ETV Bharat / bharat

ಗಂಡನ ಮನೆಯವರ ಕಿರುಕುಳ ತಾಳಲಾರದೆ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

author img

By

Published : Jul 1, 2021, 8:05 PM IST

ಮಹಿಳೆಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಗಂಡನ ಮನೆಯವರ ನಿರಂತರ ಕಿರುಕುಳವೇ ಈ ನಿರ್ಧಾರಕ್ಕೆ ಕಾರಣ ಎಂಬ ಮಾಹಿತಿ ದೊರೆತಿದೆ.

Mother Sucide along with three Children
ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ

ಶ್ರೀಕಾಕುಳಂ(ಆಂಧ್ರಪ್ರದೇಶ): ಗಂಡನ ಮನೆಯವರ ವಿಪರೀತ ಕಿರುಕುಳ ತಾಳಲಾರದೆ ಮಹಿಳೆಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Mother Sucide along with three Children
ಸಾವಿಗೆ ಶರಣಾದ ತಾಯಿ ಭೋಗೇಶ್ವರಿ ಹಾಗು ಮೂವರು ಮಕ್ಕಳು

ಮೃತರನ್ನು 27 ವರ್ಷದ ಭೋಗೇಶ್ವರಿ, ಮಕ್ಕಳಾದ ಚಕ್ರಿ (5), ಜಯಲಕ್ಷ್ಮೀ (3) ಹಾಗೂ ಭಾರ್ತಿ(2) ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ, ಬಾವಿಯಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ

ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ: ಘಟನಾ ಸ್ಥಳದಲ್ಲಿ ಸಂಬಂಧಿಕರ ರೋಧನೆ

ಇದನ್ನೂ ಓದಿರಿ: IND vs ENG Test ರೋಹಿತ್ ಜೊತೆ ವಿಹಾರಿ ಓಪನರ್​​: ಮಧ್ಯಮ ಕ್ರಮಾಂಕದಲ್ಲಿ ರಾಹುಲ್​ ಬ್ಯಾಟಿಂಗ್‌?

ಭೋಗೇಶ್ವರಿ ಕಳೆದ 9 ವರ್ಷಗಳ ಹಿಂದೆ ಜಗನ್ನಾಥವಾಲಸ ಗ್ರಾಮದ ಶಂಕರ್​ ಎಂಬಾತನನ್ನು ವರಿಸಿದ್ದರು. ಕಳೆದ ಕೆಲವು ವರ್ಷಗಳ ಕಾಲ ಇಬ್ಬರೂ ಚೆನ್ನಾಗಿದ್ದು ಸಂಸಾರ ನಡೆಸಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ಗಂಡನ ಮನೆಯವರು ಭೋಗೇಶ್ವರಿಗೆ ಕಿರುಕುಳ ನೀಡಲು ಶುರು ಮಾಡಿದ್ದರು ಎನ್ನಲಾಗಿದೆ.

ಶ್ರೀಕಾಕುಳಂ(ಆಂಧ್ರಪ್ರದೇಶ): ಗಂಡನ ಮನೆಯವರ ವಿಪರೀತ ಕಿರುಕುಳ ತಾಳಲಾರದೆ ಮಹಿಳೆಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Mother Sucide along with three Children
ಸಾವಿಗೆ ಶರಣಾದ ತಾಯಿ ಭೋಗೇಶ್ವರಿ ಹಾಗು ಮೂವರು ಮಕ್ಕಳು

ಮೃತರನ್ನು 27 ವರ್ಷದ ಭೋಗೇಶ್ವರಿ, ಮಕ್ಕಳಾದ ಚಕ್ರಿ (5), ಜಯಲಕ್ಷ್ಮೀ (3) ಹಾಗೂ ಭಾರ್ತಿ(2) ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ, ಬಾವಿಯಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ

ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ: ಘಟನಾ ಸ್ಥಳದಲ್ಲಿ ಸಂಬಂಧಿಕರ ರೋಧನೆ

ಇದನ್ನೂ ಓದಿರಿ: IND vs ENG Test ರೋಹಿತ್ ಜೊತೆ ವಿಹಾರಿ ಓಪನರ್​​: ಮಧ್ಯಮ ಕ್ರಮಾಂಕದಲ್ಲಿ ರಾಹುಲ್​ ಬ್ಯಾಟಿಂಗ್‌?

ಭೋಗೇಶ್ವರಿ ಕಳೆದ 9 ವರ್ಷಗಳ ಹಿಂದೆ ಜಗನ್ನಾಥವಾಲಸ ಗ್ರಾಮದ ಶಂಕರ್​ ಎಂಬಾತನನ್ನು ವರಿಸಿದ್ದರು. ಕಳೆದ ಕೆಲವು ವರ್ಷಗಳ ಕಾಲ ಇಬ್ಬರೂ ಚೆನ್ನಾಗಿದ್ದು ಸಂಸಾರ ನಡೆಸಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ಗಂಡನ ಮನೆಯವರು ಭೋಗೇಶ್ವರಿಗೆ ಕಿರುಕುಳ ನೀಡಲು ಶುರು ಮಾಡಿದ್ದರು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.