ETV Bharat / bharat

ಬಿಜೆಪಿ ಶಾಸಕನ ವಿರುದ್ಧ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ

author img

By

Published : Oct 11, 2022, 10:02 PM IST

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕಾಲಾಧುಂಗಿ ಶಾಸಕ ಬಂಶೀಧರ್ ಭಗತ್ ಹಿಂದೂ ದೇವತೆಗಳ ಮೇಲೆ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

mla-banshidhar-bhagat-spoke-indecent-words-in-front-of-girl-on-international-girl-child-day
ಹಿಂದೂ ದೇವತೆಗಳನ್ನು ಅವಹೇಳನ ಮಾಡಿದ ಬಿಜೆಪಿ ಶಾಸಕ

ಹಲ್ದ್ವಾನಿ (ಉತ್ತರಾಖಂಡ) : ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕಾಲಾಧುಂಗಿ ಶಾಸಕ ಬಂಶೀಧರ್ ಭಗತ್ ಮತ್ತೆ ತಮ್ಮ ನಾಲಿಗೆ ಹರಿಯಬಿಟ್ಟಿದ್ದಾರೆ . ಸದಾ ವಿವಾದಗಳಿಂದಲೇ ಸುದ್ದಿಯಾಗುವ ಸಚಿವ ಈ ಬಾರಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮುಂದೆ ಹಿಂದೂ ದೇವತೆಗಳಿಗೆ ಅಪಮಾನ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

ಹಿಂದೂ ದೇವತೆಗಳನ್ನು ಅವಹೇಳನ ಮಾಡಿದ ಬಿಜೆಪಿ ಶಾಸಕ

ಕಾರ್ಯಕ್ರಮವನ್ನು ಉದ್ದೇಶಿಸಿ ವೇದಿಕೆಯಲ್ಲಿ ಮಾತನಾಡುವಾಗ, ಮಹಿಳೆಯರು ಯಾವಾಗಲೂ ಗೌರವಿಸಲ್ಪಡಬೇಕು. ಜೊತೆಗೆ ಪುರುಷರು ಕೂಡ ಗೌರವಿಸಲ್ಪಡಬೇಕು. ಜ್ಞಾನವನ್ನು ಪಡೆಯಲು ಸರಸ್ವತಿಯನ್ನು ಪಟಾಯಿಸಿ, ಶಕ್ತಿ ಬೇಕಾದರೆ ದುರ್ಗೆಯನ್ನು ಪಟಾಯಿಸಿ, ಹಣ ಬೇಕಾದರೆ ಲಕ್ಷ್ಮೀ ಯನ್ನು ಪಟಾಯಿಸಿ ಎಂದು ವೇದಿಕೆಯಲ್ಲಿ ಹೇಳಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಇವರ ಹೇಳಿಕೆಯಿಂದ ದಿಗ್ಭ್ರಮೆಗೊಂಡಿದ್ದಾರೆ.

ಅಲ್ಲದೇ ಶಿವ ಮತ್ತು ವಿಷ್ಣುವಿನ ಮೇಲೂ ತಮ್ಮ ನಾಲಿಗೆ ಹರಿಯ ಬಿಟ್ಟಿದ್ದಾರೆ. ಶಿವನೋ ಹಿಮಾಲಯದಲ್ಲಿ ತಣ್ಣಗೆ ಕುಳಿತಿದ್ದಾನೆ. ಆತನ ತಲೆಯ ಮೇಲೆ ಹಾವಿದೆ ಮತ್ತು ತಲೆಯಿಂದ ನೀರು ಹರಿದುಹೋಗುತ್ತಿದೆ. ಮತ್ತೆ ವಿಷ್ಣುವು ಸಮುದ್ರದ ಅಡಿಯಲ್ಲಿ ಅಡಗಿ ಕುಳಿತಿದ್ದಾನೆ. ಈ ಇಬ್ಬರು ಪರಸ್ಪರ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಸದ್ಯ ಶಾಸಕನ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಹಿಂದೆಯೂ ಮಾಜಿ ಸಚಿವ ಸಾಕಷ್ಟು ಬಾರಿ ವಿವಾದಾತ್ಮಕ ಹೇಳಿಕೆ ನೀಡಿ ಮುಜುಗರಕ್ಕೀಡಾಗಿದ್ದರು.

