಸುಖದ ಅವಶ್ಯವಿದೆ. ನ್ಯಾಯಾಲಯವು ಇದನ್ನು ಪರಿಗಣಿಸಿ ಆಕೆಯ ಪತಿಗೆ ಒಂದು ತಿಂಗಳ ತಾತ್ಕಾಲಿಕ ಜಾಮೀನು ನೀಡಬೇಕು. ವಂಶವನ್ನು ಸಂರಕ್ಷಿಸುವ ಉದ್ದೇಶದಿಂದ ಮಕ್ಕಳನ್ನು ಪಡೆಯುವುದು ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಹಕ್ಕು. ಕೈದಿಗಳ ವೈವಾಹಿಕ ಹಕ್ಕುಗಳು ಮತ್ತು ಅವರ ಸಾಧನೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದನ್ನು ಪರಿಗಣಿಸಿ ಅರ್ಜಿದಾರರ ಪತಿಗೆ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದರು.

ಇದೀಗ ಈ ವರದಿಯನ್ನು ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರ ಏಕ ಪೀಠದ ಮುಂದೆ ಮಂಡಿಸಲಾಗಿದೆ. ಮಹಿಳೆ ಗರ್ಭಿಣಿಯಾಗಲು ಅನರ್ಹಳು ಎಂದು ವರದಿ ಹೇಳಿದ್ದು ಈ ವೈದ್ಯಕೀಯ ವರದಿಯನ್ನು ಪರಿಶೀಲಿಸಲು ಕಾಲಾವಕಾಶ ನೀಡುವಂತೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ: ಅಕ್ರಮ ಆಸ್ತಿ ಪ್ರಕರಣ: ಆಂಧ್ರ ಸಿಎಂ ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್​ ನೋಟಿಸ್​

ಜಬಲ್‌ಪುರ (ಮಧ್ಯಪ್ರದೇಶ): ಮಹಿಳೆಯೊಬ್ಬಳು ತಾಯ್ತನಕ್ಕಾಗಿ ತನ್ನ ಪತಿಗೆ ತಾತ್ಕಾಲಿಕ ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು, ಆಕೆ ಮಗು ಹೆರಲು ಶಕ್ತಳೇ ಎಂಬ ಮಾಹಿತಿ ನೀಡುವಂತೆ ನೇಮಕಗೊಂಡಿದ್ದ ಐವರು ವೈದ್ಯರ ತಂಡವು ಗುರುವಾರ ಹೈಕೋರ್ಟ್‌ನಲ್ಲಿ ತನ್ನ ವರದಿ ಸಲ್ಲಿಸಿದೆ. ವರದಿಯಲ್ಲಿ ಅರ್ಜಿದಾರ ಮಹಿಳೆಯ ಗರ್ಭಾವಸ್ಥೆಯಾಗುವ ವಯಸ್ಸು ಮೀರಿದೆ, ಮಕ್ಕಳನ್ನು ಹೊಂದುವಂತಿಲ್ಲ ಎಂದು ಉಲ್ಲೇಖಿಸಿದೆ.

ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆ ಆಕೆಯ ಪತಿ ಇಂದೋರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಮಗುವನ್ನು ಹೊಂದುವ ಹಿನ್ನೆಲೆ ತನ್ನ ಪತಿಗೆ ತಾತ್ಕಾಲಿಕ ಜಾಮೀನು ನೀಡುವಂತೆ ಕೋರಿ ಮಹಿಳೆಯು ಹೈಕೋರ್ಟ್‌ ಮೊರೆ ಹೋಗಿದ್ದಳು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ, ಮಹಿಳೆಯು ಈ ವಯಸ್ಸಿನಲ್ಲಿ ಗರ್ಭಿಣಿಯಾಗಬಹುದೇ ಎಂದು ಪರೀಕ್ಷಿಸಿ ವರದಿ ನೀಡುವಂತೆ ಸೂಚನೆ ನೀಡಿತ್ತು. ವೈದ್ಯರ ತಂಡ ತಮ್ಮ ವರದಿಯನ್ನು ಸಲ್ಲಿಸಿದ್ದು, ಅರ್ಜಿದಾರರು ಸಂತಾನ ಪ್ರಾಪ್ತಿಯಾಗುವ ವಯಸ್ಸನ್ನು ಮೀರಿದ್ದಾರೆ. ಅಲ್ಲದೇ ಋತುಬಂಧದಿಂದಾಗಿ ನೈಸರ್ಗಿಕವಾಗಿ ಅಥವಾ ಕೃತಕ ಗರ್ಭಧಾರಣೆಯ ಮೂಲಕ ಗರ್ಭಿಣಿಯಾಗಲು ಕೂಡ ಅಸಾಧ್ಯ. ಭಾರತದಲ್ಲಿ, 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಮುಟ್ಟು ನಿಲ್ಲುತ್ತದೆ. ಹಾಗಾಗಿ ಆಕೆಯ ಪತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ರಾಜಸ್ಥಾನದ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಸಂತಾನ ಹೊಂದುವ ಮೂಲಭೂತ ಹಕ್ಕನ್ನು ಪ್ರತಿಪಾದಿಸಿದರು. ಶಿಕ್ಷೆಗೊಳಗಾದ ಕೈದಿಯು ಅರ್ಜಿದಾರ ಮಹಿಳೆಯನ್ನು ಮದುವೆಯಾಗಿದ್ದು, ಅವರ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದೀಗ ಅರ್ಜಿದಾರರಿಗೆ ತಾಯ್ತನದ ಸುಖದ ಅವಶ್ಯವಿದೆ. ನ್ಯಾಯಾಲಯವು ಇದನ್ನು ಪರಿಗಣಿಸಿ ಆಕೆಯ ಪತಿಗೆ ಒಂದು ತಿಂಗಳ ತಾತ್ಕಾಲಿಕ ಜಾಮೀನು ನೀಡಬೇಕು. ವಂಶವನ್ನು ಸಂರಕ್ಷಿಸುವ ಉದ್ದೇಶದಿಂದ ಮಕ್ಕಳನ್ನು ಪಡೆಯುವುದು ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಹಕ್ಕು. ಕೈದಿಗಳ ವೈವಾಹಿಕ ಹಕ್ಕುಗಳು ಮತ್ತು ಅವರ ಸಾಧನೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದನ್ನು ಪರಿಗಣಿಸಿ ಅರ್ಜಿದಾರರ ಪತಿಗೆ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದರು.

ಇದೀಗ ಈ ವರದಿಯನ್ನು ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರ ಏಕ ಪೀಠದ ಮುಂದೆ ಮಂಡಿಸಲಾಗಿದೆ. ಮಹಿಳೆ ಗರ್ಭಿಣಿಯಾಗಲು ಅನರ್ಹಳು ಎಂದು ವರದಿ ಹೇಳಿದ್ದು ಈ ವೈದ್ಯಕೀಯ ವರದಿಯನ್ನು ಪರಿಶೀಲಿಸಲು ಕಾಲಾವಕಾಶ ನೀಡುವಂತೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ: ಅಕ್ರಮ ಆಸ್ತಿ ಪ್ರಕರಣ: ಆಂಧ್ರ ಸಿಎಂ ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್​ ನೋಟಿಸ್​

Last Updated : Nov 24, 2023, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.