ETV Bharat / bharat

ಚಲಿಸುತ್ತಿದ್ದ ಬಸ್​ ಚಕ್ರದಡಿ ಬಿದ್ದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

author img

By

Published : Dec 13, 2022, 5:40 PM IST

Updated : Dec 13, 2022, 5:55 PM IST

ಮುಂಬೈನ ಪಶ್ಚಿಮ ಅಂಧೇರಿ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್​ನ ಚಕ್ರದಡಿ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

a-man-commits-suicide-by-jumping-in-front-of-bus-in-mumbai
ಜನನಿಬಿಡ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್​ನ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹತ್ಯೆ

ಮುಂಬೈ (ಮಹಾರಾಷ್ಟ್ರ): ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ಬಸ್​ನ ಚಕ್ರದಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನ ಪಶ್ಚಿಮ ಅಂಧೇರಿ ಪ್ರದೇಶದಲ್ಲಿ ನಡೆಯಿತು. ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಬ್ದುಲ್​ ಗಫಾರ್​ ಇಸ್ಮಾಯಿಲ್​​ ಸೈಯದ್​ (59) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಡಿ ಎನ್​ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಬಸ್​ನ ಹಿಂಬದಿಯ ಚಕ್ರಕ್ಕೆ ಬಿದ್ದಿರುವ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಡಿಸೆಂಬರ್​ 6ರಂದು ನಡೆದಿದೆ. ಇಲ್ಲಿನ ಸಾಗರ್ ನಗರದ ನಿವಾಸಿಯಾದ ಅಬ್ದುಲ್, ಕಳೆದ ಮೂವತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರಿಗೆ ಮನೋರೋಗ ಸಂಬಂಧಿ ಚಿಕಿತ್ಸೆ ನೀಡಲಾಗುತ್ತಿತ್ತು. ಘಟನೆ ನಡೆದ ದಿನ ಯಾರಿಗೂ ಹೇಳದೆ ಮನೆಯಿಂದ ಹೊರಟು ಬಂದಿದ್ದರಂತೆ. ಡಿ ಎನ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂಬೈ (ಮಹಾರಾಷ್ಟ್ರ): ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ಬಸ್​ನ ಚಕ್ರದಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನ ಪಶ್ಚಿಮ ಅಂಧೇರಿ ಪ್ರದೇಶದಲ್ಲಿ ನಡೆಯಿತು. ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಬ್ದುಲ್​ ಗಫಾರ್​ ಇಸ್ಮಾಯಿಲ್​​ ಸೈಯದ್​ (59) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಡಿ ಎನ್​ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಬಸ್​ನ ಹಿಂಬದಿಯ ಚಕ್ರಕ್ಕೆ ಬಿದ್ದಿರುವ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಡಿಸೆಂಬರ್​ 6ರಂದು ನಡೆದಿದೆ. ಇಲ್ಲಿನ ಸಾಗರ್ ನಗರದ ನಿವಾಸಿಯಾದ ಅಬ್ದುಲ್, ಕಳೆದ ಮೂವತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರಿಗೆ ಮನೋರೋಗ ಸಂಬಂಧಿ ಚಿಕಿತ್ಸೆ ನೀಡಲಾಗುತ್ತಿತ್ತು. ಘಟನೆ ನಡೆದ ದಿನ ಯಾರಿಗೂ ಹೇಳದೆ ಮನೆಯಿಂದ ಹೊರಟು ಬಂದಿದ್ದರಂತೆ. ಡಿ ಎನ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಡೆಡ್ಲಿ ವ್ಹೀಲಿಂಗ್: ವಿಡಿಯೋ

Last Updated : Dec 13, 2022, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.