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿದ ಆರೋಪ.. ಕಾಂಗ್ರೆಸ್ ಶಾಸಕರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

ಹಲ್ದ್ವಾನಿ (ಉತ್ತರಾಖಂಡ) : ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕಾಲಾಧುಂಗಿ ಶಾಸಕ ಬಂಶೀಧರ್ ಭಗತ್ ಮತ್ತೆ ತಮ್ಮ ನಾಲಿಗೆ ಹರಿಯಬಿಟ್ಟಿದ್ದಾರೆ . ಸದಾ ವಿವಾದಗಳಿಂದಲೇ ಸುದ್ದಿಯಾಗುವ ಸಚಿವ ಈ ಬಾರಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮುಂದೆ ಹಿಂದೂ ದೇವತೆಗಳಿಗೆ ಅಪಮಾನ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

ಹಿಂದೂ ದೇವತೆಗಳನ್ನು ಅವಹೇಳನ ಮಾಡಿದ ಬಿಜೆಪಿ ಶಾಸಕ

ಕಾರ್ಯಕ್ರಮವನ್ನು ಉದ್ದೇಶಿಸಿ ವೇದಿಕೆಯಲ್ಲಿ ಮಾತನಾಡುವಾಗ, ಮಹಿಳೆಯರು ಯಾವಾಗಲೂ ಗೌರವಿಸಲ್ಪಡಬೇಕು. ಜೊತೆಗೆ ಪುರುಷರು ಕೂಡ ಗೌರವಿಸಲ್ಪಡಬೇಕು. ಜ್ಞಾನವನ್ನು ಪಡೆಯಲು ಸರಸ್ವತಿಯನ್ನು ಪಟಾಯಿಸಿ, ಶಕ್ತಿ ಬೇಕಾದರೆ ದುರ್ಗೆಯನ್ನು ಪಟಾಯಿಸಿ, ಹಣ ಬೇಕಾದರೆ ಲಕ್ಷ್ಮೀ ಯನ್ನು ಪಟಾಯಿಸಿ ಎಂದು ವೇದಿಕೆಯಲ್ಲಿ ಹೇಳಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಇವರ ಹೇಳಿಕೆಯಿಂದ ದಿಗ್ಭ್ರಮೆಗೊಂಡಿದ್ದಾರೆ.

ಅಲ್ಲದೇ ಶಿವ ಮತ್ತು ವಿಷ್ಣುವಿನ ಮೇಲೂ ತಮ್ಮ ನಾಲಿಗೆ ಹರಿಯ ಬಿಟ್ಟಿದ್ದಾರೆ. ಶಿವನೋ ಹಿಮಾಲಯದಲ್ಲಿ ತಣ್ಣಗೆ ಕುಳಿತಿದ್ದಾನೆ. ಆತನ ತಲೆಯ ಮೇಲೆ ಹಾವಿದೆ ಮತ್ತು ತಲೆಯಿಂದ ನೀರು ಹರಿದುಹೋಗುತ್ತಿದೆ. ಮತ್ತೆ ವಿಷ್ಣುವು ಸಮುದ್ರದ ಅಡಿಯಲ್ಲಿ ಅಡಗಿ ಕುಳಿತಿದ್ದಾನೆ. ಈ ಇಬ್ಬರು ಪರಸ್ಪರ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಸದ್ಯ ಶಾಸಕನ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಹಿಂದೆಯೂ ಮಾಜಿ ಸಚಿವ ಸಾಕಷ್ಟು ಬಾರಿ ವಿವಾದಾತ್ಮಕ ಹೇಳಿಕೆ ನೀಡಿ ಮುಜುಗರಕ್ಕೀಡಾಗಿದ್ದರು.

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿದ ಆರೋಪ.. ಕಾಂಗ್ರೆಸ್ ಶಾಸಕರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.