ಜೈಸಲ್ಮೇರ್ (ರಾಜಸ್ಥಾನ): ಸುಮಾರು ಎರಡು ತಾಸು ಸರ್ಕಾರಿ ಆಸ್ಪತ್ರೆಯ ಹೊರಗೆ ಗಾಲಿಕುರ್ಚಿಯಲ್ಲಿ ಕುಳಿತು ಆಮ್ಲಜನಕದ ಹಾಸಿಗೆಗಾಗಿ ಕಾಯುತ್ತಲೇ ಇದ್ದ 'ಮಂಗನಿಯಾರ್' ಗಾಯಕ ತಾಲಿಬ್ ಖಾನ್ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ನ ಪೂನಂ ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ವಿಕಲ ಚೇತನರೂ ಆಗಿರುವ ತಾಲಿಬ್ ಖಾನ್ ಅವರು ಆಕ್ಸಿಜನ್ಗಾಗಿ ಕಾಯುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ವಿಚಾರ ಬೆಳಕಿಗೆ ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ ಇದನ್ನೂ ಓದಿ: ತಿರುಪತಿಯಲ್ಲಿ ಆಕ್ಸಿಜನ್ ಕೊರತೆ: 11 ಕೋವಿಡ್ ಸೋಂಕಿತರು ಸಾವು!
ಉಸಿರಾಟದ ಸಮಸ್ಯೆ ಎದುರಾದ ಕಾರಣ ಮೂರು ದಿನಗಳ ಹಿಂದೆ ತಾಲಿಬ್ ಖಾನ್ರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಕೊರತೆಯಿದ್ದ ಕಾರಣ ಕೆಲ ಸಮಯ ಅವರು ಆಸ್ಪತ್ರೆಯ ಹೊರಗೇ ಕಾಯಬೇಕಾಯಿತು ಎಂದು ಹೇಳಲಾಗಿದೆ. ಇನ್ನು ಇವರು ಕೋವಿಡ್ ಸೋಂಕಿಗೆ ಒಳಗಾಗಿದ್ದರೇ? ಎಂಬ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ.
ಮಂಗನಿಯಾರ್, ಇದು ರಾಜಸ್ಥಾನದ ಜೈಸಲ್ಮೇರ್ ಹಾಗೂ ಬಾರ್ಮರ್ ಜಿಲ್ಲೆಯಲ್ಲಿ ವಾಸಿಸುವ ಒಂದು ಜನಾಂಗವಾಗಿದೆ.